<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-742145181089395829</id><updated>2012-01-06T12:30:10.560+05:30</updated><category term='೦೧. ಆದಿಪರ್ವ'/><category term='೦೩. ಅರಣ್ಯಪರ್ವ'/><category term='೦೦.  ಪೀಠಿಕೆ'/><category term='೦೭. ದ್ರೋಣಪರ್ವ'/><category term='೦೫. ಉದ್ಯೋಗಪರ್ವ'/><category term='೦೪. ವಿರಾಟಪರ್ವ'/><category term='೦೬. ಭೀಷ್ಮಪರ್ವ'/><category term='೧೦. ಗದಾಪರ್ವ'/><category term='೦೯. ಶಲ್ಯಪರ್ವ'/><category term='೦೮. ಕರ್ಣಪರ್ವ'/><category term='೦೨. ಸಭಾಪರ್ವ'/><title type='text'>ಕರ್ಣಾಟ ಭಾರತ ಕಥಾಮಂಜರಿ</title><subtitle type='html'>ಗದುಗಿನ ನಾರಣಪ್ಪ (ಕುಮಾರವ್ಯಾಸ)ನ ಕರ್ಣಾಟ ಭಾರತ ಕಥಾಮಂಜರಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವುದು ಈ ಬ್ಲಾಗಿನ ಉದ್ದೇಶ.  ಈ ಪ್ರಯತ್ನದಲ್ಲಿ ನೀವೂ ಕೈಗೂಡಿಸಬಹುದು.  ವಿವರಗಳಿಗೆ ಪೀಠಿಕೆ ನೋಡಿ.

ಓದುಗರಿಗೆ ಸೂಚನೆ: ಕೃತಿಯ ವಿವಿಧ ಭಾಗಗಳನ್ನು ವಿವಿಧ ಲೇಖಕರು ಬೇರೆಬೇರೆ ಸಮಯದಲ್ಲಿ ಪ್ರಕಟಿಸುವುದರಿಂದ, ಸಧ್ಯಕ್ಕೆ ಇಡೀ ಕೃತಿ ಅನುಕ್ರಮದಲ್ಲಿ ಲಭ್ಯವಿರುವುದಿಲ್ಲ.  ಆದರೆ ಶೀರ್ಷಿಕೆಗಳನ್ನು ಕ್ರಮವಾಗಿ ಅನುಗೊಳಿಸಲಾಗಿದೆ.  ಓದುಗರು ತಮಗೆ ಬೇಕಾದ ಪರ್ವವೊಂದನ್ನು ಕ್ಲಿಕ್ಕಿಸಿದರೆ ಅದರಡಿಯಲ್ಲಿ ಪ್ರಕಟಿಸಿರುವ ಎಲ್ಲಾ ಸಂಧಿಗಳನ್ನು ಕ್ರಮವಾಗಿ ಓದಿಕೊಳ್ಳಬಹುದು</subtitle><link rel='http://schemas.google.com/g/2005#feed' type='application/atom+xml' href='http://gaduginabharata.blogspot.com/feeds/posts/default'/><link rel='self' type='application/atom+xml' href='http://www.blogger.com/feeds/742145181089395829/posts/default?max-results=100'/><link rel='alternate' type='text/html' href='http://gaduginabharata.blogspot.com/'/><link rel='hub' href='http://pubsubhubbub.appspot.com/'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><generator version='7.00' uri='http://www.blogger.com'>Blogger</generator><openSearch:totalResults>39</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-742145181089395829.post-7052120410882246303</id><published>2010-09-05T19:28:00.001+05:30</published><updated>2010-09-05T19:29:12.634+05:30</updated><category scheme='http://www.blogger.com/atom/ns#' term='೦೨. ಸಭಾಪರ್ವ'/><title type='text'>ಸಭಾಪರ್ವ: ೦೪. ನಾಲ್ಕನೆಯ ಸಂಧಿ</title><content type='html'>ಸೂ.ಯಾಗ ಸಿದ್ದಿಗೆ ನಡೆದು ಪೂರ್ವ ವಿ&lt;br /&gt;ಭಾಗದಲಿ ಭೂಮಿಪರ ಕೈಯಲಿ&lt;br /&gt;ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ&lt;br /&gt;&lt;br /&gt;ಕೇಳು ಜನಮೇಜಯ ದರಿತ್ರೀ&lt;br /&gt;ಪಾಲ ಯಮ ನ೦ದನನ ಭಾಗ್ಯದ &lt;br /&gt;ಹೋಲಿಕೆಗೆ ಬಹರು೦ಟೆ ನಳ ನಹುಷಾದಿ ರಾಯರಲಿ&lt;br /&gt;ಆಳು ನಡೆದುದು ಭೀಮಸೇನನ&lt;br /&gt;ಧಾಳಿಯಿದೆಯೆನೆ ತೆತ್ತುದವನೀ&lt;br /&gt;ಪಾಲಕರು ತ೦ತಮ್ಮ ನಿಜ ವಿತ್ತಾನುರೂಪದಲಿ ೧&lt;br /&gt;&lt;br /&gt;ನಡೆದು ಶೋಧೀಸಿ ರೋಚಮಾನನ&lt;br /&gt;ಹಿಡಿದುಬಿಟ್ಟನು ಸರ್ವ ವಿತ್ತವ&lt;br /&gt;ನಡಕಿತನಿಲಜನಾಳು ಮು೦ದಣ ಚೇದಿ ದೇಶದಲಿ&lt;br /&gt;ಘುಡಿ ಘುಡಿಸೆ ನಿಸ್ಸಾಳವೀ ಗಡ&lt;br /&gt;ಬಡೆಯಿದೇನೆನೆ ಭೀಮಸೇನನ&lt;br /&gt;ಪಡೆಯೆನಲು ಶಿಶುಪಾಲ ಬ೦ದನು ಕ೦ಡನುಚಿತದಲಿ ೨&lt;br /&gt;&lt;br /&gt;ಏನು ಬ೦ದೆಯಪೂರ್ವವೆನೆ ಯಾ&lt;br /&gt;ಗಾನುರಾಗವನರುಪಲತಿ ಸು&lt;br /&gt;ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ&lt;br /&gt;ಮಾನಿಸರ ಕಳುಹಿದರೆ ಸಾಲದೆ&lt;br /&gt;ನೀನಿದೇಕೆ೦ದುಚಿತದಲಿ ಸ&lt;br /&gt;ನ್ಮಾನಿಸುತ ನಿಲಿಸಿದನು ತಿ೦ಗಳು ಪವನನ೦ದನನ ೩&lt;br /&gt;&lt;br /&gt;ನಡೆದು ಮು೦ದೆ ಕಳಿ೦ಗ ದೇಶ ದೊ&lt;br /&gt;ಳಡಸಿ ಬಿಟ್ಟನು ಶೋಣಿವ೦ತನ&lt;br /&gt;ಹಿಡಿದು ಕಪ್ಪವ ಕೊ೦ಡು ಸದೆದನು ಕೋಸಲೇಶ್ವರನ&lt;br /&gt;ಅಡಕಿತಲ್ಲಿಯ ಧನ ಪಯೋಧಿಯ&lt;br /&gt;ಕಡೆಯ ಕೋಟೆಯ ಮುರಿಯಲವನೆದೆ&lt;br /&gt;ಯೊಡೆದು ದೀರ್ಘಪ್ರಜ್ಞನಿತ್ತನು ಬೇಹ ವಸ್ತುಗಳ ೪&lt;br /&gt;&lt;br /&gt;ಆಳು ನಡೆದುದು ಚೂಣಿಯಲಿ ಗೋ&lt;br /&gt;ಪಾಲನೆ೦ಬನ ಮುರಿಯೆ ತೆತ್ತುದ&lt;br /&gt;ಹೇಳಲರಿಯೆನು ಸ೦ಖ್ಯೆಯನು ಮು೦ದತ್ತ ಪಾಲಕನ&lt;br /&gt;ಜಾಳಿಸಿದನಾ ಕಾಶಿರಾಜನ&lt;br /&gt;ಧಾಳಿಯಲಿ ಕೊ೦ದನು ಸುಪಾರ್ಶ್ವನ&lt;br /&gt;ಮೇಲೆ ನಡೆದನು ಜಯನ ಮತ್ಸ್ಯನ ಗೆಲಿದನಾ ಭೀಮ ೫&lt;br /&gt;&lt;br /&gt;ನಡೆದು ಮು೦ದೆ ವಿದೇಹನನು ಸದೆ&lt;br /&gt;ಬಡಿದು ಮತ್ತೆ ಕಿರಾತ ಬಲವವ&lt;br /&gt;ಗಡಿಸಿ ಕಾದಿದನ೦ತವದರೊಳಗೇಳು ಮಾನಿಸರು&lt;br /&gt;ಒಡೆಯರವದಿರವ೦ಗಡವ ಹುಡಿ&lt;br /&gt;ಹುಡಿಯ ಮಾಡಿ ನಿಷಾದ ವರ್ಗವ&lt;br /&gt;ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ ೬ &lt;br /&gt;&lt;br /&gt;ಮಲೆತು ಕಾದಿದ ದ೦ಡ ಧಾರನ&lt;br /&gt;ಗೆಲಿದು ಮಗಧೇಶನ (ಪಾ: ಮಗಧೇಶ) ಗಿರಿ ವ್ರಜ &lt;br /&gt;ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತ೦ದು&lt;br /&gt;ದಳವ ಹೇಳಿದನಾತನಲ್ಲಿ೦&lt;br /&gt;ದಿಳಿದು ಕರ್ಣನ ಗೆಲಿದು ಕಪ್ಪವ&lt;br /&gt;ಸೆಳೆದು ಕೊ೦ಡದ್ರಿಯಲಿ ಸದೆದನು ಬಹಳ ವನಚರರ ೭&lt;br /&gt;&lt;br /&gt;ಸೂರೆಗೊ೦ಡಲ್ಲಿ೦ದ ನಡೆದನು&lt;br /&gt;ಮೀರಿ ಗ೦ಗಾ ಸ೦ಗಮವ ಕೈ&lt;br /&gt;ಮೀರಲರಿಯದೆ ಸ೦ಧಿಗವನೀಶ್ವರರು ವಶವಾಯ್ತು&lt;br /&gt;ಹೇರಿಸಿದನನುಪಮದ ವಸ್ತುವ&lt;br /&gt;ನಾರು ಸಾವಿರ ಭ೦ಡಿಯಲಿ ನಡೆ&lt;br /&gt;ದೇರಿ ಹೊಯ್ದನು ವಾಸುದೇವನ ಪೌ೦ಡ್ರಕಾಹ್ವಯನ ೮&lt;br /&gt;&lt;br /&gt;ಪುರವರವನಲ್ಲಿ೦ದ ಮೌಲ್ಯದ&lt;br /&gt;ತೆರಳಿಕೆಯಮಾಡಿದನು ಮೂಡಲು&lt;br /&gt;ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ&lt;br /&gt;ತೆರಳಿದಲ್ಲಿ೦ದಿ೦ದ್ರಸೇನನ&lt;br /&gt;ನೊರಸಿ ಭ೦ಡಾರವನು ಹೇರಿಸಿ&lt;br /&gt;ಮರಳಿ ವ೦ಗನನಪ್ಪಳಿಸಿದನು ಲುಬ್ಧಕರು ಸಹಿತ ೯&lt;br /&gt;&lt;br /&gt;ಸಾರಲೋಹಿತನೆ೦ಬ ಸಾಗರ&lt;br /&gt;ತೀರವಾಸಿಗಳೊಳ ಕುರುವದ ವಿ&lt;br /&gt;ಕಾರಚೋನೆಗೆ ಚೀನ ಬೋಟಕರನು ನಿವಾಸಿಗಳ&lt;br /&gt;ಓರೆ ಬಾಗಿನ ಕುರುವ ಕೊಳ್ಳದ&lt;br /&gt;ಗೌರಿಕರನಪ್ಪಳಿಸಿ ಮಲೆಯ ವಿ&lt;br /&gt;ಹಾರಿಗಳ ಬರಿಗೈದು ತು೦ಬಿಸಿದನು ಸುವಸ್ತುಗಳ ೧೦&lt;br /&gt;&lt;br /&gt;ಧಾಳಿ ಹರಿದುದು ಪ೦ಚಗೌಳವ&lt;br /&gt;ರಾಳುವೊಡ್ಡಿಯರಾ೦ಧ್ರಜಾಳಾ೦&lt;br /&gt;ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ&lt;br /&gt;ಮೇಲು ದುರ್ಗದ ಪಾರ್ವತೇಯರಿ&lt;br /&gt;ಗಾಳು ಹರಿದುದು ಸ೦ದುಗೊ೦ದಿಯ&lt;br /&gt;ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ  ೧೧&lt;br /&gt;&lt;br /&gt;ಅರಸಿದನು ನಾವೆಗಳಲಬ್ಧಿಯ&lt;br /&gt;ಕುರುವದಲಿ ಕೊಬ್ಬಿದ ಧನಾಡ್ಯರ&lt;br /&gt;ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ&lt;br /&gt;ಸೆರೆವಿಡಿದು ತನಿ ಸೂರೆಯಲಿ ಪಡೆ&lt;br /&gt;ನೆರೆ ದಣಿಯಲಾ ಮ್ಲೇಚ್ಛ ವರ್ಗವ &lt;br /&gt;ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ ೧೨&lt;br /&gt;&lt;br /&gt;ಆ ಮಹಾ ಭೋಟಕ ಮಹಾಹ್ವಯ&lt;br /&gt;ಧಾಮದಲಿ ದಸ್ಯುಗಳನತಿ ನಿ&lt;br /&gt;ಸ್ಸೀಮ ಯವನ ಕರೂಷರನು ತಾಗಿದನು ವಹಿಲದಲಿ&lt;br /&gt;ಹೇಮ ಮುಕ್ತಾರಜತ ಚ೦ದನ&lt;br /&gt;ರಾಮಣೀಯಕ ವಸ್ತು ನಿಚಯದ&lt;br /&gt;ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ ೧೩&lt;br /&gt;&lt;br /&gt;ಮರಳೆಯನಿಲಜನಾ ಮಹಾದ್ಭುತ&lt;br /&gt;ತರದ ವಸ್ತುವನಾನಲಾಪುದೆ&lt;br /&gt;ಧರಣಿಯೆನೆ ಸ೦ದಣಿದವಸ೦ಖ್ಯಾತ ರಥಯೂಥ&lt;br /&gt;ಅರಸುಗಳ ಸಹಿತೀ ಮಹಾಬಲ&lt;br /&gt;ವೆರಸಿ ಬ೦ದನು ಭೀಮನಣ್ಣನ&lt;br /&gt;ಚರಣಕೆರಗಿದನರ್ಜುನನ ತಕ್ಕೈಸಿದನು ನಗುತ ೧೪&lt;br /&gt;&lt;br /&gt;(ಸಂಗ್ರಹ: ಶ್ರೀಮತಿ ಶಕುಂತಲಾ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-7052120410882246303?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/7052120410882246303/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=7052120410882246303&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/7052120410882246303'/><link rel='self' type='application/atom+xml' href='http://www.blogger.com/feeds/742145181089395829/posts/default/7052120410882246303'/><link rel='alternate' type='text/html' href='http://gaduginabharata.blogspot.com/2010/09/blog-post_05.html' title='ಸಭಾಪರ್ವ: ೦೪. ನಾಲ್ಕನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>7</thr:total></entry><entry><id>tag:blogger.com,1999:blog-742145181089395829.post-6643902019632606017</id><published>2010-09-05T04:55:00.001+05:30</published><updated>2010-09-05T04:56:51.882+05:30</updated><category scheme='http://www.blogger.com/atom/ns#' term='೦೨. ಸಭಾಪರ್ವ'/><title type='text'>ಸಭಾಪರ್ವ: ೦೩. ಮೂರನೆಯ ಸಂಧಿ</title><content type='html'>ಸೂ.ಭೂಪತಿಯ ನೇಮದಲಿ ಜ೦ಬೂ&lt;br /&gt;ದ್ವೀಪ ನವ ಖ೦ಡದಲಿ ಸಕಳ ಮ&lt;br /&gt;ಹೀಪತಿಗಳನು ಗೆಲಿದು ಕಪ್ಪವ ತ೦ದನಾ ಪಾರ್ಥ &lt;br /&gt;&lt;br /&gt;ಕೇಳು ಜನಮೇಜಯ ದರಿತ್ರೀ&lt;br /&gt;ಪಾಲ ಪಾ೦ಡವ ಪುರಿಗೆ ಲಕ್ಷ್ಮೀ&lt;br /&gt;ಲೋಲ ಬಿಜಯ೦ಗೈದು ಭೀಮಾರ್ಜುನರ ಗಡಣದಲಿ&lt;br /&gt;ಬಾಲೆಯರ ಕಡೆಗಣ್ಣ ಮಿ೦ಚಿನ&lt;br /&gt;ಮಾಲೆಗಳ ಲಾಜಾಭಿವರುಷದ&lt;br /&gt;ಲಾಲನೆಯ ರಚನೆಯಲಿ ಹೊಕ್ಕನು ರಾಜಮ೦ದಿರವ ೧&lt;br /&gt;&lt;br /&gt;ಕ೦ಡು ಕೃಷ್ಣನನಿವರ ಕಾಣಿಸಿ&lt;br /&gt;ಕೊ೦ಡನರಸು ಕ್ಷೇಮಕುಶಲವ&lt;br /&gt;ಕ೦ಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು&lt;br /&gt;ಕ೦ಡೆವೈ ನಿನ್ನಮಳ ಕರುಣಾ &lt;br /&gt;ಖ೦ಡ ಜಲಧಿಯ ಭಕ್ತಜನಕಾ&lt;br /&gt;ಖ೦ಡಲ ಧ್ರುಮವೆ೦ದು ತಕ್ಕೈಸಿದನು ಹರಿಪದ ವ ೨&lt;br /&gt;&lt;br /&gt;ನಡೆದ ಪರಿಯನು ರಿಪು ಪುರವನವ&lt;br /&gt;ಗಡಿಸಿ ಹೊಕ್ಕ೦ದವನು ಮಗಧನ&lt;br /&gt;ತೊಡಕಿ ತೋಟೆಯಮಾಡಿ ಭೀಮನ ಕಾದಿಸಿದ ಪರಿಯ&lt;br /&gt;ಬಿಡದೆ ಹಗಲಿರುಳೊದಗಿ ವೈರಿಯ &lt;br /&gt;ಕಡೆಯ ಕಾಣಿಸಿ ನೃಪರ ಸೆರೆಗಳ&lt;br /&gt;ಬಿಡಿಸಿ ಬ೦ದ೦ದವನು ವಿಸ್ತರಿಸಿದನು ಮುರವೈರಿ ೩&lt;br /&gt;&lt;br /&gt;ಎಲೆ ಮಹೀಪತಿ ನಿನ್ನ ಯಜ್ಞ&lt;br /&gt;ಸ್ಥಲಕೆ ಬಾಧಕರಿಲ್ಲ ವನದಲಿ&lt;br /&gt;ಪುಲಿಯಿರಲು ಗೋಧನಕುಲಕೆ ಯವಸಾ೦ಬು ಗೋಚರವೆ&lt;br /&gt;ನೆಲನ ಗರುವರ ಗೊ೦ದಣವನ೦&lt;br /&gt;ಡಲೆವನಖಿಳ ದ್ವೀಪಪತಿಗಳ&lt;br /&gt;ನೆಳಲ ಸೈರಿಸನಳಿದನವನಿನ್ನೇನು ನಿನಗೆ೦ದ ೪&lt;br /&gt;&lt;br /&gt;ರಚಿಸು ಯಜ್ಞಾರ೦ಭವನು ನೃಪ &lt;br /&gt;ನಿಚಯವನು ದಾಯಾದ್ಯರನು ಬರಿ&lt;br /&gt;ಸುಚಿತ ವಚನದಲೆಮ್ಮ ಕರಸಿದರಾಕ್ಷಣಕೆ ಬಹೆವು&lt;br /&gt;ಸಚಿವರಾದಡೆ ಕಳುಹು ಬದರಿಯ &lt;br /&gt;ರುಚಿರ ಋಷಿಗಳ ಕರೆಸು ನಿನ್ನಭಿ&lt;br /&gt;ರುಚಿಗೆ ನಿಷ್ಪ್ರತ್ಯೂಹವೆ೦ದನು ದಾನವ ದ್ವ೦ಸಿ ೫ &lt;br /&gt;&lt;br /&gt;ಎ೦ದು ಕಳುಹಿಸಿಕೊ೦ಡು ದೋರಕಿ&lt;br /&gt;ಗಿ೦ದಿರಾಪತಿ ಮಾಗಧನ ರಥ&lt;br /&gt;ದಿ೦ದ ಬಿಜಯ೦ಗೈದನಿನಿಬರು ಕಳುಹಿ ಮರಳಿದರು&lt;br /&gt;ಬ೦ದ ವೇದವ್ಯಾಸ ಧೌಮ್ಯರ&lt;br /&gt;ನ೦ದು ಕರಸಿ ಯುದಿಷ್ಠರನು ನಿಜ&lt;br /&gt;ಮ೦ದಿರದೊಳೊಪ್ಪಿದನು ಪರಿಮಿತ ಜನ ಸಮೂಹದಲಿ ೬&lt;br /&gt;&lt;br /&gt;ಅಕಟ ನಾರದನೇಕೆ ಯಜ್ಞ &lt;br /&gt;ಪ್ರಕಟವನು ಮಾಡಿದನು ನಮಗೀ&lt;br /&gt;ಸಕಲ ಧರಣೀಕ್ಷತ್ರ ವರ್ಗದ ವಿಜಯ ಕಿರುಕುಳವೆ&lt;br /&gt;ವಿಕಟ ಜ೦ಬೂದ್ವೀಪ ಪರಿಪಾ&lt;br /&gt;ಲಕರು ನಮ್ಮಿಬ್ಬರಿಗೆ ಸದರವೆ&lt;br /&gt;ಸುಕರವೇ (ಪಾ: ಸುಕರವೆ) ವರ ರಾಜಸೂಯವೆನುತ್ತ ಚಿ೦ತಿಸಿದ ೭&lt;br /&gt;&lt;br /&gt;ಮಣಿವರಲ್ಲರಸುಗಳು ಮಾಡದೆ &lt;br /&gt;ಮಣಿದೆವಾದರೆ ಕೀರ್ತಿ ಕಾಮಿನಿ&lt;br /&gt;ಕುಣಿವಳೈ ತ್ರೈಜಗದ ಜಿಹ್ವಾರ೦ಗ ಮಧ್ಯದಲಿ &lt;br /&gt;ಬಣಗುಗಳು ನಾವೆ೦ದು ನಾಕದ&lt;br /&gt;ಗಣಿಕೆಯರು ನಗುವರು ಸುಯೋಧನ&lt;br /&gt;ನಣಕವಾಡುವಡಾಯ್ತು ತೆರನೆ೦ದರಸ ಬಿಸಸುಯ್ದ ೮&lt;br /&gt;&lt;br /&gt;ಎನಲು ಧಿಮ್ಮನೆ ನಿ೦ದು ಭುಗಿಲೆ೦&lt;br /&gt;ದನು ಕಿರೀಟಿ ವೃಥಾಭಿಯೋಗದ&lt;br /&gt;ಮನಕತಕೆ ಮಾರಾ೦ಕವಾಯ್ತೇ ಹರ ಮಹಾದೇವ&lt;br /&gt;ನಿನಗಕೀರ್ತಿ ವಧೂಟಿ ಕುಣಿವಳೆ&lt;br /&gt;ಜನದ ಜಿಹ್ವಾರ೦ಗದಲಿ ಹಾ&lt;br /&gt;ಯೆನುತ ತಲೆದೂಗಿದನು ಘನ ಶೌರ್ಯಾನುಭಾವದಲಿ ೯&lt;br /&gt;&lt;br /&gt;ಮಣಿಯರೇ ಮನ್ನೆಯರು ನಾಕದ &lt;br /&gt;ಗಣಿಕೆಯರು ನಗುವರೆ ಸುಯೋಧನ&lt;br /&gt;ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು&lt;br /&gt;ಕಣೆಗಳಿವು ನಾಳಿನಲಿ ಕಬ್ಬಿನ&lt;br /&gt;ಕಣೆಗಳೋ ಗಾ೦ಡೀವವಿದು ನಿ&lt;br /&gt;ರ್ಗುಣವೊ ತಾನರ್ಜುನ ಮಹೀರುಹವೆ೦ದನಾ ಪಾರ್ಥ ೧೦&lt;br /&gt;&lt;br /&gt;ಸಕಲ ಜ೦ಬೂದ್ವೀಪ ಪರಿ ಪಾ&lt;br /&gt;ಲಕರ ಭ೦ಡಾರಾರ್ಥಕಿದೆ ಸು&lt;br /&gt;ಪ್ರಕಟವೆ೦ದು೦ಗುರವನಿತ್ತನು ನೃಪನಹಸ್ತದಲಿ&lt;br /&gt;ಸುಕರ ದುಷ್ಕರವೆ೦ಬ ಚಿ೦ತಾ&lt;br /&gt;ವಿಕಳತೆಗೆ ನೀ ಪಾತ್ರನೇ ಸಾ&lt;br /&gt;ಧಕರನೇ ಸ೦ಹರಿಪೆ ತಾ ವೀಳೆಯವನೆನಗೆ೦ದ ೧೧&lt;br /&gt;&lt;br /&gt;ಪೂತು ಫಲುಗುಣ ನಿನ್ನ ಕುಲಕಭಿ&lt;br /&gt;ಜಾತ ಶೌರ್ಯಕೆ ಗರುವಿಕೆಗೆ ಸರಿ&lt;br /&gt;ಮಾತನಾಡಿದೆ ಸಲುವುದೈ ನಿನಗೆನುತ ಕೊ೦ಡಾಡಿ&lt;br /&gt;ಈತನುತ್ತರ ದೆಸೆಗೆ ಭೀಮನು &lt;br /&gt;ಶಾತಮನ್ಯುವ ದೆಸೆಗೆ ಯಮಳರ&lt;br /&gt;ಭೀತರಿದ್ದೆಸೆಗೆ೦ದು ವೇದವ್ಯಾಸ ನೇಮಿಸಿದ ೧೨&lt;br /&gt;&lt;br /&gt;ನೆರಹಿ ಬಲವನು ನಾಲ್ಕು ದಿಕ್ಕಿಗೆ&lt;br /&gt;ಪರುಠವಿಸಿದರು ಫಲುಗುಣನನು&lt;br /&gt;ತ್ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ&lt;br /&gt;ವರುಣ ದಿಕ್ಕಿಗೆ ನಕುಲನೀ ನಾ&lt;br /&gt;ಲ್ವರಿಗೆ ಕೊಟ್ಟನು ವೀಳೆಯವ ಹಿರಿ&lt;br /&gt;ಯರಸಿ ತ೦ದಳು ತಳಿಗೆ ತ೦ಬುಲ ಮ೦ಗಳಾರತಿಯ ೧೩&lt;br /&gt;&lt;br /&gt;ಪರಮ ಲಗ್ನದೊಳಿ೦ದು ಕೇ೦ದ್ರದೊ&lt;br /&gt;ಳಿರಲು ಗುರು ಭಾರ್ಗವರು ಲಗ್ನದೊ&lt;br /&gt;ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶ ಸ್ಥಿತಿಯ&lt;br /&gt;ಕರಣ ತಿಥಿ ನಕ್ಷತ್ರ ವಾರೋ&lt;br /&gt;ತ್ಕರದಲಭಿಮತ ಸಿದ್ಧಿಯೋಗದೊ&lt;br /&gt;ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ ೧೪&lt;br /&gt;&lt;br /&gt;ಅರಸವೇದವ್ಯಾಸ ಧೌಮ್ಯಾ&lt;br /&gt;ದ್ಯರಿಗೆ ಬಲವ೦ದೆರಗಿ ಕು೦ತಿಯ &lt;br /&gt;ಚರಣಧೂಳಿಯಕೊ೦ಡು ವಿಪ್ರವ್ರಜಕೆ ಕೈಮುಗಿದು&lt;br /&gt;ಅರಸಿಯರು ದೂರ್ವಾಕ್ಷತೆಯ ದಧಿ &lt;br /&gt;ವಿರಚಿತದ ಮಾ೦ಗಲ್ಯವನು ವಿ&lt;br /&gt;ಸ್ತರಿಸೆ ಬಹುವಿಧ ವಾದ್ಯದಲಿ ಹೊರವ೦ಟರರಮನೆಯ ೧೫&lt;br /&gt;&lt;br /&gt;ಅರಸ ಕೇಳೈ ಮೊದಲಲರ್ಜುನ&lt;br /&gt;ಚರಿತವನು ವಿಸ್ತರದಲರುಪುವೆ&lt;br /&gt;ನುರುಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ&lt;br /&gt;ಪುರಕೆ ದೂತರ ಕಳುಹಲವನಿವ&lt;br /&gt;ರುರವಣೆಗೆ ಮನವಳುಕಿ ಕೊಟ್ಟನು&lt;br /&gt;ತುರುಗ ಗಜ ರಥ ಧನ ವಿಲಾಸಿನಿ ಜನವನುಚಿತದಲಿ ೧೬&lt;br /&gt;&lt;br /&gt;ಅವನ ಕಾಣಿಸಿಕೊ೦ಡು ರಾಜ್ಯದೊ&lt;br /&gt;ಳವನ ನಿಲಿಸಿ ತದೀಯ ಸೇನಾ&lt;br /&gt;ನಿವಹ ಸಹಿತಲ್ಲಿ೦ದ ನಡೆದನು ಮು೦ದೆ ವಹಿಲದಲಿ&lt;br /&gt;ಅವನಿಪತಿ ಕಟದೇವನೆ೦ಬುವ&lt;br /&gt;ನವಗಡಿಸಿ ಸರ್ವಸ್ವವನು ಕೊ೦&lt;br /&gt;ಡವನ ಬಲಸಹಿತಾ ದ್ಯುಮತ್ಸೇನಕನ ಝೋ೦ಪಿಸಿದ ೧೭&lt;br /&gt;&lt;br /&gt;ಆತನನು ಗೆಲಿದನುಸುನಾಭನ&lt;br /&gt;ನೀತಿಗೆಡಿಸಿ ತದೀಯ ಸೇನಾ&lt;br /&gt;ವ್ರಾತ ಸಹಿತಲ್ಲಿ೦ದ ಪ್ರತಿವಿ೦ದ್ಯಕನನಪ್ಪಳಿಸಿ&lt;br /&gt;ಆತನರ್ಥವಕೊ೦ಡು ತತ್ಪ್ರಾ&lt;br /&gt;ಗ್ಜ್ಯೋತಿಷಕೆ ಧಾಳಿಟ್ಟನಲ್ಲಿ ಮ&lt;br /&gt;ಹಾತಿಬಲನವನೊಡನೆ ಬಲುಹಾಯ್ತರ್ಜುನನ ಸಮರ ೧೮&lt;br /&gt;&lt;br /&gt;ಜೀನಕರ ಬೋಟಕ ಕಿರಾತರ&lt;br /&gt;ನೂನಬಲ ಸಹಿತೀ ಮಹೀಪತಿ&lt;br /&gt;ಸೂನು ಕಾದಿದನೀತನಲಿ ಭಗದತ್ತನೆ೦ಬುವನು&lt;br /&gt;ಈ ನರನ ಶರ ಜಾಲವದು ಕ&lt;br /&gt;ಲ್ಪಾನಲನ ಕಾಲಾಟವಿದರೊಡ&lt;br /&gt;ನಾನಲಿ೦ದ್ರಾದ್ಯರಿಗೆ ಸದರವೆ ರಾಯ ಕೇಳೆ೦ದ ೧೯&lt;br /&gt; &lt;br /&gt;ಮುರಿಯದಾಬಲ ನೀತನುರುಬೆಗೆ&lt;br /&gt;ಹರಿಯದೀ ಬಲುವುಭಯ ಬಲದಲಿ&lt;br /&gt;ಕುರಿದರಿಯ ಕಮ್ಮರಿಯ ಕಡಿತಕೆ ಕಾಣೆನವಧಿಗಳ&lt;br /&gt;ಅರಿಯದೀತನ ದುರ್ಗವೀ ಬಲ&lt;br /&gt;ದಿರುವುಗಳ ಬೇಳ೦ಬವನು ಬೇ&lt;br /&gt;ಸರದೆ ಕಾದಿದನೆ೦ಟುದಿನ ಭಗದತ್ತನೀತನಲಿ ೨೦&lt;br /&gt;&lt;br /&gt;ಆವನೈ ನೀನಧಿಕತರ ಸ೦&lt;br /&gt;ಭಾವಿತನು ಹೇಳೆನೆ ಯುಧಿಷ್ಠಿರ&lt;br /&gt;ದೇವನನುಜಕಣಾಧನ೦ಜಯನೆನಲು ಮಿಗೆ ಮೆಚ್ಚಿ&lt;br /&gt;ನಾವು ನಿಮ್ಮಯ್ಯ೦ಗೆ ಸಖರಿ೦&lt;br /&gt;ದಾವು ನಿನ್ನವರೇನು ಬೇಹುದು&lt;br /&gt;ನೀವೆಮಗೆ ಕಡು ಮಾನ್ಯರೆ೦ದನು ಕ೦ಡನರ್ಜುನನ ೨೧&lt;br /&gt;&lt;br /&gt;ಆದರೆಮಗೆಯು ದಿವಿಜಪತಿಯೋ&lt;br /&gt;ಪಾದಿ ನೀವೆಮ್ಮಣ್ಣ ದೇವನ&lt;br /&gt;ಮೇದಿನಿಯ ಸಾಮ್ರಾಜ್ಯ ಪದವಿಯ ರಾಜಸೂಯವನು&lt;br /&gt;ಆದರಿಸಿ ಸಾಕೆನಲು ಗಜ ಹಯ&lt;br /&gt;ವಾದಿಯಾದ ಸಮಸ್ತ ವಸ್ತುವ&lt;br /&gt;ನೈದೆ ಕೊಟ್ಟನು ಫಲುಗುಣ೦ಗೆ ಸುಮಿತ್ರಭಾವದಲಿ ೨೨&lt;br /&gt;&lt;br /&gt;ಒ೦ದು ತಿ೦ಗಳು ಪಲವು ಮನ್ನಣೆ&lt;br /&gt;ಯಿ೦ದ ಮನ್ನಿಸಿ ತನ್ನ ಸೇನಾ&lt;br /&gt;ವೃ೦ದವನು ಹೇಳಿದನು ಬಳಿಯಲಿ ಕಳುಹಿದನು ನರನ&lt;br /&gt;ಮು೦ದೆ ನಡೆದನು ರಾಮಗಿರಿಯಲಿ&lt;br /&gt;ನಿ೦ದು ಕಪ್ಪವಕೊ೦ಡು ನಡೆದನು&lt;br /&gt;ಮು೦ದಣೀಶಾನ್ಯದಲಿ ಹೊಕ್ಕನು ಭುವನಪರ್ವತವ ೨೩&lt;br /&gt;&lt;br /&gt;ಆಗಿರೀ೦ದ್ರ ನಿವಾಸಿಗಳ ಸರಿ &lt;br /&gt;ಭಾಗಧನವನುಕೊ೦ಡು ಬಳಿಕ ಮ&lt;br /&gt;ಹಾಗಜಾಶ್ವನ ಸೂರೆಗೊ೦ಡನು ಮು೦ದೆ ದ೦ಡೆತ್ತಿ&lt;br /&gt;ಆಗಯಾಳರಗಾವಿಲರ ನಿ&lt;br /&gt;ರ್ಭಾಗಧೇಯರ ಮಾಡಿಯುತ್ತರ&lt;br /&gt;ಭಾಗದಲಿ ತಿರುಗಿತ್ತುಪಾಳಯವರಸ ಕೇಳೆ೦ದ ೨೪&lt;br /&gt;&lt;br /&gt;ಗಿರಿಯ ತಪ್ಪಲ ವನಚರರ ಸ೦&lt;br /&gt;ಹರಿಸಿ ಮು೦ದೆ ಬೃಹ೦ತಕನ ಕಾ&lt;br /&gt;ತರಿಸಿ ಕಾಣಿಸಿಕೊ೦ಡು ಸೇನಾಬಿ೦ದು ನಗರಿಯಲಿ &lt;br /&gt;ಇರವ ಮಾಡಿ ಸುಧಾಮ (ಪಾ: ಸುದಾಮ) ದೈತ್ಯರ&lt;br /&gt;ನುರೆ ವಿಭಾಡಿಸಿ ಪಾರ್ವತೇಯರ&lt;br /&gt;ಪುರವ ಕೊ೦ಡು ವೂಲೂಕರನು ಪೌರವರ ಭ೦ಗಿಸಿದ ೨೫&lt;br /&gt;&lt;br /&gt;ಮು೦ದೆ ದಸ್ಯುಗಳೇಳುವನು ಕ್ಷಣ&lt;br /&gt;ದಿ೦ದ ಕಾಶ್ಮೀರಕರ ಸಾಧಿಸಿ&lt;br /&gt;ಬ೦ದು ದಶಮ೦ಡಲದ ಲೋಹಿತರನು ವಿಭಾಡಿಸಿದ&lt;br /&gt;ತ೦ದ ಕಪ್ಪದಲಾ ತ್ರಿಗರ್ತರ&lt;br /&gt;ನ೦ದು ಹದುಳಿಸಿ ಗರುವಿತರನಾ&lt;br /&gt;ಟ೦ದು ತೆ೦ಕಣಡಾಭಿಚಾರಕ ರೂಷಕರ ಗೆಲಿದ ೨೬&lt;br /&gt;&lt;br /&gt;ಧಾಳಿಯಿಟ್ಟನು ರೋಚಮಾನನ&lt;br /&gt;ಮೇಲೆ ಕಪ್ಪವಕೊ೦ಡು ಬಿಟ್ಟುದು&lt;br /&gt;ಪಾಳೆಯವು ಚಿತ್ರಾಯುಧನ ನರಸಿ೦ಹ ನಗರಿಯಲಿ&lt;br /&gt;ಮೇಲೆ ವ೦ಗರ ಮುರಿದು ವರನೇ&lt;br /&gt;ಪಾಳ ಕರ್ಪರ ಹೂಣಿಯರನು ವಿ&lt;br /&gt;ಶಾಲ ಕಾ೦ಭೋಜಾದಿಗಳನಪ್ಪಳಿಸಿದನು ತಿರುಗಿ ೨೭&lt;br /&gt;&lt;br /&gt;ಪಾರಶೀಕ ಕಿರಾತ ಬರ್ಬರ&lt;br /&gt;ಪಾರಿಯಾತ್ರರ ಮುರಿದು ಸರ್ವ ವಿ&lt;br /&gt;ಹಾರವನು ಮಾಡಿದನು ಮ್ಲೇಚ್ಚ ಸಹಸ್ರ ಕೋಟಿಗಳ&lt;br /&gt;ಕ್ಷಾರಕರ ಹೂಣಕರ ಡೊಕ್ಕರ &lt;br /&gt;ಪಾರಕರ ಬುರಸಹಣ ಭೂಪರೊ&lt;br /&gt;ಳಾರುಭಟೆಯಲಿ ಕಾದಿ ಕೊ೦ಡನು ಸಕಲ ವಸ್ತುಗಳ ೨೮&lt;br /&gt;&lt;br /&gt;ಬೆದರಿಸಿದನಾ ಹಿಮಗಿರಿಯಪಾ&lt;br /&gt;ರ್ಶ್ವದ ಕಿರಾತರ ಮು೦ದೆ ವಾಯ&lt;br /&gt;ವ್ಯದಲಿ ಶೋಧಿಸಿ ಮರಳಿದನು ಹಿಮಗಿರಿಯ ಕುಕ್ಷಿಯಲಿ&lt;br /&gt;ಪುದಿದ ನಾನಾ ದ್ರೋಣಿಗಳ ಮ&lt;br /&gt;ಧ್ಯದ ಕಿರಾತ ಪುಳಿ೦ದ ನಿಚಯವ&lt;br /&gt;ಸದೆದು ಹತ್ತಿದನಗ್ರ ಶಿಖರಕೆ ಪಾರ್ವತೀ ಪಿತನ ೨೯&lt;br /&gt;&lt;br /&gt;ಎರಡು ಸಾವಿರ ಯೋಜನವು ಹಿಮ&lt;br /&gt;ಗಿರಿಯ ಬಹಳೋತ್ಸೇದ ಶಿಖರಕೆ&lt;br /&gt;ಸರಿಸದಲಿ ಹತ್ತಿದುದು ಪಾಳಯವೇನ ಹೇಳುವೆನು&lt;br /&gt;ಕರಿ ತುರಗ ವರ ರಥ ಪದಾತಿಗೆ&lt;br /&gt;ಪರಿಗಣನೆಯೆಲ್ಲಿಯದು ಹಿಮಗಿರಿ&lt;br /&gt;ಯೆರಡು ಸಾವಿರದಗಲ ತಿರುಗಿತು ರಾಯ ಕೇಳೆ೦ದ ೩೦&lt;br /&gt;&lt;br /&gt;ಗಿರಿಯ ಕೋಣೆಯ ಕುಹರ ಗುಹೆಗಳ&lt;br /&gt;ಗರುವರು೦ಟೆ೦ದಾ ಪುಳಿ೦ದರ&lt;br /&gt;ನೊರಸಿ ಕಾಣಿಸಿಕೊ೦ಡು ಕೊ೦ಡನು ಸಕಲ ವಸ್ತುಗಳ&lt;br /&gt;ಗಿರಿಯನಿಳಿದುದು ನಡೆದು ಬಲ ಕಿ೦&lt;br /&gt;ಪುರುಷ ಖ೦ಡದ ಬಹಳ ನದಿಗಳ &lt;br /&gt;ಲೆರಡು ತಡಿಯಲಿ ತಳಿತು ಬಿಟ್ಟುದು ವನ ವನ೦ಗಳಲಿ ೩೧&lt;br /&gt;&lt;br /&gt;ಅದು ಗಣನೆಗೊ೦ಬತ್ತು ಸಾವಿರ&lt;br /&gt;ವದರೊಳಿದ್ದುದು ಯಕ್ಷ ಕಿನ್ನರ&lt;br /&gt;ಸುದತಿಯರು ಕಿ೦ಪುರುಷರತಿರಾಗಿಗಳು ಸುಖಮಯರು&lt;br /&gt;ಇದರ ಘಲ್ಲಣೆಗಾನಲೇನ&lt;br /&gt;ಪ್ಪುದು ತದೀಯ ಜನ೦ಗಳಿತ್ತುದು&lt;br /&gt;ಸುದತಿಯರನಾ ಮ೦ಡಲಕೆ ಮೀಟಾದ ವಸ್ತುಗಳ ೩೨&lt;br /&gt;&lt;br /&gt;ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆ&lt;br /&gt;ಯಲ್ಲಿ ನೆರೆದ ಕಿರಾತ ವರ್ಗವ&lt;br /&gt;ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ&lt;br /&gt;ಮೆಲ್ಲಮೆಲ್ಲನೆ ಹೇಮ ಕೂಟದ &lt;br /&gt;ಕಲ್ಲನಡರಿದನಾ ಮಹಾದ್ರಿಗ&lt;br /&gt;ಳೆಲ್ಲ ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ ೩೩&lt;br /&gt;&lt;br /&gt;ಅಡರಿತೀ ಬಲವಿದರ ಬೊಬ್ಬೆಯ&lt;br /&gt;ಗಡಬಡೆಗೆ ಪದಘಟ್ಟಣೆಗೆ ಹುಡಿ&lt;br /&gt;ಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ&lt;br /&gt;ನಡೆದು ಬಿಟ್ಟುದು ಗಿರಿಯ ತುದಿಯಲಿ&lt;br /&gt;ತುದುಕಿದುದು ನಾನಾ ದಿಗ೦ತವ&lt;br /&gt;ತಡೆಯದದುಭುತ ವಾದ್ಯ ಗಜ ಹಯ ರಥದ ನಿರ್ಘೋಷ ೩೪&lt;br /&gt;&lt;br /&gt;ಹೇಮಕೂಟದ ಗಿರಿಯ ಗ೦ಧ &lt;br /&gt;ರ್ವಾಮರರ ಝೋ೦ಪಿಸಿದನವರು&lt;br /&gt;ದ್ದಾಮ ವಸ್ತುವ ಕೊ೦ಡನಿಳಿದನು ಬಳಿಕ ಪರ್ವತವ&lt;br /&gt;ಆಮಹಾ ಹರಿವರುಷದಲ್ಲಿಯ&lt;br /&gt;ಸೀಮೆ ಯೋಜನ ನವ ಸಹಸ್ರ ವಿ&lt;br /&gt;ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆ೦ದ ೩೫&lt;br /&gt;&lt;br /&gt;ಉತ್ತರೋತ್ತರ ದೇವಭೂಮಿಗ&lt;br /&gt;ಳೆತ್ತಣವರೀ ದಳ ನಿಚಯ ತಾ&lt;br /&gt;ನೆತ್ತ ಭೂರಿಧ್ವನಿಯನೀ ಗಜಬಜವನೀ ಜನವ&lt;br /&gt;ಎತ್ತಲೆ೦ದರಿಯರು ವಿನೋದಕೆ &lt;br /&gt;ತೆತ್ತರಲ್ಲಿಯ ಪಕ್ಷಿಮೃಗ ಹಯ&lt;br /&gt;ವುತ್ತಮಾ೦ಗನೆಯರನು ಮನ್ನಿಸಿ ಕ೦ಡು ಫಲುಗುಣಗೆ ೩೬&lt;br /&gt;&lt;br /&gt;ಎರಡುಕಡೆಯ೦ಬುಧಿಯ ಪಾರ್ಶ್ವದ&lt;br /&gt;ದುರುಳರನು ಧಟ್ಟಿಸಿ ತದೀಯರು&lt;br /&gt;ವೆರಸಿ ಬಡಗಲು ನಡೆದುದಲ್ಲಿಯ ನಿಷಧ ಪರ್ವತಕೆ&lt;br /&gt;ಎರಡು ಸಾವಿರ ಯೋಜನದ ತುದಿ&lt;br /&gt;ವರೆಗೆ ಹತ್ತಿತು ಬಿಟ್ಟಿತಾ ಗಿರಿ&lt;br /&gt;ಬಿರಿಯೆ ಬಿರು ಸೂಳೈಸಿದವು ನಿಸ್ಸಾಳ ಕೋಟಿಗಳು ೩೭&lt;br /&gt;&lt;br /&gt;ಮೇಲೆ ನಿಷಧಾಚಲದ ಸುತ್ತಲು&lt;br /&gt;ಧಾಳಿ ಹರಿದುದು ದೆಸೆದೆಸೆಯ ದೈ&lt;br /&gt;ತ್ಯಾಳಿ ಹೆಚ್ಚಿದ ದುಷ್ಟ ದಾನವ ಮ೦ಡಳೇಶ್ವರರ&lt;br /&gt;ಶೈಲ ಶಿಖರದೊಳುಳ್ಳ ದೊರೆಗಳ&lt;br /&gt;ತಾಳು ಬಾಗಿಲ ಕುತ್ತರಲಿ ಕಾ&lt;br /&gt;ಲಾಳು ಹೊಕ್ಕುದು ಹೊಯ್ದು ಕಟ್ಟಿತು ಕೂಡೆ ಸೂರೆಗಳ ೩೮&lt;br /&gt;&lt;br /&gt;ಗಿರಿಯ ಶಿಖರದ ಮೇಲ್ಕಡೆಯನಾ&lt;br /&gt;ಚರಿಸಿ ನಿಷಧಾಚಲವನಿಳಿದುದು&lt;br /&gt;ನರನ ಪಾಳೆಯ ಬಿಟ್ಟುದಾಗಲಿಳಾ ವ್ರತದ ಮೇಲೆ&lt;br /&gt;ಅರಸ ಕೇಳೊ೦ಬತ್ತು ಸಾವಿರ &lt;br /&gt;ಪರಿಗಣಿತ ಯೋಜನದ ನೆಲ ಸುರ&lt;br /&gt;ಗಿರಿಯ ಸುತ್ತಣ ದೇಶವತಿ ರಮಣೀಯತರವೆ೦ದ ೩೯&lt;br /&gt;&lt;br /&gt;ಚೂಣಿಗಾನುವರಿಲ್ಲ ಪಾರ್ಥನ&lt;br /&gt;ಬಾಣಕಿದಿರಾರು೦ಟುವಾದ್ಯ&lt;br /&gt;ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು&lt;br /&gt;ಹೂಣೆ ಹೊಕ್ಕನು ಕನಕ ಶೈಲ &lt;br /&gt;ದ್ರೋಣಿಗಳ ದುರ್ಬಲ ಸುರೌಘವ&lt;br /&gt;ನಾಣೆಗ೦ಜಿಸಿ ಕಳೆದುಕೊ೦ಡನು ಸಕಲವಸ್ತುಗಳ ೪೦&lt;br /&gt;&lt;br /&gt;ಹರಿದು ಹತ್ತಿತು ಗ೦ಧಮಾದನ&lt;br /&gt;ಗಿರಿಯಸುತ್ತಣ ಯಕ್ಷ ವಿದ್ಯಾ&lt;br /&gt;ಧರನನ೦ಜಿಸಿ ಕೊ೦ಡನಲ್ಲಿಯ ಸಾರ ವಸ್ತುಗಳ&lt;br /&gt;ಗಿರಿಯನಿಳಿದರು ಜ೦ಬು ನೇರಿಲ&lt;br /&gt;ಮರನ ಕ೦ಡರು ಗಗನ ಚು೦ಬಿತ&lt;br /&gt;ವೆರಡು ಸಾವಿರ ಯೋಜನಾ೦ತರದೊಳತಿ ವಿಳಾಸದಲಿ ೪೧&lt;br /&gt;&lt;br /&gt;ಅದರ ಫಲ ಹೇರಾನೆಗಳ ತೋ&lt;br /&gt;ರದಲಿಹವು ಗಿರಿಸಾರ ಶಿಲೆಗಳ&lt;br /&gt;ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ&lt;br /&gt;ಅದು ಸುಧಾಮಯವಾಯ್ತು ಜ೦ಬೂ&lt;br /&gt;ನದಿ ಜಲಸ್ಪರ್ಶದಲಿ ಜಾ೦ಬೂ&lt;br /&gt;ನದ ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು ೪೨&lt;br /&gt;&lt;br /&gt;ಆ ರಸೋದಕ ಪಾನವೇ ಸ೦&lt;br /&gt;ಸಾರ ಸೌಖ್ಯದ ಸಿದ್ದಿಯಿತರಾ&lt;br /&gt;ಹಾರವಿ೦ಧನ ತ೦ಡುಲಾಗ್ನಿಕ್ರಮ ವಿಧಾನವದು &lt;br /&gt;ನಾರಿಯರು ಸಹಿತಲ್ಲಿ ಸಿದ್ಧರು&lt;br /&gt;ಚಾರಣರು ರಮಣೀಯ ತೀರ ವಿ&lt;br /&gt;ಹಾರಿಗಳು ಬಹುರತ್ನದಿ೦ ಮನ್ನಿಸಿದರರ್ಜುನನ ೪೩&lt;br /&gt; &lt;br /&gt;ಕೇಳಿ ಸೊಗಸಿದ ವಸ್ತುವಿಗೆ ಕ&lt;br /&gt;ಣ್ಣಾಲಿ ಬಿದ್ದಣವಾಯ್ತಲಾ ಸುರ&lt;br /&gt;ಪಾಲ ಪದವಿದರೊಳಗೆ ಬಹುದೇ ತೀರವಾಸಿಗಳ&lt;br /&gt;ಧಾಳಿ ಧಟ್ಟಣೆಗಳನು ಮಾಣಿಸಿ&lt;br /&gt;ಪಾಳೆಯವನುಪವನ ಸರೋವರ&lt;br /&gt;ವೇಲೆಯಲಿ ಬಿಡಿಸಿದನು ಜ೦ಬೂನದಿಯ ತೀರದಲಿ ೪೪&lt;br /&gt;&lt;br /&gt;ಲಲಿತ ದಿವ್ಯಾ ಭರಣ ರತ್ನಾ&lt;br /&gt;ವಳಿಯನನುಕರಿಸಿದನು ಪಾಳೆಯ&lt;br /&gt;ಸುಳಿದುದಮರಾಚಲದ ಕೇಸರ ಶಿಖರಿಗಳ ಕಳೆದು&lt;br /&gt;ಹೊಳೆ ಹೊಳೆವ ಮೇರುವಿನ ಸುತ್ತಣ&lt;br /&gt;ವಳಯದರ್ಧವನಾಕರಿಸಿ ಕೈ&lt;br /&gt;ವಳಿಸಿ ಬಿಟ್ಟನು ಹೊಕ್ಕಿಳಾವೃತವರುಷ ಸೀಮೆಯಲಿ ೪೫&lt;br /&gt;&lt;br /&gt;ಸೇನೆ ಪಡುವಲು ತಿರುಗಿ ಸುತ್ತಣ&lt;br /&gt;ವಾನುಪೂರ್ವಿಯ (ದಾನುಪೂರ್ವಿಯ?) ಗ೦ಧಮಾದನ&lt;br /&gt;ಸಾನುವನು ವೆ೦ಠಣಿಸಿಯಡರಿತು ಚೂಣಿ ಶೃ೦ಗದಲಿ&lt;br /&gt;ಆ ನಗೇ೦ದ್ರನನಿಳಿದು ಪಡುವಣ&lt;br /&gt;ಕಾನನ೦ಗಳ ಕೇತುಮಾಲದ&lt;br /&gt;ಕಾನನ೦ಗಳ ಕಲೆದು ಬಿಟ್ಟುದು ಸೇನೆ ಬಳಸಿನಲಿ ೪೬&lt;br /&gt;&lt;br /&gt;ಅಲ್ಲಿ ಸಾಗರತೀರ ಪರಿಯ೦&lt;br /&gt;ತೆಲ್ಲಿ ಗಜ ಹಯವೆಲ್ಲಿ ಸುದತಿಯ&lt;br /&gt;ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿ ರಮಣೀಯ&lt;br /&gt;ಅಲ್ಲಿಗಲ್ಲಿಗೆ ನಡೆದು ಸಾಧಿಸಿ &lt;br /&gt;ಕೆಲ್ಲೆ ಕುಹರದ ಕೋಣೆ ಬಾಗುಗ&lt;br /&gt;ಳೆಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ ೪೭&lt;br /&gt;&lt;br /&gt;ಎಡಕಡೆಯಲೊಂಬತ್ತು ಸಾವಿರ&lt;br /&gt;ನಡುನೆಲನನಾಕರಿಸಿ ಮೂಡಣ&lt;br /&gt;ಕಡೆಗೆ ತಿರುಗಿತು ಗ೦ಧಮಾದನ ಗಿರಿಯನೇರಿಳಿದು&lt;br /&gt;ನಡೆದಿಳಾವೃತದೊಳಗೆ ಬಿಟ್ಟುದು &lt;br /&gt;ಪಡೆ ಸುರಾದ್ರಿಯನುಳುಹಿ ಬಲದಲಿ&lt;br /&gt;ನಡೆಯಲತಿ ದೂರದಲಿ ಕ೦ಡರು ಮ೦ದರಾಚಲವ ೪೮&lt;br /&gt;&lt;br /&gt;ಇದುವೆ ಕಡಗೋಲಾಯ್ತು ಕಡೆವ೦&lt;br /&gt;ದುದಧಿಯನು ತಾನಿದು ಮಹಾಗಿರಿ &lt;br /&gt;ಯಿದರಬಿ೦ಕವ ನೋಡಬೇಕೆ೦ದನರ್ಜುನನ ಸೇನೆ&lt;br /&gt;ಒದರಿ ಹತ್ತಿತು ನಡುವಣರೆ ದು&lt;br /&gt;ರ್ಗದಲಿ ಬೆಟ್ಟ೦ಗಳಲಿ ನೃಪರಿ&lt;br /&gt;ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ ೪೯&lt;br /&gt;&lt;br /&gt;ಇಳುಹಿದರು ಚೂಣಿಯನು ಮು೦ದರೆ&lt;br /&gt;ನೆಲೆಯ ಭಟರೌಕಿದರು ಭಾರಿಯ&lt;br /&gt;ತಲೆವರಿಗೆಗಳಲೊತ್ತಿದರು ಹೊಗಿಸಿದರು ದುರ್ಗವನು&lt;br /&gt;ಕಲುವಳೆಯ ಕೋಲಾಹಲಕ್ಕಿವ&lt;br /&gt;ರಳುಕದಿರಿದರು ಸುರಗಿಯಲಿ ತೆನೆ&lt;br /&gt;ವಳಿಯ ಹಿಡಿದರು ಹೊಯ್ದು ಕೇಶಾಕೇಶಿ ಯುದ್ಧದಲಿ ೫೦&lt;br /&gt;&lt;br /&gt;ಶಕರು ಖದ್ಯೋತ ಪ್ರತಾಪರು&lt;br /&gt;ವಿಕಳ ಚಿಂಘರು ದೀರ್ಘಮಯ ವೇ&lt;br /&gt;ಣಿಕರು ಪಶುಪಾಲಕ ಪುಳಿಂದರು ಕಂಕಣಾಹ್ವಯರು&lt;br /&gt;ಸಕಲ ದಸ್ಯುಗಳೈದೆ ಸೋತುದು&lt;br /&gt;ವಿಕಳಬಲವೊಪ್ಪಿಸಿತು ಸರ್ವ&lt;br /&gt;ಸ್ವಕವ ಸಂಧಾನದಲಿ ನೆಲೆಯಾಯ್ತಲ್ಲಿಯರ್ಜುನಗೆ ೫೧&lt;br /&gt;&lt;br /&gt;ಶೋಧಿಸಿದನಾ ಗಿರಿಯನಾಚೆಯ&lt;br /&gt;ಹಾದಿಯಲಿ ಹೊರವ೦ಟು ಬರೆ ಮರಿ&lt;br /&gt;ಯಾದೆಗಿಕ್ಕಿದ ಬೆಟ್ಟವಿದ್ದುದು ಮಾಲ್ಯವ೦ತಗಿರಿ&lt;br /&gt;ಭೇದಿಸಿದನದರೊಳಗು ಹೊರಗಿನ&lt;br /&gt;ಲಾದ ವಸ್ತುವ ಕೊ೦ಡು ತಚ್ಛೈ&lt;br /&gt;ಲೋದರವನೇರಿಳಿದು ಭದ್ರಾಶ್ವಕ್ಕೆ ನಡೆತ೦ದ ೫೨&lt;br /&gt;&lt;br /&gt;ಅದು ಮಹಾ ರಮಣೀಯತರವ೦&lt;br /&gt;ತದರೊಳಿದ್ದುದು ಶುದ್ಧಭೋಗಾ&lt;br /&gt;ಸ್ಪದರು ಯಕ್ಷೋರಕ್ಷ ಗ೦ದರ್ವಾಪ್ಸರಾ (ಪಾ: ಗ೦ದರ್ವಾಪ್ಸರೋ) ನಿಕರ&lt;br /&gt;ಕುದುರೆ ರಥ ಗಜಪತ್ತಿ ನಿರ್ಘೋ&lt;br /&gt;ಷದಲಿ ಬೆಬ್ಬಳೆಯಾಯ್ತು ಬೇಳ೦&lt;br /&gt;ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ ೫೩&lt;br /&gt;&lt;br /&gt;ದೊರಕಿತಲ್ಲಿಯಪೂರ್ವ ವಸ್ತೂ&lt;br /&gt;ತ್ಕರ ಸಮುದ್ರದ್ವೀಪ ಪರಿಯ೦&lt;br /&gt;ತರನಡೆದನೊಂಬತ್ತು ಸಾವಿರ ಯೋಜನಾ೦ತರವ&lt;br /&gt;ತಿರುಗಿದನು ಭದ್ರಾಶ್ವಕವನಾ&lt;br /&gt;ಕರಿಸಿ ಬಡಗಲು ನಡೆದರಲ್ಲಿಯ &lt;br /&gt;ಗಿರಿಯ ಕ೦ಡರು ಹತ್ತಿದರು ಹರುಷದಲಿ ಬೊಬ್ಬಿಡುತ ೫೪&lt;br /&gt;&lt;br /&gt;ನೀಲಗಿರಿಯಗ್ರದಲಿ ಬಿಟ್ಟುದು&lt;br /&gt;ಪಾಳೆಯವು ಬೊಬ್ಬೆಯಲಿ ದಿಕ್ಕಿನ&lt;br /&gt;ಮೂಲೆ ಬಿರಿದುದು ಜರಿದವದ್ರಿಗಳೇನನುಸುರುವೆನು&lt;br /&gt;ಮೇಲುದುರ್ಗದ ಸಂದಿಗೊಂದಿಯೊ (ಪಾ: ಸ೦ಧಿಗೊ೦ಧಿಯೊ)&lt;br /&gt;ಳಾಳು ಹರಿದುದು ಸೂರೆಗೊ೦ಡು ವಿ&lt;br /&gt;ಶಾಲ ವಸ್ತುವ ತ೦ದರಲ್ಲಿದ್ದರಸುಗಳ ಗೆಲಿದು ೫೫&lt;br /&gt;&lt;br /&gt;ಎರಡು ಸಾವಿರದುದ್ದವನು ಮ&lt;br /&gt;ತ್ತೆರಡು ಸಾವಿರದಗಲವದನಾ&lt;br /&gt;ಕರಿಸಿ ರಮ್ಯಕ ಭೂಮಿಗಿಳಿದರು ಹೊಕ್ಕರಾ ನೆಲನ&lt;br /&gt;ಅರಸ ಕೇಳಲ್ಲಲ್ಲಿ ಸುಮನೋ&lt;br /&gt;ಹರದ ವಸ್ತುವ ಕೊ೦ಡು ನವ ಸಾ&lt;br /&gt;ವಿರವನಗಲಕೆ ಸುತ್ತಿ ಬ೦ದರು ಗೆಲಿದು ಗರ್ವಿತರ ೫೬&lt;br /&gt;&lt;br /&gt;ಅರಸ ಕೇಳಲ್ಲಿ೦ದ ಬಡಗಲು&lt;br /&gt;ಹರಿದು ಬಿಟ್ಟರು ಹತ್ತಿದರು ಬೇ&lt;br /&gt;ಸರದೆ ಕಲುದರಿಗಳಲಿ ಬಹಳ ಶ್ವೇತ ಪರ್ವತವ&lt;br /&gt;ಗಿರಿಯ ತುದಿಗಳ ತೋಟದಲಿ ಗ&lt;br /&gt;ಹ್ವರದ ಕೊಳ್ಳದ ಕೋಹಿನಲಿ ಹೊ&lt;br /&gt;ಕ್ಕಿರಿದು ಶೋಧಿಸಿ ಕೊ೦ಡರಲ್ಲಿಯ ಸಾರವಸ್ತುಗಳ ೫೭&lt;br /&gt;&lt;br /&gt;ಇಳಿದನಾ ಗಿರಿಯನು ಹಿರಣ್ಮಯ&lt;br /&gt;ದೊಳಗೆ ಬಿಟ್ಟನು ಪಾಳೆಯವ ತ&lt;br /&gt;ದ್ವಲಯ ಮಿಗಿಲೊ೦ಬತ್ತು ಸಾವಿರ ಯೋಜನಾ೦ತರವ&lt;br /&gt;ಬಳಸಿ ಬ೦ದನು ವಿಮಲ ಸೌಧಾ&lt;br /&gt;ವಳಿಯ ನೆಲೆಯುಪ್ಪರಿಗೆಗಳ ವರ&lt;br /&gt;ಲಲನೆಯರು ಕ೦ಡೀತನನು ಹೊಗಳಿದರು ತಮತಮಗೆ ೫೮&lt;br /&gt;&lt;br /&gt;ಈತ ಭಾರತ ವರುಷ ಪತಿಯನು&lt;br /&gt;ಜಾತ ಗಡ ತತ್ಕರ್ಮ ಭೂಮಿಯ&lt;br /&gt;ಲೀತನಧಿಪತಿ ಗೆಲಿದನಿತ್ತಲು ದೇವಭೂಮಿಪರ&lt;br /&gt;ಈಗ ಗೌರೀಸುತನವೋಲ್ ಪುರು&lt;br /&gt;ಹೂತ ತನಯನ ವೋಲು ಭುವನ &lt;br /&gt;ಖ್ಯಾತನೆ೦ದಾ ಸ್ತ್ರೀಕಟಕ ಕೊ೦ಡಾಡಿತರ್ಜುನನ ೫೯&lt;br /&gt;&lt;br /&gt;ತನತನಗೆ ತರುಣಿಯರು ಹೂವಿನ&lt;br /&gt;ತನಿವಳೆಯ ಕರೆದರು ಕನತ್ಕಾಂ&lt;br /&gt;ಚನ ವಿಭೂಷಣ ರತ್ನಚಯ ಪೂರಿತದ ಪೆಟ್ಟಿಗೆಯ&lt;br /&gt;ವನಿತೆಯರನಾ ದೇಶದಲಿ ಮೀ&lt;br /&gt;ಟೆನಿಪರನು ಮೃಗಪಕ್ಷಿ ಕೃಷ್ಣಾ&lt;br /&gt;ಜಿನವನ೦ತವನಿತ್ತು ಸತ್ಕರಿಸಿದರು ಫಲುಗುಣನ ೬೦&lt;br /&gt;&lt;br /&gt;ಧಾರುಣೀಪತಿ ಕೇಳು ದಳ ನಡು&lt;br /&gt;ದಾರಿ ಬಡಗಣ ಶೃ೦ಗಪರ್ವತ&lt;br /&gt;ದೋರೆಯಲಿ ದೊರೆಗಳನು ಧಟ್ಟಿಸಿ ಸೆಳೆದು ಬಹುಧನವ&lt;br /&gt;ಭಾರಣೆಯ ಮು೦ಗುಡಿಯ ಕೊಳ್ಳೆಗ&lt;br /&gt;ಳೋರಣಿಸಿ ತುದಿಗೇರಿ ಸಿದ್ಧರ &lt;br /&gt;ಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ ೬೧&lt;br /&gt;&lt;br /&gt;ಅರಸು ಮೋಹರ ಹತ್ತಿತಾ ಗಿರಿ&lt;br /&gt;ಎರಡು ಸಾವಿರದಗಲವದರಲಿ&lt;br /&gt;ತುರುಗಿ ಬಿಟ್ಟಿತು ಸೇನೆ ಸೂಳೈಸಿದವು ನಿಸ್ಸಾಳ&lt;br /&gt;ಬಿರಿದುದಾ ಗಿರಿ ಕೆಳಗಣುತ್ತರ&lt;br /&gt;ಕುರುಗಳೆದೆ ಜರ್ಝರಿತವಾಯ್ತ&lt;br /&gt;ಬ್ಬರಕೆ ಬಡಗಣ ಕಡಲು ಕದಡಿತು ತಳದ ತಾಯ್ಮಳಲ ೬೨&lt;br /&gt;&lt;br /&gt;ನೆರೆದರಲ್ಲಿಯ ನೃಪರು ದೂತರ&lt;br /&gt;ಹರಿಯಬಿಟ್ಟರುಪಾರ್ಥನಿದ್ದೆಡೆ&lt;br /&gt;ಗರಸ ಕೇಳುವರುಗಳು ಬ೦ದರು ಕ೦ಡರರ್ಜುನನ&lt;br /&gt;ಗಿರಿಯನಿಳಿಯದಿರಿತ್ತಲುತ್ತರ&lt;br /&gt;ಕುರುಗಳಿಹ ಸ೦ಸ್ಥಾನವಿದು ಗೋ&lt;br /&gt;ಚರಿಸಲರಿಯದು ನರರ ಕಾಲ್ದುಳಿಗೆ೦ದರವರ೦ದು ೬೩&lt;br /&gt;&lt;br /&gt;ಅಲ್ಲದಾಕ್ರಮಿಸಿದರೆ ನಿನಗವ&lt;br /&gt;ರಲ್ಲಿಕಾಣಿಕೆ ದೊರಕಲರಿಯದು&lt;br /&gt;ಬಲ್ಲಿದವರುತ್ತರದ ಕುರುಗಳು ನಿನಗೆಬಾ೦ಧವರು &lt;br /&gt;ಗೆಲ್ಲದಲಿ ಫಲವಿಲ್ಲ ಸಾಹಸ&lt;br /&gt;ವಲ್ಲಿ ಮೆರೆಯದು ಮರ್ತ್ಯ ದೇಹದೊ&lt;br /&gt;ಳಲ್ಲಿ ಸುಳಿವುದು ಭಾರವೆ೦ದರು ಚರರು ಪಲುಗುಣಗೆ ೬೪&lt;br /&gt;&lt;br /&gt;ಮಾಣಲದು ನಮಗವರು ಬ೦ಧು&lt;br /&gt;ಶ್ರೇಣಿಗಳು ಗಡ ಹೋಗಲದು ಕ&lt;br /&gt;ಟ್ಟಾಣೆಯಾವುದು ನಿಮ್ಮದೇಶದೊಳುಳ್ಳ ವಸ್ತುಗಳ&lt;br /&gt;ವಾಣಿಯವ ಮಾಡದೆ ಸುಯಜ್ಞದ&lt;br /&gt;ಕಾಣಿಕೆಯನೀವುದು ಯುಧಿಷ್ಠಿರ&lt;br /&gt;ನಾಣೆ ನಿಮಗೆನೆ ತ೦ದುಕೊಟ್ಟರು ಸಕಲ ವಸ್ತುಗಳ ೬೫&lt;br /&gt;&lt;br /&gt;ತಿರುಗಿತಲ್ಲಿ೦ದತ್ತ ಪಾಳೆಯ&lt;br /&gt;ಮುರಿದು ಬಿಟ್ಟು ಹಿರಣ್ಮಯವನಾ&lt;br /&gt;ಕರಿಸಿ ರಮ್ಯಕದಿ೦ದಿಳಾವೃತದಿ೦ದ ದಕ್ಷಿಣಕೆ&lt;br /&gt;ಭರದಿನೈದುತ ಹರಿವರುಷ ಕಿ೦&lt;br /&gt;ಪುರುಷವನು ದಾಟುತ ಹಿಮಾನ್ವಿತ&lt;br /&gt;ಗಿರಿಯನೇರಿದುದಿಳಿದು ಬ೦ದುದು ತೆ೦ಕ ಮುಖವಾಗಿ ೬೬&lt;br /&gt;&lt;br /&gt;ಕಳುಹಿ ಕಳೆದನು ಹಿ೦ದೆ ಕೂಡಿದ&lt;br /&gt;ಬಲವನವರವರೆಲ್ಲ ಯಾಗ&lt;br /&gt;ಸ್ಥಳಕೆ ಬಹ ನೇಮದಲಿ ಹರಿದುದು ನಿಜಪುರ೦ಗಳಿಗೆ&lt;br /&gt;ನೆಲನನಗಲದ ವಸ್ತುವಿದನೆ೦&lt;br /&gt;ತಳವಡಿಸಿದನೊ ಶಿವಯೆನುತ ಸುರ&lt;br /&gt;ರುಲಿಯೆ ಹೊಕ್ಕನು ಪಾರ್ಥನಿ೦ದ್ರಪ್ರಸ್ಥ ಪುರವರದ ೬೭&lt;br /&gt;&lt;br /&gt;(ಸಂಗ್ರಹ: ಶ್ರೀಮತಿ ಶಕುಂತಲಾ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-6643902019632606017?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/6643902019632606017/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=6643902019632606017&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/6643902019632606017'/><link rel='self' type='application/atom+xml' href='http://www.blogger.com/feeds/742145181089395829/posts/default/6643902019632606017'/><link rel='alternate' type='text/html' href='http://gaduginabharata.blogspot.com/2010/09/blog-post.html' title='ಸಭಾಪರ್ವ: ೦೩. ಮೂರನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-9158612034363697710</id><published>2010-08-26T02:27:00.001+05:30</published><updated>2010-08-26T02:29:03.436+05:30</updated><category scheme='http://www.blogger.com/atom/ns#' term='೦೧. ಆದಿಪರ್ವ'/><title type='text'>ಆದಿಪರ್ವ: ೦೩. ಮೂರನೆಯ ಸಂಧಿ</title><content type='html'>ಸೂ: ಚಂಡಮುನಿ ಮಂತ್ರಾಹ್ವಯದಿ ಬರೆ&lt;br /&gt;ಚಂಡಕರ ತತ್ತೇಜನಾಹವ&lt;br /&gt;ಚಂಡ ವಿಕ್ರಮನವನಿಯಲಿ ಜನಿಸಿದನು ಕಲಿಕರ್ಣ&lt;br /&gt;&lt;br /&gt;ಅರಸ ಕೇಳೈ ಕೆಲವು ಕಾಲಾಂ&lt;br /&gt;ತರಕೆ ನಿಮ್ಮ ವಿಚಿತ್ರವೀರ್ಯನು&lt;br /&gt;ನೆರೆದನಮರಸ್ತ್ರೀಯರಲಿ ಬಳಿಕೀ ನದೀಸುತನ&lt;br /&gt;ಕರೆದು ನುಡಿದಳು ಮಗನೆ ರಾಜ್ಯವ&lt;br /&gt;ಧರಿಸು ನೀನಿನ್ನುತ್ತರದ ಹಿಮ&lt;br /&gt;ಕರಕುಲವ ಬೆಳಗೆಂದು ಯೋಜನಗಂಧಿ ಬೆಸಸಿದಳು ೧&lt;br /&gt;&lt;br /&gt;ತಾಯೆ ನಿಮ್ಮೋಪಾದಿ ರಾಜ್ಯ&lt;br /&gt;ಸ್ತ್ರೀಯಳೆಂದಾ ನುಡಿಯೊಳಗೆ ಗಾಂ&lt;br /&gt;ಗೇಯ ಮುಳುಗನು ಭೀಷ್ಮವಚನಕೆ ಬೇರೆ ಮೊಳೆಯುಂಟೆ&lt;br /&gt;ಕಾಯಕಲ್ಪ ಸುಖಕ್ಕೆ ಘನ ನಿ&lt;br /&gt;ಶ್ರೇಯಸವ ಕೆಡಿಸುವೆನೆ ಯೆಲವದ&lt;br /&gt;ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲೆಂದ ೨&lt;br /&gt;&lt;br /&gt;ಮರುಗಿ ಯೋಜನಗಂಧಿ ಚಿಂತೆಯ&lt;br /&gt;ಸೆರೆಗೆ ಸಿಲುಕಿದಳೊಂದು ರಾತ್ರಿಯೊ&lt;br /&gt;ಳರಿದು ನೆನೆದಳು ಪೂರ್ವಸೂಚಿತ ಪುತ್ರಭಾಷಿತವ&lt;br /&gt;ಮುರಿದ ಭರತಾನ್ವಯದ ಬೆಸುಗೆಯ &lt;br /&gt;ತೆರನು ತೋರಿತೆ ಪುಣ್ಯವೆನುತೆ&lt;br /&gt;ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು ೩&lt;br /&gt;&lt;br /&gt;ಕೆಂಜೆಡೆಯ ಕೃಷ್ಣಾಜಿನದ ಮೊನೆ&lt;br /&gt;ಮುಂಜೆರಗಿನುಡಿಗೆಯ ಬಲಾಹಕ&lt;br /&gt;ಪುಂಜಕಾಂತಿಯ ಪಿಂಗತರಮುಖ ಕೇಶದುನ್ನತಿಯ&lt;br /&gt;ಕಂಜನಾಭನ ಮೂರ್ತಿ ಶೋಭಾ&lt;br /&gt;ರಂಜಿತನು ಜನದುರಿತ ದಶಮದ&lt;br /&gt;ಭಂಜಕನು ತಾಯ್ಗೆರಗಿ ನುಡಿದನು ವ್ಯಾಸಮುನಿರಾಯ ೪&lt;br /&gt;&lt;br /&gt;ನೆನೆದಿರೇನೌತಾಯೆ ಕೃತ್ಯವ&lt;br /&gt;ನೆನಗೆ ಬೆಸಸೆನೆ ಮಗನೆ ಭಾರತ&lt;br /&gt;ವಿನುತಕುಲ ಜಲರಾಶಿಯೆಡೆವರಿತುದು ವಿಚಿತ್ರನಲಿ &lt;br /&gt;ತನುಜ ನೀನೆ ಬಲ್ಲೆಯೆನೆ ಕೇಳ್&lt;br /&gt;ಜನನೀ ನಿಮ್ಮಡಿಯಾಜ್ಞೆಯಲಿ ಸಂ&lt;br /&gt;ಜನಿಪುವೆನು ವೈಚಿತ್ರವೀರ್ಯ ಕ್ಷೇತ್ರದಲಿ ಸುತರ ೫&lt;br /&gt;&lt;br /&gt;ಎಂದು ಬಳಿಕೇಕಾಂತ ಭವನದೊ&lt;br /&gt;ಳಂದು ಮುನಿಯಿರಲಂಬಿಕೆಯನರ&lt;br /&gt;ವಿಂದಮುಖಿಯಟ್ಟಿದಳು ಸೊಸೆಯನು ಮುನಿಯ ಪೂರೆಗಾಗಿ&lt;br /&gt;ಬಂದು ಮುನಿಪನ ದಿವ್ಯರೂಪವ&lt;br /&gt;ನಿಂದುಮುಖಿ ಕಂಡಕ್ಷಿಗಳ ಭಯ &lt;br /&gt;ದಿಂದ ಮುಚ್ಚಿದಳಾಕೆ ತಿರುಗಿದಳರಸ ಕೇಳೆಂದ ೬&lt;br /&gt;&lt;br /&gt;ಬಳಿಕಲಂಬಾಲಿಕೆಯನಲ್ಲಿಗೆ&lt;br /&gt;ಕಳುಹಲಾಕೆಗೆ ಭಯದಿ ಮುಖದಲಿ &lt;br /&gt;ಬಿಳುಪು ಮಸಗಿತು ಮುನಿಯ ರೌದ್ರಾಕಾರದರ್ಶನದಿ &lt;br /&gt;ಲಲನೆ ಮರಳಿದಳೊಬ್ಬ ಸತಿಯನು&lt;br /&gt;ಕಳುಹಲಾ ವಧು ಚಪಲದೃಷ್ಟಿಯೊ&lt;br /&gt;ಳಳುಕದೀಕ್ಷಿಸಲಾಯ್ತು ಗರ್ಭಾದಾನವನಿಬರಿಗೆ ೭&lt;br /&gt;&lt;br /&gt;ಬಂದು ಮುನಿಪತಿ ತಾಯ್ಗೆ ಕೈಮುಗಿ&lt;br /&gt;ದೆಂದನಂಬಿಕೆಯಲ್ಲಿ ಜನಿಸುವ&lt;br /&gt;ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ&lt;br /&gt;ಬಂದ ಬಳಿಕಿನ ಚಪಲೆಗತಿಬಲ&lt;br /&gt;ನೆಂದು ಹೇಳಿದು ತನಗೆ ನೇಮವೆ&lt;br /&gt;ಯೆಂದು ತನ್ನಾಶ್ರಮಕೆ ಸರಿದನು ಬಾದರಾಯಣನು ೮&lt;br /&gt;&lt;br /&gt;ತುಂಬಿದುದು ನವಮಾಸ ಜನಿಸಿದ&lt;br /&gt;ನಂಬಿಕೆಯ ಬಸುರಿನಲಿ ಸೂನು ಗ&lt;br /&gt;ತಾಂಬಕನು ಮಗನಾದನಂಬಾಲಿಕೆಕೆಗೆ ಪಾಂಡುಮಯ&lt;br /&gt;ಚುಂಬಿಸಿತು ಪರಿತೋಷ ನವ ಪುಳ&lt;br /&gt;ಕಾಂಬುಗಳು ಜನಜನಿತವದನೇ&lt;br /&gt;ನೆಂಬೆನುತ್ಸವವನು ಕುಮಾರೋದ್ಭವದ ವಿಭವದಲಿ ೯&lt;br /&gt;&lt;br /&gt;ಜಾತಕರ್ಮಾದಿಯನು ಪಾರ್ಥಿವ&lt;br /&gt;ಜಾತಿ ವಿಧಿವಿಹಿತದಲಿ ಗಂಗಾ&lt;br /&gt;ಜಾತ ಮಾಡಿಸಿ ತುಷ್ಟಿಪಡಿಸಿದ ನಿಖಿಳ ಯಾಚಕರ&lt;br /&gt;ಈತನೇ ಧೃತರಾಷ್ಟ್ರನೆರಡನೆ&lt;br /&gt;ಯಾತ ಪಾಂಡು ವಿಲಾಸಿನೀ ಸಂ&lt;br /&gt;ಭೂತನೀತನು ವಿದುರನೆಂದಾಯ್ತುವರಿಗಭಿಧಾನ ೧೦&lt;br /&gt;&lt;br /&gt;ಬೆಳೆವುತಿರ್ದರು ಹರಿಣಪಕ್ಷದ&lt;br /&gt;ನಳಿನರಿಪುವಿನವೊಲ್ ಕುಮಾರರು&lt;br /&gt;ಕುಲವಿಹಿತ ಚೌಲೋಪನಯನವನಿಬ್ಬರಿಗೆ ರಚಿಸಿ&lt;br /&gt;ಕಲಿತ ವಿದ್ಯರ ಮಾಡಿ ತಾಯು&lt;br /&gt;ಮ್ಮಳಿಸದಂತಿರೆ ಸೋಮವಂಶದ&lt;br /&gt;ಬೆಳವಿಗೆಯನೇ ಮಾಡಿಕೊಂಡಾಡಿದನು ಕಲಿಭೀಷ್ಮ ೧೧&lt;br /&gt;&lt;br /&gt;ಧಾರುಣೀಪತಿ ಚಿತ್ತವಿಸು ಗಾಂ&lt;br /&gt;ಧಾರದೇಶದ ಸುಬಲರಾಜ ಕು&lt;br /&gt;ಮಾರಿ ಕುಲವಧುವಾದಳಾ ಧೃತರಾಷ್ಟ್ರ ಭೂಪತಿಗೆ&lt;br /&gt;ನಾರಿಯರೊಳುತ್ತಮೆಯಲಾ ಗಾಂ&lt;br /&gt;ಧಾರಿಯೆನಿಸಿ ಪತಿವ್ರತಾ ವಿ&lt;br /&gt;ಸ್ತಾರಗುಣದಲಿ ಮೆರೆದಳಬಲೆ ಸಮಸ್ತಜನ ಹೊಗಳೆ ೧೨&lt;br /&gt;&lt;br /&gt;ಇತ್ತ ಕುಂತೀಭೋಜನನೆಂಬ ನೃ&lt;br /&gt;ಪೋತ್ತಮನ ಭವನದಲಿ ಮುರಹರ&lt;br /&gt;ನತ್ತೆ ಬೆಳೆವುತ್ತಿರ್ದಳಾ ವಸುದೇವನೃಪನನುಜೆ&lt;br /&gt;ಹೆತ್ತವರಿಗೋಲೈಸುವರಿಗೆ ಮ&lt;br /&gt;ಹೋತ್ತಮರಿಗುಳಿದಖಿಳ ಲೋಕದ&lt;br /&gt;ಚಿತ್ತಕಹುದೆನೆ ನಡೆವ ಗುಣದಲಿ ಮೆರೆದಳಾ ಕುಂತಿ ೧೩&lt;br /&gt;&lt;br /&gt;ಒಂದು ದಿನ ದೂರ್ವಾಸಮುನಿ ನೃಪ&lt;br /&gt;ಮಂದಿರಕೆ ಬರಲಾ ಮಹೀಪತಿ&lt;br /&gt;ಬಂದ ಬರವಿನಲವರ ಮರೆದನು ರಾಜಕಾರ್ಯದಲಿ&lt;br /&gt;ಇಂದು ಕುಂತೀಭೋಜನೊಡೆತನ&lt;br /&gt;ಬೆಂದುಹೋಗಲಿಯೆಂಬ ಶಾಪವ&lt;br /&gt;ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ ೧೪&lt;br /&gt;&lt;br /&gt;ತರುಣಿಯೊಡಗೊಂಡೊಯ್ದು ಕನ್ಯಾ&lt;br /&gt;ಪರಮ ಭವನಲಾ ಮುನಿಯನುಪ&lt;br /&gt;ಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ&lt;br /&gt;ಹರ ಮಹಾದೇವೀ ಮಗುವಿನಾ&lt;br /&gt;ದರಣೆಗೀ ವಿನಯೋಪಚಾರಕೆ&lt;br /&gt;ಹಿರಿದು ಮೆಚ್ಚಿದೆನೆಂದು ತಲೆದೂಗಿದನು ದೂರ್ವಾಸ ೧೫&lt;br /&gt;&lt;br /&gt;ಮಗಳೆ (ಪಾ: ಮಗಳೇ) ಬಾ ಕೊಳ್ ಐದು ಮಂತ್ರಾ&lt;br /&gt;ಳಿಗುಳನಿವು ಸಿದ್ದಪ್ರಯೋಗವು&lt;br /&gt;ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು&lt;br /&gt;ಮಗನು ಜನಿಸುವನೆಂದು ಮುನಿ ಕುಂ&lt;br /&gt;ತಿಗೆ ರಹಸ್ಯದೊಳರುಹಿ ಮುನಿ ಮೌ&lt;br /&gt;ಳಿಗಳ ಮಣಿ ಪರಿತೋಷದಲಿ ಸರಿದನು ನಿಜಾಶ್ರಮಕೆ ೧೬&lt;br /&gt;&lt;br /&gt;ಮಗುವುತನದಲಿ ಬೊಂಬೆಯಾಟಕೆ&lt;br /&gt;ಮಗುವನೇ ತಹೆನೆಂದು ಬಂದಳು&lt;br /&gt;ಗಗನನದಿಯಲಿ ಮಿಂದಳುಟ್ಟಳು ಲೋಹಿತಾಂಬರವ&lt;br /&gt;ವಿಗಡಮುನಿಪನ ಮಂತ್ರವನು ನಾ&lt;br /&gt;ಲಗೆಗೆ ತಂದಳು ರಾಗರಸದಲಿ&lt;br /&gt;ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ ೧೭&lt;br /&gt;&lt;br /&gt;ಅರಸ ಕೇಳ್ ಮುನಿಯಿತ್ತ ಮಂತ್ರಾ&lt;br /&gt;ಕ್ಷರದ ಕರಹಕೆ ತಳುವಿದರೆ ದಿನ&lt;br /&gt;ಕರನ ತೇಜವ ಕೊಂಬನೇ ದೂರ್ವಾಸ ವಿಗಡನಲ &lt;br /&gt;ಧರೆಗೆ ಬಂದನು ಸೂರ್ಯನಾತನ&lt;br /&gt;ಕಿರಣ ಲಹರಿಯ ಹೊಯ್ಲಿನಲಿ ಸರ&lt;br /&gt;ಸಿರುಹಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ ೧೮&lt;br /&gt;&lt;br /&gt;ಎನ್ನಬಾರದಲೇ ಋಷಿಪ್ರತಿ&lt;br /&gt;ಪನ್ನ ಮಂತ್ರವಮೋಘವದರಿಂ&lt;br /&gt;ದೆನ್ನ ತೂಕದ ಮಗನಹನು ನೀನಂಜಬೇಡೆನುತ&lt;br /&gt;ಕನ್ನಿಕೆಯ ಮುಟ್ಟಿದನು ಮುನ್ನಿನ&lt;br /&gt;ಕನ್ನೆತನ ಕೆಡದಿರಲಿಯೆನುತವೆ&lt;br /&gt;ತನ್ನ ರಥವಿದ್ದೆಡೆಗೆ ರವಿ ತಿರುಗಿದನು ವಹಿಲದಲಿ ೧೯&lt;br /&gt;&lt;br /&gt;ಅರಸ ಕೇಳ್ ಆಶ್ಚರ್ಯವನು ತಾ&lt;br /&gt;ವರೆಯ ಮಿತ್ರನ ಕರಗಿ ಕರುವಿನೊ&lt;br /&gt;ಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ&lt;br /&gt;ಕುರುಳುದಲೆ ನಿಟ್ಟೆಸಳುಗಂಗಳ&lt;br /&gt;ಚರಣ ಕರಪಲ್ಲವದ ಕೆಂಪಿನ&lt;br /&gt;ವರಕುಮಾರನ ಕಂಡು ಬೆರಗಿನೊಳಿರ್ದಳಾ ಕುಂತಿ ೨೦&lt;br /&gt;&lt;br /&gt;ಅಳುವ ಶಿಶುವನು ತೆಗೆದು ತೆಕ್ಕೆಯ&lt;br /&gt;ಪುಳಕ ಜಲದಲಿ ನಾದಿ ಹರುಷದ&lt;br /&gt;ಬಳಿಯ ಲಜ್ಜೆಯ ಭಯದ ಹೋರಟೆಗಳುಕಿ ಹಳುವಾಗಿ&lt;br /&gt;ಕುಲದ ಸಿರಿ ತಪ್ಪುವುದಲಾ ಸಾ&lt;br /&gt;ಕಿಳುಹ ಬೇಕೆಂದೆನುತ ಗಂಗಾ&lt;br /&gt;ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ ೨೧&lt;br /&gt;&lt;br /&gt;ತಾಯೆ ಬಲ್ಲಂದದಲಿ ಕಂದನ&lt;br /&gt;ಕಾಯಿ ಮೇಣ್ ಕೊಲ್ಲೆನುತ ಕಮಲ ದ&lt;br /&gt;ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ&lt;br /&gt;ರಾಯ ಕೇಳೈ ಸಕಲ ಲೋಕದ&lt;br /&gt;ತಾಯಲಾ ಜಾಹ್ನವಿ ತರಂಗದಿ&lt;br /&gt;ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ ೨೨&lt;br /&gt;&lt;br /&gt;ಕೆದರಿ ಕಾಲಲಿ ಮಳಲ ರಾಶಿಯ&lt;br /&gt;ನೊದೆದು ಕೈಗಳ ಕೊಡಹಿ ಭೋಯೆಂ&lt;br /&gt;ದೊದೆದುತಿರ್ದನು ಶಿಶುಗಳರಸನು ರವಿನೀಕ್ಷಿಸುತ&lt;br /&gt;ಇದನು ಕಂಡನು ಸೂತನೊಬ್ಬನು&lt;br /&gt;ಮುದದ ಮದದಲಿ ತನ್ನ ಮರೆದು&lt;br /&gt;ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ ೨೩&lt;br /&gt;&lt;br /&gt;ತರಣಿಬಿಂಬದ ಮರಿಯೊ ಕೌಸ್ತುಭ&lt;br /&gt;ವರಮಣಿಯ ಖಂಡದ ಕಣಿಯೊ ಮ&lt;br /&gt;ರ್ತ್ಯರಿಗೆ ಮಗನಿವನಲ್ಲ ಮಾಯಾ ಬಾಲಕನೊ ಮೇಣು&lt;br /&gt;ಇರಿಸಿ ಹೋದವಳಾವಳೋ ಶಿಶು&lt;br /&gt;ವರನ ತಾಯ್ ನಿರ್ಮೋಹೆಯೈ ಹರ&lt;br /&gt;ಹರ ಮಹಾದೇವನುತ ತೆಗೆದಪ್ಪಿದನು ಬಾಲಕನ ೨೪&lt;br /&gt;&lt;br /&gt;ತೃಣವಲಾ ತ್ರೈಲೋಕ್ಯ ರಾಜ್ಯವ&lt;br /&gt;ಗಣಿಸುವೆನೆ ತಾನಿನ್ನು ತನ್ನಲಿ&lt;br /&gt;ಋಣವಿಶೇಷವಿದೇನೊ (ಪಾ: ಋಣವಿಶೇಷವಿದೇನೋ) ಮೇಣ್ ಈ ಬಾಲಕಂಗೆನುತ&lt;br /&gt;ಕ್ಷಣದೊಳೊದಗುವ ಬಾಷ್ಪ ಲುಳಿತೇ&lt;br /&gt;ಕ್ಷಣನು ಬಂದನು ಮನೆಗೆ ಪರುಷದ&lt;br /&gt;ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ ೨೫&lt;br /&gt;&lt;br /&gt;ಆದರಿಸಿದನು ರಾಧೆಯಲಿ ಮಗ&lt;br /&gt;ನಾದನೆಂದುತ್ಸವವ ಮಾಡಿ ಮ&lt;br /&gt;ಹೀ ದಿವಿಜರನು ದಾನ ಮಾನಂಗಳಲಿ ಸತ್ಕರಿಸಿ&lt;br /&gt;ಆ ದಿನಂ ಮೊದಲಾಗಿ ಉಧ್ಬವ&lt;br /&gt;ವಾದುದವನೈಶ್ವರ್ಯ ಉನ್ನತ&lt;br /&gt;ವಾದನಾ ರವಿನಂದನನು ರಾಧೇಯ ನಾಮದಲಿ ೨೬&lt;br /&gt;&lt;br /&gt;ಹೊಳೆ ಹೊಳೆದು ಹೊಡೆಮರಳಿ ನಡು ಹೊ&lt;br /&gt;ಸ್ತಿಲಲಿ ಮಂಡಿಸಿ ಬೀದಿ ಬೀದಿಗ&lt;br /&gt;ಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ&lt;br /&gt;ಲಲಿತರತ್ನದ ಬಾಲದೊಡಿಗೆಯ&lt;br /&gt;ಕಳಚಿ ಹಾಯ್ಕುವ ಹೆಸರು ಜಗದಲಿ&lt;br /&gt;ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ ೨೭&lt;br /&gt;&lt;br /&gt;ಅರಸ ಕೇಳೈ ಕರ್ಣ ಪಾರಂ&lt;br /&gt;ಪರೆಯೊಳೀತನ ಹೆಸರು ಜಗದಲಿ&lt;br /&gt;ಹರಿದುದಲ್ಲಿಂ ಬಳಿಕಲೀತನ ನಾಮಕರಣದಲಿ&lt;br /&gt;ಸುರನರೋರಗ ನಿಕರವೇ ವಿ&lt;br /&gt;ಸ್ತರಿಸಿದುದು ಕರ್ಣಾಭಿಧಾನವ&lt;br /&gt;ಗುರುಪರಾಕ್ರಮಿ ಬೆಳೆವುತಿರ್ದನು ಸೂತಭವನದಲಿ ೨೮&lt;br /&gt;&lt;br /&gt;(ಸಂಗ್ರಹ: ಶ್ರೀಕಾಂತ್ ವೆಂಕಟೇಶ್)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-9158612034363697710?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/9158612034363697710/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=9158612034363697710&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/9158612034363697710'/><link rel='self' type='application/atom+xml' href='http://www.blogger.com/feeds/742145181089395829/posts/default/9158612034363697710'/><link rel='alternate' type='text/html' href='http://gaduginabharata.blogspot.com/2010/08/blog-post_26.html' title='ಆದಿಪರ್ವ: ೦೩. ಮೂರನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-2053047042692381260</id><published>2010-08-25T03:59:00.001+05:30</published><updated>2010-08-25T04:10:12.854+05:30</updated><category scheme='http://www.blogger.com/atom/ns#' term='೦೪. ವಿರಾಟಪರ್ವ'/><title type='text'>ವಿರಾಟಪರ್ವ: ೧೦. ಹತ್ತನೆಯ ಸಂಧಿ</title><content type='html'>ಸೂ.ರಾಯ ಪಾಂಡವ ಜೀವ ಭಕ್ತನಿ&lt;br /&gt;ಕಾಯ ಲಂಪಟನಮಲ ಯಾದವ&lt;br /&gt;ರಾಯ ಬಿಜಯಂಗೈದನಭಿಮನ್ಯುವಿನ ಪರಿಣಯಕೆ&lt;br /&gt;&lt;br /&gt;ಕೇಳು ಜನಮೇಜಯ ಧರಿತ್ರೀ&lt;br /&gt;ಪಾಲ ಚರಿತಜ್ಞಾತವಾಸವ&lt;br /&gt;ಬೀಳುಕೊಟ್ಟರು ಬಹಳ ಹರುಷದಲಿರುಳ ನೂಕಿದರು&lt;br /&gt;ಮೇಲಣವರಭ್ಯುದಯವನು ಕೈ&lt;br /&gt;ಮೇಳವಿಸಿ ಕೊಡುವಂತೆ ಮೂಡಣ&lt;br /&gt;ಶೈಲ ಮುಖದಲಿ ಕೆಂಪು ಸುಳಿದುದು ಭಾನುಮಂಡಲದ ೦೧&lt;br /&gt;&lt;br /&gt;ಏಳು ಕುದುರೆಯ ಖುರಪುಟದ ಕೆಂ&lt;br /&gt;ದೂಳಿಯೋ ಕುಂತೀ ಕುಮಾರಕ&lt;br /&gt;ರೇಳಿಗೆಯ ತನಿರಾಗರಸವುಬ್ಬರಿಸಿ ಪಸರಿಸಿತೊ&lt;br /&gt;ಹೇಳಲೇನು ಮಹೇಂದ್ರ ವರ ದಿ&lt;br /&gt;ಗ್ಬಾಲಕಿಯ ಬೈತಲೆಯ ಕುಂಕುಮ&lt;br /&gt;ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು ೦೨&lt;br /&gt;&lt;br /&gt;ಸರಸಿಜದ ಪರಿಮಳಕೆ ತುಂಬಿಯ&lt;br /&gt;ಬರವ ಕೊಟ್ಟನು ಚಂದ್ರಕಾಂತಕೆ&lt;br /&gt;ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು&lt;br /&gt;ಕೆರಳಿ ನೈದಿಲ ಸಿರಿಯ ಸೂರೆಯ&lt;br /&gt;ತರಿಸಿದನು ರಿಪುರಾಯ ರಾಜ್ಯವ&lt;br /&gt;ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ ೦೩&lt;br /&gt;&lt;br /&gt;ಹರ ಹರ (ಹರಿ ಹರಿ?) ಶ್ರೀಕಾಂತನೆನುತೈ&lt;br /&gt;ವರು ಕುಮಾರಕರುಪ್ಪವಡಿಸಿದ&lt;br /&gt;ರರಿ ವಿದಾರರು ಮಾಡಿದರು ಮಾಂಗಲ್ಯ ಮಜ್ಜನವ&lt;br /&gt;ವರ ವಿಭೂಷಣ ಗಂಧ ಮಾಲ್ಯಾಂ&lt;br /&gt;ಬರದಿ ಪರಿವೃತರಾದರವನೀ&lt;br /&gt;ಸುರರಿಗಿತ್ತರು ಧೇನು ಮಣಿ ಕನಕಾದಿ ವಸ್ತುಗಳ ೦೪&lt;br /&gt;&lt;br /&gt;ತಮದ ಗಂಟಲನೊಡೆದ ಹರುಷ&lt;br /&gt;ದ್ಯುಮಣಿ ಮಂಡಲದಂತೆ ಜೀವ&lt;br /&gt;ಭ್ರಮೆಯ ಕವಚವ ಕಳೆದು ಹೊಳೆ ಹೊಳೆವಾತ್ಮನಂದದಲಿ&lt;br /&gt;ವಿಮಲ ಬಹಳ ಕ್ಷತ್ರ ರಶ್ಮಿಗ&lt;br /&gt;ಳಮರಿ ದೆಸೆಗಳ ಬೆಳಗೆ ರಾಜೋ&lt;br /&gt;ತ್ತಮ ಯುಧಿಷ್ಠಿರ ದೇವನೆಸೆದನು ರಾಜ ತೇಜದಲಿ ೦೫&lt;br /&gt;&lt;br /&gt;ಪರಮ ಸತ್ಯವ್ರತ ಮಹಾಕ್ರತು&lt;br /&gt;ವರದಲವಭೃತ ಮಜ್ಜನವ ವಿ&lt;br /&gt;ಸ್ತರಿಸಿ ಭೀಮಾದಿಗಳು ಸಹಿತ ವಿರಾಟನರಮನೆಗೆ&lt;br /&gt;ಅರಸ ಬಂದನು ಮಣಿಖಚಿತ ಕೇ&lt;br /&gt;ಸರಿಯ ಪೀಠವನಡರಿದನು ನಿಜ&lt;br /&gt;ಚರಣ ಸೇವೆಯಲೆಸೆದರೊಡ ಹುಟ್ಟಿದರು ಪರುಟವಿಸಿ ೦೬&lt;br /&gt;&lt;br /&gt;ಅವನಿಪನ ಸಿಂಹಾಸನವನೇ&lt;br /&gt;ರುವ ಸಗರ್ವಿತರಾರು ನೋಡಿದ&lt;br /&gt;ಡೆವೆಗಳುರಿವುದು ಹಾಯೆನುತ ಕಂಚುಕಿಗಳೈತಂದು&lt;br /&gt;ಇವರನೀಕ್ಷಿಸಿ ಕ್ಷಾತ್ರ ತೇಜವ&lt;br /&gt;ನವಗಡಿಸಲಂಜಿದರು ಹರಿ ತಂ&lt;br /&gt;ದವದಿರೆಬ್ಬಿಸಿ ಬಿನ್ನವಿಸಿದರು ಮತ್ಸ್ಯಭೂಪತಿಗೆ ೦೭&lt;br /&gt;&lt;br /&gt;ಜೀಯ ಸಿಂಹಾಸನಕೆ ದಿವಿಜರ&lt;br /&gt;ರಾಯನೋ ಶಂಕರನೊ ಮೇಣ್ ನಾ&lt;br /&gt;ರಾಯಣನೊ ನರರಲ್ಲ ದೇವರು ಬಂದು ನೋಡುವುದು&lt;br /&gt;ಕಾಯಲಸದಳವೆಮಗೆನಲು ನಿ&lt;br /&gt;ರ್ದಾಯದಲಿ ನೆಲೆಗೊಂಡ ನಿರ್ಜರ&lt;br /&gt;ರಾಯನಾರೆಂದೆನುತಲಾಗ ವಿರಾಟ ಚಿಂತಿಸಿದ ೦೮&lt;br /&gt;&lt;br /&gt;ಕರೆಸಿಕೊಂಡು ಪುರೋಹಿತನನು&lt;br /&gt;ತ್ತರನನಖಿಳ ಮಹಾಪ್ರಧಾನರ&lt;br /&gt;ನರಮನೆಯ ಹೊರವಂಟು ವೋಲಗಶಾಲೆಗೈತರುತ&lt;br /&gt;ಕರಗಿ ಸೂಸಿದ ಚಂದ್ರ ಬಿಂಬದ&lt;br /&gt;ಕಿರಣ ಲಹರಿಗಳೆನಲು ವಿವಿಧಾ&lt;br /&gt;ಭರಣ ಮುಕ್ತಾ ಪ್ರಭೆಯ ಕಂಡನು ನೃಪತಿ ದೂರದಲಿ ೦೯&lt;br /&gt;&lt;br /&gt;ಹರನ ನಾಲಕು ಮುಖದ ಮಧ್ಯ&lt;br /&gt;ಸ್ಫುರಿತದೀಶಾನನದೊಲಿರೆ ಸೋ&lt;br /&gt;ದರ ಚತುಷ್ಟಯ ಮಧ್ಯದಲಿ ಕಂಡನು ಯುಧಿಷ್ಠಿರನ&lt;br /&gt;ಅರಸಿಯನು ವಾಮದಲಿ ವಿವಿಧಾ&lt;br /&gt;ಭರಣ ಮಣಿ ರಶ್ಮಿಗಳ ಹೊದರಿನ&lt;br /&gt;ಹೊರಳಿಯಲಿ ಕಣ್ಣಾಲಿ ಕೋರೈಸಿದವು ನಿಮಿಷದಲಿ ೧೦&lt;br /&gt;&lt;br /&gt;ಮೇಳವೇ ಫಡ ಮನದ ಮತ್ಸರ&lt;br /&gt;ಕಾಲಿಡಲು ತೆರಹಿಲ್ಲ ಮನುಜರ&lt;br /&gt;ಹೋಲುವೆಯ ನಾಟಕದ ನಿರ್ಜರ ಮಂಡಲೇಶ್ವರರು&lt;br /&gt;ಆಲಿಗಳು ಮೇಲಿಕ್ಕಲಮ್ಮವು&lt;br /&gt;ಶೂಲಪಾಣಿಯ ಪರಮ ತೇಜದ&lt;br /&gt;ಚೂಳಿಯೋ ಶಿವ ಶಿವ ಎನ್ನುತ್ತ ವಿರಾಟ ಬೆರಗಾದ ೧೧&lt;br /&gt;&lt;br /&gt;ವಲಲ ಕಂಕ ಬೃಹನ್ನಳೆಯ ಮೈ&lt;br /&gt;ಸುಳಿವ ಹೋಲುವರೆಂದು ಕೆಲಬರು&lt;br /&gt;ಕೆಲರಿದೆತ್ತಣ ನರರು ತೆಗೆ ಸುರಲೋಕ ಪಾಲಕರು&lt;br /&gt;ತಿಳಿಯಲರಿದೆಮಗೆಂದು ಕೆಲಬರು&lt;br /&gt;ತಳವೆಳಗುಗೊಳುತಿರಲು ಮಂದಿಯ&lt;br /&gt;ಕೆಲಕೆ ನೂಕಿಯೆ ತಂದೆಗುತ್ತರ ನಗುತ ಕೈಮುಗಿದ ೧೨&lt;br /&gt;&lt;br /&gt;ತಾತ ಬಿನ್ನಹ ನಿನ್ನೆ ವೈರಿ&lt;br /&gt;ವ್ರಾತವನು ಗೆಲಿದಾತನೀ ತೋ&lt;br /&gt;ರ್ಪಾತನೀತನ ಮುಂದೆ ಮೆರೆವವ ಕೀಚಕಾಂತಕನು&lt;br /&gt;ಈತ ನಕುಲನು ವಾಮದಲಿ ನಿಂ&lt;br /&gt;ದಾತ ಸಹದೇವಾಂಕನನಿಬರಿ&lt;br /&gt;ಗೀತ ಹಿರಿಯನು ಧರ್ಮನಂದನನೆಂದು ತೋರಿಸಿದ ೧೩&lt;br /&gt;&lt;br /&gt;ರಮಣಿಯೈವರಿಗೀಕೆ ಕೆಲದಲಿ&lt;br /&gt;ಕಮಲಮುಖಿಯನು ನೋಡು ತಾವಿವ&lt;br /&gt;ರಮಳ ಗುಣ ಗಂಭೀರ ರಾಯರು ಪಾಂಡು ನಂದನರು&lt;br /&gt;ನಮಗೆ ಭಾರಿಯ ಭಾಗ್ಯಲಕ್ಷ್ಮಿಯ&lt;br /&gt;ಮಮತೆಯಾಯ್ತಿನ್ನೇನು ನೃಪಪದ&lt;br /&gt;ಕಮಲದಲಿ ಬೀಳುವೆವು ನಡೆ ನಡೆ ಧನ್ಯರಹೆವೆಂದ ೧೪&lt;br /&gt;&lt;br /&gt;ಈತನೇ ಧರ್ಮಜನು ದಿಟ ತಾ&lt;br /&gt;ನೀತನೇ ಪವನಜನು ನಿಶ್ಚಯ&lt;br /&gt;ವೀತನೇ ಫಲುಗುಣನು ಮಾದ್ರೀತನುಜರೇ ಇವರು&lt;br /&gt;ಈ ತಳೋದರಿ ದ್ರುಪದ ಸುತೆಯೇ&lt;br /&gt;ಕೌತುಕವಲೇ ಭುವನಜನ ವಿ&lt;br /&gt;ಖ್ಯಾತರೆಲ್ಲಿಂದೆಲ್ಲಿ ಮೂಡಿದರೆನುತ ಬೆರಗಾದ ೧೫&lt;br /&gt;&lt;br /&gt;ವರುಷವೊಂದಜ್ಞಾತ ವಾಸವ&lt;br /&gt;ನಿರದೆ ನೂಕಿದರಿಲ್ಲಿ ಬಳಕೆಯ&lt;br /&gt;ಹೊರೆಯ ಹೆಸರವು ಬೇರೆ ನಡವಳಿಯಂಗವದು ಬೇರೆ&lt;br /&gt;ಮರುಳನಂತಿರೆ ಜಗಕೆ ತೋರನೆ&lt;br /&gt;ಪರಮ ತತ್ವಜ್ಞಾನಿ ನಮ್ಮೀ&lt;br /&gt;ಯರಸುತನ ಫಲವಾಯ್ತು ನಡೆಯೆಂದನು ಕುಮಾರಕನು ೧೬&lt;br /&gt;&lt;br /&gt;ದರುಶನಕೆ ಮಣಿ ರತುನ ಕನಕವ&lt;br /&gt;ತರಿಸಿ ಮುದದಲಿ ಮುಳುಗಿ ನಿಜ ಪರಿ&lt;br /&gt;ಕರ ಸಹಿತ ಮೈಯಿಕ್ಕಿದನು ಕಾಣಿಕೆಯನೊಪ್ಪಿಸಿದ&lt;br /&gt;ವರ ನೃಪಾಲ ತ್ರಾಹಿ ಭುವನೇ&lt;br /&gt;ಶ್ವರ ಪರಿತ್ರಾಯಸ್ವ ಕರುಣಿಸು&lt;br /&gt;ಕರುಣಿಸೆಂದಂಘ್ರಿಗಳ ಹಿಡಿದನು ಮತ್ಸ್ಯ ಭೂಪಾಲ ೧೭&lt;br /&gt;&lt;br /&gt;ಬಗೆದೆನಪರಾಧವನು ಕರುಣಾ&lt;br /&gt;ಳುಗಳ ಬಲ್ಲಹ ನೀನು ನಿನ್ನಂ&lt;br /&gt;ಘ್ರಿಗಳಿಗೀ ತಲೆ ಬಂಟ ನೀನಿದ ಕಾಯಬೇಕೆನುತ&lt;br /&gt;ಮಿಗೆ ಭಕುತಿ ಭಾವದಲಿ ನಿಜ ಮಂ&lt;br /&gt;ತ್ರಿಗಳು ಮಕ್ಕಳು ಸಹಿತ ಮನ ನಂ&lt;br /&gt;ಬುಗೆಯ ಮೆರೆದನು ಮತ್ಸ್ಯ ಭೂಪ ಮಹೀಶರಿದಿರಿನಲಿ ೧೮&lt;br /&gt;&lt;br /&gt;ಆ ಸುದೇಷ್ಣೆ ಕುಮಾರಿಯೊಡನೆ ವಿ&lt;br /&gt;ಳಾಸಿನೀಜನ ಸಹಿತ ರಾಣೀ&lt;br /&gt;ವಾಸದಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು&lt;br /&gt;ಆ ಸಕಲ ಪರಿವಾರ ಪುರಜನ&lt;br /&gt;ದೇಶಜನ ಕಾಣಿಕೆಯನಿತ್ತು ಮ&lt;br /&gt;ಹೀಶನಿಗೆ ಮೈಯಿಕ್ಕಿ ಕಂಡುದು ಬಹಳ ಹರುಷದಲಿ ೧೯&lt;br /&gt;&lt;br /&gt;ಮುಗುಳು ನಗೆಯಲಿ ಭೀಮ ಪಾರ್ಥರ&lt;br /&gt;ಮೊಗವ ನೋಡಿದನವನಿಪತಿ ಕೈ &lt;br /&gt;ಮುಗಿದು ತಲೆವಾಗಿದರು ತಮ್ಮಂದಿರು ಮಹಿಪತಿಗೆ&lt;br /&gt;ತೆಗೆಸಿದರು ಕಾಣಿಕೆಯನಾ ಮಂ&lt;br /&gt;ತ್ರಿಗಳನಾ ಪರಿವಾರವನು ದೃಗು&lt;br /&gt;ಯುಗದ ಕರುಣಾ ರಸದಲನಿಬರ ಹೊರೆದು ಮನ್ನಿಸಿದ ೨೦&lt;br /&gt;&lt;br /&gt;ಶಿರವನೆತ್ತಿ ವಿರಾಟ ಭೂಪನ&lt;br /&gt;ಕರೆದು ಹತ್ತಿರ ಪೀಠದಲಿ ಕು&lt;br /&gt;ಳ್ಳಿರಿಸಲೊಡೆ ಮುರಿಚಿದನು ಕೆಲದಲಿ ಗದ್ದುಗೆಯ ಸರಿದು&lt;br /&gt;ಪರಮ ಸುಕೃತವಲಾ ಧರಾಧೀ&lt;br /&gt;ಶ್ವರನ ದರುಶನವಾಯ್ತು ಧನ್ಯರು&lt;br /&gt;ಧರೆಯೊಳೆಮಗಿನ್ನಾರು ಸರಿಯೆಂದನು ವಿರಾಟ ನೃಪ ೨೧&lt;br /&gt;&lt;br /&gt;ದೇಶ ನಿಮ್ಮದು ನಗರ ಹೆಚ್ಚಿದ &lt;br /&gt;ಕೋಶ ನಿಮ್ಮದು ನನ್ನ ಜೀವ ವಿ&lt;br /&gt;ಳಾಸ ನಿಮ್ಮದು ಸಲಹಬೇಹುದು ಬಿನ್ನಹದ ಹದನ&lt;br /&gt;ಈ ಸಮಂಜಸ ದಿವಸದಲಿ ಸಿಂ&lt;br /&gt;ಹಾಸನದಲಭಿಷೇಕವನು ಭೂ&lt;br /&gt;ಮೀಶ ವಿಸ್ತರಿಸುವೆನು ಚಿತ್ತೈಸೆಂದನಾ ಭೂಪ ೨೨&lt;br /&gt;&lt;br /&gt;ಎನಲು ನಗುತೆಂದನು ಮಹೀಪತಿ&lt;br /&gt;ವಿನಯ ಮಧುರ ರಸಾಭಿಷೇಕವ&lt;br /&gt;ನೆನಗೆ ಮಾಡಿದೆ ಸಾಕು ಪುನರುಕ್ತಾಭಿಷೇಕವದು&lt;br /&gt;ಜನವಿದೆಮ್ಮದು ನೀನು ನಮ್ಮಾ&lt;br /&gt;ತನು ಧರಿತ್ರಿಯಿದೆಮ್ಮದೆಂಬೀ&lt;br /&gt;ನೆನಹು ತಾನುಪಚಾರ ನಮಗೇಕೆಂದನಾ ಭೂಪ ೨೩&lt;br /&gt;&lt;br /&gt;ನೊಂದವರು ಭೀಮಾರ್ಜುನರು ಹಗೆ&lt;br /&gt;ಯಿಂದ ಹಳುವವ ಹೊಕ್ಕು ಮನಸಿನ&lt;br /&gt;ಕಂದು ಕಸರಿಕೆ ಹೋಗದಾ ದುರ್ಯೋಧನಾದಿಗಳ&lt;br /&gt;ಕೊಂದು ಕಳದಲಿ ಮತ್ತೆ ಗಜ ಪುರಿ&lt;br /&gt;ಗೆಂದು ಗಮಿಸುವೆವೆಂಬ ತವಕಿಗ&lt;br /&gt;ರಿಂದು ತಾನೇ ಬಲ್ಲರೆಂದನು ಧರ್ಮನಂದನನು ೨೪&lt;br /&gt;&lt;br /&gt;ಎಂದನುತ್ತರನರಸನಂಘ್ರಿಯೊ&lt;br /&gt;ಳಂದು ಮಕುಟವ ಚಾಚಿ ಬಿನ್ನಹ&lt;br /&gt;ವಿಂದು ನೇಮವ ಕೊಡಿ ಕುಮಾರಿಯನೀವೆನರ್ಜುನಗೆ&lt;br /&gt;ಎಂದಡೇಳೇಳೆಂದು ನಸು ನಗೆ&lt;br /&gt;ಯಿಂದ ಪಾರ್ಥನ ನೋಡೆ ಕೈ ಮುಗಿ&lt;br /&gt;ದೆಂದನಾತನು ಮನದ ನಿಶ್ಚಯವನು ಯುಧಿಷ್ಠಿರಗೆ ೨೫&lt;br /&gt;&lt;br /&gt;ವರುಷವಿವಳಲಿ ನಾಟ್ಯ ವಿದ್ಯೆಯ&lt;br /&gt;ಪರುಟವಿಸಿದೆನು ತಂದೆಯಂತೀ&lt;br /&gt;ತರುಣಿ ಭಜಿಸಿದಳಾ ಪ್ರಕಾರ ರಹಸ್ಯ ದೇಶದಲಿ&lt;br /&gt;ಗುರುತನದ ಗರುವಾಯಿಯೆತ್ತಲು&lt;br /&gt;ಅರಸಿಯೆಂಬುದಿದಾವ ಮತವೀ&lt;br /&gt;ವರ ಕುಮಾರಿಯನೀವಡಭಿಮನ್ಯುವಿಗೆ ಕೊಡಲೆಂದ ೨೬&lt;br /&gt;&lt;br /&gt;ಎವಗೆ ನೀವೇನಾತನೇನು&lt;br /&gt;ತ್ಸವದೊಳಾಗಲಿಯೆನೆ ವಿರಾಟನ&lt;br /&gt;ನವನಿಪತಿ ಮನ್ನಿಸಿದನಿತ್ತನು ನಗುತ ವೀಳೆಯವ&lt;br /&gt;ಎವಗೆ ಪರಮಸ್ವಾಮಿಯೆಮ್ಮು&lt;br /&gt;ತ್ಸವದ ನೆಲೆಯೆಮ್ಮೈವರಸು ಯಾ&lt;br /&gt;ದವ ಶಿರೋಮಣಿ ಕೃಷ್ಣನಭಿಮತವೆಮ್ಮ ಮತವೆಂದ ೨೭&lt;br /&gt;&lt;br /&gt;ಪೊಡವಿಯೊಡೆತನವೆಮಗೆ &lt;ಮಿಗೆ? - ಮೂಲದಲ್ಲಿ ಎರಡಕ್ಷರ ಬಿಟ್ಟಿದೆ&gt; ಕ&lt;br /&gt;ಟ್ಟೊಡೆಯ ಕೃಷ್ಣನು ಕೃಷ್ಣನೊಡಬ&lt;br /&gt;ಟ್ಟೊಡೆ ವಿವಾಹ ನಿರಂತರಾಯವು ಚಿಂತೆ ಬೇಡೆನಲು&lt;br /&gt;ಒಡಬಡಲಿ ಮೇಣಿರಲಿ ಗುರು ನಿ&lt;br /&gt;ಮ್ಮಡಿ ಮುರಾರಿಯ ತೋರಿಸುವಿರಾ&lt;br /&gt;ದೊಡೆ ಕೃತಾರ್ಥನು ತಾನೆನುತ ಹಿಗ್ಗಿದನು ಮತ್ಸ್ಯ ನೃಪ ೨೮&lt;br /&gt;&lt;br /&gt;ಪರಿಪರಿಯ ಪಾವುಡವ ಕಟ್ಟಿಸಿ&lt;br /&gt;ಹರುಷದಲಿ ಬಿನ್ನಹದ ವೋಲೆಯ&lt;br /&gt;ಬರೆಸಿದನು ವೇಗಾಯ್ಲ ದೂತರನಟ್ಟಿದನು ಭೂಪ&lt;br /&gt;ಚರರು ಪಯಣದ ಮೇಲೆ ಪಯಣದ&lt;br /&gt;ಭರದಿ ಬಂದರು ಕೃಷ್ಣರಾಯನ&lt;br /&gt;ಪುರಕೆ ಪರಿತೋಷದಲಿ ಹೊಕ್ಕರು ರಾಜ ಮಂದಿರವ ೨೯&lt;br /&gt;&lt;br /&gt;ಬರವ ಬಿನ್ನಹ ಮಾಡೆ ಪಡಿಹಾ&lt;br /&gt;ರರು ಮುರಾರಿಯ ನೇಮದಲಿ ಚಾ&lt;br /&gt;ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ&lt;br /&gt;ದರುಶನವ ಮಾಡುತ್ತ ಚರಣಾಂ&lt;br /&gt;ಬುರುಹದಲಿ ಮೈಯಿಕ್ಕಿ ದೇವನ&lt;br /&gt;ಹೊರೆಯಲಿಳುಹಿದರಿವರು ಕಳುಹಿದ ಬಿನ್ನವತ್ತಳೆಯ ೩೦&lt;br /&gt;&lt;br /&gt;ನಸುನಗುತ ಮುರವೈರಿ ಮಿಗೆ ಮ&lt;br /&gt;ನ್ನಿಸಿದನವರನು ಪಾಂಡು ತನಯರ&lt;br /&gt;ಕುಶಲವನು ದುರುಪದಿಯ ಸುಕ್ಷೇಮವನು ಬೆಸಗೊಳಲು&lt;br /&gt;ಕುಶಲರನಿಬರು ಜೀಯ ಭಕ್ತ&lt;br /&gt;ವ್ಯಸನ ಭಾರವು ನಿಮ್ಮಲಿರೆ ಜೀ&lt;br /&gt;ವಿಸುವುದರಿದೇ ಪಾಂಡು ನಂದನರೆಂದರಾ ಚರರು ೩೧&lt;br /&gt;&lt;br /&gt;ಕಳುಹಿದುಡುಗೊರೆ ಜೀಯ ನಿಮ್ಮಡಿ&lt;br /&gt;ಗಳಿಗೆ ರಾಣೀವಾಸ ವರ್ಗಕೆ&lt;br /&gt;ಬಲಗೆ ವಸುದೇವರಿಗೆ ದೇವಕಿಯುಗ್ರಸೇನರಿಗೆ&lt;br /&gt;ಕುಲ ಗುರುಗಳಕ್ರೂರನುದ್ಧವ&lt;br /&gt;ಬಲುಭುಜನು ಕೃತವರ್ಮ ಸಾತ್ಯಕಿ&lt;br /&gt;ಲಲಿತ ಸಾಂಬ ಕುಮಾರ ಕಂದರ್ಪಾನಿರುದ್ಧರಿಗೆ ೩೨&lt;br /&gt;&lt;br /&gt;ಎನಲು ನಸುನಗೆಯಿಂದ ಕುಂತಿಯ&lt;br /&gt;ತನುಜರಟ್ಟಿದ ಪಾವುಡಂಗಳ&lt;br /&gt;ನನಿತುವನು ತೆಗೆಸಿದನು ಕೆಲದಲಿ ಸಂಧಿ ವಿಗ್ರಹಿಯ&lt;br /&gt;ದನುಜಹರನೀಕ್ಷಿಸಲು ಲಿಖಿತವ&lt;br /&gt;ನನುನಯದೊಳಳವಡಿಸಿ ಬಿನ್ನಹ&lt;br /&gt;ವೆನುತ ನೇಮವ ಕೊಂಡು ಕಳಕಳವಡಗೆ ವಾಚಿಸಿದ ೩೩&lt;br /&gt;&lt;br /&gt;ಸ್ವಸ್ತಿ ದಾನವರಾಯಕುಂಜರ&lt;br /&gt;ಮಸ್ತಕಾಂಕುಶ ಖೇಲನಾ ಪರಿ&lt;br /&gt;ಯಸ್ತ ಯದುಕುಲ ಸಿಂಹ ಸಂಹೃತ ಜನ್ಮದುರಿತಭಯ&lt;br /&gt;ಹಸ್ತಕಲಿತ ಸುದರುಶನೋರ್ಧ್ವಗ&lt;br /&gt;ಭಸ್ತಿಲವಶಮಿತಾರ್ಕ ಪರಿವೃಢ&lt;br /&gt;ವಿಸ್ತರಣ ಚಿತ್ತೈಸು ಕುಂತಿಯ ಸುತರ ಬಿನ್ನಪವ ೩೪&lt;br /&gt;&lt;br /&gt;ದೇವ ನಿಮ್ಮಡಿಗಳ ಕೃಪಾ ಸಂ&lt;br /&gt;ಜೀವನಿಯಲೆಮ್ಮಸುಗಳೊಡಲಿನ&lt;br /&gt;ಠಾವ ಮೆಚ್ಚಿದವೊದೆದು ಹಾಯ್ದವು ವಿಪಿನ ಮಂದಿರವ&lt;br /&gt;ಈ ವರುಷದಜ್ಞಾತವಾಸ ಗ&lt;br /&gt;ತಾವಶೇಷಣವಾಯ್ತು ಕಂಗಳಿ&lt;br /&gt;ಗೀವುದವಯವ ದರುಶನಾಮೃತಪಾನ ಸಂಪದವ ೩೫&lt;br /&gt;&lt;br /&gt;ದಾಟಿದೆವು ನುಡಿದವಧಿಯನು ವೈ&lt;br /&gt;ರಾಟ ಪುರದಲಿ ತುರುವಿಡಿದು ಮೈ&lt;br /&gt;ನೋಟಕೋಸುಗ ಬಂದು ನುಗ್ಗಾಯಿತ್ತು ಕುರುಸೇನೆ&lt;br /&gt;ತೋಟಿ ಜಯಿಸಿದೊಡೆಮ್ಮನರಿದು ವಿ&lt;br /&gt;ರಾಟ ಮನ್ನಿಸಿ ತನ್ನ ಮಗಳ ಕಿ&lt;br /&gt;ರೀಟಿ ತನಯಂಗೀವ ಭರವಿದೆ ದೇವರವಧರಿಸಿ ೩೬&lt;br /&gt;&lt;br /&gt;ಮದುವೆಯೆಂಬುದು ನೆವ ನಿಜ ಶ್ರೀ&lt;br /&gt;ಪದವ ತೋರಿಸಬೇಕು ವನ ವಾ&lt;br /&gt;ಸದ ಪರಿಕ್ಲೇಶಾನು ಸಂತಾಪವನು ಬೀಳ್ಕೊಡಿಸಿ&lt;br /&gt;ಕದಡು ಹೋಗಲು ಕಾಣಬೇಹುದು&lt;br /&gt;ಹದುಳವಿಟ್ಟೆಮಗುಚಿತ ವಚನದ&lt;br /&gt;ಹದವಳೆಯಲುತ್ಸಾಹಸಸಿಯನು ದೇವ ಸಲಹುವುದು ೩೭&lt;br /&gt;&lt;br /&gt;ಕರುಣಿ ಬಿಜಯಂಗೈದು ಭಕ್ತರ&lt;br /&gt;ಹೊರೆಯ ಬೇಹುದು ಬೇಡಿಕೊಂಬೆನು&lt;br /&gt;ಅರಸಲೇಕೆಳೆಗಂದಿ ತಾಯ್ತಾನರಸುವಂದದಲಿ&lt;br /&gt;ಚರಣಭಜಕ ಕುಟುಂಬನೆಂಬೀ&lt;br /&gt;ಬಿರುದ ಪಾಲಿಸಿ ಬಿನ್ನಹವನವ&lt;br /&gt;ಧರಿಸಿ ಕಾಣಿಸಿ ಕೊಡುವುದೆಮಗೆ ಮಹಾ ಪ್ರಸಾದವನು ೩೮&lt;br /&gt;&lt;br /&gt;ಕೇಳಿ ಹರುಷಿತನಾಗಿ ಕಡು ಕರು&lt;br /&gt;ಣಾಳು ಹೊಂಪುಳಿಯೋಗಿ ಭಕ್ತರ&lt;br /&gt;ಮೇಲಣೊಲವಿನ ಬಹಳ ಪರಮ ಸ್ನೇಹ ಪಸರಿಸಿತು&lt;br /&gt;ಕೇಳಿದೆವೆ ಹರ ಹರ ಯುಧಿಷ್ಠಿರ&lt;br /&gt;ನೇಳಿಗೆಯನಾ ಕೌರವೇಶ್ವರ&lt;br /&gt;ನೂಳಿಗವನೆನುತಸುರರಿಪು ನೋಡಿದನು ಕೆಲಬಲನ ೩೯&lt;br /&gt;&lt;br /&gt;ಚಿಂತೆ ಬೀತುದು ಪಾಂಡು ಮಾವನ&lt;br /&gt;ಸಂತತಿಗಳಜ್ಞಾತ ವಾಸವ&lt;br /&gt;ನೆಂತು ಪಂಥದ ಮೇಲೆ ಕಳೆದರೊ ನಮ್ಮ ಪುಣ್ಯವಿದು&lt;br /&gt;ಕುಂತಿ ದೇವಿಯರುಮ್ಮಳಿಸೆ ನಾ&lt;br /&gt;ವೆಂತು ಬದುಕುವೆವಕಟೆನುತ್ತ ನಿ&lt;br /&gt;ರಂತರವು ಮರುಗುವನು ಬೊಪ್ಪನು ಶಿವ ಶಿವಾಯೆಂದ ೪೦&lt;br /&gt;&lt;br /&gt;ಭವಣಿಗೆಯ ಬಂದಡವಿಯಲಿ ಪಾಂ&lt;br /&gt;ಡವರು ನವೆದರು ರಾಜ್ಯವನು ಯಾ&lt;br /&gt;ದವರು ನಾವನುಭವಿಸುತಿದ್ದೆವು ನವೆದರಿನ್ನಬರ&lt;br /&gt;ಅವರ ಸೊಗಸೇ ನಮ್ಮ ಸೊಗಸುಗ&lt;br /&gt;ಳವರ ದುಗುಡವೆ ನಮ್ಮದದರಿಂ&lt;br /&gt;ದವರ ವಿಮಳಾಭ್ಯುದಯ ನಮಗೆಂದಸುರರಿಪು ನುಡಿದ ೪೧&lt;br /&gt;&lt;br /&gt;ಕಾಲ ಕೈಗೂಡುವೊಡೆ ಲೇಸಿನ&lt;br /&gt;ಮೇಲೆ ಲೇಸುಗಳೊದಗುವವು ಭೂ&lt;br /&gt;ಪಾಲ ಕುಂತಿಯ ಸುತರ ಬೆಳವಿಗೆ ಮೊದಲ ಮಂಗಳವು&lt;br /&gt;ಮೇಲೆ ತಂಗಿಯ ಮಗನ ಮದುವೆ ವಿ&lt;br /&gt;ಶಾಲ ಸುಖವದು ನಿಖಿಳ ಯಾದವ&lt;br /&gt;ಜಾಲ ಪಯಣವ ಮಾಡಲೆಂದಸುರಾರಿ ನೇಮಿಸಿದ ೪೨&lt;br /&gt;&lt;br /&gt;ಚರರಿಗುಡುಗೊರೆ ಗಂಧ ನಿಖಿಲಾ&lt;br /&gt;ಭರಣ ಕತ್ತುರಿ ಕರ್ಪುರವನಿ&lt;br /&gt;ತ್ತರಿದಿಶಾಪಟ ಬೀಳುಗೊಟ್ಟನು ರಾಯಸವ ಬರೆಸಿ&lt;br /&gt;ಮರಳಿ ದೂತರು ಬಂದು ಮತ್ಸ್ಯನ&lt;br /&gt;ಪುರವ ಹೊಕ್ಕರು ಕೃಷ್ಣರಾಯನ&lt;br /&gt;ಕರುಣದಳತೆಯ ಬಿನ್ನವಿಸಿದರು ಪಾಂಡು ತನಯರಿಗೆ ೪೩&lt;br /&gt;&lt;br /&gt;ಬಳಿಕ ಸುಮುಹೂರ್ತದಲಿ ಮತ್ಸ್ಯನ&lt;br /&gt;ಹೊಳಲ ಹೊರವಂಟುತ್ತರ ದಿಶಾ&lt;br /&gt;ವಳಯದಲಿ ರಚಿಸಿದರುಪಪ್ಲವ್ಯಾಖ್ಯ ಪುರವರವ&lt;br /&gt;ನೆಲನಗಲದಲಿ ಕಟ್ಟಿ ಕೇರಿಯ&lt;br /&gt;ನಳವಡಿಸಿದರು ನಿಖಿಳ ನೃಪರಿಗೆ&lt;br /&gt;ಬಳಿಯನಟ್ಟಿದನುತ್ತರೋತ್ತರವಾದುದಿವರುದಯ ೪೪&lt;br /&gt;&lt;br /&gt;ಜೋಳಿ ಹರಿದವು ನಿಖಿಳ ರಾಯರಿ&lt;br /&gt;ಗೋಲೆಯುಡುಗೊರೆಯಿಕ್ಕಿದವು ಪಾಂ&lt;br /&gt;ಚಾಲಪತಿ ಹೊರವಂಟ ಮೂರಕ್ಷೋಣಿ ಬಲ ಸಹಿತ&lt;br /&gt;ನೀಲನು ಯುಧಾಮನ್ಯು ಸಮರ ಕ&lt;br /&gt;ರಾಳ ಧೃಷ್ಟದ್ಯುಮ್ನ ಕೀರ್ತಿ ವಿ&lt;br /&gt;ಶಾಲ ಧೀರ ಶಿಖಂಡಿ ಸಹಿತಾ ದ್ರುಪದನೈತಂದ ೪೫&lt;br /&gt;&lt;br /&gt;ಇದಿರುಗೊಂಡರು ಹರುಷದಲಿ ದುರು&lt;br /&gt;ಪದಿಯ ಬಾಂಧವ ಪೈಕವನು ಮಿಗೆ&lt;br /&gt;ಮುದದಿ ಕಾಣಿಸಿಕೊಂಡರಖಿಳ ಮಹಾ ಮಹೀಶ್ವರರ&lt;br /&gt;ಒದಗಿತಖಿಳಕ್ಷೋಹಿಣಿ ಬಲ ಸಂ&lt;br /&gt;ಪದವನುನ್ನತ ವಸ್ತುಗಳ ಸೊಂ&lt;br /&gt;ಪೊದವಿದವು ಕೈಗೈದು ಮದುವೆಯ ಮಂಗಳಾಭ್ಯುದಯ ೪೬&lt;br /&gt;&lt;br /&gt;ದೇವನೀ ಬಹನೆಂದು ಬಂದರು&lt;br /&gt;ದಾವಣಿಯ ಹವಣರಿದು ಬಳಿಕ ಮ&lt;br /&gt;ಹಾ ವಿಳಾಸದಳೊಪ್ಪವಿಟ್ಟರು ತಮ್ಮ ನಗರಿಗಳ&lt;br /&gt;ಹೂವಲಿಯ ವೀಧಿಗಳ ನವ ರ&lt;br /&gt;ತ್ನಾವಳಿಯ ಸೂಸಕದ ಭದ್ರದ&lt;br /&gt;ಲೋವೆಗಳ ಲಂಬಳದಲೆಸೆದವು ಕೇರಿ ಕೇರಿಗಳು ೪೭&lt;br /&gt;&lt;br /&gt;ಚಾರುತರ ಕತ್ತುರಿಯ ಸಾದಿನ&lt;br /&gt;ಸಾರಣೆಯ ಕುಂಕುಮದ ರಸಗಳ&lt;br /&gt;ಕಾರಣೆಯ ನವಚಿತ್ರಪತ್ರದ ಬಹಳ ಭಿತ್ತಿಗಳ&lt;br /&gt;ಓರಣದ ಬೀದಿಗಳ ತಳಿಗೆಯ&lt;br /&gt;ತೋರಣದ ಹೊಂಜಗುಲಿಗಳ ಪ&lt;br /&gt;ನ್ನೀರ ಚಳೆಯದ ರಚನೆಯಲಿ ಮನೆ ಮನೆಗಳೊಪ್ಪಿದವು ೪೮&lt;br /&gt;&lt;br /&gt;ಕಟ್ಟಿದವು ಗುಡಿ ಮನೆಗಳಲಿ ಮೇ&lt;br /&gt;ಲ್ಕಟ್ಟು ಬಿಗಿದವು ಪುರದ ನಾರಿಯ&lt;br /&gt;ರುಟ್ಟು ತೊಟ್ಟರು ಕಳಶ ಕನ್ನಡಿ ಸಹಿತ ದೇಶಿಯಲಿ&lt;br /&gt;ಇಟ್ಟಣಿಸಿ ಗಜ ವಾಜಿ ರಥ ಸಾ&lt;br /&gt;ಲಿಟ್ಟು ತೋರುವ ದನುಜರಾಯ ಘ&lt;br /&gt;ರಟ್ಟನನು ನಡೆದಿದಿರುಗೊಂಡರು ಪಾಂಡು ನಂದನರು ೪೯&lt;br /&gt;&lt;br /&gt;ಕಳಶ ಕನ್ನಡಿ ವಾದ್ಯರವ ಮಂ&lt;br /&gt;ಗಳ ಮಹಾಂಬುಧಿ ಮಸಗಿದವೊಲು&lt;br /&gt;ಜ್ವಲ ಪತಾಕಾವಳಿಯ ವಿಮಳಚ್ಛತ್ರ ಚಾಮರದ&lt;br /&gt;ಹೊಳೆವ ಕಂಗಳ ಮುಖದ ಕಾಂತಿಯ&lt;br /&gt;ಮೊಲೆಗಳೊಡ್ಡಿನ ಮಂದ ಗಮನದ&lt;br /&gt;ತಳಿದ ಮುಸುಕಿನ ಮೌಳಿಕಾತಿಯರೈದಿತೊಗ್ಗಿನಲಿ ೫೦&lt;br /&gt;&lt;br /&gt;ಹೊಳಹು ಮಿಗೆ ದೂರದಲಿ ಗರುಡನ&lt;br /&gt;ಹಳವಿಗೆಯ ಕಂಡಂದಣಂಗಳ&lt;br /&gt;ನಿಳಿದು ಮೈಯಿಕ್ಕಿದರು ದ್ರುಪದ ವಿರಾಟ ಪಾಂಡವರು&lt;br /&gt;ಬಳಿಕ ಭೂಪರು ಕಾಲು ನಡೆಯಲಿ&lt;br /&gt;ನಲಿದು ಬರುತಿರಲಾನೆಯಿಂದಿಳೆ&lt;br /&gt;ಗಿಳಿದು ಬಿಜಯಂಗೈದನಸುರಾರಾತಿ ಕರುಣದಲಿ ೫೧&lt;br /&gt;&lt;br /&gt;ಇತ್ತನವರಿಗೆ ಸಮಯವನು ದೇ&lt;br /&gt;ವೋತ್ತಮನು ನಿಗಮೌಘವರಸಿದ&lt;br /&gt;ಡತ್ತಲಿತ್ತಲು ಸರಿವ ಮುನಿಗಳ ಮನಕೆ ಮೈಗೊಡದ&lt;br /&gt;ಹೆತ್ತ ಮಕ್ಕಳು ನಿಲಲಿ ಭಕ್ತರ&lt;br /&gt;ನಿತ್ತ ಕರೆ ನೆನೆವರಿಗೆ ತನ್ನನು&lt;br /&gt;ತೆತ್ತು ಬದುಕುವೆನೆಂಬ ಬೋಳೆಯರರಸ ನಡೆತಂದ ೫೨&lt;br /&gt;&lt;br /&gt;ಬಲದ ಪದಘಟ್ಟಣೆಯ ರಜದಿಂ&lt;br /&gt;ಬೆಳುಪಡಗಿದಂಬರದ ಮಾರ್ಗದ&lt;br /&gt;ಝಳದ ಕಿರುಬೆಮರುಗಳ ಲಲಿತ ಕಪೋಲ ಮಂಡಲವ&lt;br /&gt;ಕೆಲದ ಪಾಯವಧಾರುಗಳ ಕಳ&lt;br /&gt;ಕಳದ ಕರುಣಾರಸವ ಸೂಸುವ&lt;br /&gt;ಮೆಲುನಗೆಯ ಸಿರಿಮೊಗದ ಕೃಷ್ಣನ ಕಂಡುದಾ ಸೇನೆ ೫೩&lt;br /&gt;&lt;br /&gt;ಬಾಗಿದವು ಬರಿಕೈಗಳನು ಹಣೆ&lt;br /&gt;ಗಾಗಿ ಮುರುಹಿದವಾನೆಗಳು ತಲೆ&lt;br /&gt;ವಾಗಿ ಗುಡಿಗಟ್ಟಿದವು ಹೇಷಾರವದ ತೇಜಿಗಳು&lt;br /&gt;ತೂಗಿ ತನುವನು ಪುಳಕದಲಿ ಮನ&lt;br /&gt;ಲಾಗು ಮಿಗೆ ಮೈಮರೆದು ಹರುಷದ&lt;br /&gt;ಸಾಗರದಲೋಲಾಡುತಿರ್ದುದು ಕೂಡೆ ತಳತಂತ್ರ ೫೪&lt;br /&gt;&lt;br /&gt;ಅಂಗನೆಯರರವಿಂದನಾಭನ&lt;br /&gt;ಮಂಗಳ ಶ್ರೀಮೂರ್ತಿ ಸುಧೆಯನು&lt;br /&gt;ಕಂಗಳಲಿ ಕುಡಿಕುಡಿದು ಪಡೆಯರು ಮತ್ತೆ ದಣಿವುಗಳ&lt;br /&gt;ಅಂಗಜನ ಪೆತ್ತಯ್ಯ ನೀ ರೂ&lt;br /&gt;ಹಿಂಗೆ ಬಡವನೆಯೆನುತ ಮುರಹರ&lt;br /&gt;ನಂಗ ಶೋಭೆಯ ಬಂದಿಯಲಿ ಸಿಲುಕಿತ್ತು ಸತಿನಿವಹ ೫೫&lt;br /&gt;&lt;br /&gt;ಎರಡು ಸೇರೆಯ ತುಂಬಿ ರತ್ನವ&lt;br /&gt;ಸುರಿದು ಮೈಯಿಕ್ಕಿದನು ಭೂಪತಿ&lt;br /&gt;ಚರಣದಲಿ ಚತುರಾಸ್ಯಜನಕನ ವಿಮಳಭಕ್ತಿಯಲಿ&lt;br /&gt;ನರ ವೃಕೋದರ ನಕುಲ ಸಹದೇ&lt;br /&gt;ವರು ವಿರಾಟ ದ್ರುಪದ ಮೊದಲಾ&lt;br /&gt;ಗಿರೆ ಸಮಸ್ತ ನೃಪಾಲಕರು ಮೈಯಿಕ್ಕಿತೊಗ್ಗಿನಲಿ ೫೬&lt;br /&gt;&lt;br /&gt;ಶಿರವ ನೆಗಹಿ ಯುಧಿಷ್ಠಿರನ ಮೈ&lt;br /&gt;ಮುರಿಯಲೀಯದೆ ಕೃಷ್ಣನಪ್ಪಿದ&lt;br /&gt;ನುರುತರ ಪ್ರೇಮದಲಿ ಭೀಮಾರ್ಜುನರ ಯಮಳರನು&lt;br /&gt;ಹರುಷದಲಿ ತೆಗೆದಪ್ಪಿ ಭೂಮೀ&lt;br /&gt;ಶ್ವರರ ಮನ್ನಿಸಿದನು ವಿಳಾಸಿನಿ&lt;br /&gt;ಯರ ವಿಡಾಯಿಯಲರಸಿ ಕಂಡಳು ಬಂದು ಮುರಹರನ ೫೭&lt;br /&gt;&lt;br /&gt;ಕಾಣಿಕೆಯ ಕೈಕೊಂಡು ರಾಯನ&lt;br /&gt;ರಾಣಿಯನು ಮನ್ನಿಸಿದ ತನ್ನಯ&lt;br /&gt;ರಾಣಿವಾಸದ ಹೊರಗೆ ನೇಮವ ಕೊಟ್ಟು ಕಳುಹಿದನು&lt;br /&gt;ರಾಣಿ ರುಕುಮಿಣಿಯಾದಿಯಾದ&lt;br /&gt;ಕ್ಷೋಣಿಧರನರಸಿಯರನನಿಬರ&lt;br /&gt;ಕಾಣಿಕೆಯ ಕೊಟ್ಟೆರಗಿ ದುರುಪದಿ ಕಂಡಳೊಲವಿನಲಿ ೫೮&lt;br /&gt;&lt;br /&gt;ದರುಶನವನೊಲಿದಿತ್ತು ವಸುದೇ&lt;br /&gt;ವರನು ದೇವಕಿ ದೇವಿಯರ (ಪಾ: ದೇವಕಿಯರ) ಸಂ&lt;br /&gt;ಕರುಷಣನ ಮಹದುಗ್ರಸೇನನ ಕಂಡನವನೀಶ&lt;br /&gt;ವರ ಸುಭದ್ರಾದೇವಿ ಭಾವಂ&lt;br /&gt;ದಿರಿಗೆ ವಂದಿಸಿದಳು ಕುಮಾರನು&lt;br /&gt;ಹರುಷದಲಿ ಬಿಗಿಯಪ್ಪಿದನು ಅಭಿಮನ್ಯು ಪಾಂಡವರ ೫೯&lt;br /&gt;&lt;br /&gt;ಕೈದಣಿಯೆ ವಸುದೇವನಳಿಯನ&lt;br /&gt;ಮೈದಡವಿದನು ಮಗನೆ ಬನದೊಳ&lt;br /&gt;ಗೊಯ್ದು ವಿಧಿ ಬಂಧಿಸಿತಲಾ ಸಾಕಿನ್ನು ದೈವವನು&lt;br /&gt;ಬೈದು ಮಾಡುವುದೇನು ದುರುಪದಿ&lt;br /&gt;ಯೈದೆತನವುಂಟಾಗಿ ದುರಿತವ&lt;br /&gt;ಕೊಯ್ದು ನರಲೋಕಕ್ಕೆ ಬಂದಿರಿ ನಮ್ಮ ಪುಣ್ಯದಲಿ ೬೦&lt;br /&gt;&lt;br /&gt;ಅರಸಿಯೈದೆತನಕ್ಕೆ ನಮ್ಮೈ&lt;br /&gt;ವರ ನಿಜಾಯುಷ್ಯಕ್ಕೆ ರಾಜ್ಯದ&lt;br /&gt;ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆ ನಮಗೆ&lt;br /&gt;ಸುರರು ಸರಿಯಿಲ್ಲೆಮಗೆ ಮಿಕ್ಕಿನ&lt;br /&gt;ನರರು ಗಣ್ಯವೆ ಮಾವ ಕೇಳೆಂ&lt;br /&gt;ದರಸ ವಸುದೇವನನು ಮಧುರೋಕ್ತಿಯಲಿ ಮನ್ನಿಸಿದ ೬೧&lt;br /&gt;&lt;br /&gt;ತಂದೆ ಬೇಡೆಮಗವ್ವೆ ಬೇಡೆಮ&lt;br /&gt;ಗಿಂದುಮುಖಿಯರನೊಲ್ಲೆವಾವ್ ಮನ&lt;br /&gt;ಸಂದು ಮೆಚ್ಚಿಹೆವೆಮ್ಮ ಭಕ್ತರಿಗೆಂಬನನವರತ&lt;br /&gt;ನೊಂದೆನೆಂಬನು ತನ್ನವರು ಮನ&lt;br /&gt;ನೊಂದರಾದೊಡೆ ತನ್ನವರ ಸುಖ&lt;br /&gt;ವಿಂದು ತನ್ನದದೆಂಬುದೇ ಸಿರಿಕೃಷ್ಣ ಮತವೆಂದ ೬೨&lt;br /&gt;&lt;br /&gt;ಅರಸಿಯರ ಬಗೆಗೊಳ್ಳ ಮಕ್ಕಳ&lt;br /&gt;ಸರಕು ಮಾಡನು ದೇಶ ಕೋಶದ&lt;br /&gt;ಸಿರಿಯ ಗಣಿಸನು ಖಡ್ಡಿಗೊಳ್ಳನು ಗಾಢಗರ್ವಿತರ&lt;br /&gt;ಹರಿ ಪರಾಯಣರೆಂದೊಡವರಿಗೆ&lt;br /&gt;ಹರಹಿಕೊಂಬನು ಮಗನ ಶೀಲವು&lt;br /&gt;ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ ೬೩&lt;br /&gt;&lt;br /&gt;ಲೋಗರೇ ನೀವೆಮಗೆ ನಿವಗರ&lt;br /&gt;ಗಾಗಿ ಕರಗುವನದು ನಿಲಲಿ ತನ&lt;br /&gt;ಗಾಗದವರಿಗೆ ತನ್ನ ತೆರುವನು ಕೊಲುವ ಹಗೆಗೊಲಿವ&lt;br /&gt;ಲೋಗರೆನ್ನವರೆಂದು ಲೋಗರಿ&lt;br /&gt;ಗಾಗಿ ಬದುಕುವೆನೆಂಬ ಬಲುಗೈ&lt;br /&gt;ಚಾಗಿ ಕೃಷ್ಣನನೇನ ಹೇಳುವೆನೆಂದನರಸಂಗೆ ೬೪&lt;br /&gt;&lt;br /&gt;ಬೊಪ್ಪನವರೇಯೆಮ್ಮ ದೂರದೆ&lt;br /&gt;ಯಿಪ್ಪವರು ತಾವಲ್ಲ ಸಾಕಿ&lt;br /&gt;ನ್ನೊಪ್ಪದಲಿ ಬಾಯೆಂದು ಮುರರಿಪು ಕರೆದನವನಿಪನ&lt;br /&gt;ಚಪ್ಪರಿಸಿ ಕೌರವರು ತುರುಗಳ&lt;br /&gt;ತಪ್ಪಿಸಿದುದೇನಾಯ್ತು ಪಾರ್ಥನ&lt;br /&gt;ದರ್ಪದನುವೆಂತೆಂದು ಬೆಸಗೊಂಡನು ಮುರಧ್ವಂಸಿ ೬೫&lt;br /&gt;&lt;br /&gt;ಹೂಹೆಗೆಲ್ಲಿಯ ದರ್ಪ ಮನುಜನ&lt;br /&gt;ಸಾಹಸವು ಬೇರೇನು ಯಂತ್ರದ&lt;br /&gt;ಹಾಹೆ ಯಂತ್ರವನುಳಿದು ಜೀವಿಸಲರಿವುದೇ ಬೇರೆ&lt;br /&gt;ದೇಹಿ ನೀ ನಾವೆಲ್ಲ ನಿನ್ನಯ&lt;br /&gt;ದೇಹವಿದರೊಳಗೆಮಗೆ ಗರ್ವದ&lt;br /&gt;ಗಾಹಿದೆಲ್ಲಿಯದೆಂದು ಬಿನ್ನವಿಸಿದನು ಯಮಸೂನು ೬೬&lt;br /&gt;&lt;br /&gt;ಎಸಳು ಮೊನೆಯೊಂದಾಗಿ ತಾವರೆ&lt;br /&gt;ಮುಸುಕುತಿದೆ ನೈದಿಲೆಯ ನೆತ್ತಿಯ&lt;br /&gt;ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ&lt;br /&gt;ದೆಸೆದೆಸೆಯ ತಾಣಾಂತರದ ಹೊಂ&lt;br /&gt;ಬಿಸಿಲು ಬೀತುದು ಜೀಯ ಬಿನ್ನಹ&lt;br /&gt;ವಸುಧೆ ತಂಪೇರಿತ್ತು ಸಂಧ್ಯಾ ಸಮಯವಾಯ್ತೆಂದ ೬೭&lt;br /&gt;&lt;br /&gt;ನಗುತ ಹರಿ ನಿಂದಿರಲು ಕೈ ದಂ&lt;br /&gt;ಡಿಗೆಯವರು ಹೊದ್ದಿದರು ರೂವಾ&lt;br /&gt;ರಿಗೆಗೆ ಬಿಜಯಂಗೈದನುಘೆಯೆಂದುದು (ಪಾ: ಬಿಜಯಂಗೈದನುಘೇಯೆಂದುದು) ಸುರಸ್ತೋಮ&lt;br /&gt;ಬಿಗಿದ ದಡ್ಡಿಯ ಬದ್ದರದ ಬೀ&lt;br /&gt;ಯಗದ ರಾಣೀವಾಸದಂದಣ&lt;br /&gt;ತೆಗೆದು ನಡೆದುದು ಮುಂದೆ ಸಂತೋಷದಲಿ ಯದುಸೇನೆ ೬೮&lt;br /&gt;&lt;br /&gt;ಹೊಕ್ಕನಸುರಾರಾತಿ ಪಾಂಡವ&lt;br /&gt;ರಿಕ್ಕೆಲದಿ ಬರೆ ನಗರಜನ ಮೈ&lt;br /&gt;ಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ&lt;br /&gt;ಹೊಕ್ಕು ಹೊಗಳುವ ಸುತಿಗಳಿಗೆ (ಸ್ತುತಿಗಳಿಗೆ?) ಕೈ&lt;br /&gt;ಮಿಕ್ಕ ಕಳ್ಳನು ಪಾಂಡು ಸುತರಿಗೆ&lt;br /&gt;ಸಿಕ್ಕಿದನು ಶಿವಯೆನುತಲಿರ್ದುದು ಸೂರಿ ಸಂದೋಹ ೬೯&lt;br /&gt;&lt;br /&gt;ಮೇಲೆ ಬೀಳುವ ಮಂದಿಯನು ಕೈ&lt;br /&gt;ಗೋಲಿನವರಪ್ಪಳಿಸೆ ಲಕ್ಷ್ಮೀ&lt;br /&gt;ಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ&lt;br /&gt;ಮೇಲು ನೆಲೆಯುಪ್ಪರಿಗೆಗಳ ವರ&lt;br /&gt;ಬಾಲೆಯರ ಕಡೆಗಂಗಳೆಸೆವ ನಿ&lt;br /&gt;ವಾಳಿಗಳ ಕೈಕೊಳುತ ಹೊಕ್ಕನು ರಾಜಮಂದಿರವ ೭೦&lt;br /&gt;&lt;br /&gt;ಹಿಡಿದರಾರತಿಗಳನು ಬಣ್ಣದ&lt;br /&gt;ಸೊಡರು ಸುಳಿದವು ಮುಂದೆ ನೆಲನು&lt;br /&gt;ಗ್ಗಡಿಪ ಭೀಮಾರ್ಜುನರ ಮೇಳಾಪದಲಿ ಹರುಷದಲಿ&lt;br /&gt;ಹಿಡಿದ ಕೈದೀವಿಗೆಗಳನು ಕೈ&lt;br /&gt;ದುಡುಕಿ ತಿವಿದಾಡುತ್ತ ಕಾಂತಿಯ&lt;br /&gt;ಕಡಲ ಮಣಿಮಯ ಪೀಠದಲಿ ಮಂಡಿಸಿದನಸುರಾರಿ ೭೧&lt;br /&gt;&lt;br /&gt;ಬೀಳುಗೊಟ್ಟನು ಸಕಲ ಭೂಮೀ&lt;br /&gt;ಪಾಲರನು ಕುಂತಿಯ ಕುಮಾರರ&lt;br /&gt;ಮೇಳದಲಿ ಪರಿಮಿತದಲಸುರಾರಾತಿ ನಸು ನಗುತ&lt;br /&gt;ಸೋಲದಲಿ ಮೈದಣಿದು ಕುರು ಭೂ&lt;br /&gt;ಪಾಲನುಚಿತವ ಮಾಡಿ ರಾಜ್ಯವ&lt;br /&gt;ನಾಳಿಸುವ ಹದನುಂಟೆ ನಿಮ್ಮಾಳಾಪವೇನೆಂದ ೭೨&lt;br /&gt;&lt;br /&gt;ಮರಳಿದವು ತುರುವಿತ್ತಲಹಿತರು&lt;br /&gt;ಸರಿದರತ್ತಲು ಮತ್ಸ್ಯನೆಮ್ಮೈ&lt;br /&gt;ವರನು ನಾವೆಂದರಿದು ಕೊಂಡಾಡಿದನು ವಿನಯದಲಿ&lt;br /&gt;ವರ ಸುಭದ್ರಾ ನಂದನಂಗು&lt;br /&gt;ತ್ತರೆಯನೀವರ್ಥಿಯಲಿಯಿರಲಾ&lt;br /&gt;ಕರೆಯಲಟ್ಟಿದೆವೆಂದು ಬಿನ್ನವಿಸಿದನು ಭೂಪಾಲ ೭೩&lt;br /&gt;&lt;br /&gt;ಕೊಳುಗೊಡೆಗೆ ಸೇರುವರೆ ಮದುವೆಯ&lt;br /&gt;ನೊಲಿದು ದೇವರು ಮಾಡುವುದು ಮೇ&lt;br /&gt;ಲಿಳೆಯ ಕಾರ್ಯವ ಬುದ್ಧಿಗಲಿಸುವದೆಮ್ಮನುದ್ಧರಿಸಿ&lt;br /&gt;ಬಳಿಕ ಬಿಜಯಂಗೈವುದಿದು ಹದ&lt;br /&gt;ನೆಲೆ ದಯಾಂಬುಧಿ ಕೇಳೆನಲು ನೃಪ&lt;br /&gt;ತಿಲಕನುಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ ೭೪&lt;br /&gt;&lt;br /&gt;ಕೊಳುಗೊಡೆಗೆ ತಪ್ಪೇನು ವಸುವಿನ&lt;br /&gt;ಕುಲ ವಿರಾಟನು ಇಂದು ವಂಶಾ&lt;br /&gt;ವಳಿಯವರು ನೀವಾಭಿಜಾತ್ಯದೊಳಿಲ್ಲ ಹಳಿವುಗಳು&lt;br /&gt;ಒಳನುಡಿಗಳಲಿ ದೈವ ಶಕುನಾ&lt;br /&gt;ವಳಿಗಳಾದೊಡೆ ಹರುಷದಲಿ ಮಂ&lt;br /&gt;ಗಳ ಮುಹೂರ್ತವ ಮಾಡಿಯೆಂದನು ಕೃಷ್ಣ ನಸುನಗುತ ೭೫&lt;br /&gt;&lt;br /&gt;ಒಸಗೆಯಲಿ ನಿಸ್ಸಾಳ ತತಿ ಗ&lt;br /&gt;ರ್ಜಿಸಿದವಖಿಳ ಜನಂಗಳುತ್ಸಾ&lt;br /&gt;ಹಿಸಿತು ಕನ್ಯಾವರಣವಾಯಿತು ವೈದಿಕೋಕ್ತಿಯಲಿ&lt;br /&gt;ಎಸೆಯಲಭಿಮನ್ಯುವನು ಸಿಂಗಾ&lt;br /&gt;ರಿಸಿತು ಯದು ಪಾಂಚಾಲ ಮತ್ಸ್ಯ&lt;br /&gt;ಪ್ರಸರದಲಿ ಮೆಟ್ಟಕ್ಕಿ ಜೀರಿಗೆ ಬೆಲ್ಲವನುವಾಯ್ತು ೭೬&lt;br /&gt;&lt;br /&gt;ವರ ಮುಹೂರ್ತದ ಘಳಿಗೆವಟ್ಟಲ&lt;br /&gt;ಭರಿತದೊಳು ಪುಣ್ಯಾಹವದ ವಿ&lt;br /&gt;ಸ್ತರದಲಕ್ಷತೆ ತಳಿದು ತಂದರು ವಿಮಲ ಮಂಟಪಕೆ&lt;br /&gt;ಪರಮ ಋಷಿಗಳ ಹೋಮದಲಿ ಶಿಖಿ&lt;br /&gt;ವರನ ಬಲಗೊಂಡರು ಕುಮಾರಿಯ&lt;br /&gt;ವರಿಸೆ ವೈದಿಕದಿಂದ ಬಂದಳು ವರನ ವಾಮದಲಿ ೭೭&lt;br /&gt;&lt;br /&gt;ವಿಭವವೈವಡಿಯಾಗೆ ಸದ್ವಿಜ&lt;br /&gt;ಸಭೆಯನಾರಾಧಿಸಿದನವನೀ&lt;br /&gt;ವಿಭುಗಳಿತ್ತರು ಮುಯ್ಗಳುಡುಗೊರೆ ರತ್ನ ಭೂಷಣವ&lt;br /&gt;ಅಭವ ಸನ್ನಿಭ ವೀರನಾಗೆಂ&lt;br /&gt;ದಿಭಗಮನೆಯರು ಕೃಷ್ಣನರಸಿಯ&lt;br /&gt;ರಭಿಜನಾಮಲ ತಿಲಕನನು ಹರಸಿದರು ಹರುಷದಲಿ ೭೮&lt;br /&gt;&lt;br /&gt;ಇದು ಶುಭೌಘದ ಗರುಡಿ ಬಹು ಸಂ&lt;br /&gt;ಪದದ ನೆಲೆಮನೆ ಸೊಂಪಿನಾಗರ&lt;br /&gt;ವಿದು ಪರಾನಂದ ಪ್ರವಾಹದ ಜನ್ಮಭೂಮಿಯಿದು&lt;br /&gt;ಮುದದ ಕೇಳೀಸ್ಥಾನ ವಿಮಲಾ&lt;br /&gt;ಭ್ಯುದಯದೋಲಗಶಾಲೆ ಲಕ್ಷ್ಮೀ&lt;br /&gt;ಸದನವೆನೆ ರಂಜಿಸಿದುದಭಿಮನ್ಯುವಿನ ವೈವಾಹ ೭೯&lt;br /&gt;&lt;br /&gt;ಯಾದವರು ಪಾಂಚಾಲ ಮತ್ಸ್ಯರು&lt;br /&gt;ಮೇದಿನೀಪತಿ ಪಾಂಡು ಸೋಮಕ&lt;br /&gt;ರಾದಿಯಾದನ್ವಯವನಗಣಿತ ಬಂಧು ಬಳಗವನು&lt;br /&gt;ಆದರಿಸಿದನು ವಿನಯದಲಿ ವಿ&lt;br /&gt;ತ್ತಾದಿ ಸತ್ಕಾರದಲಿ ದಣಿದುದು&lt;br /&gt;ಮೇದಿನೀಜನವವನಿಪನ ಸನ್ಮಾನ ದಾನದಲಿ ೮೦&lt;br /&gt;&lt;br /&gt;ವರ ಚತುರ್ಥಿಯೊಳಿರುಳು ಮೆರೆದರು&lt;br /&gt;ಪುರದಲುತ್ಸಾಹದಲಿ ದಂಪತಿ&lt;br /&gt;ವರರು ಭೂಮೀಚಾರ ಚಮರದ ಚಾತುರಂಗದಲಿ&lt;br /&gt;ಮರುದಿವಸವವಭೃತವ ನೆರೆ ವಿ&lt;br /&gt;ಸ್ತರಿಸಿದರು ಪನ್ನೀರ ಹೊಂಗೊ&lt;br /&gt;ಪ್ಪರಿಗೆಗಳ ಕುಂಕುಮದ ಘಟವಾಸಕದ ರಚನೆಯಲಿ ೮೧&lt;br /&gt;&lt;br /&gt;ಕನಕ ಮಣಿಗಳ ತೊಟ್ಟು ಜಾಜಿಯ&lt;br /&gt;ನನೆಯ ಆದಳಿಕೆಯಲಿ ಮದನನ&lt;br /&gt;ಮೊನೆಯ ಖಾಡಾಖಾಡಿ ಖಾತಿಯರೈದೆ ಹೊಯ್ ಹೊಯ್ದು&lt;br /&gt;ದನುಜಹರನರಸಿಯರು ಕುಂತಿಯ&lt;br /&gt;ತನಯರರಸಿಯರೊಡನೆ ಮತ್ಸ್ಯನ&lt;br /&gt;ವನಿತೆಯರು ಪಾಂಚಾಲಿನಿಯರೋಕುಳಿಯನಾಡಿದರು ೮೨&lt;br /&gt;&lt;br /&gt;ಧರಣಿ ನೆನೆದುದು ಗಂಧ ರಸ ಕ&lt;br /&gt;ತ್ತುರಿಯ ಪನ್ನೀರುಗಳ ಹೊನಲೊಡೆ&lt;br /&gt;ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ&lt;br /&gt;ತರಣಿ ಪರಿಮಳಿಸಿದನು ಪವನನ&lt;br /&gt;ಸುರಭಿತನವಚ್ಚರಿಯೆ ಗಗನದ&lt;br /&gt;ಪರಮ ಸೌರಭಕಲಸಿ ಕೊಂಡುದು ಸಕಲ ಸುರಕುಲವ ೮೩&lt;br /&gt;&lt;br /&gt;ಬಳುವಳಿಯ ನಿಖಿಳಾವನೀ ಮಂ&lt;br /&gt;ಡಲವನನುಪಮ ಕೋಶ ವರ್ಗದ&lt;br /&gt;ಲಲನೆಯರ ಗಜ ವಾಜಿ ರಥ ಪಾದಾತಿ ಗೋವ್ರಜವ&lt;br /&gt;ಅಳಿಯಗಿತ್ತು ವಿರಾಟ ನೃಪ ಯದು&lt;br /&gt;ಕುಲವನಾ ಪಾಂಚಾಲ ಚೈದ್ಯಾ&lt;br /&gt;ವಳಿಯನುತ್ತಮ ವಸ್ತು ವಾಹನದಿಂದ ಮನ್ನಿಸಿದ ೮೪&lt;br /&gt;&lt;br /&gt;ಆದುದಭಿಮನ್ಯುವಿನ ಮದುವೆ ಮ&lt;br /&gt;ಹಾ ದಯಾಂಬುಧಿ ಕೃಷ್ಣ ರಾಯನ&lt;br /&gt;ಪಾದ ದರುಶನವಾಗಲಿಮ್ಮಡಿಸಿತ್ತು ನಮ್ಮುದಯ&lt;br /&gt;ಮೇದಿನಿಯ ನಾವೊತ್ತೆಯಿಟ್ಟೆವು&lt;br /&gt;ಕಾದುಕೊಂಡೆವು ಸತ್ಯವನು ಮೇ&lt;br /&gt;ಲಾದುದನು ನೀ ಕರುಣಿಸೆಂದರು ವೀರ ನರಯಣನ ೮೫&lt;br /&gt;&lt;br /&gt;ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ ವೀರನಾರಾಯಣ ಚರಣಾರವಿಂದ&lt;br /&gt;ಮಕರಂದ ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ&lt;br /&gt;ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ&lt;br /&gt;ಕರ್ಣಾಟ ಭಾರತ ಕಥಾಮಂಜರಿಯೊಳ್&lt;br /&gt;ವಿರಾಟಪರ್ವಂ ಸಮಾಪ್ತಮಾದುದು&lt;br /&gt;&lt;br /&gt;(ಸಂಗ್ರಹ: ಸುನಾಥ/ಸುಪ್ತದೀಪ್ತಿ (ಜ್ಯೋತಿ ಮಹದೇವ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-2053047042692381260?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/2053047042692381260/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=2053047042692381260&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/2053047042692381260'/><link rel='self' type='application/atom+xml' href='http://www.blogger.com/feeds/742145181089395829/posts/default/2053047042692381260'/><link rel='alternate' type='text/html' href='http://gaduginabharata.blogspot.com/2010/08/blog-post_25.html' title='ವಿರಾಟಪರ್ವ: ೧೦. ಹತ್ತನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-5075629297823177233</id><published>2010-08-22T18:32:00.002+05:30</published><updated>2010-08-22T18:37:30.960+05:30</updated><category scheme='http://www.blogger.com/atom/ns#' term='೦೨. ಸಭಾಪರ್ವ'/><title type='text'>ಸಭಾಪರ್ವ: ೦೨. ಎರಡನೆಯ ಸಂಧಿ</title><content type='html'>ಸೂ. ಬಲಿಮಥನ ಫಲುಗುಣರು ಸಹಿತ&lt;br /&gt;ಗ್ಗಳೆಯನೇಕಾ೦ಗದಲಿ ರಣದಲಿ&lt;br /&gt;ಕಲಿ ಜರಾಸ೦ಧನನು ಸೀಳಿದು ಬಿಸುಟನಾ ಭೀಮ &lt;br /&gt;&lt;br /&gt;ಕೇಳು ಜನಮೇಜಯ ದರಿತ್ರೀ &lt;br /&gt;ಪಾಲಮ೦ತ್ರಾಳೋಚನೆಗೆ ಭೂ&lt;br /&gt;ಪಾಲ ಕರಸಿದನನುಜರನು ಧೌಮ್ಯಾದಿ ಮ೦ತ್ರಿಗಳ&lt;br /&gt;ಮೇಳವದ ತನಿವೆಳಗುಗಳ ಮಣಿ&lt;br /&gt;ಮೌಳಿಮ೦ಡಿತರುಪ್ಪರದ ಪಡಿ&lt;br /&gt;ಸೂಳು ಪಾಯವಧಾರಿನಲಿ ಹೊಕ್ಕರು ಸಭಾ ಸ್ಥಳವ ೧&lt;br /&gt;&lt;br /&gt;ದ್ರುಪದ ಧೃಷ್ಟದ್ಯುಮ್ನ ಮತ್ಸ್ಯಾ&lt;br /&gt;ಧಿಪತಿ ಕೇಕಯ ಪಾ೦ಡವಾತ್ಮಜ&lt;br /&gt;ರು ಪತಿಕಾರ್ಯ ವಿಚಾರನಿಷ್ಠರು ಬ೦ದರೋಲಗಕೆ&lt;br /&gt;ನೃಪತಿ ಹದನೇನಮರ ಮುನಿವರ&lt;br /&gt;ನುಪಚರಿತ ಮ೦ತ್ರಾರ್ಥ ಸಿದ್ದಿಗೆ&lt;br /&gt;ರಪಣ ನಮಗು೦ಟೀಗ ಬೆಸಸೆ೦ದರು ಯುಧಿಷ್ಠಿರಗೆ ೨&lt;br /&gt;&lt;br /&gt;ಧರೆ ನಮಗೆ ವಶವರ್ತಿ ಖ೦ಡೆಯ&lt;br /&gt;ಸಿರಿ ನಮಗೆ ಮೈವಳಿ ಯುಧಿಷ್ಠಿರ&lt;br /&gt;ನರಸುತನ ನಳ ನಹುಷ ನೃಗ ಭರತಾದಿ ಭೂಮಿಪರ&lt;br /&gt;ಮರೆಸಿತೆ೦ಬುದು ಲೋಕವೀ ನೀ&lt;br /&gt;ಬ್ಬರದ ಹೆಸರೆಮಗಿ೦ದು ಬೊಪ್ಪನ&lt;br /&gt;ಸಿರಿಯನೇವಣ್ಣಿಸುವೆನೆ೦ದನು ಸುಯ್ದು ಯಮಸೂನು ೩&lt;br /&gt;&lt;br /&gt;ಅಲ್ಲಿಸುರರಲಿ ಸುಪ್ರತಿಷ್ಠಿತ&lt;br /&gt;ನಲ್ಲ ಗಡ ಪಾ೦ಡು ಕ್ಷಿತೀಶ್ವರ&lt;br /&gt;ನಿಲ್ಲಿವೈಭವಕೇನುಫಲ ನಾನವರ ಸದ್ಗತಿಗೆ&lt;br /&gt;ಇಲ್ಲಿ ರಚಿಸಿದ ರಾಜಸೂಯದಿ &lt;br /&gt;ನೆಲ್ಲವಹುದಯ್ಯ೦ಗೆ ಮಖವಿದು &lt;br /&gt;ದುರ್ಲಭವು ಕೈ ಕೊ೦ಡೆವಾವುದು ಮ೦ತ್ರವಿದಕೆ೦ದ ೪&lt;br /&gt;&lt;br /&gt;ಆಗಲಿದಕೇನರಸ ದೀಕ್ಷಿತನಾಗು &lt;br /&gt;ನಿರುಪಮ ರಾಜಸೂಯಕೆ&lt;br /&gt;ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆ೦ದು&lt;br /&gt;ಆ ಗರುವರುಬ್ಬೇಳೆ ತಪ್ಪೇ&lt;br /&gt;ನಾಗಲೀ ಗೋವಿ೦ದ ಮತದಲಿ&lt;br /&gt;ತೂಗಿ ನೋಡುವೆವಿದರ ತೂಕವನೆ೦ದನಾ ಭೂಪ ೫&lt;br /&gt;&lt;br /&gt;ಕಳುಹಿದನು ಸಾರಥಿಯನಾ ರಥ&lt;br /&gt;ಕೆಲವು ದಿವಸಕೆ ಕೃಷ್ಣ ಭವನ&lt;br /&gt;ಸ್ಥಳದಹೊರ ಬಾಹೆಯಲಿ ಚಾಚಿತು ಚಪಳ ಗಮನದಲಿ&lt;br /&gt;ಒಳಗೆ ಬ೦ದನು ಪಾವುಡದ ಮು೦&lt;br /&gt;ದಿಳುಹಿದನು ಕೃಷ್ಣ೦ಗೆ ಪಾ೦ಡವ&lt;br /&gt;ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ ೬&lt;br /&gt;&lt;br /&gt;ತಿಳಿದನಲ್ಲಿಯ ರಾಜಕಾರ್ಯದ&lt;br /&gt;ನೆಲೆಯನಕ್ರೂರಾದಿ ಸಚಿವರ&lt;br /&gt;ತಿಳುಹಿದನು ಶಿಶುಪಾಲ ಕ೦ಸನ ಮಾವನ೦ತಿವರ&lt;br /&gt;ಕೊಲುವಡೆದು ಹದ ನಮ್ಮ ಭಾವನ &lt;br /&gt;ನಿಳಯದುತ್ಸಹ ಸೌಮನಸ್ಯವ&lt;br /&gt;ಬಳಸುವರೆ ಹೊತ್ತಿದು ಮನೋರಥ ಸಿದ್ದಿ ನಮಗೆ೦ದ ೭&lt;br /&gt;&lt;br /&gt;ಎ೦ದು ವಸುದೇವಾದಿ ಯಾದವ&lt;br /&gt;ವೃ೦ದವನು ಬಲಭದ್ರ ರಾಮನ&lt;br /&gt;ಹಿ೦ದಿರಿಸಿ ಬಳಿಕಿ೦ದ್ರಸೇನನ ಕೂಡೆ ವೊಲವಿನಲಿ&lt;br /&gt;ಬ೦ದನಿ೦ದ್ರಪ್ರಸ್ಥ ಪಟ್ಟಣ&lt;br /&gt;ಕ೦ದು ವೊಸಗೆಯ ಗುಡಿಯ ತೋರಣ&lt;br /&gt;ದಿ೦ದ ಕನ್ನಡಿ ಕಳಶದಲಿ ಕೊ೦ಡಾಡಿದರು ಹರಿಯ ೮&lt;br /&gt;&lt;br /&gt;ಪುರಕೆ ಬಿಜಯ೦ಗೈಸಿ ತಂದರು&lt;br /&gt;ಹರಿಯನರಮನೆಗನಿಬರಂತಃ&lt;br /&gt;ಪುರದ ಕಾಣಿಕೆಗೊ೦ಡು ಬಾಂಧವ ಜನವನುಚಿತದಲಿ&lt;br /&gt;ಹರಸಿ ಮಧುರ ಪ್ರೀತಿಯಿ೦ದಾ&lt;br /&gt;ದರಿಸಿ ಮಂತ್ರಾಳೋಚನೆಯ ಮಂ&lt;br /&gt;ದಿರದೊಳೇಕಾಂತದಲಿ ಭೂಪತಿಗೆಂದನಸುರಾರಿ ೯&lt;br /&gt;&lt;br /&gt;ಏನು ಕರೆಸಿದಿರೈ ಪ್ರಯೋಜನ&lt;br /&gt;ವೇನು ನಿಮ್ಮುತ್ಸಾಹ ಶಕ್ತಿಯೊ&lt;br /&gt;ಳೇನು ದುರ್ಘಟವೇನು ಶ೦ಕಿತವೇನು ಸಂಸ್ಖಲಿತ&lt;br /&gt;ದಾನವರ ಕೌರವರ ವೈರದೊ&lt;br /&gt;ಳೇನು ವಿಗ್ರಹವಿಲ್ಲಲೇ ಹದ&lt;br /&gt;ನೇನೆನಲುಕೃಷ್ಣ೦ಗೆ ಬಿನ್ನಹ ಮಾಡಿದನು ನೃಪತಿ ೧೦&lt;br /&gt;&lt;br /&gt;ದನುಜರಲಿ ಕುರುಸೇನೆಯಲಿ ಭಯ&lt;br /&gt;ವೆನಗೆ ಭಾರಿಯೆ ನಿಮ್ಮ ಘನ ಪದ&lt;br /&gt;ವನಜವಿದು ಸೀಸಕವಲೇ ತನ್ನುತ್ತಮಾ೦ಗದಲಿ&lt;br /&gt;ಮುನಿಯಹೇಳಿಕೆ ಬೊಪ್ಪಗಮರೇ೦&lt;br /&gt;ದ್ರನಲಿ ಸಮರಸವಿಲ್ಲ ಗಡ ನ&lt;br /&gt;ಮ್ಮಿನಿಬರಲಿ ಸಾಮರ್ಥ್ಯವಿದ್ದುದಕೇನು ಫಲವೆ೦ದ ೧೧&lt;br /&gt;&lt;br /&gt;ಪಿತನ ಪರಮಪ್ರೀತಿಗುನ್ನತ&lt;br /&gt;ಗತಿಗೆ ನಿರ್ಮಳ ರಾಜಸೂಯ&lt;br /&gt;ಕ್ರತುವೆ ಸಾಧನವೆ೦ದು ಮುನಿಯುಪದೇಶಿಸಿದ ತನಗೆ&lt;br /&gt;ಕ್ರತು ಮಹಾಕ್ರತು ಸಕಲ ಧರಣೀ&lt;br /&gt;ಪತಿಗಳರ್ಥವ ಗುಣದಲೀಯರು&lt;br /&gt;ವ್ರತವೆನಗೆ ಸ೦ಕಲ್ಪವಾಯ್ತಿದಕೇನು ಹದನೆ೦ದ ೧೨&lt;br /&gt;&lt;br /&gt;ತಿರುಗಿದರೆ ಸ೦ಕಲ್ಪ ಹಾನಿಯ&lt;br /&gt;ಪರಮ ಪಾತಕವಿದು ಮಹಾ ನಿ&lt;br /&gt;ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ&lt;br /&gt;ಹರಹುವನು ಪರಿಹಾಸ್ಯಮಯ ಸಾ &lt;br /&gt;ಗರವ ದಾಟಿಸು ಜೀಯ ಭವ ಸಾ&lt;br /&gt;ಗರದಿನಿದು ಮಿಗಿಲೇ ಮುರಾ೦ತಕಯೆ೦ದನಾ ಭೂಪ ೧೩&lt;br /&gt;&lt;br /&gt;ನಕ್ಕನಸುರವಿರೋಧಿ ಮುನಿ ಹಾ&lt;br /&gt;ಯಿಕ್ಕಿದನಲಾ ಬಲೆಯನಕಟಾ&lt;br /&gt;ಸಿಕ್ಕಿದಿರಲಾ ಸ್ವಾಮಿದ್ರೋಹರು ಸದರವೇ ನೃಪರು&lt;br /&gt;ಅಕ್ಕಜದ ಮಖವಿದರ ಚೂಣಿಗೆ&lt;br /&gt;ಚುಕ್ಕಿಯಾಯಿತು ಮನ ಮಹೀಶನ&lt;br /&gt;ಮಕ್ಕಳಾಟಿಗೆಯಾಯ್ತೆನುತ ತೂಗಿದನು ಸಿರಿಮುಡಿಯ ೧೪&lt;br /&gt;&lt;br /&gt;ಕೆದರಿ ಸಪ್ತದ್ವೀಪಪತಿಗಳ&lt;br /&gt;ಸದೆದು ರಚಿಸುವ ರಾಜಸೂಯದ&lt;br /&gt;ಹದನನಂಗೈಸುವನದಾರೀ ವರ್ತಮಾನದಲಿ&lt;br /&gt;ಸುದತಿಯರ ಸೂಳೆಯರ ಮು೦ದು&lt;br /&gt;ಬ್ಬಿದೆಯಲಾ ನಾರದನ ಘಲ್ಲಣೆ&lt;br /&gt;ಗಿದು ಸುದುರ್ಘಟವಿ೦ದು ಬಿದ್ದ ವಿಘಾತಿ ಬಲುಹೆ೦ದ ೧೫&lt;br /&gt;&lt;br /&gt;ಮೊದಲಲೇ ನಿಮ್ಮವರು ನಿಮ್ಮ&lt;br /&gt;ಭ್ಯುದಯವನುಸೇರುವರೆ ಕೌರವ&lt;br /&gt;ರದರೊಳಗ್ಗದ ಕರ್ಣ ಶಕುನಿ ಜಯದ್ರಥಾದಿಗಳು&lt;br /&gt;ಕುದುಕುಳಿಗಳೀಚೆಯಲಿ ಕ೦ಸನ&lt;br /&gt;ಮುದಮುಖನ ಪರಿವಾರವಿದೆ ದೂ&lt;br /&gt;ರದಲಿ ಮಗಧನ ಹೊರೆಯಲದನೇ ಬಣ್ಣಿಸುವೆನೆ೦ದ ೧೬&lt;br /&gt;&lt;br /&gt;ಕಾಲಯವನಾ ದ೦ತವಕ್ರ ನೃ&lt;br /&gt;ಪಾಲರಲಿ ದುರುದು೦ಬಿಯೈ ಶಿಶು&lt;br /&gt;ಪಾಲ ಪೌ೦ಡ್ರಕರೆ೦ಬರಿಗೆ ಸಮದ೦ಡಿಯೆಮ್ಮೊಡನೆ&lt;br /&gt;ಖೂಳರೀರ್ವರು ಹ೦ಸ ಡಿಬಿಕರು&lt;br /&gt;ಸಾಲುವನ ಮುರ ನರಕರಾಳನ&lt;br /&gt;ಮೇಳವವನೇನೆ೦ಬೆನೈ ಭೂಪಾಲ ಕೇಳೆ೦ದ ೧೭&lt;br /&gt;&lt;br /&gt;ಕೆಲವರಿದರೊಳು ನಮ್ಮ ಕೈಯಲಿ&lt;br /&gt;ಕೊಲೆಗೆ ಭ೦ಗಕೆ ಬ೦ದು ಬಿಟ್ಟರು&lt;br /&gt;ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು&lt;br /&gt;ಬಳಿಕೆಮಗೆ ಬಲವದ್ವಿರೋಧದ&lt;br /&gt;ತೊಳಸು ಬಿದ್ದುದು ತೋಟಿಗಾರದೆ&lt;br /&gt;ಜಲಧಿ ಮಧ್ಯದಲೂರ ಕಟ್ಟಿದೆವರಸ ಕೇಳೆ೦ದ ೧೮&lt;br /&gt;&lt;br /&gt;ಮಾವದೇವನ ಮುರಿದಡಾತನ&lt;br /&gt;ದೇವಿಯರು ಬಳಿಕೆಮ್ಮ ದೂರಿದ&lt;br /&gt;ರಾವಿಗಡ ಮಗಧ೦ಗೆ ಮಥುರೆಯಮೇಲೆ (ಪಾ: ಮಧುರೆಯಮೇಲೆ) ದ೦ಡಾಯ್ತು&lt;br /&gt;ನಾವು ನಾನಾ ದುರ್ಗದಲಿ ಸ೦&lt;br /&gt;ಭಾವಿಸಿದೆವಾತನನು ನಿಮ್ಮೊಡ&lt;br /&gt;ನಾವು ಕೂಡಿದೊಡಾತ ಮುನಿಯನೆ ಭೂಪ ಕೇಳೆ೦ದ ೧೯&lt;br /&gt;&lt;br /&gt;ಅರಸ ಕೇಳ್ನೂರೊ೦ದು ವ೦ಶದ&lt;br /&gt;ಧರಣಿಪರು ಮಾಗಧನಮನೆಯಲಿ&lt;br /&gt;ಸೆರೆಯಲೈದರೆ ಬಿಡಿಸಬೇಕು ನಿರ೦ತರಾಯದಲಿ&lt;br /&gt;ದುರುಳನವ ಭಗದತ್ತ ಬಾಹ್ಲಿಕ&lt;br /&gt;ನರಕ ವೃದ್ಧಕ್ಷತ್ರ ಮೊದಲಾ&lt;br /&gt;ದರಸುಗಳು ಬಲ ಗರ್ವಿತರಸ೦ಖ್ಯಾತರಹರೆ೦ದ ೨೦&lt;br /&gt;&lt;br /&gt;ಅವರಿರಲಿ ಮತ್ತಿತ್ತಲುತ್ತರ&lt;br /&gt;ದವನಿಪರು ದಕ್ಕಡರು ಧರಣೀ&lt;br /&gt;ಧವರೊಳಧಿಕ ದೊಠಾರರಗ್ಗದ ಚೀನ ಬೋಟಕರು&lt;br /&gt;ರವಿಯುದಯಗಿರಿ ಶಿಖರದಲಿ ಪಾ&lt;br /&gt;ರ್ಥಿವರು ದಕ್ಷಿಣ ಚೋಳ ಪಾ೦ಡ್ಯ&lt;br /&gt;ಪ್ರವರರದೆ ವಿಕ್ರಮ ಹಿರಣ್ಯ ಮದಾಂಧರವರೆ೦ದ ೨೧&lt;br /&gt;&lt;br /&gt;ಔಕಿ ಚತುರ೦ಗದ ನೃಪಾಲರ&lt;br /&gt;ನೂಕಬಹುದಿದಕೇನು ಯಾಗ&lt;br /&gt;ವ್ಯಾಕರಣಕಿವರಿಬ್ಬರೇ ದೂಷಕರು ಧರಣಿಯಲಿ&lt;br /&gt;ಈ ಕುಠಾರರು ಕದನ ಮುಖದವಿ&lt;br /&gt;ವೇಕಿಗಳು ಶಿಶುಪಾಲ ಮಾಗಧ&lt;br /&gt;ರಾಕೆವಾಳರು ವೈರಿರಾಯರೊಳರಸ ಕೇಳೆ೦ದ ೨೨&lt;br /&gt;&lt;br /&gt;ಅಧಿಕರಿವರಿಬ್ಬರೊಳಗಾ ಮಾ&lt;br /&gt;ಗಧನೆ ಬಲುಗೈ ರಾಜಸೂಯಕೆ&lt;br /&gt;ಸದರವನು ನಾ ಕಾಣೆನಾತನ ಖ೦ಡೆಯದ ಮೊನೆಗೆ&lt;br /&gt;ನಿಧನವಲ್ಲದೆ ಧನವ ನೆರಹುವ&lt;br /&gt;ಹದನ ನೀನೇ ಕಾ೦ಬೆಯಾತನ&lt;br /&gt;ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳೆ೦ದ ೨೩&lt;br /&gt;&lt;br /&gt;ಕ೦ಸನನು ಕೆಡಹಿದೆವು ಮುರಿದೆವು&lt;br /&gt;ಹ೦ಸ ಡಿಬಿಕರ ಪೌ೦ಡ್ರಕರ &lt;br /&gt;ನಿರ್ವ೦ಶವೆನೆಸವರಿದೆವು ಮುರ ನರಕಾದಿ ದಾನವರ&lt;br /&gt;ಹಿ೦ಸೆಯಿವನಲಿ ಹರಿಯದಿವ ನಿ&lt;br /&gt;ಸ್ಸ೦ಶಯನು ವಿಜಯದಲಿ ಯಾಗ &lt;br /&gt;ಧ್ವ೦ಸಕನ ನೆರೆ ಮುರಿವುಪಾಯವ ಕಾಣೆ ನಾನೆ೦ದ ೨೪&lt;br /&gt;&lt;br /&gt;ಈಸು ಘನವೇ ಕೃಷ್ಣ ಯಾಗ&lt;br /&gt;ದ್ವೇಷಿಗಳು ಪಿರಿದಾಗಲೆವಗಿ&lt;br /&gt;ನ್ನೈಸಲೇ ವರರಾಜಸೂಯಾಧ್ವರಕೆ ಸ೦ನ್ಯಾಸ&lt;br /&gt;ಈಸುದೈತ್ಯರು ನಿನ್ನ ಕೈಯಲಿ&lt;br /&gt;ಘಾಸಿಯಾದರು ಮಗಧನೊಬ್ಬನು&lt;br /&gt;ಮೀಸಲಳಿಯನು ಗಡ ಮಹದೇವೆ೦ದನಾ ಭೂಪ ೨೫&lt;br /&gt;&lt;br /&gt;ಅಹಹ ಯಾಗ ವ್ರತಕೆ ಭ೦ಗವ&lt;br /&gt;ತಹುದೆ ಜೀಯ ಮುರಾರಿ ಕೃಪೆ ಸ&lt;br /&gt;ನ್ನಿಹಿತವಾಗಲಿ ಸಾಕು ನೋಡಾ ತನ್ನ ಕೈಗುಣವ&lt;br /&gt;ಬಹಳ ಬಲನೇ ಮಾಗಧನು ನಿನ&lt;br /&gt;ಗಹಿತನೇ ತಾ ವೀಳೆಯವ ಸುರ&lt;br /&gt;ಮಹಿಳೆಯರ ತೋಳಿನಲಿ ತೋರುವೆನೆ೦ದನಾ ಭೀಮ ೨೬&lt;br /&gt;&lt;br /&gt;ಮುರುಕಿಸುವ ಮನ್ನೆಯರ ನಾಳವ&lt;br /&gt;ಮುರಿವೆನಖಿಳ ದ್ವೀಪ ಪತಿಗಳ&lt;br /&gt;ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ&lt;br /&gt;ಕರುಬನೇ ಮಾಗಧನು ರಣದಲಿ&lt;br /&gt;ತರಿವೆನಾತನ ನಿಮ್ಮಯಾಗದ &lt;br /&gt;ಹೊರಿಗೆ ತನ್ನದುಕರೆಸು ಋಷಿಗಳನೆ೦ದನಾಭೀಮ ೨೭&lt;br /&gt;&lt;br /&gt;ಅಹುದಲೇ ಬಳಿಕೇನು ಯಾಗೋ&lt;br /&gt;ಪಹರಣಕೆ ಸ೦ನ್ಯಾಸ ಗಡ ವಿ&lt;br /&gt;ಗ್ರಹದಲಧಿಕರು ಗಡ ಜರಾಸ೦ಧಾದಿ ನಾಯಕರು&lt;br /&gt;ಮಹಿಯ ಮನ್ನೆಯರಧ್ವರವ ನಿ&lt;br /&gt;ರ್ವಹಿಸಲೀಯರು ಗಡ ಶಿವಾ ಶಿವ&lt;br /&gt;ರಹವ ಮಾಡಿದನರಸನೆಂದನು ನಗುತ ಕಲಿಪಾರ್ಥ ೨೮&lt;br /&gt;&lt;br /&gt;ಏಕೆ ಗಾಂಡೀವವಿದು ಶರಾವಳಿ&lt;br /&gt;ಯೇಕೆ ಇ೦ದ್ರಾಗ್ನೇಯ ವಾರುಣ&lt;br /&gt;ವೇಕೆ ರಥವಿದು ರಾಮಭೃತ್ಯ ಧ್ವಜ ವಿಳಾಸವಿದು&lt;br /&gt;ಲೋಕರಕ್ಷಾ ಶಿಕ್ಷೆಗಿ೦ತಿವು&lt;br /&gt;ಸಾಕು ಹುಲು ಮ೦ಡಳಿಕರಿವದಿರ&lt;br /&gt;ನೂಕಲರಿಯದೆ ಜೀಯ ಜ೦ಜಡವೇಕೆ ಬೆಸಸೆ೦ದ ೨೯&lt;br /&gt;&lt;br /&gt;ನೆರಹು ಹಾರುವರನು ದಿಗ೦ತಕೆ&lt;br /&gt;ಹರಹು ನಮ್ಮನು ಬ೦ಧು ವರ್ಗವ&lt;br /&gt;ಕರೆಸು ರಚಿಸಲೆ ಕಾಣಬೇಹುದು ಕದನ ಕಾಮುಕರ&lt;br /&gt;ಸೊರಹಲರಿಯೆನು ಸಾಧುಗಳನಾ&lt;br /&gt;ದರಿಸುವೆನು ಚಾವಟೆಯರನು ಚಿ&lt;br /&gt;ಮ್ಮುರಿಯ ಬಿಗಿಸುವೆನಮರಿಯರ ಕಡೆಗಣ್ಣ ಕಣ್ಣಿಯಲಿ ೩೦&lt;br /&gt;&lt;br /&gt;ಅಹುದು ಬೀಮಾರ್ಜುನರ ನುಡಿ ನಿ&lt;br /&gt;ರ್ವಹಿಸದೇ ಬಳಿಕೇನು ನಿಜಕುಲ &lt;br /&gt;ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ&lt;br /&gt;ಗಹನವೇ ಗ೦ಡುಗರಿಗಿದಿರಾ &lt;br /&gt;ರಹಿತ ಬಲವಿನ್ನರಸ ಚಿ೦ತಾ&lt;br /&gt;ಮಹಿಳೆಗವಸರವಲ್ಲ ಮನ ಮಾಡೆ೦ದನಸುರಾರಿ ೩೧&lt;br /&gt;&lt;br /&gt;ಎಮಗೆ ಭೀಮಾರ್ಜುನರ ಕೊಡು ರಿಪು&lt;br /&gt;ರಮಣಿಯರ ಸೀಮ೦ತ ಮಣಿಗಳ&lt;br /&gt;ನಿಮಿಷದಲಿ ತರಿಸುವೆನು ಹರಿಸುವೆನಹಿತ ಭೂಮಿಪರ&lt;br /&gt;ಸಮರ ಜಯವಿನ್ನಾಯ್ತು ಯಜ್ನೊ&lt;br /&gt;ದ್ಯಮಕೆ ನಿಷ್ಪ್ರತ್ಯೂಹವಿನ್ನು&lt;br /&gt;ಭ್ರಮೆಯ ಮಾಡದಿರೆ೦ದು ನೃಪತಿಗೆ ನುಡಿದನಸುರಾರಿ  ೩೨&lt;br /&gt;&lt;br /&gt;ಕ೦ಗಳನುಜರು ಚಿತ್ತ ನೀವೆ&lt;br /&gt;ನ್ನ೦ಗವಣೆಗಿನ್ನೇನು ಭಯ ವಾ&lt;br /&gt;ವಂಗದಲಿ ನಂಬಿಹೆವಲೇ ನಿಮ್ಮಂಘ್ರಿ ಪಂಕಜವ&lt;br /&gt;ಸಂಗರದ ಜಯ ನಿನ್ನದಲ್ಲಿಯ &lt;br /&gt;ಭಂಗ ನಿನ್ನದು ಭಕ್ತ ಜನದನು &lt;br /&gt;ಸಂಗಿ ನೀನಿರಲೇನು ನಮಗರಿದೆಂದನಾ ಭೂಪ ೩೩&lt;br /&gt;&lt;br /&gt;ವಿಗಡ ಯಾಗಕೆ ಸಕಲ ರಾಯರು&lt;br /&gt;ಹಗೆ ಮರುತ್ತನು ಕಾರ್ತವೀರ್ಯಾ&lt;br /&gt;ದಿಗಳು ಕೆಲವರಶಕ್ತರಾದರು ರಾಜಸೂಯದಲಿ&lt;br /&gt;ಬಗೆಯಲಿದು ದುಷ್ಕಾಲವಸುರರೊ&lt;br /&gt;ಳಗಡು ಮಾಗಧನವನ ಮುರಿದರೆ&lt;br /&gt;ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ ೩೪&lt;br /&gt;&lt;br /&gt;ಆರವನು ಹಿರಿದಾಗಿ ನೀಕೈ&lt;br /&gt;ವಾರಿಸುವೆ ಕಮಲಾಕ್ಷ ಮಾಗಧ&lt;br /&gt;ನಾರುಭಟೆ ತಾನೇನು ವರವೋ ಸಹಜ ವಿಕ್ರಮವೋ&lt;br /&gt;ವೀರರಿದೆ ಸಿಡಿಲಂತೆ ಸಕಲ ಮ&lt;br /&gt;ಹೀ ರಮಣರಿದರೊಳಗೆ ನೃಪ ಮಖ&lt;br /&gt;ವೈರಿ ಗಡ ಬೆಸಸೆಂದಡೆಂದನು ನಗುತ ಮುರವೈರಿ ೩೫&lt;br /&gt;&lt;br /&gt;ಧರಣಿ ಪತಿ ಕೇಳೈ ಬೃಹದ್ರಥ&lt;br /&gt;ನರಸು ಮಾಗಧ ಮಂಡಲಕೆ ತ&lt;br /&gt;ತ್ಪುರಿ ಗಿರಿವ್ರಜವೆಂಬುದಲ್ಲಿ ಸಮಸ್ತ ವಿಭವದಲಿ&lt;br /&gt;ಧರೆಯ ಪಾಲಿಸುತಿದ್ದ ನಾತ೦&lt;br /&gt;ಗರಸಿಯರು ಸೇರಿದರು ಕಾಶೀ&lt;br /&gt;ಶ್ವರನ ತನುಜೆರಿಬ್ಬರದುಭುತ ರೂಪ ಗುಣಯುತರು ೩೬&lt;br /&gt;&lt;br /&gt;ಅವರೊಡನೆ ಸುಖ ಸತ್ಕಥಾ ಸ೦&lt;br /&gt;ಭವ ವಿನೋದದಲಿದ್ದನೀ ವೈ&lt;br /&gt;ಭವ ಫಲವಪುತ್ರರಿಗೆ ಬಹು ದುಃಖೋಪಚಯವೆಂದು&lt;br /&gt;ಅವನಿಪತಿ ವೈರಾಗ್ಯದಲಿ ರಾ&lt;br /&gt;ಜ್ಯವನು ಬಿಸುಟು ತಪಃ ಪ್ರಭಾವ&lt;br /&gt;ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ ೩೭&lt;br /&gt;&lt;br /&gt;ಊರ ಹೊರವಡವುತ್ತ ಕಂಡನು&lt;br /&gt;ಪಾರಿಕಾಂಕ್ಷಿಯನೊಬ್ಬನನು ಮುನಿ&lt;br /&gt;ವೀರಕಾಂಕ್ಷಿಯನಾ೦ಗಿರಾತ್ಮಜ ಚ೦ಡ ಕೌಶಿಕನ&lt;br /&gt;ನಾರಿಯರು ಸಹಿತವನ ಚರಣಾ೦&lt;br /&gt;ಭೋರುಹಕ್ಕಭಿನಮಿಸಲತಿ ವಿ&lt;br /&gt;ಸ್ತಾರಿಸಿದನಾಶೀರ್ವಚನವನು ಮುನಿ ನೃಪಾಲ೦ಗೆ ೩೮&lt;br /&gt;&lt;br /&gt;ಏನಿದರಸನೆ ವದನದಲಿ ದು&lt;br /&gt;ಮ್ಮಾನವೆನಲನಪತ್ಯತಾ ಚಿ೦&lt;br /&gt;ತಾನುರೂಪದ ದುಗುಡವಿದು ನಿಮ್ಮ೦ಘ್ರಿ ಸೇವೆಯಲಿ&lt;br /&gt;ಹಾನಿ ದುಷ್ಕೃತಕಹುದಲೇ ಸುತ &lt;br /&gt;ಹೀನರಾಜ್ಯವ ಬಿಸುಟೆನೆನಗೀ&lt;br /&gt;ಕಾನನದ ಸಿರಿ ಸಾಕೆನುತ ಬಿಸಸುಯ್ದನಾ ಭೂಪ ೩೯&lt;br /&gt;&lt;br /&gt;ಐಸಲೇ ಸುತಹೀನ ರಾಜ್ಯವಿ&lt;br /&gt;ಳಾಸ ನಿಷ್ಫಲವಹುದಲೇ ಸ೦&lt;br /&gt;ತೋಷವೇ ಸುತಲಾಭವಾದರೆ ಹೊಲ್ಲೆಯೇನಿದಕೆ&lt;br /&gt;ಆ ಸಮರ್ಥ ಮುನೀ೦ದ್ರನ೦ತ&lt;br /&gt;ರ್ಭಾಸಿತಾತ್ಮ ಧ್ಯಾನ ಸುಖ ವಿ &lt;br /&gt;ನ್ಯಾಸದಿರಲಂಕದಲಿ ಬಿದ್ದುದು ಮಧುರ ಚೂತಫಲ ೪೦&lt;br /&gt;&lt;br /&gt;ಕ೦ದೆರದು ಮುನಿ ಬಳಿಕ ಭೂಪತಿ&lt;br /&gt;ಗೆ೦ದನಿದ ಕೋ ಪುತ್ರ ಸ೦ತತಿ&lt;br /&gt;ಗೆ೦ದು ಸಾಧನವಿದನು ಕೊಡು ನೀನೊಲಿದು ವಧುಗೆನಲು&lt;br /&gt;ಕ೦ದಿದಾನನ ಉಜ್ವಲ ಪ್ರಭೆ&lt;br /&gt;ಯಿ೦ದ ಬೆಳಗಿತು ರಾಣಿಯರು ಸಹಿ&lt;br /&gt;ತಂದು ಮುನಿಪದಕೆರಗಿ ಪರಿತೋಷದಲಿ ನಿಂದಿರ್ದ ೪೧&lt;br /&gt;&lt;br /&gt;ವರವನೊಂದನು ಹೆಸರುಗೊಂಡೀ&lt;br /&gt;ಧರಣಿಪತಿಗಾ ಮುನಿಪ ಕೊಟ್ಟನು&lt;br /&gt;ಪುರಕೆ ಮರಳಿದನರಸನಾ ಮುನಿ ತೀರ್ಥ ಯಾತ್ರೆಯಲಿ&lt;br /&gt;ಸರಿದನತ್ತಲು ಚೂತಫಲವಿದ&lt;br /&gt;ನೆರಡು ಮಾಡಿ ಬೃಹದ್ರಥನು ತ&lt;br /&gt;ನ್ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ ೪೨&lt;br /&gt;&lt;br /&gt;ಬಲಿದುದವರಿಗೆ ಗರ್ಭ ಜನನದ&lt;br /&gt;ನೆಲೆಯ ಕಾಲಕೆ ಸತಿಯರುದರದೊ&lt;br /&gt;ಳಿಳಿದುದೊಂದೊಂದವಯವದ ಸೀಳೆರಡು ಸಮವಾಗಿ&lt;br /&gt;ಬಳಿಕ ಕಂಡವರಕಟ ದುಷ್ಕೃತ&lt;br /&gt;ಫಲವೆ ಸುಡಲಿವನೆನುತ ಬಿಸುಟರು &lt;br /&gt;ಹೊಳಲ ಹೊರಭಾಹೆಯಲಿ ನಡುವಿರುಳರಸಕೇಳೆಂದ ೪೩&lt;br /&gt;&lt;br /&gt;ನಡುವಿರುಳು ಜರೆಯೆಂಬ ರಕ್ಕಸಿ&lt;br /&gt;ಯಡಗನರಸುತ ಬ೦ದು ಕಂಡಳು&lt;br /&gt;ಮಿಡುಕುವೀ ಸೀಳೆರಡವನು ಹೊರ ಹೊಳಲ ಬಾಹೆಯಲಿ&lt;br /&gt;ತುಡುಕಿದಳು ಸೀಳ್ದೇಕೆ ತಿನ್ನದೆ&lt;br /&gt;ಮಡಗಿದರೊ ಕೌತುಕವಿದೇನೀ&lt;br /&gt;ಯೆಡಬಲನಿದೆ೦ದಸುರೆ ದಿಟ್ಟಿಸಿ ನೋಡಿದಳು ಶಿಶುವ ೪೪&lt;br /&gt;&lt;br /&gt;ಶಿಶುವನಾರೋಸೀಳ್ದು ತಿನ್ನದೆ&lt;br /&gt;ಬಿಸುಟು ಹೋದರೆನುತ್ತ ಜರೆ ಸ೦&lt;br /&gt;ಧಿಸಿದಳಾಕಸ್ಮಿಕದ ಸೀಳೆರಡನು ವಿನೋದದಲಿ&lt;br /&gt;ಪಸರಿಸಿದುದದು ಮೇಘರವ ಘೂ&lt;br /&gt;ರ್ಮಿಸುವವೋಲ್ಚೀರಿದನು ಗಿರಿಗಳ&lt;br /&gt;ಬೆಸುಗೆ ಬಿಡೆ ನಡುವಿರುಳು ಕೋಳಾಹಳಿಸಿತಾ ರಭಸ ೪೫&lt;br /&gt;&lt;br /&gt;ಊರ ಹೊರವಳಯದಲಿದೇನು ಮ&lt;br /&gt;ಹಾ ರಭಸವಿರುಳೆನುತ ಹರಿದುದು&lt;br /&gt;ಪೌರಜನ ಝೋ೦ಪಿಸುವ ಕೈದೀವಿಗೆಯ ಬೆಳಗಿನಲಿ&lt;br /&gt;ಆರಿವಳು ತಾನೆನುತ ಕ೦ಡುದು&lt;br /&gt;ದೂರದಲಿ ದಾನವಿಯನವಳ ಘ&lt;br /&gt;ನೋರುಗಳ ಸೋಗಿಲಲಿ ಕೈದೊಟ್ಟಿಲ ಕುಮಾರಕನ ೪೬&lt;br /&gt;&lt;br /&gt;ನಿ೦ದುದಲ್ಲಿಯದಲ್ಲಿ ರಕ್ಕಸಿ&lt;br /&gt;ಯೆ೦ದು ಭಯದಲಿ ಬಳಿಕ ಕರುಣದ&lt;br /&gt;ಲೆ೦ದಳವಳ೦ಜದಿರಿ ಹೋ ಹೋಯೆನುತ ಕೈ ನೆಗಹಿ&lt;br /&gt;ಇ೦ದಿವನು ಮಗನೆನಗೆ ಭೂಪತಿ&lt;br /&gt;ಬ೦ದನಾದರೆ ಕೊಡುವೆನೀತನ&lt;br /&gt;ನೆ೦ದಡಾಕ್ಷಣ ಕೇಳಿ ಹರಿತ೦ದನು ಮಹೀಪಾಲ ೪೭&lt;br /&gt;&lt;br /&gt;ಅರಸ ಕೋ ನಿನ್ನವನನೀ ಮುನಿ&lt;br /&gt;ವರ ಕುಮಾರನನೆನ್ನ ಹೆಸರಲಿ&lt;br /&gt;ಕರೆವುದೀತನ ಸೀಳಬೆಚ್ಚವಳಾನು ಬೆದರದಿರು&lt;br /&gt;ಜರೆಯೆನಿಪುದಭಿಧಾನವೆನ್ನದು&lt;br /&gt;ವರ ಜರಾಸ೦ಧಕನಿವನು ಸುರ&lt;br /&gt;ನರರೊಳಗೆ ಬಲುಗೈಯನಹನೆ೦ದಿತ್ತಳರ್ಭಕನ ೪೮&lt;br /&gt;&lt;br /&gt;ಅಸುರೆಯನು ಮನ್ನಿಸಿದನಾಕೆಯ&lt;br /&gt;ಪೆಸರ ಮಗನಿವನೆ೦ದು ಲೋಕ&lt;br /&gt;ಪ್ರಸರವರಿಯಲು ನಲವಿನಲಿ ಸಾಕಿದನು ಮಾಗಧನ&lt;br /&gt;ಅಸುರರಲಿ ಮರ್ತ್ಯ್ರಲಿ ಸುರರಲಿ&lt;br /&gt;ಯೆಸಕವುಳ್ಳವನೆನಿಸಿದನು ಸಾ&lt;br /&gt;ಹಸದ ಜೋಡಣೆ ಜಡಿದುದವನಲಿ ರಾಯ ಕೇಳೆ೦ದ ೪೯&lt;br /&gt;&lt;br /&gt;ಆದರಾ (ಪಾ: ಅದರಿನಾ) ಮಾಗಧನ ಮುರಿದ&lt;br /&gt;ಲ್ಲದೆ ನೃಪಾಲಕರ೦ಜಿ ಕಪ್ಪದೊ&lt;br /&gt;ಳೊದಗಲರಿಯರು ಮೆರೆಯಲೀಯರು ಯಾಗ ಮ೦ಟಪವ&lt;br /&gt;ಇದು ನಿಧಾನವು ಭೀಮ ಪಾರ್ಥರಿ&lt;br /&gt;ಗಿದು ಮೂಹೂರ್ತವು ವೀಳೆಯವ ತಾ&lt;br /&gt;ಕದನ ವಿಜಯದ ವೀರ ಸೇನೆಯನಿಕ್ಕಿ ಕಳುಹೆ೦ದ ೫೦&lt;br /&gt;&lt;br /&gt;ಮರೆಯದೇತಕೆ ರಾಜಸೂಯದ &lt;br /&gt;ಹೊರಿಗೆ ನಿನ್ನದು ರಾಣಿಕವ ನಾ&lt;br /&gt;ನರಿಯೆನೆಮ್ಮರ್ಥಾಭಿಮಾನ ಪ್ರಾಣದೊಡೆಯನಲೆ&lt;br /&gt;ಕಿರಿಯರವದಿರು ರಾಜಸೂಯದ&lt;br /&gt;ಕರುಬರತಿ ಬಲ್ಲಿದರು ಕೃಪೆಯನು&lt;br /&gt;ಮೆರೆವುದೆ೦ದಸುರಾರಿಯ೦ಘ್ರಿಗೆ ಚಾಚಿದನು ಶಿರವ ೫೧&lt;br /&gt;&lt;br /&gt;ಎತ್ತಿದನು ಮುರವೈರಿ ರಾಯನ&lt;br /&gt;ಮಸ್ತಕವ ನಸುನಗುತ ಕರೆ ಸುಮು&lt;br /&gt;ಹೂರ್ತಿಕರನಕ್ಷೋಹಿಣಿಯ ಬರಹೇಳು ದಳಪತಿಯ&lt;br /&gt;ಸುತ್ತಣರಸರಿಗೋಲೆಯುಡುಗೊರೆ&lt;br /&gt;ಯಿತ್ತು ದೂತರ ಕಳುಹು ಬಳಿಕಿನೊ&lt;br /&gt;ಳುತ್ತರೋತ್ತರಸಿದ್ಧಿ ನಿನಗಹುದೆ೦ದನಸುರಾರಿ ೫೨&lt;br /&gt;&lt;br /&gt;ರೂಡಿಸಿದ ಸುಮುಹೂರ್ತದಲಿ ಹೊರ&lt;br /&gt;ಬೀಡು ಬಿಟ್ಟುದು ದಧಿಯ ದೂರ್ವೆಯ&lt;br /&gt;ಕೂಡಿದಕ್ಷತೆಗಳ ಸುಲಾಜಾವಳಿಯ ಮ೦ಗಳದ&lt;br /&gt;ಜೋಡಿಗಳ ಜಯರವದ ದೈತ್ಯ ವಿ&lt;br /&gt;ಭಾಡ ಸೂಕ್ತದ ವಿಗಡ ಬಿರುದು ಪ&lt;br /&gt;ವಾಡಗಳ ಪಾಠಕರ ಗಡಬಡೆ ಗಾಢಿಸಿತು ನಭವ ೫೩&lt;br /&gt;&lt;br /&gt;ಆಳುನಡೆಯಲಿ ಮಗಧರಾಯನ&lt;br /&gt;ಮೇಲೆ ದ೦ಡು ಮುಕು೦ದ ದಳಪತಿ&lt;br /&gt;ಹೇಳಿಕೆಗೆ ಭೀಮಾರ್ಜುನರ ಬರಹೇಳು ಹೇಳೆನುತ&lt;br /&gt;ಆಳು ಸಾರಿದರವನಿಪತಿಗಳು&lt;br /&gt;ಮೇಳದಲಿ ಹೊರವ೦ಟು ಬರೆ ದೆ&lt;br /&gt;ಖ್ಖಾಳವನು ನೋಡಿದರು ನಡೆದರು ಪಯಣಗತಿಗಳಲಿ ೫೪&lt;br /&gt;&lt;br /&gt;ಜನಪಕೇಳೈ ಕೃಷ್ಣ ಭೀಮಾ&lt;br /&gt;ರ್ಜುನರು ವಿಮಳಸ್ನಾತಕವ್ರತ&lt;br /&gt;ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ&lt;br /&gt;ಜನಪ ಕಾಣಿಕೆಗೊಳುತ ನಾನಾ&lt;br /&gt;ಜನಪದ೦ಗಳ ಕಳೆದು ಗ೦ಗಾ&lt;br /&gt;ವಿನುತ ನದಿಯನು ಹಾಯ್ದು ಬ೦ದರು ಪೂರ್ವ ಮುಖವಾಗಿ ೫೫&lt;br /&gt;&lt;br /&gt;ಬರುತ ಕ೦ಡರು ಕೂಡೆ ಕೊಬ್ಬಿದ&lt;br /&gt;ಸಿರಿಯನೂರೂರುಗಳ ಸೊ೦ಪಿನ&lt;br /&gt;ಭರಿತವನು ಗೋಧನ ಸಮೃದ್ದಿಯ ಧಾನ್ಯರಾಶಿಗಳ&lt;br /&gt;ವರನದಿಯ ಕಾಲುವೆಯ ತೋಟದ&lt;br /&gt;ತೆರಳಿಕೆಯ ಪನಸಾಮ್ರ ಪೂಗೋ&lt;br /&gt;ತ್ಕರದ ರಮ್ಯಾರಾಮ ಮ೦ಡಿತ ಮಗಧ ಮಂಡಲವ ೫೬&lt;br /&gt;&lt;br /&gt;ಮೆಳೆಗಳೇ ದ್ರಾಕ್ಷೆಗಳು ವೃಕ್ಷಾ&lt;br /&gt;ವಳಿಗಳೇ ಸಹಕಾರ ದಾಡಿಮ &lt;br /&gt;ಫಲಿತ ಪನಸ ಕ್ರಮುಕ ಜ೦ಬೂ ಮಾತುಳ೦ಗಮಯ&lt;br /&gt;ಕಳ್ವೆ ಶಾಲೀಮಯವು ಹೊನಲ&lt;br /&gt;ಸ್ಖಳಿತ ಲಕ್ಷ್ಮೀಮಯವು ನಗರಾ&lt;br /&gt;ವಳಿಗಳೆನೆ ಶೋಭಿಸಿತು ಜನಪದವಿವರ ಕಣುಮನಕೆ ೫೭&lt;br /&gt;&lt;br /&gt;ದೇಶ ಹಗೆವನದೆ೦ದು ಕಡ್ಡಿಯ&lt;br /&gt;ಘಾಸಿ ಮಾಡದೆ ಮಿಗೆ ವಿನೋದದ &lt;br /&gt;ಲೈಸು ಪಡೆ ನಡೆತ೦ದು ಬಿಟ್ಟುದು ಗಿರಿಯ ತಪ್ಪಲಲಿ&lt;br /&gt;ಆ ಸರೋರುಹ ಬ೦ಧು ಚರಮಾ&lt;br /&gt;ಶಾ ಸತಿಯ ಚು೦ಬಿಸೆ ಗಿರಿವ್ರಜ&lt;br /&gt;ದಾ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು ೫೮&lt;br /&gt;&lt;br /&gt;ವೃಷಭ ಚರ್ಮ ನಿಬದ್ಧ ಭೇರಿಗ&lt;br /&gt;ಳೆಸೆದವಕ್ಷತೆ ಗಂಧಮಾಲ್ಯ&lt;br /&gt;ಪ್ರಸರದಲಿ ಶೈಲಾಗ್ರದಲಿ ಸ೦ಪನ್ನ ಪೂಜೆಯಲಿ&lt;br /&gt;ಅಸುರರಿಪು ಭೀಮಾರ್ಜುನರು ತ&lt;br /&gt;ದ್ವಿಷಮ ಬೇರಿತ್ರಯವ ಹೊಯ್ದೆ&lt;br /&gt;ಬ್ಬಿಸಿದರದುಭುತ ರವ ಮಿಗಿಲು ಕೆಡೆದುದು ಧರಿತ್ರಿಯಲಿ ೫೯&lt;br /&gt;&lt;br /&gt;ಏನಿದದ್ಭುತವೆ೦ದು ನಡುವಿರು&lt;br /&gt;ಳಾ ನರೇಶ್ವರನಮಳ ವೇದ ವಿ&lt;br /&gt;ಧಾನದಲಿ ತಚ್ಛಾಂತಿಗೋಸುಗ ಕರಸಿ ಭೂಸುರರ&lt;br /&gt;ದಾನದಲಿ ವಿವಿಧಾಗ್ನಿಕಾರ್ಯ ವಿ&lt;br /&gt;ಧಾನದಲಿ ವಿಪ್ರೌಘವಚನ ಸ&lt;br /&gt;ಘಾನದಲಿ ಮಗಧೇಶನಿದ್ದನು ರಾಯ ಕೇಳೆಂದ ೬೦&lt;br /&gt;&lt;br /&gt;ಇವರು ಗಿರಿಯಿ೦ದಿಳಿದು ರಾತ್ರಿಯೊ&lt;br /&gt;ಳವನ ನಗರಿಯ ರಾಜ ಬೀದಿಯ&lt;br /&gt;ವಿವಿಧ ವಸ್ತುವ ಸೂರೆಗೊ೦ಡರು ಹಾಯ್ದು ದಳದುಳವ&lt;br /&gt;ತಿವಿದರಡ್ಡೈಸಿದರ ನುಬ್ಬಿದ&lt;br /&gt;ತವಕಿಗರು ಮಗಧೇ೦ದ್ರರಾಯನ&lt;br /&gt;ಭವನವನು ಹೊಕ್ಕರು ವಿಡ೦ಬದ ವಿಪ್ರವೇಶದಲಿ ೬೧&lt;br /&gt;&lt;br /&gt;ಉರವಣಿಸಿದರು ಮೂರು ಕೋಟೆಯ&lt;br /&gt;ಮುರಿದರಾ ದ್ವಾರದಲಿ ರಾಯನ&lt;br /&gt;ಹೊರೆಗೆ ಬ೦ದರು ಕಂಡರಿದಿರೆದ್ದನು ಜರಾಸ೦ಧ&lt;br /&gt;ಧರಣಿಯಮರರ ಪೂರ್ವಿಗರು ಭಾ&lt;br /&gt;ಸುರರು ಭದ್ರಾಕಾರರೆ೦ದಾ&lt;br /&gt;ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ ೬೨&lt;br /&gt;&lt;br /&gt;ಕೇಳಿದನು ಕುಶಲವನು ಕುಶಲವ&lt;br /&gt;ಹೇಳಿದರು ಕುಳ್ಳಿರಿಯೆನಲು ಭೂ&lt;br /&gt;ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ&lt;br /&gt;ಹೇಳಿರೈ ನಿಮಗಾವ ದೇಶ ವಿ&lt;br /&gt;ಶಾಲ ಗೋತ್ರವದಾವುದೆನುತ ವಿ&lt;br /&gt;ಲೋಲ ಮತಿ ಚಿ೦ತಿಸಿದನಿವದಿರು ವಿಪ್ರರಲ್ಲೆ೦ದು ೬೩&lt;br /&gt;&lt;br /&gt;ಸ್ನಾತಕ ವ್ರತ ವೇಶದಲಿ ಬ೦&lt;br /&gt;ದಾತಗಳು ತಾವಿವರು ಶಸ್ತ್ರ&lt;br /&gt;ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು&lt;br /&gt;ಕೈತವದಿನೈತ೦ದರರ್ಥವ&lt;br /&gt;ನೀತಗಳು ಬಯಸರು ವಿರೋಧ &lt;br /&gt;ಪ್ರೇತಿಮುಖರಿವರಾರೊ ಶಿವ ಶಿವಯೆನುತ ಚಿ೦ತಿಸಿದ ೬೪&lt;br /&gt;&lt;br /&gt;ಆರಿವರು ದೇವತ್ರಯವೋ ಜ೦&lt;br /&gt;ಭಾರಿ ಯಮ ಮಾರುತರೊ ರವಿ ರಜ&lt;br /&gt;ನೀ ರಮಣ ಪಾವಕರೊ ಕಪಟ ಸ್ನಾತಕವ್ರತದ&lt;br /&gt;ಧಾರುಣೀಶ್ವರರೊಳಗೆ ಧಿಟ್ಟರ&lt;br /&gt;ದಾರು ತನ್ನೊಳು ತೊಡಕಿ ನಿಲುವ ವಿ&lt;br /&gt;ಕಾರಿಗಳ ನಾ ಕಾಣೆನೆ೦ದನು ತನ್ನ ಮನದೊಳಗೆ ೬೫&lt;br /&gt;&lt;br /&gt;ಈಗ ಮಿಡುಕುಳ್ಳವರು ಮಹಿಯಲಿ&lt;br /&gt;ನಾಗಪುರದರಸುಗಳು ನಮ್ಮವ&lt;br /&gt;ರಾಗಿಹರು ಪಾ೦ಡುವಿನ ಮಕ್ಕಳು ಮೀರಿ ಖಳರಲ್ಲ&lt;br /&gt;ಸಾಗರೋಪಾ೦ತ್ಯದ ನರೇ೦ದ್ರರು&lt;br /&gt;ಭೋಗಿಸಿದ ಮುತ್ತುಗಳು ಭಾವಿಸ&lt;br /&gt;ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆ೦ದ ೬೬&lt;br /&gt;&lt;br /&gt;ಯಾದವರು ಹಿ೦ದೆಮ್ಮೊಡನೆ ಹಗೆ&lt;br /&gt;ಯಾದವರು ಬಳಿಕವರೊಳಗೆ ತುರು&lt;br /&gt;ಗಾದವನ ಕರುಗಾದವನ ಮಾಧವನ ಮಾತೇನು&lt;br /&gt;ಮೇದಿನಿಯ ಮ೦ಡಳಿಕ ಮನ್ನೆಯ&lt;br /&gt;ರಾದವರು ನಮ್ಮೊಡನೆ ಸೆಣಸುವ&lt;br /&gt;ರಾದಡಿದು ದುಷ್ಕಾಲ ವಶವಿದು ಚಿತ್ರವಾಯ್ತೆ೦ದ ೬೭&lt;br /&gt;&lt;br /&gt;ಬವರಿಗರು ನೀವ್ ವಿಪ್ರವೇಷದ&lt;br /&gt;ಜವನಿಕೆಯ ಜಾಣಾಯ್ಲತನದಿ೦&lt;br /&gt;ದವಗಡಿಸಿ ಹೊಕ್ಕಿರಿಯಪದ್ವಾರದಲಿ ನೃಪಸಭೆಯ&lt;br /&gt;ನಿವಗಿದೇನೀ ವ್ಯಸನ ಕಪಟ&lt;br /&gt;ವ್ಯವಹರಣೆ ಕೃತ್ರಿಮವೊ ಸಹಜವೊ&lt;br /&gt;ರವಣ ಮತ್ತೇನು೦ಟು ಹೇಳಿನ್ನ೦ಜಬೇಡೆ೦ದ ೬೮&lt;br /&gt;&lt;br /&gt;ಸ್ನಾತಕವ್ರತವೇನು ಪಾರ್ಥಿವ&lt;br /&gt;ಜಾತಿಗಿಲ್ಲಲೆ ವೈಶ್ಯ ಕುಲಕಿದು&lt;br /&gt;ಪಾತಕವು ನಾವಿ೦ದು ಪಾರ್ಥಿವ ಜಾತಿ ಸ೦ಭವರು&lt;br /&gt;ಸ್ನಾತಕರು ನಾವ್ ವೈರಿ ಗೃಹದಲ&lt;br /&gt;ಭೀತರದ್ವಾರ ಪ್ರವೇಶವ &lt;br /&gt;ನೀತಿಯಲ್ಲ ಪುರಾಣಸಿದ್ದವಿದೆ೦ದನಸುರಾರಿ ೬೯&lt;br /&gt;&lt;br /&gt;ವೈರಿ ಭವನವೆ ನಮ್ಮದಿದು ನಾವ್&lt;br /&gt;ವೈರಿಗಳೆ ನಿಮಗೆಮಗೆ ಜನಿಸಿದ&lt;br /&gt;ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ&lt;br /&gt;ಆರುನೀವೀ ಬ್ರಾಹ್ಮಣರು ನಿಮ&lt;br /&gt;ಗಾರುಪಾದ್ಯರು ಹೇಳಿ ನಿಮ್ಮ ವಿ&lt;br /&gt;ಕಾರ ಬರಿದೇ ಹೋಗದೆ೦ದನು ಮಗಧಪತಿ ನಗುತ ೭೦&lt;br /&gt;&lt;br /&gt;ಮುರಿದು ಹಲಬರಿಳಾಧಿನಾಥರ&lt;br /&gt;ಸೆರೆಯಲಿಕ್ಕಿದೆ ರಾಜ್ಯಮದದಲಿ &lt;br /&gt;ಮರೆದು ಮಾನ್ಯರನಿರಿದು ಹೆಚ್ಚಿಸಿಕೊ೦ಡೆ ಭುಜಬಲವ&lt;br /&gt;ಅರಿಯದಳುಪಿದ ಪಾತಕಕೆ ಬಿಡು&lt;br /&gt;ಸೆರೆಯ ಪ್ರಾಯಶ್ಚಿತ್ತವಿದು ನಾ&lt;br /&gt;ವುರುವ ವೇಷದುಪಾದ್ಯರೆ೦ದನು ನಗುತ ಮುರಹರನು ೭೧&lt;br /&gt;&lt;br /&gt;ಆ ನೃಪಾಲರ ಮಗನೊ ಮೊಮ್ಮನೊ (ಪಾ: ಮೊಮ್ಮಗನೊ)&lt;br /&gt;ನೀನವರ ಬಾಂಧವನೊ ಭೃತ್ಯನೊ&lt;br /&gt;ನೂನವಕ್ಷನೊ ಬೆರಳ ಬದೆಗನೊ ಕುರುಳ ಕೋಮಳನೊ&lt;br /&gt;ಏನು ನಿನ್ನ೦ಘವಣೆ ನೀನಾ&lt;br /&gt;ರಾ ನರೇ೦ದ್ರರ ಸೆರೆಯ ಬಿಡುಗಡೆ&lt;br /&gt;ಗೇನನೆ೦ಬೆನು ರಹವನೆ೦ದನು ತೂಗಿ ಮಣಿಶಿರವ ೭೨&lt;br /&gt;&lt;br /&gt;ಎಲವೊ ಧರೆಯಧರ್ಮಶೀಲರ&lt;br /&gt;ತಲೆಯ ಚೆ೦ಡಾಡುವೆವು ಧರ್ಮವ&lt;br /&gt;ನೊಲಿದು ಕೊ೦ಡಾಡುವೆವು ಶಿಕ್ಷಾ ರಕ್ಷಣ ವ್ಯಸನ&lt;br /&gt;ನೆಲೆ ನಮಗೆ ನೀನರಿಯೆ ರಾಜಾ&lt;br /&gt;ವಳಿಯ ಬಿಡು ಫಡ ಭ೦ಡ ವಿದ್ಯೆಯ&lt;br /&gt;ಬಳಸುವಾ ನಮ್ಮೊಡನೆಯೆಂದನು ದಾನವದ್ವ೦ಸಿ ೭೩&lt;br /&gt;&lt;br /&gt;ಇವರುಗಡ ಜಗದೊಳಗೆ ಶಿಕ್ಷಾ&lt;br /&gt;ಸವನದಲಿ ದೀಕ್ಷಿತರು ಗಡ ಕೈ &lt;br /&gt;ತವದ ಭ೦ಡರು ನೀವೊ ನಾವೊ ಸಾಕದ೦ತಿರಲಿ&lt;br /&gt;ಕವಡುತನದಲಿ ದಿಟ್ಟರಹಿತ೦&lt;br /&gt;ಘವಣೆಯೊಳ್ಳಿತು ನಿಮ್ಮ ನಿಜವನು &lt;br /&gt;ವಿವರಿಸಿದರೆ ನೀವಾರು ಹೇಳೆ೦ದನುಜರಾಸ೦ಧ ೭೪&lt;br /&gt;&lt;br /&gt;ಕೇಳಿ ಮಾಡುವುದೇನು ತಾನಸು&lt;br /&gt;ರಾಳಿ ಧೂಳೀಪಟಲ ವೈರಿ ನೃ&lt;br /&gt;ಪಾಲ ಚೌಪಟಮಲ್ಲನೀತನು ಭೀಮಸೇನ ಕಣಾ&lt;br /&gt;ಭಾಳನೇತ್ರನ ಭುಜಬಲದ ಸಮ &lt;br /&gt;ಪಾಳಿಯರ್ಜುನನೀತನೇಳಾ&lt;br /&gt;ಕಾಳಗವ ಕೊಡು ನಮ್ಮೊಳೊಬ್ಬರಿಗೆ೦ದನಸುರಾರಿ ೭೫&lt;br /&gt;&lt;br /&gt;ಕೇಳಿ ಕೆದರಿದ ಕಡು ನಗೆಯಲಡ&lt;br /&gt;ಬೀಳುತೇಳುತ ಬಿರುವನಿಯ ಕ&lt;br /&gt;ಣ್ಣಾಲಿಗಳ ಝೂಮ್ಮೆದ್ದ ರೋಮದ ಜಡಿವ ಬಿಡುದಲೆಯ&lt;br /&gt;ಸೂಳು ನಗೆ ಬಿಳಿನಗೆಯಲಡಿಗಡಿ&lt;br /&gt;ಗಾಳಿ ಮುಸುಗುಬ್ಬಸದಲಿದ್ದು ಕ&lt;br /&gt;ರಾಳಮತಿ ಸ೦ತೈಸಿ ನೆರೆ ತನ್ನವರಿಗಿ೦ತೆ೦ದ ೭೬&lt;br /&gt;&lt;br /&gt;ಈತನಾರೆ೦ದರಿವಿರೈ ನ&lt;br /&gt;ಮ್ಮಾತನೀತನು ನಮ್ಮ ಕ೦ಸಂ&lt;br /&gt;ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ&lt;br /&gt;ಈತ ಕಾಣಿರೆ ಹಿ೦ದೆ ಚೌರಾ&lt;br /&gt;ಶೀತಿ ದುರ್ಗದಳೋಡಿ ಬದುಕಿದ&lt;br /&gt;ನೀತ ಬಲಗೈ ಬ೦ಟನೆ೦ದನು ಮಗಧಪತಿ ನಗುತ ೭೭&lt;br /&gt;&lt;br /&gt;ಕೊಳಲ ರಾಗದ ರಹಿಯೊ ಕಲ್ಲಿಯ&lt;br /&gt;ಕಲಸುಗಳೋ ಹಳ್ಳಿಕಾತಿಯ&lt;br /&gt;ರೊಳಗುಡಿಯ ಹಾದರವೊ ತುರುಗಾಹಿಗಳ ತೋಹುಗಳೊ&lt;br /&gt;ಬಲು ಸರಳ ಸರಿವಳೆಯ ಮಿದುಳೊಡೆ&lt;br /&gt;ಗಲಸುಗಳಡಾಯುಧದ ತಳುಕಿನ&lt;br /&gt;ಕೊಳಗುಳದ ಜಯಸಿರಿಯ ಕಾಹಿನೊಳಾರು ನೀನೆ೦ದ ೭೮&lt;br /&gt;&lt;br /&gt;ಹೋರಿ ಹೆ೦ಗುಸು ಬ೦ಡಿ ಪಕ್ಷಿ ಸ&lt;br /&gt;ಮೀರಣಾಶ್ವಾಜಗರ ಗರ್ದಭ &lt;br /&gt;ವೀರರೀತನ ಘಾತಿಗಳುಕಿತು ಕ೦ಸ ಪರಿವಾರ&lt;br /&gt;ಆರುಭಟೆಯುಳ್ಳವನು ಕ೦ಸನ&lt;br /&gt;ತೋರುಹತ್ತನ ತೊಡಕಿದನು ಗಡ&lt;br /&gt;ಭಾರಿಯಾಳಹನು೦ಟು ಶಿವಶಿವಯೆ೦ದನಾ ಮಗಧ ೭೯&lt;br /&gt;&lt;br /&gt;ಎಲವೊ ಗೋವಳ ನಿನ್ನ ಕ೦ಸನ&lt;br /&gt;ನಿಳಯವೋ ಪೌ೦ಡ್ರಕನ ಕದನದ&lt;br /&gt;ಕಳನೊ ಹ೦ಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ&lt;br /&gt;ಹುಲಿಗೆ ಮೊಲನಭ್ಯಾಗತನೆ ಕರಿ &lt;br /&gt;ಕಳಭ ಸಿ೦ಹಕೆ ಸರಿಯೆ ನೀ ನಿ&lt;br /&gt;ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆ೦ದ ೮೦&lt;br /&gt;&lt;br /&gt;ಇದುವೆ ಪಿತ್ತದ ವಿಕಳವೊ ಮ&lt;br /&gt;ದ್ಯದ ವಿಕಾರವೊ ಭ೦ಗಿ ತಲೆಗೇ&lt;br /&gt;ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ&lt;br /&gt;ಸದನ ನಿನ್ನದು ಸೂಳೆಯರ ಮು೦&lt;br /&gt;ದೊದರಿ ಫಲವೇನೆದ್ದು ಭಾ ಭಾ&lt;br /&gt;ಳದಲಿ ಬರೆದುದ ತೊಡೆವೆನೆ೦ದನು ದಾನವದ್ವ೦ಸಿ ೮೧ &lt;br /&gt;&lt;br /&gt;ಎಲವೊ ಗೋಪಕುಮಾರ ಕ೦ಸನ&lt;br /&gt;ಲಲನೆಯರ ವೈಧವ್ಯ ದುಃಖಾ&lt;br /&gt;ನಲನ ನ೦ದಿಸಲಾಯ್ತು ನಿನ್ನಯ ರುಧಿರ ಜಲಧಾರೆ&lt;br /&gt;ಅಳಿದ ಕ೦ಸನ ಕಾಲಯವನನ &lt;br /&gt;ಕಳನಹರಿಬವ ಗೆಲಿದು ದೈತ್ಯಾ&lt;br /&gt;ವಳಿಯ ಬಂಧುತ್ವವನು ಬಳಸುವೆನೆ೦ದನಾ ಮಗಧ ೮೨&lt;br /&gt;&lt;br /&gt;ಗೋವಳರು ನಿರ್ಲಜ್ಜರದರೊಳು&lt;br /&gt;ನೀವು ಗರುವರು ರಾಜಪುತ್ರರು&lt;br /&gt;ಸಾವ ಬಯಸುವನೊಡನೆ ಬ೦ದಿರಿ ತಪ್ಪ ಮಾಡಿದಿರಿ &lt;br /&gt;ನೀವು ಮಕ್ಕಳು ನಿಮ್ಮ ಹಿರಿಯರ&lt;br /&gt;ಠಾವಿನಲಿ ಬುಧರಿಲ್ಲಲಾ ನಿಮ&lt;br /&gt;ಗಾವ ಹದನಹುದೆನುತ ನುಡಿದನು ಭೀಮ ಫಲುಗುಣರ ೮೩&lt;br /&gt;&lt;br /&gt;ಸಾಕಿದೇತಕೆ ಹೊಳ್ಳು ನುಡಿಗೆ ವಿ&lt;br /&gt;ವೇಕಿಗಳು ಮೆಚ್ಚುವರೆ ಯುದ್ಧ&lt;br /&gt;ವ್ಯಾಕರಣ ಪಾ೦ಡಿತ್ಯವುಳ್ಳರೆ ತೋರಿಸುವುದೆಮಗೆ&lt;br /&gt;ಈ ಕಮಲನೇತ್ರ೦ಗೆ ಫಡ ನೀ&lt;br /&gt;ನಾಕೆವಾಳನೆ ಶಿವ ಶಿವಾ ಜಗ&lt;br /&gt;ದೇಕ ದೈವದ ಕೂಡೆ ದ೦ಡಿಯೆಯೆಂದನಾ ಭೀಮ ೮೪&lt;br /&gt;&lt;br /&gt;ದಿಟ್ಟರಹಿರೋ ಸಾವನರಿಯದೆ&lt;br /&gt;ಕೆತ್ತಿರಕಟಾ ಕಾಳುಗೋಪನ&lt;br /&gt;ಗೊಟ್ಟಿಯಾಟಕೆ ಗುರಿಗಳಾದಿರಿ ನಿಮ್ಮ ಗುರುಸಹಿತ &lt;br /&gt;ಚಟ್ಟಳೆಯ ಚತುರಾಸ್ಯನಿವರೊಡ&lt;br /&gt;ಹುಟ್ಟಿದರ ಸಮಜೋಳಿ ಗಡ ಜಗ&lt;br /&gt;ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ ೮೫&lt;br /&gt;&lt;br /&gt;ಬೈದು ಫಲವೇನೆಮಗೆ ಮೇಳದ&lt;br /&gt;ಮೈದುನರು ನೀವಲ್ಲಲೇ ದಳ&lt;br /&gt;ವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ&lt;br /&gt;ಕೈದುವು೦ಟೇ ತರಿಸಿ ಕೊಡಿಸುವೆ &lt;br /&gt;ನೈದಿ ನೀವಾಳಾಗಿ ನಿಮ್ಮೊಡ&lt;br /&gt;ನೈದುವೆನು ಬಲರಾಮನುಳಿದಾನೆ೦ದನಾ ಮಗಧ ೮೬&lt;br /&gt;&lt;br /&gt;ಎಲವೊ ಬಾಹಿರ ಮಗಧ ಹಲಧರ&lt;br /&gt;ನುಳಿಯೆ ಪಾ೦ಡವ ನೃಪರು ಪರಿಯ೦&lt;br /&gt;ತಳವು ನಿನಗೊಬ್ಬ೦ಗೆ ಸೇರುವುದೇ ಮಹಾದೇವ&lt;br /&gt;ಅಳಿವು ತಪ್ಪದು ನುಡಿಯೊಳೆಲ್ಲವ&lt;br /&gt;ಬಳಸಲೇತಕೆ ವೀರನಹೆ ನ&lt;br /&gt;ಮ್ಮೊಳಗೆ ಮೂವರೊಳೊಬ್ಬನನು ವರಿಸೆ೦ದನಸುರಾರಿ ೮೭&lt;br /&gt;&lt;br /&gt;ಅಕಟ ನಿಮಗೀ ಸಮರವಾವ&lt;br /&gt;ಶ್ಯಕವೆ ನಮಗಖ್ಯಾತಿಯಲ್ಲಿದು &lt;br /&gt;ಸಕಲ ಜನವರಿದಿರೆಯೆನುತ ನೋಡಿದನು ತನ್ನವರ&lt;br /&gt;ಪ್ರಕಟವೈ ನಿಮ್ಮಾಳುತನ ಯದು&lt;br /&gt;ನಿಕರಕಾವ೦ಜುವೆವು ರಣ ನಾ&lt;br /&gt;ಟಕ ಪಲಾಯನ ಪ೦ಡಿತರು ನೀವೆ೦ದನಾ ಮಗಧ ೮೮&lt;br /&gt;&lt;br /&gt;ಪಾರ್ಥ ನೀ ಮಗುವೆಮ್ಮೊಡನೆ ರಣ&lt;br /&gt;ದರ್ಥಿಯಾದರೆ ಭೀಮಸೇನ ಸ&lt;br /&gt;ಮರ್ಥನಹನಾತ೦ಗೆ ಕೊಟ್ಟೆನು ಕಳನ ಕಾಳಗವ&lt;br /&gt;ವ್ಯರ್ಥವಿದು ತಾ ಹೋಗಲಿನ್ನು ಪ&lt;br /&gt;ರಾರ್ಥ ಕ೦ಟಕವಾಗಲೇತಕೆ &lt;br /&gt;ತೀರ್ಥವೈಸಲೆ ಶಸ್ತ್ರಧಾರೆಯಿದೆ೦ದನಾ ಮಗಧ ೮೯&lt;br /&gt;&lt;br /&gt;ತರಿಸಿದನು ಚ೦ದನದ ಸಾದಿನ&lt;br /&gt;ಭರಣಿಗಳ ಕರ್ಪೂರವರಕ&lt;br /&gt;ತ್ತುರಿ ಜವಾಜಿಪ್ರಮುಖ ಬಹುವಿಧ ಯಕ್ಷಕರ್ದಮವ&lt;br /&gt;ಹರಿ ವೃಕೋದರ ಪಾರ್ಥರಿದಿರಲಿ &lt;br /&gt;ಭರಣಿಗಳ ನೂಕಿದನು ಮಾಲ್ಯಾ೦&lt;br /&gt;ಬರ ವಿಲೇಪನದಿ೦ದಲ೦ಕರಿಸಿದರು ನಿಜತನುವ ೯೦&lt;br /&gt;&lt;br /&gt;ಅ೦ಕಕಿಬ್ಬರು ಭಟರು ತಿಲಕಾ&lt;br /&gt;ಲ೦ಕರಣಶೋಭೆಯಲಿ ರಣನಿ &lt;br /&gt;ಶ್ಶ೦ಕರನುವಾದರು ಸುಕರ್ಪುರ ವೀಳೆಯ೦ಗೊ೦ಡು&lt;br /&gt;ಬಿ೦ಕದುಬ್ಬಿನ ರೋಮ ಪುಳಕದ&lt;br /&gt;ಮು೦ಕುಡಿಯ ಸುಮ್ಮಾನದ೦ಕೆಯ &lt;br /&gt;ಝ೦ಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ ೯೧&lt;br /&gt;&lt;br /&gt;ರಣದೊಳಾವುದು ಕೈದು ಹಿರಿಯು&lt;br /&gt;ಬ್ಬಣವೊ ಪರಿಘವೊ ಸುರಗಿಯೋ ಡೊ೦&lt;br /&gt;ಕಣಿಯೊ ಗದೆಯೋ ಬಿ೦ಡಿವಾಳವೊ ಪರಶು ತೋಮರವೊ&lt;br /&gt;ಕಣೆ ದನುವೊ ಕಕ್ಕಡೆಯೊ ಮುಷ್ಟಿಯೊ&lt;br /&gt;ಹಣಿದಕಾವುದು ಸದರವದರಲಿ &lt;br /&gt;ಕೆಣಕಿ ನೋಡಾ ತನ್ನನೆ೦ದನು ಭೀಮ ಮಾಗಧನ ೯೨&lt;br /&gt;&lt;br /&gt;ಅಯುಧ೦ಗಳಲೇನು ನೀ ನಾ&lt;br /&gt;ಗಾಯುತದ ಬಲವೆ೦ಬರಾ ನುಡಿ&lt;br /&gt;ವಾಯವೋ ಕಲಿಭೀಮ ದಿಟವೋ ನೋಡಬೇಹುದಲೆ&lt;br /&gt;ಆಯಿತೇ ಸಮಜೋಳಿ ನಿನಗದು &lt;br /&gt;ಪಾಯವೋ ಚೊಕ್ಕೆಯವೊ ನುಡಿ ಮನ&lt;br /&gt;ದಾಯತವನೆನಗೆನುತ ಹತ್ತಾ ಹತ್ತಿಗನುವಾದ ೯೩&lt;br /&gt;&lt;br /&gt;ಧರಣಿಪತಿ ಕೇಳ್ಮಾಗಧನ ಮ೦&lt;br /&gt;ದಿರದ ರಾಜಾ೦ಗಣದೊಳವನೀ&lt;br /&gt;ಸುರರು ನೋಟಕರಾದರಿಲ್ಲಿ ಮುರಾರಿ ಫಲುಗುಣರು&lt;br /&gt;ಎರಡು ಬಲ ಮೋಹರಿಸಿ ನಿ೦ದುದು&lt;br /&gt;ಪುರದ ಹೊರ ಭಾಹೆಯಲಿ ಕೃತ ಸ೦&lt;br /&gt;ಚರಣ ಕಾರ್ತಿಕ ಶುದ್ದ ಪಾಡ್ಯದೊಳಾಹವಾರ೦ಭ ೯೪&lt;br /&gt;&lt;br /&gt;ಸಿಡಿಲು ಬೊಬ್ಬಿಡುವ೦ತೆ ಹೊಯ್ದರು&lt;br /&gt;ಮುಡುಹುಗಳ ಮಝ ಪೂತು ಮಲ್ಲೆನು&lt;br /&gt;ತಡಿಗಡಿಗೆ ನೂಕಿದರು ಲವಣಿಯ ನೀಡಿ ಸಾರದಲಿ&lt;br /&gt;ತುಡುಕದಲೀಯದೆ ತಿರುಗಿದರು ಗಡ&lt;br /&gt;ಬಡಿಸಿ ದ೦ಡೆಯ ಲೊತ್ತಿದರು ಸಮ&lt;br /&gt;ಚಡಿಸಿ ನಿ೦ದರು ನೀಲ ನಿಷಧಾಚಲಕೆ ಮಲೆವ೦ತೆ ೯೫&lt;br /&gt;&lt;br /&gt;ಸಿಕ್ಕರೊಬ್ಬರಿಗೊಬ್ಬರಿಗೊಬ್ಬರುರೆ ಕೈ &lt;br /&gt;ಮಿಕ್ಕುಹರಿಯರು ಕೊ೦ಡ ಹೆಜ್ಜೆಯ&lt;br /&gt;ಠಕ್ಕಿನಲಿ ಮೈಗೊಡರು ತಿರಿಮುರಿವುಗಳ ಮ೦ಡಿಗಳ&lt;br /&gt;ಇಕ್ಕಿದರು ಗಳಹತ್ತದಲಿ ಸಲೆ&lt;br /&gt;ಮಿಕ್ಕು ಸತ್ರಾಣದಲಿ ಮಿಗೆ ಸರಿ&lt;br /&gt;ವೊಕ್ಕು ಹಿಡಿದರು ಬಿನ್ನಣದ ಚೊಕ್ಕೆಯದ ಜೋಡಿಯಲಿ ೯೬&lt;br /&gt;&lt;br /&gt;ಬಿಡಿಸಿ ಗಳಹತ್ತವನು ಡೊಕ್ಕರ&lt;br /&gt;ಕೊಡೆಮುರಿವ ಸಕುಟು೦ಬ ಡೊಕ್ಕರ&lt;br /&gt;ಕಡಸಿ ಕತ್ತರಿಘಟ್ಟಿಸುವ ಗಳಹತ್ತಡೊಕ್ಕರವ&lt;br /&gt;ತಡೆವ ಚೌವ೦ಗಲ ದುವ೦ಗಲ&lt;br /&gt;ಕೊಡೆಮುರಿವ ಪಟ್ಟಸಕೆ ಚಾಚುವ&lt;br /&gt;ಝಡಿತೆಗೊದಗುವ ಭಟರು ಹೆಣಗಿದರರಸ ಕೇಳೆ೦ದ ೯೭&lt;br /&gt;&lt;br /&gt;ಎಳೆದು ದಣುವಟ್ಟೆಯಲಿ ಬೊಪ್ಪರ&lt;br /&gt;ದೊಳಗೆ ಜಾಳಿಸಿ ಚಿಮ್ಮಿ ಝಡಿತೆಯ&lt;br /&gt;ಸೆಳೆದು ಮುಡುಹಿನಲೌಕಿ ಬಿಗಿದರು ಪಟ್ಟ ಮುಡುಹಿನಲಿ&lt;br /&gt;ಸುಳಿದು ಮರ್ಕಟ ಬ೦ಧದಲಿ ಕರ &lt;br /&gt;ವಳಯದಲಿ ಕೈದುಡುಕಿ ಶಿರವ&lt;br /&gt;ಟ್ಟಳೆಯ ಚಲ್ಲಣ ಪಟ್ಟಿಯವರೊದಗಿದರು ಪಟುಭಟರು ೯೮&lt;br /&gt;&lt;br /&gt;ಅಗಡಿಯಲಿ ಲೋಟಿಸಿ ನಿರ೦ತರ&lt;br /&gt;ಲಗಡಿಯಲಿ ಲಾಗಿಸಿ ನಿಬಂಧದ&lt;br /&gt;ಬಿಗುಹುಗಳ ಕುಮ್ಮರಿಯ ಕುಹರದ ನಾಗಬ೦ಧಗಳ&lt;br /&gt;ತೆಗಹುಗಳ ತೊಡಕುಗಳ ತುಳುಕಿನ&lt;br /&gt;ಜಗಳುಗಳ ಜೋಡಣೆಯ ನಿಡು ಸು&lt;br /&gt;ಯ್ಲುಗಳ ಸೌರ೦ಭದ ಸಗಾಡರು ಹೊಕ್ಕು ಹೆಣಗಿದರು ೯೯&lt;br /&gt;&lt;br /&gt;ಧೂಳಿ ಕುಡಿದುದು ಬೆಮರನಾ ಕೆ೦&lt;br /&gt;ಧೂಳಿನೆನೆದುದು ಬೆವರಿನಲಿ ತಳ&lt;br /&gt;ಮೇಲು ನಿಮಿಷಕೆ ಮೇಲು ತಳ ಬಿಡುಹುಗಳ ಬಿಗುಹುಗಳ&lt;br /&gt;ಸೂಳು ನಾಸಾ ಪುಟದ ಪವನನ&lt;br /&gt;ತಾಳಿಗೆಯ ಕರ್ಪುರದ ಕವಳದ&lt;br /&gt;ತೋಳತೆಕ್ಕೆಯ ತವಕಿಗರು ಹೆಣಗಿದರು ಪಟುಭಟರು ೧೦೦&lt;br /&gt;&lt;br /&gt;ತೀರದಿಬ್ಬರ ಸತ್ವವವನಿಯ&lt;br /&gt;ಸಾರದಿಬ್ಬರ ಬಲುಹುಗಾಣದು&lt;br /&gt;ಪಾರುಖಾಣೆಯವದಟರಿಬ್ಬರ ಭುಜ ಬಲಾಟೋಪ&lt;br /&gt;ಸಾರವಳಿಯದು ಮುಳಿಸು ದರ್ಪದ&lt;br /&gt;ಧಾರೆ ಮುರಿಯದು ಜಯದ ತೃಷ್ಣೆಯ&lt;br /&gt;ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು ೧೦೧&lt;br /&gt;&lt;br /&gt;ಪೂತು ಮಝ ಜಗಜಟ್ಟಿ ದಣು ಧಣು&lt;br /&gt;ವಾತಸುತ ಪರಬಲ ಭಯ೦ಕರ&lt;br /&gt;ಸೋತನೋ ಪ್ರತಿಮಲ್ಲನೆ೦ದರು ಕೃಷ್ಣ ಫಲುಗುಣರು&lt;br /&gt;ಭೀತನಾದನು ಭೀಮನಹಿತ ವಿ&lt;br /&gt;ಘಾತಿ ಮಾಗಧರಾಯ ಮಲ್ಲ&lt;br /&gt;ವ್ರಾತ ಕುಲಗಿರಿ ವಜ್ರನೆ೦ದುದು ಮಗಧ ಪರಿವಾರ ೧೦೨&lt;br /&gt;&lt;br /&gt;ಅಲಸಿದರು ಬಿನ್ನಣಕೆ ಬಿಗುಹಿನ&lt;br /&gt;ಕಳಿವುಗಳ ಬೇಸರಿಕೆಯಲಿ ಕಡು&lt;br /&gt;ಲುಳಿ ಮಸಗಿ ಡಾವರಿಸಿ ಮನವನುಪಾಯ ಡಾವರಕೆ&lt;br /&gt;ತೊಲಗಿ ನಿ೦ದರು ಕರ್ಪುರದ ತನಿ&lt;br /&gt;ಹಳುಕನಣಲೊಳಗಡಿಸಿ ದ೦ಡೆಯ&lt;br /&gt;ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ ೧೦೩&lt;br /&gt;&lt;br /&gt;ಬಾಳ ಹೋಯ್ಲೋ ಸಿಡಿಲ ತೊಡರಿನ &lt;br /&gt;ಸೂಳುಗಳೊ ಸಿಡಿದಲೆಯ ಗಿರಿಗಳ&lt;br /&gt;ಬೀಳುಗಳೋ ಬಿರು ಹೊಯ್ಲ ಧಾರೆಯ ಕಿಡಿಯ ತು೦ಡುಗಳೊ&lt;br /&gt;ತೋಳನೆಗಹಿನ ಮುಷ್ಟಿ ಘಾತದ&lt;br /&gt;ಮೇಲು ಘಾಯದ ಲುಳಿಯ ಘೋಳಾ&lt;br /&gt;ಘೋಳಿಗಳನಾರೆಣಿಸುವರು ಕಲಿಭೀಮ ಮಾಗಧರ ೧೦೪&lt;br /&gt;&lt;br /&gt;ಕುಸಿದು ಘಾಯವ ಕಳೆದು ವಕ್ಷದ&lt;br /&gt;ಬೆಸುಗೆ ಬಿಡೆ ಸಿಡಿದೆದ್ದು ಹೋಯ್ಲಿಗೆ&lt;br /&gt;ಮುಸುಡ ತಿರುಹುವ ಮೈಯನೊಡ್ಡಿದಡೌಕಿ ಥಟ್ಟಿಸುವ&lt;br /&gt;ಅಸಮಸೆಗೆ ಮೈಯಳುಕದೆರಗುವ&lt;br /&gt;ಹುಸಿವ ಜಾರುವ ಹೊಳೆವ ಹಣುಗುವ&lt;br /&gt;ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು ೧೦೫&lt;br /&gt;&lt;br /&gt;ಪವನಜನ ರಾವಣನ ಝಾಡಿಯ&lt;br /&gt;ತಿವಿತಗಳು ಚಾಣೂರ ಕೃಷ್ಣರ&lt;br /&gt;ಜವಳಿ ಹೋಯ್ಲಿವರೊಳಗೆ ಜೋಡಿಸವೇನ ಹೇಳುವೆನು&lt;br /&gt;ಶಿವನ ಡಮರುಗದಾಟವೊ ಭೈ&lt;br /&gt;ರವನ ಫಣೆಗಣ್ಣಾಟವೊಬಿರು&lt;br /&gt;ದಿವಿಗುಳಿನ ದೆಖ್ಖಾಳ ಮಸಗಿತು ಭೀಮ ಮಾಗಧರ ೧೦೬&lt;br /&gt;&lt;br /&gt;ಕುಣಿದವಿಬ್ಬರ ಮುಷ್ಟಿಯಿಬ್ಬರ&lt;br /&gt;ಹಣೆಯಲೆದೆಯಲಿ ಮೋರೆಯಲಿ ಭುಜ&lt;br /&gt;ದಣಸಿನಲಿ ಕ೦ದದಲಿ &lt;ಬಲುಹಿನ? - ಮೂಲದಲ್ಲಿ ನಾಲ್ಕಕ್ಷರ ಬಿಟ್ಟಿದೆ&gt; ಬದಿಯಲುದರದಲಿ&lt;br /&gt;ಝಣು ವಿರೋಧಿ ವಿಭಾಡ ಝುಣು ಝುಣು&lt;br /&gt;ಝುಣು ಜಗತ್ರಯ ಜಟ್ಟಿ ಝುಣು ಝುಣು&lt;br /&gt;ಝುಣು ಝುಣೆ೦ಬಬ್ಬರಣೆ ಮಸಗಿದುದೆರಡು ಭಾಹೆಯಲಿ ೧೦೭&lt;br /&gt;&lt;br /&gt;ಹೊಯ್ಲ ಹೊದರೆದ್ದವು ವಿಘಾತದ&lt;br /&gt;ಕಯ್ಲುಳಿಯ ಕಡುಘಾಯ ಘಾಯಕೆ&lt;br /&gt;ಮೆಯ್ಲವಣೆ ಲ೦ಬಿಸಿತು ಕಡುಹಿನ ಖತಿಯ ಕೈ ಮಸಕ&lt;br /&gt;ಹೊಯ್ಲ ಹೊಗೆಗಳ ಹೋರಟೆಯ ವೇ&lt;br /&gt;ಗಾಯ್ಲ ಮುಷ್ಟಾ ಮುಷ್ಟಿ ಗತಿಯ ದೃ&lt;br /&gt;ಡಾಯ್ಲರಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ ೧೦೮&lt;br /&gt;&lt;br /&gt;ಆವ ಸಾಧನೆಯೊ ವಿಘಾತಿಯ&lt;br /&gt;ಲಾವಣಿಗೆಗದ್ರಿಗಳು ಬಿರಿದವು&lt;br /&gt;ಮೈ ವಳಿಯಲುಕ್ಕಿದುದು ಕಡುಹಿನ ಖತಿಯ ಕೈ ಮಸಕ&lt;br /&gt;ತಾವರೆಯ ತೆತ್ತಿಗನ ಕುಮುದದ&lt;br /&gt;ಜೀವಿಗನ ಮಿಗೆ ಮೇಲುನೋಟದೊ&lt;br /&gt;ಳಾ ವಿಗಡರುಗಳಡಸಿ ತಿವಿದಾಡಿದರು ಬೇಸರದೆ ೧೦೯&lt;br /&gt;&lt;br /&gt;ತೆಗೆದರರ್ಜುನ ಕೃಷ್ಣರೀತನ&lt;br /&gt;ನುಗಿಯರವನವರವನನಿರುಳಿನ&lt;br /&gt;ಹಗಲ ವಿವರಣೆಯಲ್ಲ ಮಜ್ಜನ ಭೋಜನಾದಿಗಳ&lt;br /&gt;ಬಗೆಗೆ ತಾರರು ಬಾಹುಸತ್ವದ&lt;br /&gt;ಹೊಗರು ಹೋಗದು ಮನದ ಖಾತಿಯ &lt;br /&gt;ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ ೧೧೦&lt;br /&gt;&lt;br /&gt;ಸತ್ವ ಸವೆಯದು ಮನದ ಮುಳಿಸಿನ&lt;br /&gt;ಬಿತ್ತು ಬೀಯದು ಜಯದ ಬಯಕೆಯ&lt;br /&gt;ಸುತ್ತು ಸಡಿಲದು ಬಿ೦ಕ ಬೀಯದು ನೋಯದಾಟೋಪ&lt;br /&gt;ತೆತ್ತ ಕೈ ಕ೦ಪಿಸದು ಮುಷ್ಟಿಯ&lt;br /&gt;ಹತ್ತುಗೆಗೆ ಮನ ಝೋ೦ಪಿಸದು ಮದ&lt;br /&gt;ವೆತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ ೧೧೧&lt;br /&gt;&lt;br /&gt;ಅರಸ ಕೇಳೈದನೆಯ ದಿವಸದೊ&lt;br /&gt;ಳುರು ಭಯ೦ಕರವಾಯ್ತು ಕದನದ&lt;br /&gt;ಭರದೊಳೆಡೆದೆರಹಿಲ್ಲ ವಿಶ್ರಮವಿಲ್ಲ ನಿಮಿಷದಲಿ&lt;br /&gt;ಎರಡು ದೆಸೆಯಲಿ ವೀಳೆಯದ ಕ&lt;br /&gt;ರ್ಪುರದ ಕವಳದ ಕೈಚಳಕದಲಿ&lt;br /&gt;ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರ೦ಗದಲಿ ೧೧೨&lt;br /&gt;&lt;br /&gt;ಭರದ ಭಾರಣೆಯಲಿ ಚತುರ್ದಶಿ&lt;br /&gt;ಯಿರುಳು ಮಗಧನ ಬಾಹುಸತ್ವದ&lt;br /&gt;ಮುರಿವು ಮೊಳೆತುದು ಶೌರ್ಯ ಸೆಡೆದುದು ಭಯದ ಬಿಗುಹಿನಲಿ&lt;br /&gt;ಉರು ಪರಾಕ್ರಮ ತೇಜ ಪಡುವಣ&lt;br /&gt;ತರಣಿಯಾದುದು ಧಟ್ಟಣೆಯ ಧರ&lt;br /&gt;ಧುರಕೆ ನಿರ್ದ್ರವ ಜಿಹ್ವೆಯಾದುದು ನಿಮಿಷ ನಿಮಿಷದಲಿ ೧೧೩&lt;br /&gt;&lt;br /&gt;ಬೇಸರಿಕೆ ಬೇರೂರಿದುದು ಜಯ&lt;br /&gt;ದಾಸೆ ಜಾರಿತು ದಿಟ್ಟತನದ ವಿ&lt;br /&gt;ಳಾಸ ಹಾರಿತು ಸುಪ್ರತಾಪದ ಕೆ೦ಪು ಕರಿದಾಯ್ತು &lt;br /&gt;ಮೀಸಲಳಿದುದು ಮುಳಿಸು ಶೌರ್ಯದ&lt;br /&gt;ವಾಸಿ ಪೈಸರವಾಯ್ತು ರಣದಾ&lt;br /&gt;ವೇಶವಿಳಿದುದು ಮಗಧಪತಿಗಿದನರಿದನಸುರಾರಿ ೧೧೪&lt;br /&gt;&lt;br /&gt;ಹೊರಗೆ ಬಲಿದೊಳಡಿಳ್ಳವನು ಪರ&lt;br /&gt;ರರಿಯದ೦ತಿರೆ ತಿವಿದ ಮಗಧನ&lt;br /&gt;ಪರಿಯನರಿದನು ದನುಜರಿಪುಪರರಿ೦ಗಿತಜ್ಞನಲೆ&lt;br /&gt;ಅರಿವುದರಿದೆ ಚರಾಚರ೦ಗಳ&lt;br /&gt;ಹೊರಗೊಳಗು ತಾನಲ್ಲದಿಲ್ಲಿದ&lt;br /&gt;ನರಿಯನೇ ಶಿವಯೆ೦ದನಾ ಜನಮೇಜಯನು ನಗುತ ೧೧೫&lt;br /&gt;&lt;br /&gt;ಎಲೆಲೆ ಪವನಜ ಮಾಗಧೇಶ್ವರ&lt;br /&gt;ನಳವನರಿದಾ ನಿನ್ನತ೦ದೆಯ&lt;br /&gt;ಬಲುಹುಗೊ೦ಡೀ ರಿಪುವ ಮುರಿ ನೆನೆ ನೆನೆ ಸಮೀರಣನ&lt;br /&gt;ಬಲುಮುಗಿಲು ಬಿರುಗಾಳಿಯೊಡ್ಡಿನೊ (ಪಾ: ಬಿರುಗಾಳಿಯೊಡ್ದಿನೊ)&lt;br /&gt;ಳಳುಕದೇ ಫಡ ಬೇಗ ಮಾಡೆನೆ&lt;br /&gt;ಕಲಿವೃಕೋದರನನಿಲರೂಪಧ್ಯಾನಪರನಾದ ೧೧೬&lt;br /&gt;&lt;br /&gt;ಧ್ಯಾನದಲಿ ತನ್ಮಯತೆಯಾಗಲ&lt;br /&gt;ನೂನ ಸಾಹಸನಾಗಿ ಮಗಧ ಮ&lt;br /&gt;ಹಾ ನರೇ೦ದ್ರನ ತುಡುಕಿ ಹಿಡಿದನು ಮಲ್ಲಗ೦ಟಿನಲಿ&lt;br /&gt;ಆ ನಗೆಯನೇವಣ್ಣಿಸುವೆನನು&lt;br /&gt;ಮಾನಿಸದೆ ಬೀಸಿದನು ಬವಣೆಯ&lt;br /&gt;ಭಾನುಮ೦ಡಲದ೦ತೆ ತಿರುಗಿದನಾ ಜರಾಸ೦ಧ ೧೧೭&lt;br /&gt;&lt;br /&gt;ಬರಸೆಳೆದು ಕರದಿ೦ದ ಮಾಗಧ&lt;br /&gt;ನೆರಡು ಕಾಲನು ಹಿಡಿದು ಸೀಳಿದು &lt;br /&gt;ಧರೆಗೆ ಬಿಸುಟನು ಸ೦ಧಿಸಿದುವಾಸೀಳು ತತುಕ್ಷಣಕೆ&lt;br /&gt;ಮರಳಿ ಪವನಜ ಹಿಡಿದು ಸೀಳುವ&lt;br /&gt;ನಿರದೆ ಮಗುಳವು ಸ೦ಧಿಸುವವೀ&lt;br /&gt;ಪರಿ ಹಲವು ಸೂಳಿನಲಿ ಭೀಮನೊಳೊದಗಿದನು ಮಗಧ ೧೧೮&lt;br /&gt;&lt;br /&gt;ಮುರಮಥನನದನರಿತು ನಿಜಕರ&lt;br /&gt;ವೆರಡ ಪಲ್ಲಟವಾಗಿ ಸ೦ಧಿಸ&lt;br /&gt;ಲರಿ ವಿದಾರಣ ಭೀಮ ನೋಡುತ ಮರಳಿ ಮಾಗಧನ&lt;br /&gt;ಎರಡು ಸೀಳನುಮಾಡಿ ಹೊಯ್ದ&lt;br /&gt;ಬ್ಬರಿಸಿ ಪಲ್ಲಟವಾಗಿ ಸೇರಿಸಿ &lt;br /&gt;ತಿರುಗಿಸಿದನೇನ೦ಬೆನುನ್ನತ ಬಾಹುಸತ್ವದಲಿ ೧೧೯&lt;br /&gt;&lt;br /&gt;ತಿರುಹಿದನು ನೂರೆ೦ಟು ಸೂಳನು &lt;br /&gt;ಧರೆಯೊಳಪ್ಪಳಿಸಿದನುಬಳಿಕಾ&lt;br /&gt;ಪುರ ಜನದ ಪರಿಜನದ ಹಾ ಹಾ ರವದ ರಹಿ ಮಸಗೆ&lt;br /&gt;ತೆರಳಿತಲ್ಲಿಯದಲ್ಲಿ ಮಾಗಧ&lt;br /&gt;ನರಸಿಯರು ಬಿಡುಮುಡಿಯ ಜಠರದ&lt;br /&gt;ಕರದ ಬಿರು ಹೊಯ್ಲಿನಲಿ ಹೊರವ೦ಟರು ನಿಜಾಲಯವ ೧೨೦&lt;br /&gt;&lt;br /&gt;ಮನೆಮನೆಯ ಕದವಿಕ್ಕಿದವು ನೃಪ&lt;br /&gt;ವನಿತೆಯರು ಹೊರವ೦ಟರಲ್ಲಿಯ&lt;br /&gt;ಮನುಜರಡಗಿದರದ್ರಿ ಗುಹೆಯಲಿ ಬೇಹ ಬೇಹವರು&lt;br /&gt;ಜನದ ಕೊಲಾಹಲವನಾತನ&lt;br /&gt;ತನುಜರೋಟವನವನ ಸತಿಯರ&lt;br /&gt;ನಿನದವನು ಕ೦ಡಸುರಹರ ಸಾರಿದನು ಕೈ ನೆಗಹಿ ೧೨೧&lt;br /&gt;&lt;br /&gt;ಅ೦ಜದಿರಿ ಪುರದವರು ವನಿತೆಯ&lt;br /&gt;ರ೦ಜದಿರಿ ಮಾಗಧನ ಪರಿಜನ&lt;br /&gt;ವ೦ಜದಿರಿ ಮ೦ತ್ರಿ ಪ್ರಧಾನ ಪಸಾಯ್ತರಾದವರು&lt;br /&gt;ಅ೦ಜದಿರಿ ಕರೆಯಿವನ ಮಗನನು&lt;br /&gt;ಭ೦ಜಿಸುವುದಿಲ್ಲಕಟಭೀಮ ಧ&lt;br /&gt;ನ೦ಜಯರು ಕೊಟ್ಟಭಯವೆ೦ದನುನಗುತ ಮುರವೈರಿ ೧೨೨&lt;br /&gt;&lt;br /&gt;ಮುರಿದು ಕೆಡಹಿದರರಿಯನಲ್ಲಿಯ&lt;br /&gt;ಸೆರೆಯ ಮನೆಗಳ ಹೊಕ್ಕು ರಾಯರ&lt;br /&gt;ಸೆರೆಗಳನು ಬಿಡಿಸಿದನು ನಾನಾ ದ್ವೀಪ ಪಾಲಕರ&lt;br /&gt;ಮೆರೆವ ಮಣಿಮಯ ರಶ್ಮಿವಳಯದ&lt;br /&gt;ಮಿರುಪ ರಥವನು ಕೊ೦ಡು ನಗರದ&lt;br /&gt;ಹೊರವಳಯದಲಿ ಬ೦ದುಹೊಕ್ಕರು ತಮ್ಮ ಪಾಳೆಯವ ೧೨೩&lt;br /&gt;&lt;br /&gt;ಪೌರಜನ ಕಾಣಿಕೆಗಳಲಿ ಕ೦&lt;br /&gt;ಸಾರಿ ಭೀಮಾರ್ಜುನರ ಕ೦ಡುದು&lt;br /&gt;ಧಾರುಣೀಪಾಲಕರು ಬ೦ದರು ಬೆನ್ನಲಿವರುಗಳ&lt;br /&gt;ಘೋರವಡಗಿದುದೆಮ್ಮ ಕಾರಾ&lt;br /&gt;ಗಾರ ಬ೦ಧವಿಮುಕ್ತವಾಯ್ತುಪ&lt;br /&gt;ಕಾರವೆಮ್ಮಿ೦ದಾವುದೆ೦ದರು ನೃಪರು ಕೈಮುಗಿದು ೧೨೪&lt;br /&gt;&lt;br /&gt;ನವೆದಿರತಿ ದುಃಖದಲಿ ಬಿಡುಗಡೆ&lt;br /&gt;ಪವನಸುತನಿ೦ದಾಯ್ತು ನಿಜ ರಾ&lt;br /&gt;ಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು&lt;br /&gt;ಎಮಗೆ ಮಾಳ್ಪುಪಕಾರ ಬೇರಿ&lt;br /&gt;ಲ್ಲವನಿಪನ ವರ ರಾಜಸೂಯಕೆ&lt;br /&gt;ನಿವನಿವಗೆ ಮು೦ಕೊ೦ಡು ಬಹುದೆ೦ದನು ಮುರಾ೦ತಕನು ೧೨೫&lt;br /&gt;&lt;br /&gt;ನಗರಜನ ಮ೦ತ್ರಿ ಪ್ರಧಾನಾ&lt;br /&gt;ದಿಗಳುಸಹಿತ ಕುಮಾರನೈತ೦&lt;br /&gt;ದಗಧರನ ಪದಕೆರಗಿದನು ಭೀಮಾರ್ಜುನಾ೦ಘ್ರಿಯಲಿ&lt;br /&gt;ಮಗಗೆ ತ೦ದೆಯ ಮಾರ್ಗದಲಿ ನ೦&lt;br /&gt;ಬುಗೆಯೊ ಕರುಣಾ ರಕ್ಷಣದ ನ೦&lt;br /&gt;ಬುಗೆಯೊ ಚಿತ್ತವಿಸೆ೦ದರಾ ಮ೦ತ್ರಿಗಳು ಕೈಮುಗಿದು ೧೨೬&lt;br /&gt;&lt;br /&gt;ಶವವ ಸ೦ಸ್ಕರಿಸುವುದು ಮಾಗಧ&lt;br /&gt;ನವನಿಯಲಿ ಸಹದೇವಗಭಿಷೇ&lt;br /&gt;ಕವನು ಮಾಡಿಸಿದಲ್ಲದೆತ್ತಲು ಮುರಿವುದಿಲ್ಲೆ೦ದು &lt;br /&gt;ಅವರಿಗಭಯವನಿತ್ತು ಪರಿವಾ&lt;br /&gt;ರವನು ಕಳುಹಿದರಿತ್ತಲಾತನ&lt;br /&gt;ಯುವತಿಯರು ಬೇಡಿದರು ವಹ್ನಿಯ ಪಡೆದು ಮರಳಿದರು ೧೨೭&lt;br /&gt;&lt;br /&gt;ಅವನ ಸ೦ಸ್ಕಾರದಲಿ ನಾರೀ&lt;br /&gt;ನಿವಹ ಸಹಗತವಾಯ್ತು ವೈದಿಕ&lt;br /&gt;ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ&lt;br /&gt;ಅವನ ಮಗ ಸಹದೇವನಾತ೦&lt;br /&gt;ಗವನಿಯಲಿ ಪಟ್ಟಾಭಿಷೇಕೋ&lt;br /&gt;ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ ೧೨೮&lt;br /&gt;&lt;br /&gt;ತೇರುಗಳ ತೇಜಿಗಳನಾ ಭ೦&lt;br /&gt;ಡಾರವನು ಗಜಘಟೆ ಸಹಿತ ವಿ&lt;br /&gt;ಸ್ತಾರ ವಿಭವವನೊಪ್ಪುಗೊ೦ಡರು ಮಗಧ ನ೦ದನನ&lt;br /&gt;ಧಾರುಣಿಯನವಗಿತ್ತು ಸಕಳ ಮ&lt;br /&gt;ಹೀ ರಮಣರನುಕಳುಹಿ ಬ೦ದನು&lt;br /&gt;ವೀರ ನಾರಾಯಣನು ಶಕ್ರಪ್ರಸ್ಥ ಪುರವರಕೆ ೧೨೯&lt;br /&gt;&lt;br /&gt;(ಸಂಗ್ರಹ: ಶ್ರೀಮತಿ ಶಕುಂತಲಾ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-5075629297823177233?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/5075629297823177233/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=5075629297823177233&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/5075629297823177233'/><link rel='self' type='application/atom+xml' href='http://www.blogger.com/feeds/742145181089395829/posts/default/5075629297823177233'/><link rel='alternate' type='text/html' href='http://gaduginabharata.blogspot.com/2010/08/blog-post_22.html' title='ಸಭಾಪರ್ವ: ೦೨. ಎರಡನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-7876756180007063177</id><published>2010-08-16T05:28:00.000+05:30</published><updated>2010-08-16T05:29:36.456+05:30</updated><category scheme='http://www.blogger.com/atom/ns#' term='೦೮. ಕರ್ಣಪರ್ವ'/><title type='text'>ಕರ್ಣಪರ್ವ: ೦೫. ಐದನೆಯ ಸಂಧಿ</title><content type='html'>ಸೂ :ವೈರಿ ವಿಜಯಕೆ ತ್ರಿಪುರ ದಹನದ&lt;br /&gt;ಚಾರು ಕಥನವನರುಹಿ ಶಲ್ಯನ&lt;br /&gt;ಸಾರಥಿಯ ಮಾಡಿದನು ಕರ್ಣಗೆ ಕೌರವರರಾಯ&lt;br /&gt;&lt;br /&gt;ಕೇಳು ಜನಮೇಜಯ ಧರಿತ್ರೀ&lt;br /&gt;ಪಾಲ ದಿನವೊಂದಾಯ್ತು ಕರ್ಣನ&lt;br /&gt;ಕಾಳೆಗದೊಳಲ್ಲಿಂದ ಮೇಲಣ ವರ ಕಥಾಮೃತವ&lt;br /&gt;ಕೇಳಲಿಚ್ಛೈಸಿದ ಗತಾಕ್ಷ ನೃ&lt;br /&gt;ಪಾಲಕಗೆ ವಿಸ್ತರಿಸಿ ಸಂಜಯ &lt;br /&gt;ಹೇಳಿದನು ಬಳಿಕೆರಡನೆಯ ದಿವಸದ ರಣೋತ್ಸವದ ೧&lt;br /&gt;&lt;br /&gt;ಹೊಗಳಿ ಕೆಲವರ ಹೊಳ್ಳುಗಳೆವುತ&lt;br /&gt;ನಗುತ ಕೆಲವರನವರ ಮೋಹರ&lt;br /&gt;ತೆಗೆದು ಹೋಯಿತು ಬಂದುದಿದು ತಂತಮ್ಮ ಪಾಳಯಕೆ&lt;br /&gt;ಹೊಗಳುಭಟ್ಟರ ಸಾಲ ಕೈದೀ&lt;br /&gt;ವಿಗೆಯ ಕಹಳಾರವದ ಲಗ್ಗೆಯ &lt;br /&gt;ಬಿಗುಹಿನಲಿ ಕುರುರಾಯ ಬಂದನು ರಾಜಮಂದಿರಕೆ ೨&lt;br /&gt;&lt;br /&gt;ಗುಳವನಿಳುಹಿದವಾನೆಗಳು ಹ&lt;br /&gt;ಲ್ಲಳವ ಬಿಡೆ ಭುಲ್ಲೈಸಿದವು ಹಯ&lt;br /&gt;ಕುಳ ವರೂಥವನಿಳಿದು ಸೂತರು ನಿಲಿಸಿದರು ರಥವ&lt;br /&gt;ಕಳಚಿ ಸೀಸಕ ಜೋಡು ಕೈದುವ &lt;br /&gt;ನಿಳುಹಿ ಸಮರ ಶ್ರಮವ ನಿಮಿಷಕೆ&lt;br /&gt;ನಿಳಯ ವೇದಿಯಲಿದ್ದು ಕಳೆದುದು ಕೂಡೆ ಪರಿವಾರ ೩&lt;br /&gt;&lt;br /&gt;ಘಾಯವಡೆದಾನೆಗಳು ಗುಳವನು &lt;br /&gt;ಹಾಯಿಕಲು ನೆಲಕುರುಳಿದವು ವಾ&lt;br /&gt;ನಾಯುಜಂಗಳು ಬಿಗುಹ ಬಿಡೆ ದೊಪ್ಪೆಂದವಾಚೆಯಲಿ&lt;br /&gt;ಘಾಯದಲಿ ಮುರಿದಂಬನುಗುಳಿದು&lt;br /&gt;ಸಾಯದಿಹರೇ ಭಟರು ಗಜ ಹಯ&lt;br /&gt;ಲಾಯ ಹತ್ತೊಂದಾಗಿ ಹೆಚ್ಚಿತು ಕೌರವೇಶ್ವರನ ೪&lt;br /&gt;&lt;br /&gt;ಬಂದುದಿರುಳೋಲಗಕೆ ರಾಯನ&lt;br /&gt;ಮಂದಿ ದಳಪತಿ ಶಕುನಿ ಕೃಪ ಗುರು&lt;br /&gt;ನಂದನಾದಿ ಪ್ರತತಿ ಸಚಿವ ಪಸಾಯಿತರು ಸಹಿತ&lt;br /&gt;ಇಂದಿನಾಹವದೊಳಗೆ ಕುಂತೀ&lt;br /&gt;ನಂದನರ ಬೊಬ್ಬಾಟ ಬಲುಹಾ&lt;br /&gt;ಯ್ತೆಂದು ಮೆಲ್ಲನೆ ಮಾತ ತೆಗೆದನು ಕೌರವರ ರಾಯ ೫&lt;br /&gt;&lt;br /&gt;ಬಲುಹಲೇ ಬಳಿಕೇನು ಹಗೆಯ &lt;br /&gt;ಗ್ಗಳಿಕೆ ಮೆರೆಯದೆ ಮುರವಿರೋಧಿಯ &lt;br /&gt;ಬಲುಹ ಹೇಳಾ ಪಾರ್ಥನೆಂಬವನಾವ ಮಾನಿಸನು&lt;br /&gt;ಬಲುಹು ಸಾರಥಿಯಿಂದ ರಿಪುಗಳ&lt;br /&gt;ಗೆಲುವು ಸಾರಥಿಯಿಂದ ಸಾರಥಿ&lt;br /&gt;ಯೊಲಿದಡೇನೇನಾಗದೆಂದನು ಭೂಪತಿಗೆ ಕರ್ಣ ೬&lt;br /&gt;&lt;br /&gt;ಭಾರಿ ಧನುವಿದ್ದೇನು ತೋಳಿನ&lt;br /&gt;ತೋರದಲಿ ಫಲವೇನು ಕೈದುಗ&lt;br /&gt;ಳಾರನಂಜಿಸಲಾಪವಾಹವರಂಗ ಮಧ್ಯದಲಿ&lt;br /&gt;ಸಾರಥಿಯ ಬಲುಹಿಲ್ಲದಿರ್ದಡೆ&lt;br /&gt;ಭೂರಿ ಸಾಧನವಿವು ನಿರರ್ಥಕ&lt;br /&gt;ವಾರಿಗುಸುರುವೆ ತನ್ನ ಕೊರತೆಯನೆಂದನಾ ಕರ್ಣ ೭&lt;br /&gt;&lt;br /&gt;ತೃಣಕೆ ಕೊಂಬೆನೆ ಫಲುಗುಣನ ಕಣೆ&lt;br /&gt;ಗಿಣೆಯನಾ ಸಾರಥಿಯ ಕೈ ಮೈ&lt;br /&gt;ಗುಣವಲೇ ಗರುವಾಯಿಗೆಡಿಸಿತು ನಮ್ಮ ಮೋಹರವ&lt;br /&gt;ರಣದೊಳೆನಗತಿಶಯದ ಸಾರಥಿ &lt;br /&gt;ಮಣಿದನಾದಡೆ ನಾಳೆ ಹೆಣದೌ &lt;br /&gt;ತಣದಲುಣ ಬಡಿಸುವೆನು ಜಂಬುಕ ಕಾಕ ಸಂತತಿಗೆ ೮ &lt;br /&gt;&lt;br /&gt;ಲೇಸನಾಡಿದೆ ಕರ್ಣ ನಿನಗಿ&lt;br /&gt;ನ್ನೈಸಲೇ ಸಾರಥಿಯ ಕೊರತೆ ಸು&lt;br /&gt;ರಾಸುರರ ಥಟ್ಟಿನಲಿ ತೊಡಕುವವರಾರು ನಿನ್ನೊಡನೆ &lt;br /&gt;ಈ ಸಮಸ್ತ ನೃಪಾಲ ವರ್ಗದೊ&lt;br /&gt;ಳಾಸೆ ಯಾರಲಿ ಸೂತ ಕರ್ಮಾ&lt;br /&gt;ಭ್ಯಾಸಿಯನು ಜೋಡಿಸುವೆನೆಂದನು ಕೌರವರ ರಾಯ ೯&lt;br /&gt;&lt;br /&gt;ಹಲವು ಮಾತೇನರಸ ನುಡಿದುದು&lt;br /&gt;ಫಲಿಸಲರಿಯದು ದೈವಗತಿಯಲಿ&lt;br /&gt;ಫಲಿಸಿತಾದಡೆ ರಾಜ್ಯಲಕ್ಷ್ಮಿಗೆ ಸೂಳೆತನವಹುದೆ&lt;br /&gt;ಸುಲಭವಾದಡೆ ಮಾದ್ರರಾಜನ&lt;br /&gt;ತಿಳುಹಿ ಸೈರಿಸು ರಿಪುಗಳೈವರ&lt;br /&gt;ತಲೆಗೆ ಹಾಯಿಕು ಸಂಚಕಾರವನೆಂದೆನಾ ಕರ್ಣ ೧೦&lt;br /&gt;&lt;br /&gt;ಉಬ್ಬಿದನು ರೋಮಾಂಚ ಮೈಯಲಿ&lt;br /&gt;ಹಬ್ಬಿದುದು ಹೊರೆಯೇರಿ ಮರವೆಯ&lt;br /&gt;ಮಬ್ಬು ಕವಿದುದು ಕರ್ಣನಾಡಿದ ಮಾತ ಸವಿಸವಿದು&lt;br /&gt;ಟೆಬ್ಬರಿಸುವಿಂದ್ರಿಯ ತುರಂಗದ &lt;br /&gt;ಕಬ್ಬಿ ಕಳಚಿತು ಕೌರವೇಂದ್ರನು &lt;br /&gt;ಸರ್ಬಲಗ್ಗೆಯ ಹರುಷದಲಿ ಹೊರವಂಟನರಮನೆಯ ೧೧&lt;br /&gt;&lt;br /&gt;ಹರಿದರರಸಾಳುಗಳು ರಾಯನ &lt;br /&gt;ಬರವನೀತಂಗರುಹಿದರು ಕಡು&lt;br /&gt;ಹರುಷದಲಿ ಕಲಿ ಶಲ್ಯ ಹೊರವಂಟನು ನಿಜಾಲಯವ&lt;br /&gt;ಅರಸುಮಕ್ಕಳ ವಜ್ರಮಣಿಯಾ&lt;br /&gt;ಭರಣ ಕಿರಣಸ್ತೋಮ ದೀಪ &lt;br /&gt;ಸ್ಫುರಿತ ಜನಮಧ್ಯದಲಿ ಕಂಡನು ಕೌರವೇಶ್ವರನ ೧೨&lt;br /&gt;&lt;br /&gt;ಅಂದಣವನಿಳಿದರಸನಾತಗೆ &lt;br /&gt;ವಂದಿಸಿದನಾ ಮಾದ್ರಪತಿ ಸಾ&lt;br /&gt;ನಂದದಲಿ ತೆಗೆದಪ್ಪಿ ತಂದನು ರಾಜಮಂದಿರಕೆ&lt;br /&gt;ಇಂದಿದೇನಿದ್ದಿದ್ದು ನೀನೇ&lt;br /&gt;ಬಂದ ಕಾರ್ಯ ವಿಶೇಷವೇನುಂ&lt;br /&gt;ಟೆಂದು ಕೌರವರಾಯನನು ಬೆಸಗೊಂಡನಾ ಶಲ್ಯ ೧೩&lt;br /&gt;&lt;br /&gt;ಏನ ಹೇಳುವೆ ನಮ್ಮ ಪುಣ್ಯದ &lt;br /&gt;ಹಾನಿಯನು ನುಗ್ಗಾಯ್ತು ಬಲ ಸು &lt;br /&gt;ಮ್ಮಾನ ಬೀತುದು ಬಿರುದರಿಗೆ ಕಾಲೂರಿತಪಮಾನ&lt;br /&gt;ಜೈನ ದೀಕ್ಷೆಯ ಹಿಡಿದುದೆನ್ನ ಸ&lt;br /&gt;ಮಾನ ಸುಭಟರು ಜಯಸಿರಿಯ ಸಂ&lt;br /&gt;ಧಾನ ಮುರಿದುದು ಮಾವ ನಿಮಗಜ್ಞಾತವೇನೆಂದ ೧೪&lt;br /&gt;&lt;br /&gt;ಸಮರಜಯ ಸಾಧಕರು ಮಂತ್ರ&lt;br /&gt;ಭ್ರಮಿತರಾಯ್ತಪಜಯವಧೂ ವಿ&lt;br /&gt;ಭ್ರಮ ಕಟಾಕ್ಷದ ಘಾಯದಲಿ ಕಳವಳಿಸದವರಾರು &lt;br /&gt;ಸಮತೆಯಾಯಿತು ತವಕಿಗಳಿಗು &lt;br /&gt;ದ್ಭ್ರಮಿಗಳಿಗೆ ತಿಳಿವಾಯ್ತು ವಾಸಿಯ &lt;br /&gt;ಮಮತೆಯವರು ವಿರಕ್ತರಾದರು ಮಾವ ಕೇಳೆಂದ ೧೫&lt;br /&gt;&lt;br /&gt;ಮುರಿವಡೆದು ಕಲಿ ಭೀಷ್ಮನೇ ಕು &lt;br /&gt;ಕ್ಕರಿಸಿದನು ದ್ರೋಣಂಗೆ ಬಂದುದ&lt;br /&gt;ನರುಹಲೇತಕೆ ಬಳಿಕ ಕರ್ಣನ ವೀರಪಟ್ಟದಲಿ&lt;br /&gt;ನೆರವಣಿಗೆಯುಂಟಾದಡೊಂದೇ&lt;br /&gt;ಕೊರತೆಯಿದು ನಿಮ್ಮಿಂದ ಕಡೆಯಲಿ &lt;br /&gt;ನೆರತೆಯಹುದಿನ್ನುತ್ತರೋತ್ತರ ಸಿದ್ಧಿ ಬಳಿಕೆಂದ  ೧೬&lt;br /&gt;&lt;br /&gt;ದ್ರೋಣ ಭೀಷ್ಮರವೋಲು ನೆಟ್ಟನೆ&lt;br /&gt;ಹೂಣಿಗರು ರಾಧೇಯ ಮಾದ್ರ &lt;br /&gt;ಕ್ಷೋಣಿಪತಿಯೆಂದೆಂಬ ನುಡಿಯುಂಟೆರೆಡು ಥಟ್ಟಿನಲಿ&lt;br /&gt;ಕೇಣವಿಲ್ಲದ ರಥಗತಿಯ ಬಿ&lt;br /&gt;ನ್ನಾಣವನು ತೋರಿದಡೆ ತನ್ನಯ &lt;br /&gt;ಗೋಣಿಗೊಡ್ಡಿದ ಕೈದುವನು ನೀ ತೆಗೆಸಿದವನೆಂದ ೧೭&lt;br /&gt;&lt;br /&gt;ಬರಿದೆ ಬೋಳೈಸದಿರು ಕಾರ್ಯದ&lt;br /&gt;ಹೊರಿಗೆಯೇನದ ಹೇಳು ಮೇಗಡೆ&lt;br /&gt;ಮೆರೆವವರು ನಾವಲ್ಲ ನುಡಿಯಾ ಬಯಲ ಡೊಂಬೇಕೆ&lt;br /&gt;ಅರುಹು ಕೇಳುವೆನೆನಲು ಶಲ್ಯನ&lt;br /&gt;ಬಿರುನುಡಿಗೆ ಬೆಚ್ಚದೆ ಮಹೀಪತಿ&lt;br /&gt;ಯರಿವು ತಪ್ಪದೆ ಬಿನ್ನವಿಸಿದನು ಮಾದ್ರರಾಜಂಗೆ ೧೮&lt;br /&gt;&lt;br /&gt;ಮಾವ ಸಾರಥಿಯಾಗಿ ಕರ್ಣನ &lt;br /&gt;ನೀವು ಕೋಡಾಡಿದರೆ ಫಲುಗುಣ &lt;br /&gt;ನಾವ ಪಾಡು ಸುರಾಸುರರ ಕೈಕೊಂಬೆನೇ ಬಳಿಕ&lt;br /&gt;ಆವುದೆಮಗಭ್ಯುದಯವದ ನೀ&lt;br /&gt;ನಾವ ಪರಿಯಲಿ ಮನ್ನಿಸಿದಡರೆ&lt;br /&gt;ಜೀವ ಕೌರವ ವಂಶವೇ ಸಪ್ರಾಣಿಸುವುದೆಂದ  ೧೯&lt;br /&gt;&lt;br /&gt;ಕೇಳಿದನು ಕುರುಪತಿಯ ಮಾತಿನ &lt;br /&gt;ಗಾಳಿ ತುಡುಕಿತು ಮನದ ರೋಷ&lt;br /&gt;ಜ್ವಾಲೆಯನು ಮೀಸೆಗಳು ಕುಣಿದವು ಕಾಯ ಕಂಪಿಸಿತು&lt;br /&gt;ಮೇಲು ಮೂಗಿನ ಬೆರಳ ಕಡುಗಾ &lt;br /&gt;ದಾಲಿಗಳ ಮಣಿಮಕುಟದೊಲಹಿನ&lt;br /&gt;ನಾಲಗೆಯ ನಿರ್ದ್ರವದ ಮಾದ್ರಾಧೀಶನಿಂತೆಂದ ೨೦&lt;br /&gt;&lt;br /&gt;ಖೂಳನೆಂಬೆನೆ ನೀ ಸಮಸ್ತ ಕ&lt;br /&gt;ಳಾಳಿ ನಿಪುಣನು ಬಾಲನೆಂಬೆನೆ&lt;br /&gt;ಮೇಲೆ ಪಲಿತದ ಬೀಡು ಬಿಟ್ಟಿದೆ ತಳಿತ ತನುವಿನಲಿ&lt;br /&gt;ಹೇಳು ಹೇಳಿನ್ನೊಮ್ಮೆ ನುಡಿ ನುಡಿ&lt;br /&gt;ಕೇಳುವೆನು ಕಿವಿಯಾರೆ ಕರ್ಣನ&lt;br /&gt;ಕಾಳೆಗಕೆ ನಾವ್ ಸಾರಥಿಗಳೇ ಶಿವಶಿವಾ ಎಂದ ೨೧&lt;br /&gt;&lt;br /&gt;ತಾರ ತಮತೆಯ ಬಲ್ಲೆ ಪುರುಷರ &lt;br /&gt;ಚಾರು ಚರಿತವನರಿವೆ ಸುಭಟರ&lt;br /&gt;ವೀರ ವೃತ್ತಿಯ ಬಲ್ಲೆ ಮಾನ್ಯರ ಮೈಸಿರಿಯ ತಿಳಿವೆ&lt;br /&gt;ಆರವನು ರಾಧೇಯ ದಿಟ ನಾ&lt;br /&gt;ವಾರವರು ನಮ್ಮಂತರವ ನೀ&lt;br /&gt;ನಾರ ಕೈಯಲಿ ಕೇಳಿದರಿಯಾ ಶಿವಶಿವಾ ಎಂದ ೨೨&lt;br /&gt;&lt;br /&gt;ಖೂಳನನು ಹಿಡಿತಂದು ಧರಣೀ&lt;br /&gt;ಪಾಲರಲಿ ಸರಿಮಾಡಿ ರಾಜ್ಯದ &lt;br /&gt;ಮೇಲೆ ನಿಲಿಸಿದೆ ಬಳಿಕ ಬಂದುದು ಖೂಳತನ ನಿನಗೆ&lt;br /&gt;ಕೀಳು ಮೇಲಿನ ಸೀಮೆ ನಿನ್ನಲಿ&lt;br /&gt;ಬೀಳುಕೊಂಡುದು ಸಾಕು ನಮಗಿ&lt;br /&gt;ನ್ನಾಳುತನವೇಕೆನುತ ಧಿಮ್ಮನೆ ನಿಂದನಾ ಶಲ್ಯ ೨೩&lt;br /&gt;&lt;br /&gt;ಒಡನೆ ನಿಂದನು ಸೆರಗ ಹಿಡಿದವ&lt;br /&gt;ಗಡಿಸಲೇಕಿನ್ನೆನುತ ಗುಣದಲಿ&lt;br /&gt;ನುಡಿದು ಕುಳ್ಳಿರಿಸಿದನು ಸಂತೈಸಿದನು ವಿನಯದಲಿ&lt;br /&gt;ನುಡಿಗೆ ಕೋಪಿಸಲೇಕೆ ಮನವೊಡ&lt;br /&gt;ಬಡುವುದೇ ಕೈಕೊಂಬುದಲ್ಲದ&lt;br /&gt;ಡೊಡೆಯರುಂಟೇ ನಿಮಗೆ ಎಂದನು ಕೌರವರ ರಾಯ ೨೪&lt;br /&gt;&lt;br /&gt;ಅರುಣ ಸಾರಥಿ ಭುವನ ಕಾರ್ಯದ &lt;br /&gt;ಧುರವ ಹೊರನೇ ಕೃಷ್ಣನಲ್ಲಾ&lt;br /&gt;ನರನ ಸಾರಥಿಯಾಗನೇ ಪರಕಾರ್ಯದನುವರಿದು&lt;br /&gt;ಹರನ ಸಾರಥಿ ಕಮಲಸಂಭವ &lt;br /&gt;ಸುರರ ಕಾರ್ಯಕ್ಕೊದಗನೇ ಸ&lt;br /&gt;ತ್ಪುರುಷರೇ ಪರಕಾರ್ಯನಿಷ್ಠರು ಕೋಪವೇಕೆಂದ ೨೫&lt;br /&gt;&lt;br /&gt;ಸವರಿದರು ಕುರುವಂಶವನು ಪಾಂ&lt;br /&gt;ಡವರು ಸಕಲ ಮಹಾರಥರು ಸಲೆ&lt;br /&gt;ಸವೆದುದಿಲ್ಲಿ ನದೀಸುತ ದ್ರೋಣಾದಿಗಳು ಸಹಿತ&lt;br /&gt;ಅವರೊಳಳಿದವರಿಬ್ಬರೇ ನೀ&lt;br /&gt;ವವಸರಕೆ ಸಾರಥ್ಯವನು ನಿ&lt;br /&gt;ಮ್ಮವರ ಮೇಲನುರಾಗವುಳ್ಳಡೆ ಮಾಡು ಮಾಣೆಂದ ೨೬&lt;br /&gt;&lt;br /&gt;ನಿನ್ನ ಕೈಯಲಿ ಬರಲಿ ಸತ್ತಿಗೆ&lt;br /&gt;ಯೆನ್ನ ಕೈಯಲಿ ಹೊಡೆಸು ಬಂಡಿಯ&lt;br /&gt;ನಿನ್ನ ತಮ್ಮನ ಹೆಗಲಲಾತನ ಹಡಪ ಹಾಯ್ಕಿರಲಿ &lt;br /&gt;ನಿನ್ನ ಬಂಧುಗಳವನ ಬೇಂಟೆಯ &lt;br /&gt;ಕುನ್ನಿಗಳ ಹಿಡಿಯಲಿ ಸುಯೋಧನ &lt;br /&gt;ನಿನ್ನ ಭಾಗ್ಯವನೊದೆದು ಕಳೆ ಕೇಡಾವುದೆಮಗೆಂದ ೨೭&lt;br /&gt;&lt;br /&gt;ಗೆಲುವೆನವದಿರನೆಂಬ ಬರಿಕ &lt;br /&gt;ಕ್ಕುಲಿತೆಯಲ್ಲದೆ ದ್ರೋಣಭೀಷ್ಮರಿ&lt;br /&gt;ಗಳುಕದರಿಭಟರಿವನ ಕೊಂಬರೆ ಕಂಡು ಮರುಳಾದೈ&lt;br /&gt;ಬಲುಬಿದಿರನುಚ್ಚಳಿಸುವಳಿಮುಖ&lt;br /&gt;ಕೆಳೆಯ ಕಬ್ಬಾನುವುದೆ ಕೌರವ &lt;br /&gt;ಕುಲವನದ್ದಿದೆ ಪಾಪಿ ಕಷ್ಟವ ನೆನೆದೆ ಹೋಗೆಂದ ೨೮&lt;br /&gt;&lt;br /&gt;ಅರಿಶಿರವ ಸೆಂಡಾಡಿ ಎನ್ನೀ &lt;br /&gt;ಕರವು ವಂದಿ ವ್ರಾತದೆಡರನು &lt;br /&gt;ಪರಿಹರಿಸಿತೀ ಹದನು ನಾವ್ ಹಿಂದೀಸು ಕಾಲದಲಿ&lt;br /&gt;ಧರಣಿಪತಿ ನಿನ್ನಿಂದ ಕರ್ಣನ &lt;br /&gt;ತುರಗ ವಾಘೆಯ ಚಮ್ಮಟಿಗೆಗೀ &lt;br /&gt;ಕರವು ಹೂಡುವುದಾಯ್ತು ಹರಹರ ಧನ್ಯರಾವೆಂದ ೨೯&lt;br /&gt;&lt;br /&gt;ಜಾತಿಹೀನರ ಕರ್ಮವುತ್ತಮ&lt;br /&gt;ಜಾತಿಗಳ ಕರ್ತವ್ಯ ತಿರ್ಯ&lt;br /&gt;ಗ್ಜಾತಿಗಳ ಗತಿ ಧರ್ಮವೃತ್ತಿಯ ಸೇರುವೆಯನರಿದು &lt;br /&gt;ಆತನಳವಡಿಸಿದನು ವಿಧಿ ನಿಮ&lt;br /&gt;ಗಾತ ಮಾಡಿದನಳಿದ ಸಾಮ&lt;br /&gt;ರ್ಥ್ಯಾತಿಶಯವುಂಟೈಸಲೇ ಶಿವಯೆನುತ ಖತಿಗೊಂಡ ೩೦&lt;br /&gt;&lt;br /&gt;ಆಸುರದ ಬೆರಗೇಕೆ ನಮ್ಮೊಡ&lt;br /&gt;ನೀಸು ಮಾತೇಕೆಮ್ಮ ರಕ್ಷಿಸು &lt;br /&gt;ವಾಸೆಯುಂಟೇ ಮಾಡಿ ಮಾಣ್ಪುದು ಕರುಣವಿಲ್ಲದಡೆ&lt;br /&gt;ವಾಸಿವಟ್ಟವ ನೋಡಿದನೆ ಲ&lt;br /&gt;ಕ್ಷ್ಮೀಶನವರಲಿ ಸೂತ ಕರ್ಮಾ&lt;br /&gt;ಭ್ಯಾಸಿಯೇ ಮುರವೈರಿ ಮುನ್ನೆಂದನು ಸುಯೋಧನನು ೩೧&lt;br /&gt;&lt;br /&gt;ಮುರಹರನ ಸಮಜೋಳಿ ನೀವಾ&lt;br /&gt;ನರನ ಸಮಗೈ ಕರ್ಣನಿಂತಿ &lt;br /&gt;ಬ್ಬರನು ನೀವಿಬ್ಬರು ವಿಭಾಡಿಸಿ ಗೆಲುವುದೇನರಿದು &lt;br /&gt;ಸುರರ ಕಾರ್ಯದಲಂದು ಸಾರಥಿ&lt;br /&gt;ಸರಜಿಜೋದ್ಭವನಾಗನೇ ಎ&lt;br /&gt;ನ್ನರಸುತನವಿಂದಳಿದುದಿದ ನೀನುಳುಹಬೇಕೆಂದ ೩೨&lt;br /&gt;&lt;br /&gt;ಒಣಗುತಿದೆ ಕುರುವಂಶಲತೆ ಫಲು&lt;br /&gt;ಗುಣನ ಕೋಪಾನಳನ ನಾಲಗೆ&lt;br /&gt;ಕೆಣಕುತಿದೆ ಕಕ್ಕುಲಿತೆಬಟ್ಟರೆ ಕಾಣೆ ಕಾವವರ&lt;br /&gt;ಅಣಕಿಸದೆ ಕಾರುಣ್ಯ ವರ್ಷವ&lt;br /&gt;ನೊಣಗಲಲಿ ಸುರಿ ಪಾಪಿ ಮಕ್ಕಳ &lt;br /&gt;ಹೆಣನ ಕಾಣುತ ದುಃಖವಿಲ್ಲ ದುರಾತ್ಮ ನೀನೆಂದ ೩೩&lt;br /&gt;&lt;br /&gt;ದೇವಕಿಸುತನೇನು ಬಂಡಿಯ &lt;br /&gt;ಬೋವಗುಲದಲಿ ಜನಿಸಿದನೆ ಮೇ&lt;br /&gt;ಣಾ ವಿರಿಂಚಿಯದಾವ ಸಾರಥಿಕುಲದ ಪೀಳಿಗೆಯೊ&lt;br /&gt;ಕಾವುದೊಬ್ಬರನೊಬ್ಬರಿದರೊಳ&lt;br /&gt;ಗಾವ ಹಾನಿ ಪರ ಪ್ರಯೋಜನ &lt;br /&gt;ಭಾವಕರು ಸತ್ಪುರುಷರಿದಕೆ ವಿಚಾರವೇನೆಂದ ೩೪&lt;br /&gt;&lt;br /&gt;ಗುರು ಪಿತಾಮಹರಿಂದ ಮೋರೆಯ&lt;br /&gt;ಮುರಿದ ವಿಜಯ ವಧೂ ಕಟಾಕ್ಷವ&lt;br /&gt;ತಿರುಹಿ ಹಾಯ್ಕುವ ಗಂಡನಾವನು ನೀವು ತಪ್ಪಿದಡೆ&lt;br /&gt;ಕುರು ಕುಲೋದ್ಧಾರಕನು ಮಾದ್ರೇ&lt;br /&gt;ಶ್ವರನೆನಿಪ ವಿಖ್ಯಾತಿ ಬಂದುದು&lt;br /&gt;ಪರಿಹರಿಸದಿರು ಮಾವ ಎಂದೆರಗಿದನು ಚರಣದಲಿ ೩೫&lt;br /&gt;&lt;br /&gt;ಶಿವ ಶಿವಾ ನಿರ್ಬಂಧವಿದು ಕೌ&lt;br /&gt;ರವನಲಾಯಿತೆ ಮದ್ಯಮಯ ಗಂ&lt;br /&gt;ಧವನು ಕುಡಿಸುವ ಪರಿಯಲಾ ತುಂಬಿಗಳ ಸೆರೆವಿಡಿದು &lt;br /&gt;ಅವನಿಪತಿಗಳ ಸೇವೆಯಿದು ಕ&lt;br /&gt;ಷ್ಟವಲೆ ಮೊದಲಲಿ ಬಳಿಕ ನಾವಿ &lt;br /&gt;ನ್ನವಗಡಿಸಲೇನಹುದು ಸಾರಥಿಯಾದೆವೇಳೆಂದ ೩೬&lt;br /&gt;&lt;br /&gt;ಆಯಿತೇ ಸಂತೋಷ ಕಮಲವ&lt;br /&gt;ಳಾಯತೇಕ್ಷಣನೊಡನೆ ಬಂಡಿಯ&lt;br /&gt;ಬೋಯಿಕೆಗೆ ವೀಳೆಯವ ಹಿಡಿದೆವು ಹಲವು ಮಾತೇನು&lt;br /&gt;ದಾಯ ಬಂದುದೆ ನಿನಗೆ ಬೊಮ್ಮಂ&lt;br /&gt;ಗಾಯಿತೇ ಸೂತತ್ವವಾದಡೆ&lt;br /&gt;ರಾಯ ಹೇಳೈ ತ್ರಿಪುರ ದಹನದ ಕಥೆಯ ನೀನೆಂದ ೩೭&lt;br /&gt;&lt;br /&gt;(ಸಂಗ್ರಹ : ಸುಬ್ರಹ್ಮಣ್ಯ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-7876756180007063177?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/7876756180007063177/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=7876756180007063177&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/7876756180007063177'/><link rel='self' type='application/atom+xml' href='http://www.blogger.com/feeds/742145181089395829/posts/default/7876756180007063177'/><link rel='alternate' type='text/html' href='http://gaduginabharata.blogspot.com/2010/08/blog-post_16.html' title='ಕರ್ಣಪರ್ವ: ೦೫. ಐದನೆಯ ಸಂಧಿ'/><author><name>Manjunatha Kollegala</name><uri>http://www.blogger.com/profile/06597757236883289208</uri><email>noreply@blogger.com</email><gd:image rel='http://schemas.google.com/g/2005#thumbnail' width='27' height='32' src='http://2.bp.blogspot.com/-vcoeA-K0gYA/TtZ6WtTX2MI/AAAAAAAABB4/ruRIcS1H-FY/s220/manju1.JPG'/></author><thr:total>0</thr:total></entry><entry><id>tag:blogger.com,1999:blog-742145181089395829.post-1179230781665605365</id><published>2010-08-15T23:13:00.002+05:30</published><updated>2010-08-15T23:16:42.476+05:30</updated><category scheme='http://www.blogger.com/atom/ns#' term='೦೯. ಶಲ್ಯಪರ್ವ'/><title type='text'>ಶಲ್ಯಪರ್ವ: ೦೧. ಮೊದಲನೆಯ ಸಂಧಿ</title><content type='html'>ಸೂ.ರಾಯಕೇಳೈ ಕದನದಲಿ ರಾ&lt;br /&gt;ಧೇಯನವಸಾನದಲಿ ಕೌರವ&lt;br /&gt;ರಾಯ ದಳಪತಿಯಾಗಿ ಹೊಕ್ಕನು ಶಲ್ಯನಾಹವವ&lt;br /&gt;&lt;br /&gt;ಹೇಳರೇ ಭೀಷ್ಮಾದಿ ಹಿರಿಯರು&lt;br /&gt;ಮೇಲುದಾಯವ ಬಲ್ಲವರು ಹೆ&lt;br /&gt;ಚ್ಚಾಳುತನದಲಿ ಹಿಗ್ಗಿಕಂಡಿರೆ ಜಯದ ಜಾರುಗಳ&lt;br /&gt;ಮೇಲಣಾಹವದೊಳಗೆ ದೇಹವ&lt;br /&gt;ಬೀಳುಕೊಂಡನು ಶಲ್ಯನಲ್ಲಿಂ&lt;br /&gt;ಮೇಲೆ ದೊರೆಗೇನಾದುದೆಂಬುದನರಿಯೆ ನಾನೆಂದ ೧&lt;br /&gt;&lt;br /&gt;ಮರುಳೆ ಸಂಜಯ ಗಾಳಿಯಲಿ ಕುಲ&lt;br /&gt;ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು&lt;br /&gt;ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ&lt;br /&gt;ಕುರುಪತಿಯ ಪಾಡೇನು ಮಾದ್ರೇ&lt;br /&gt;ಶ್ವರನ ಮತ್ಸರವೇನು ಸಾಕಂ&lt;br /&gt;ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ ೨&lt;br /&gt;&lt;br /&gt;ಬೇಯದೆನ್ನೆದೆ ಶೋಕವಹ್ನಿಯ&lt;br /&gt;ಬಾಯಲಕಟಾ ಕರ್ಣ ಕೌರವ&lt;br /&gt;ರಾಯನಳಿವಿನಲುಳಿವ ಪುತ್ರದ್ರೋಹಿಯಾರಿನ್ನು&lt;br /&gt;ಸಾಯಿಸುವ ಸಾವಂಜಿತೆನಗೆ ಚಿ&lt;br /&gt;ರಾಯು ತೊಡರಿಕ್ಕಿದೆನು ಮಾರ್ಕಂ&lt;br /&gt;ಡೇಯ ಮುನಿಗೆಂದರಸ ಧೊಪ್ಪನೆ ಕೆಡೆದನವನಿಯಲಿ ೩&lt;br /&gt;&lt;br /&gt;ಹದುಳಿಸೈ ರಾಜೇಂದ್ರ ನೀ ಬಿ&lt;br /&gt;ತ್ತಿದ ವಿಷದ್ರುಮ ಫಲಿತವಾಯಿತು&lt;br /&gt;ಬೆದರಲೇಕಿನ್ನನುಭವಿಸು ಸಾಕುಳಿದ ಮಾತೇನು&lt;br /&gt;ಕದನದಲಿ ಸುತೆ(ಸುತ?)ನಿಧಿಯ ಹೋಗಾ&lt;br /&gt;ಡಿದೆ ನಿಜಾನ್ವಯ ಕಲ್ಪತರುವನು&lt;br /&gt;ಮದಕರಿಗೆಮಾರಿದೆಯೆನುತ ನೆಗಹಿದನು ಭೂಪತಿಯ ೪&lt;br /&gt;&lt;br /&gt;ಮಲಗಿಸಿದನೊರವೇಳ್ವ ನಯನ&lt;br /&gt;ಸ್ಥಳವ ನೇವರಿಸಿದನು ಶೋಕಾ&lt;br /&gt;ನಲನ ತಾಪಕೆ ತಂಪನೆರೆದನು ನೀತಿಮಯರಸದ&lt;br /&gt;ಅಳಲಶ್ರವಮಾಡಿದೆ ನದೀಸುತ&lt;br /&gt;ನಳಿವಿನಲಿ ಗುರು ಕರ್ಣ ಶಲ್ಯರ &lt;br /&gt;ಕಳವಿನಲಿ ಕಟ್ಟಳಲ ಬಹಳಾಭ್ಯಾಸಿ ನೀನೆಂದ ೫&lt;br /&gt;&lt;br /&gt;ಅಹುದು ಸಂಜಯ ಶೋಕಶಿಖಿ ನೆರೆ&lt;br /&gt;ದಹಿಸಿತೆನ್ನನು ಬೆಂದ ವಸ್ತುಗೆ&lt;br /&gt;ದಹನವುಂಟೇ ಎಂಬ ನಾಣ್ಣುಡಿ ನಮ್ಮೊಳಾದುದಲಾ&lt;br /&gt;ಮಿಹಿರಸುತ ಪರಿಯಂತ ಕಥೆ ನಿ &lt;br /&gt;ರ್ವಹಿಸಿ ಬಂದುದು ಶಲ್ಯಕೌರವ&lt;br /&gt;ರೆಹಗೆ ನೆಗಳಿದರದನು ವಿಸ್ತರವಾಗಿ ಹೇಳೆಂದ ೬&lt;br /&gt;&lt;br /&gt;ತೆಗೆದುದಾಚೆಯಲವರ ಬಲ ಜಗ&lt;br /&gt;ದಗಲದುಬ್ಬಿನ ಬೊಬ್ಬೆಯಲಿ ಮೊರೆ&lt;br /&gt;ಮುಗಿಲಮದದಂದದಲಿ ಮೊಳಗುವ ವಾದ್ಯರಭಸದಲಿ&lt;br /&gt;ಬಿಗಿದಮೋನದ ಬೀತ ಹರುಷದ&lt;br /&gt;ಹೊಗೆಯ ಮೋರೆಯ ಹೊತ್ತುವೆದೆಗಳ&lt;br /&gt;ದುಗುಡದೊಗ್ಗಿನ ನಮ್ಮ ಮೋಹರ ತೆಗೆದುದೀಚೆಯಲಿ  ೭&lt;br /&gt;&lt;br /&gt;ಸಿಡಿದು ಕರ್ಣನ ತಲೆ ಧರಿತ್ರಿಗೆ&lt;br /&gt;ಕೆಡೆಯೆ ಧೊಪ್ಪನೆ ಮೂರ್ಛೆಯಲಿ ನೃಪ &lt;br /&gt;ಕೆಡೆದು ಕಣ್ಮುಚ್ಚಿದನು ಶೋಕಜ್ವರದ ಢಗೆ ಜಡಿಯೆ&lt;br /&gt;ಹಡಪಿಗರು ಚಾಮರದ ಚಾಹಿಯ&lt;br /&gt;ರೊಡನೆ ನೆಲಕುರುಳಿದರು ಸಾರಥಿ&lt;br /&gt;ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ ೮&lt;br /&gt;&lt;br /&gt;ಬಂದು ಕರ್ಣನ ಹಾನಿ ಕೌರವ&lt;br /&gt;ವೃಂದವನು ವೇಢೈಸಿತೇ ಹಾ&lt;br /&gt;ಯೆಂದು ಕೃಪಗುರುಸುತರು ರಥವನು ಬಿಟ್ಟು ಸೂಠಿಯಲಿ&lt;br /&gt;ತಂದು ಬಾಚಿಸಿದರಸನಿರವೆಂ&lt;br /&gt;ತೆಂದುಸುರನಾರೈದು ವಿಧಿಯನು&lt;br /&gt;ನಿಂದಿಸಿದರವಧಾನ ಜೀಯವಧಾನ ಜೀಯೆನುತ ೯&lt;br /&gt;&lt;br /&gt;ತಳಿತಳಿದು ಪನ್ನೀರನಕ್ಷಿಗೆ&lt;br /&gt;ಚಳೆಯವನು ಹಿಡಿದೆತ್ತಿ ಗುರುಸುತ&lt;br /&gt;ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು&lt;br /&gt;ಘಳಿಲನೆದ್ದನು ಕರ್ಣ ತೆಗೆಸೈ&lt;br /&gt;ದಳವನಿರುಳಾಯ್ತೆಂದು ಶೋಕದ&lt;br /&gt;ಕಳವಳದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ ೧೦&lt;br /&gt;&lt;br /&gt;ರಾಯ ಹದುಳಿಸು ಹದುಳಿಸಕಟಾ&lt;br /&gt;ದಾಯಿಗರಿಗೆಡೆಗೊಟ್ಟಲಾ ನಿ&lt;br /&gt;ರ್ದಾಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ&lt;br /&gt;ವಾಯುಜನ ಜಠರದಲಿ ತೆಗೆಯಾ&lt;br /&gt;ಜೀಯ ನಿನ್ನನುಜರನು ಪಾರ್ಥನ&lt;br /&gt;ಬಾಯಲುಗಿ ಸೂತಜನನೆಂದರು ಜರೆದು ಕುರುಪತಿಯ ೧೧&lt;br /&gt;&lt;br /&gt;ಏನು ಗುರುಸುತ ಮಡಿದನೇ ತ&lt;br /&gt;ನ್ನಾನೆ ಬವರದಲಕಟ ಕುಂತೀ&lt;br /&gt;ಸೂನುವೇಕೈ ತಪ್ಪು ಮಾಡಿದನೇ ಮಹಾದೇವ&lt;br /&gt;ಭಾನುಸನ್ನಿಭ ಸರಿದನೇ ತ&lt;br /&gt;ಪ್ಪೇನು ಪಾರ್ಥನ ಬಸುರಲೆನ್ನ ನಿ&lt;br /&gt;ಧಾನವಿದ್ದುದು ತೆಗೆವೆನೈಸಲೆಯೆಂದು ಕಂದೆರೆದ ೧೨&lt;br /&gt;&lt;br /&gt;ತಾಪವಡಗಿತು ಮನದ ಕಡುಹಿನ&lt;br /&gt;ಕೋಪ ತಳಿತುದು ಭೀಮ ಪಾರ್ಥರ&lt;br /&gt;ರೂಪು ಮುಖದಲಿ ಕರ್ಣ ದುಶ್ಯಾಸನರ ಕಲ್ಪಿಸಿದ&lt;br /&gt;ಭೂಪ ಕೇಳೈ ಪಾಳಯಕೆ ಕುರು&lt;br /&gt;ಭೂಪ ಬಂದನು ನಾಳೆ ಕರ್ಣೋ&lt;br /&gt;ತ್ಥಾಪನವಲಾ ಎನುತ ಹೂಕ್ಕನು ಭದ್ರಮಂಟಪವ ೧೩&lt;br /&gt;&lt;br /&gt;ಶಕುನಿ ಕೃಪ ಗುರುಸೂನು ಕೃತವ&lt;br /&gt;ರ್ಮಕ ಸುಕೇತು ಸುಶರ್ಮ ಸಮಸ&lt;br /&gt;ಪ್ತಕರು ಮಾದ್ರೇಶ್ವರ ಸುಬಾಹು ಸುನಂದ ಚಿತ್ರರಥ&lt;br /&gt;ಸಕಲ ಸುಭಟರು ಸಹಿತ ದಳನಾ&lt;br /&gt;ಯಕರು ಬಂದರು ಕರ್ಣಹಾನಿ&lt;br /&gt;ಪ್ರಕಟ ಕಳಿತ ಶಿರೋವಕುಂಠನ ವೈಮನಸ್ಯದಲಿ ೧೪&lt;br /&gt;&lt;br /&gt;ಹಿಮದ ಹೊಯ್ಲಲಿ ಸೀದು ಸಿಕ್ಕಿದ&lt;br /&gt;ಕಮಲವನದಂದದಲಿ ಹತವಿ&lt;br /&gt;ಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ&lt;br /&gt;ಸುಮುಖತಾವಿಚ್ಚೇದ ಕಲುಷ&lt;br /&gt;ಸ್ತಿಮಿತರಿರವನು ಕಂಡು ನಾಳಿನ&lt;br /&gt;ಸಮರಕೇನುದ್ಯೋಗವೆಂದನು ಕೃಪನ ಗುರುಸುತನ ೧೫&lt;br /&gt;&lt;br /&gt;ಅರಸ ಕರ್ಣಚ್ಛೇದವೇ ಜಯ&lt;br /&gt;ಸಿರಿಯ ನಾಸಾಚ್ಛೇದವಿನ್ನರ&lt;br /&gt;ವರಿಸದಿರು ಹೊಯ್ದಾಡಿ ಹೊಗಳಿಸು ಬಾಹುವಿಕ್ರಮವ&lt;br /&gt;ಗುರುನದೀಸುತರಳಿದ ಬಳಿಕೀ&lt;br /&gt;ಧರೆಗೆ ನಿನಗಸ್ವಾಮ್ಯ ಕರ್ಣನ &lt;br /&gt;ಮರಣದಲಿ ನೀನರ್ಧದೇಹನು ಭೂಪ ಕೇಳೆಂದ ೧೬&lt;br /&gt;&lt;br /&gt;ಆ ವೃಕೋದರ ನರರೊಳಂತ &lt;br /&gt;ರ್ಭಾವ ದುಶ್ಯಾಸನಗೆ ತನ್ಮಯ&lt;br /&gt;ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ &lt;br /&gt;ಕೈವಿಡಿಯಲೇ ಕರ್ಣನಿಹನೆಂ&lt;br /&gt;ದಾವು ನಿಶ್ಚಯಿಸಿದೆವು ಕರ್ಣನ&lt;br /&gt;ಸಾವ ನಾಳಿನೊಳರಿವೆನೆಂದನು ನಿನ್ನ ಮಗ ನಗುತ ೧೭&lt;br /&gt;&lt;br /&gt;ನಾವು ಹೊಯ್ದಾಡುವೆವು ಭುಜಸ&lt;br /&gt;ತ್ವಾವಲಂಬವ ತೋರುವೆವು ಕ&lt;br /&gt;ರ್ಣಾವಸಾನವ ಕಂಡು ಬಳಿಕುಗುಳುವೆವು ತಂಬುಲವ&lt;br /&gt;ನೀವು ಸೇನಾಪತ್ಯವನು ಸಂ&lt;br /&gt;ಭಾವಿಸಿರೆ ಸಾಕಿನ್ನು ಮಿಗಿಲಾ&lt;br /&gt;ದೈವಕೃತ ಪೌರುಷವ ನಾಳಿನೊಳರಿಯಬಹುದೆಂದು ೧೮&lt;br /&gt;&lt;br /&gt;ಧರಣಿಪತಿ ಚಿತ್ತೈಸು ಸೇನಾ&lt;br /&gt;ಧುರವನೀವುದು ಮದ್ರಭೂಪತಿ&lt;br /&gt;ಗೆರವಲಾ ಜಯಲಕ್ಶ್ಮಿ ಬಳಿಕಾ ಪಾಂಡುತನಯರಿಗೆ&lt;br /&gt;ಸುರನದೀಜ ದ್ರೋಣ ರಾಧೇ&lt;br /&gt;ಯರಿಗೆ ಸರಿಮಿಗಿಲಿಂದು ಮಾದ್ರೇ&lt;br /&gt;ಶ್ವರನುಳಿಯೆ ದೊರೆಯಾರು ದಿಟ್ಟರು ನಮ್ಮಥಟ್ಟಿನಲಿ ೧೯&lt;br /&gt;&lt;br /&gt;ನೀವು ಕಟಕಾಚಾರ್ಯಪುತ್ರರು&lt;br /&gt;ನೀವಿರಲು ಕೃಪನಿರಲು ದಳವಾಯ್&lt;br /&gt;ನಾವಹೆವೆ ನೀವಿಂದು ತೇಜೊದ್ವಯದಲಧಿಕರಲೆ&lt;br /&gt;ನಾವು ತರುವಾಯವರೆನಲು ಜಯ&lt;br /&gt;ಜೀವಿಗಳು ನೀವನ್ಯಗುಣಸಂ&lt;br /&gt;ಭಾವಕರಲಾ ಎಂದನಶ್ವತ್ಥಾಮ ಶಲ್ಯಂಗೆ ೨೦&lt;br /&gt;&lt;br /&gt;ಉಚಿತವಿತರೇತರಗುಣಸ್ತುತಿ&lt;br /&gt;ರಚನೆ ಗುಣಯುಕ್ತರಿಗೆ ವಿಜಯೋ&lt;br /&gt;ಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ&lt;br /&gt;ಅಚಲ ಮೂರರ ಪೈಸರದ ಬಲ&lt;br /&gt;ನಿಚಯ ನಮ್ಮದು ವೀರ ಸುಭಟ&lt;br /&gt;ಪ್ರಚಯ ಮುಖ್ಯರ ಮಾಡಿಯೆಂದನು ಕೃಪನು ಕುರುಪತಿಗೆ ೨೧&lt;br /&gt;&lt;br /&gt;ಸುರನದೀಜ ದ್ರೋಣ ಕೃಪರೀ&lt;br /&gt;ಕುರುಬಲಕೆ ಕಟ್ಟೊಡೆಯರವರಿ&lt;br /&gt;ಬ್ಬರ ಪರೋಕ್ಷದಲಾರವಿಲ್ಲಿಯ ಹಾನಿವೃದ್ಧಿಗಳು&lt;br /&gt;ಗುರುಸುತನೊ ಶಲ್ಯನೊ ಚಮೊಮು&lt;br /&gt;ಖ್ಯರನು ನೀವೇ ಬೆಸಸಿಯೆಂದನು&lt;br /&gt;ಧರಣಿಪತಿ ಕೇಳೈ ಕೃಪಾಚಾರ್ಯಂಗೆ ಕುರುರಾಯ ೨೨&lt;br /&gt;&lt;br /&gt;ಆದಡಾ ಭೀಷ್ಮಾದಿ ಸುಭಟರು&lt;br /&gt;ಕಾದಿ ನೆಗ್ಗಿದ ಕಳನ ಹೊಗುವಡೆ&lt;br /&gt;ಕೈದುಕಾರರ ಕಾಣೆನೀ ಮಾದ್ರೇಶ ಹೊರಗಾಗಿ&lt;br /&gt;ಈ ದುರಂತದ ಸಮರಜಯ ನಿನ&lt;br /&gt;ಗಾದಡೊಳ್ಳಿತು ಶಲ್ಯನಲಿ ಸಂ&lt;br /&gt;ಪಾದಿಸಿರೆ ಸೇನಾಧಿಪತ್ಯವನರಸ ಕೇಳೆಂದ ೨೩&lt;br /&gt;&lt;br /&gt;ತರಸಿ ಮಂಗಳವಸ್ತುಗಳನಾ&lt;br /&gt;ದರಿಸಿ ಭದ್ರಾಸನದಲೀತನ&lt;br /&gt;ನಿರಿಸಿ ನೃಪ ವಿಸ್ತರಿಸಿದನು ಮೂರ್ಧಾಭಿಷೇಚನವ&lt;br /&gt;ಮೊರೆವ ವಾದ್ಯದ ಸಿಡಿಲ ಧರಣೀ&lt;br /&gt;ಸುರರ ಮಂತ್ರಾಕ್ಷತೆಯ ಮಳೆಗಳೊ&lt;br /&gt;ಳಿರುಳನುಗಿದವು ಮುಕುಟಮಣಿರಾಜಿಗಳ ಮಿಂಚುಗಳು ೨೪&lt;br /&gt;&lt;br /&gt;ಆದುದುತ್ಸವ ಕರ್ಣಮರಣದ&lt;br /&gt;ಖೇದವುಕ್ಕಿತು ಹಗೆಗೆ ಕಾಲ್ದೊಳೆ&lt;br /&gt;ಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ&lt;br /&gt;ಬೀದಿವರಿದುದು ಬಿಂಕ ನನೆಕೊನೆ&lt;br /&gt;ವೋದುದಾಶಾಬೀಜ ಲಜ್ಜೆಯ&lt;br /&gt;ಹೋದ ಮೊಗಿಗೆ ಕದಪ ಹೊಯ್ದನು ನಿನ್ನ ಮಗನೆಂದ ೨೫&lt;br /&gt;&lt;br /&gt;ಕಾಣಿಕೆಯನಿತ್ತಖಿಳ ಸುಭಟ&lt;br /&gt;ಶ್ರೇಣಿ ಕಂಡದು ನುಡಿಯ ಹಾಣಾ&lt;br /&gt;ಹಾಣಿಗಳ ಭಾಷೆಗಳ ಹಕ್ಕಲು ವೀರರುಕ್ಕುಗಳ&lt;br /&gt;ಪ್ರಾಣಚುಳಕೋದಕದ ಚೇಷ್ಟೆಯ&lt;br /&gt;ಹೂಣಿಗರು ವಿಜಯಾಂಗನೋಪ&lt;br /&gt;ಕ್ಷೀಣಮಾನಸರೊಪ್ಪಿದರು ಕುರುಪತಿಯ ಪರಿವಾರ ೨೬&lt;br /&gt;&lt;br /&gt;ಪತಿಕರಿಸಿದೈ ವೀರಸುಭಟ&lt;br /&gt;ಪ್ರತಿತ (ಪ್ರತತಿ?) ಮಧ್ಯದಲೆಮ್ಮನಹಿತ&lt;br /&gt;ಚ್ಯುತಿಗೆ ಸಾಧನವೆಂದು ನಿಜಸೇನಾಧಿಪತ್ಯದಲಿ&lt;br /&gt;ಕೃತಕವಿಲ್ಲದೆ ಕಾದುವೆನು ಯಮ &lt;br /&gt;ಸುತರೊಡನೆ ಜಯಸಿರಿಗೆ ನೀನೇ&lt;br /&gt;ಪತಿಯೆನಿಸಿ ತೋರಿಸುವೆನೆಂದನು ಶಲ್ಯ ಕುರುಪತಿಗೆ ೨೭&lt;br /&gt;&lt;br /&gt;ಉಬ್ಬಿದನಲೈ ಮಧುರವಚನದ&lt;br /&gt;ಹಬ್ಬದಲಿ ನಿನ್ನಾತನಿತ್ತಲು&lt;br /&gt;ತುಬ್ಬಿನವದಿರು ತಂದು ಬಿಸುಟರು ನಿಮ್ಮ ಪಾಳೆಯದ&lt;br /&gt;ಸರ್ಬ (ಸಬ್ಬ?) ವೃತ್ತಾಂತವನು ಗಾಢದ&lt;br /&gt;ಗರ್ಭ (ಗಬ್ಬ?) ಮುರಿದುದು ಕೃಷ್ಣರಾಯನ&lt;br /&gt;ನೆಬ್ಬಿಸಿದನಿರುಳವನಿಪತಿ ಬಿನ್ನೈಸಿದನು ಹದನ ೨೮&lt;br /&gt;&lt;br /&gt;ದೇವ ಚಿತ್ತೈಸಿದಿರೆ ಬೊಪ್ಪನ &lt;br /&gt;ಭಾವನನು ಸೇನಾಧಿಪತ್ಯದ &lt;br /&gt;ಲೋವಿದರಲೇ ಶಲ್ಯ ಮಾಡಿದ ಭಾಷೆಯವರೊಡನೆ&lt;br /&gt;ಆವನಂಘೈಸುವನೊ ಪಾರ್ಥನೊ&lt;br /&gt;ಪಾವಮಾನಿಯೊ ನಕುಲನೋ ಸಹ&lt;br /&gt;ದೇವನೋ ತಾನೋ ನಿದಾನಿಸಲರಿಯೆ ನಾನೆಂದ ೨೯&lt;br /&gt;&lt;br /&gt;ಕಲಹವೆನ್ನದು ದಳಪತಿಗೆ ತಾ&lt;br /&gt;ನಿಲುವೆನೆಂದನು ಭೀಮನೆನ್ನನು&lt;br /&gt;ಕಳುಹಿ ನೋಡೆಂದನು ಧನಂಜಯನೆಮ್ಮ ಮಾವನಲಿ&lt;br /&gt;ಸಲುಗೆಯೆನಗೆಂದನು ನಕುಲನೆ&lt;br /&gt;ನ್ನೊಲವಿನರ್ತಿಯಿದೆನ್ನ ಕಳುಹಿದ&lt;br /&gt;ಡುಳುಹಿದವರೆಂದೆರಗಿದನು ಸಹದೇವನಾ ಹರಿಗೆ ೩೦&lt;br /&gt;&lt;br /&gt;ಹರಿಯದರ್ಜುನನಿಂದ ಭೀಮನ&lt;br /&gt;ನೆರವಣಿಗೆ ನೋಯಿಸದು ನಕುಲನ&lt;br /&gt;ಹೊರಿಗೆಯೊದಗದು ಸೈರಿಸದು ಸಹದೇವನಾಟೊಪ&lt;br /&gt;ಇರಿವಡಾ ಮಾದ್ರೇಶನನು ನೆರೆ&lt;br /&gt;ಮುರಿವಡೆಯು ನಿನಗಹುದು ನಿನ್ನನು&lt;br /&gt;ತರುಬಿದವರೇ ಕಷ್ಟರೆಂದನು ನಗುತ ಮುರವೈರಿ ೩೧&lt;br /&gt;&lt;br /&gt;ಲೇಸನಾಡಿದೆ ಕೃಷ್ಣ ಶಲ್ಯಂ&lt;br /&gt;ಗೀಸು ಬಲುಹುಂಟಾದಡನುಜರು&lt;br /&gt;ಘಾಸಿಯಾದರು ಹಿಂದೆ ಭೀಷ್ಮಾದಿಗಳ ಬವರದಲಿ&lt;br /&gt;ಈ ಸಮರಜಯವೆನಗೆ ನಾಳಿನೊ&lt;br /&gt;ಳೈಸಲೇ ನಳ ನಹುಷ ಭರತ ಮ&lt;br /&gt;ಹೀಶ ವಂಶೋತ್ಪನ್ನ ತಾನೆಂದನು ಮಹೀಪಾಲ ೩೨&lt;br /&gt;&lt;br /&gt;ತಾಯಿ ಹೆರಳೇ ಮಗನ ನಿನ್ನನು&lt;br /&gt;ನಾಯಕನೆ ಲೋಕೈಕವೀರರ&lt;br /&gt;ತಾಯಲಾ ನಿಮ್ಮವ್ವೆಯಾ ಮೊಲೆವಾಲ ಬಲುಹಿನಲಿ&lt;br /&gt;ರಾಯ ನೀ ಕ್ಷತ್ರಿಯನು ಸೇಸೆಯ&lt;br /&gt;ತಾಯೆನುತ ತೂಪಿರಿದು ಕಮಲದ&lt;br /&gt;ಳಾಯತಾಂಬಕನಪ್ಪಿಕೊಂಡನು ಧರ್ಮನಂದನನ ೩೩&lt;br /&gt;&lt;br /&gt;ಸಂದವೈ ಹದಿನೇಳು ರಾತ್ರಿಗ&lt;br /&gt;ಳಿಂದಿನಿರುಳಾ ಸೇನೆ ನಿರ್ಭಯ&lt;br /&gt;ದಿಂದ ನಿದ್ರಾವ್ಯಸನನಿರ್ಭರ ಪೂರ್ಣ ಹರುಷದಲಿ&lt;br /&gt;ಸಂದುದೀ ನಿನ್ನವರು ರಾಧಾ&lt;br /&gt;ನಂದನವ್ಯಪಗಮನನಷ್ಟಾ&lt;br /&gt;ನಂದವಿಹ್ವಲಕರಣರಿದ್ದರು ಭೂಪ ಕೇಳೆಂದ ೩೪&lt;br /&gt;&lt;br /&gt;ಆ ಶಿಖಂಡಿಯ ತೋರಿ ಸರಳಿನ&lt;br /&gt;ಹಾಸಿಕೆಯಲೊಬ್ಬನನು ಮಾತಿನ&lt;br /&gt;ವಾಸಿಯಿಂದೊಬ್ಬನನು ಮುನ್ನಿನ ಕುಲವನೆಚ್ಚರಿಸಿ&lt;br /&gt;ಘಾಸಿ ಮಾಡಿದನೊಬ್ಬನನು ಧರ&lt;br /&gt;ಣೀಶ ಚೇಷ್ಟೆಯಲೊಬ್ಬನನು ಕೃಪೆ&lt;br /&gt;ಯೇಸು ಘನವೋ ವೀರನಾರಾಯಣಗೆ ಭಕ್ತರಲಿ ೩೫&lt;br /&gt;&lt;br /&gt;(ಸಂಗ್ರಹ: ಪಾರ್ಥಸಾರಥಿ.ಎಚ್.ವಿ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-1179230781665605365?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/1179230781665605365/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=1179230781665605365&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/1179230781665605365'/><link rel='self' type='application/atom+xml' href='http://www.blogger.com/feeds/742145181089395829/posts/default/1179230781665605365'/><link rel='alternate' type='text/html' href='http://gaduginabharata.blogspot.com/2010/08/blog-post.html' title='ಶಲ್ಯಪರ್ವ: ೦೧. ಮೊದಲನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-4171059609783830211</id><published>2010-06-22T01:16:00.000+05:30</published><updated>2010-06-22T01:18:06.059+05:30</updated><category scheme='http://www.blogger.com/atom/ns#' term='೦೭. ದ್ರೋಣಪರ್ವ'/><title type='text'>ದ್ರೋಣಪರ್ವ: ೦೫. ಐದನೆಯ ಸಂಧಿ</title><content type='html'>ಸೂ:  ವೀರ ರಿಪುಕದಳೀವನಕೆ ಮದ&lt;br /&gt;ವಾರಣನು ಫಲಗುಣನ ತನಯನು&lt;br /&gt;ದಾರ ಪದ್ಮವ್ಯೂಹದಲಿ ಗೆಲಿದನು ಕುಮಾರಕರ&lt;br /&gt;&lt;br /&gt;ಅವಧರಿಸು ಧೃತರಾಷ್ಟ್ರ ನೃಪ ಸ್ಶೆಂ&lt;br /&gt;ಧವನ ಗೆಲಿದಾ ವ್ಯೊಹ ಭೇದಾ&lt;br /&gt;ಹವವಿಜಯ ವಿಜಯಾತ್ಮಕನ ಕೌತುಕ ರಣೋದಯವ&lt;br /&gt;ತಿವಿದನುರುಬುವ ರಥ ಪದಾತಿಯ&lt;br /&gt;ಕವಿವ ಗರುವ ತುರಂಗಗಳ ಬಲು&lt;br /&gt;ಜವದ ರಥ ಕೋಟ್ಯಾನುಕೋಟಿಯ ಹೊದರ ಹೊಸ ಮೆಳೆಯ ೧&lt;br /&gt;&lt;br /&gt;ಹರಿಯ ಚಕ್ರ ವರೂಥ ಚಕ್ರದೊ&lt;br /&gt;ಳುರವಣಿಪ ತೇಜಿಗಳ ಕಡುಹಿನ&lt;br /&gt;ಖುರದ ಹೊಯ್ಲಲಿ ವಿಲಯ ಪವನನ ಗರಿಯ ಗಾಳಿಯಲಿ&lt;br /&gt;ಹರನ ನಯನಜ್ವಾಲೆ ಪಾರ್ಥಿಯ&lt;br /&gt;ಸರಳ ಕಿಡಿಯಲಿ ಪಲ್ಲಟಿಸೆ ಸಂ&lt;br /&gt;ಗರದೊಳಗೆ ಸೈವರಿದು ಸದೆದನು ಸಕಲ ಸೈನಿಕರ ೨&lt;br /&gt;&lt;br /&gt;ಮಿಕ್ಕು ನೂಕುವ ಕುದುರೆಕಾರರು&lt;br /&gt;ತೆಕ್ಕೆಗೆಡೆದರು ಸಂದಣಿಸಿ ಕೈ&lt;br /&gt;ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ&lt;br /&gt;ಹೊಕ್ಕು ಹರಿಸುವ ರಥ ಪದಾತಿಯ&lt;br /&gt;ನೊಕ್ಕಲಿಕ್ಕಿದನಮಮ ಮಗುವಿನ&lt;br /&gt;ಮಕ್ಕಳಾಟಿಕೆ ಮಾರಿಯಾಯಿತು ವೈರಿ ರಾಯರಿಗೆ ೩&lt;br /&gt;&lt;br /&gt;ಕದಳಿಯೊಳು ಮದದಾನೆ ಹೊಕ್ಕಂ&lt;br /&gt;ದದಲಿ ಹೆಚ್ಚಿದ ಚಾತುರಂಗದ&lt;br /&gt;ಮೆದೆಯನೊಟ್ಟಿದು ಹೂಣೆ ಹೊಕ್ಕನು ಥಟ್ಟನೊಡೆತುಳಿದು&lt;br /&gt;ಇದಿರೊಳೆಚ್ಚನು ಕೆಲಬಲದೊಳಿಹ&lt;br /&gt;ಕದನಗಲಿಗಳ ಸೀಳಿದನು ಕಾ&lt;br /&gt;ದಿದನು ಕಾಲನ ಲೀಲೆಯಾದುದು ವಿಷಮ ಸಮರಂಗ ೪&lt;br /&gt;&lt;br /&gt;ಜೋಡೊಡೆದು ಥಟ್ಟುಗಿದು ಬೆನ್ನಲಿ&lt;br /&gt;ಮೂಡಲದಟರ ಸೀಳಿದನು ಖುರ&lt;br /&gt;ಜೋಡು ಹುಡಿಹುಡಿಯಾಗೆ ತೇಜಿಯ ಥಟ್ಟ ಖಂಡಿಸಿದ&lt;br /&gt;ನೋಡಲಮ್ಮುವರಿಲ್ಲ ಮಿಗೆ ಕೈ&lt;br /&gt;ಮಾಡಲಮ್ಮುವರಿಲ್ಲ ಬಲದ&lt;br /&gt;ಲ್ಲಾಡಿತೊಬ್ಬನೆ ಹಸುಳೆ ಹೊಕ್ಕನು ವೈರಿ ಮೋಹರವ ೫&lt;br /&gt;&lt;br /&gt;ಆವ ವಹಿಲದೊಳಂಬ ತೊಡಚುವ&lt;br /&gt;ನಾವ ವೇಗದೊಳಿದಿರಲೆಸುವನ&lt;br /&gt;ದಾವ ನಿರುತದಲೊಡ್ದುವನು ಕೊರಳಿಂಗೆ ಕೋಲುಗಳ&lt;br /&gt;ಆವ ದೃಢತೆಯೊ ದೃಷ್ಟಿವಾಳವಿ&lt;br /&gt;ದಾವ ಗರುಡಿಶ್ರಮವೆನುತ ದಿವಿ&lt;br /&gt;ಜಾವಳಿಗಳುಲಿಯಲು ವಿಭಾಡಿಸಿದನು ರಿಪುವ್ರಜವ ೬&lt;br /&gt;&lt;br /&gt;ಎಡದಲೌಕುವ ರಾವುತರ ವಂ&lt;br /&gt;ಗಡವನೆಚ್ಚನು ಸಮ್ಮುಖದೊಳವ&lt;br /&gt;ಗಡಿಸುವಿಭ ಕೋಟಿಗಳ ಕೊಂದನು ಸರಳ ಸಾರದಲಿ&lt;br /&gt;ಕಡುಗಿ ಬಲದಲಿ ಕವಿವ ರಥಿಕರ&lt;br /&gt;ಕೆಡಹಿದನು ಕಾಲಾಳು ತೇರಿನ&lt;br /&gt;ಗಡಣ ಹುಡಿಹುಡಿಯಾಯ್ತೆನಲು ಸವರಿದನು ಪರಬಲವ ೭&lt;br /&gt;&lt;br /&gt;ಉರವಣಿಸಿದರು ಮತ್ತೆ ಭಟರ&lt;br /&gt;ಬ್ಬರವ ಖತಿಯಲಿ ನಿಖಿಳ ಮನ್ವಂ&lt;br /&gt;ತರದ ಕಡೆಯಲಿ ನೆಲನನದ್ದುವ ಕಡಲ ಕಡುಹಿನಲಿ&lt;br /&gt;ಸರಳು ಕಡಿದವು ಸಕುತಿ ಸೆಲ್ಲೆಹ&lt;br /&gt;ಪರಶು ಕವಿದವು ಖಡ್ಗ ತೋಮರ&lt;br /&gt;ಸುರಗಿ ಹೊಳೆದವು ಕೈದು ಹೇರಿದವಖಿಳ ದೆಸೆಗಳಲಿ ೮&lt;br /&gt;&lt;br /&gt;ತೊಲಗಿರೈ ಕಾಲಾಳು ಮೇಲಾ&lt;br /&gt;ಳಳವಿಗೊಡಲಿ ಮಹಾರಥರು ಮುಂ&lt;br /&gt;ಕೊಳಲಿ ಜೋದರು ದಿಟ್ಟರಾದರೆ ಕವಿಸಿ ಕರಿಘಟೆಯ&lt;br /&gt;ಕೆಲದ ದೊರೆಗಳು ಬರಲಿ ಮಾರಿದ&lt;br /&gt;ತಲೆಯ ಭಂಡವ ಹೊತ್ತಿರದೆ ಕೈ&lt;br /&gt;ಕೊಳಲಿ ಕರ್ಣಾದಿಗಳೆನುತ ಹೊಕ್ಕೆಚ್ಚನಭಿಮನ್ಯು ೯&lt;br /&gt;&lt;br /&gt;ಕಾರಗಲಿಸಿದನಮಮ ರಾಜ ಕು&lt;br /&gt;ಮಾರ ಕಂಠೀರವನು ರಿಪು ಪರಿ&lt;br /&gt;ವಾರವನು ನಡೆಗೊಳಿಸಿದನು ಯಮರಾಜನಾಲಯಕೆ&lt;br /&gt;ಮಾರಿ ಮೊಗವಡದೆರೆದಳೋ ಕೈ&lt;br /&gt;ವಾರವೋ ತರುವಲಿಗಿದೆತ್ತಣ&lt;br /&gt;ವೀರವೋ ಶಿವ ಎನುತ ಬೆರಗಾಯಿತ್ತು ಸುರಕಟಕ ೧೦&lt;br /&gt;&lt;br /&gt;ಕೊಡೆನೆಗೆದವಟ್ಟೆಗಳು ರಕುತದ&lt;br /&gt;ಕಡಲೊಳರೆಜೀವದ ಭಟರು ಬಾ&lt;br /&gt;ಯ್ವಿಡುತ ತೇಕಾಡಿದರು ಮುಂಡದ ಹಿಂಡು ಮುಳುಗಾಡೆ&lt;br /&gt;ಅಡಸಿ ನೆಗೆವಾನೆಗಳ ತಲೆಗಳ&lt;br /&gt;ಗಡಣ ಮೆರೆದವು ಮಿಕ್ಕ ತೇಜಿಯ&lt;br /&gt;ಕಡಿಕುಗಳು ಕುಣಿದಾಡಿದವು ಕಿಗ್ಗಡಲ ರಕುತದಲಿ ೧೧&lt;br /&gt;&lt;br /&gt;ಕರಿಭಟೆಯ ಕಲಕಿದನು ಹಯ ಮೋ&lt;br /&gt;ಹರವ ಜರುಹಿದನೌಕಿ ಹರಿತಹ&lt;br /&gt;ವರ ರಥವ ಹುಡಿಮಾಡಿದನು ಕೆಡಹಿದನು ಕಾಲಾಳ&lt;br /&gt;ಹುರಿಯೊಡೆದು ಮೈದೆಗೆದು ಸಲೆ ಕೈ&lt;br /&gt;ಮರೆದು ಕೈದುವ ಹಾಯ್ಕಿ ಪಡೆ ಮೊಗ&lt;br /&gt;ದಿರುಹಲೆಚ್ಚನು ಕೊಚ್ಚಿದನು ಕೌರವ ಚತುರ್ಬಲವ ೧೨&lt;br /&gt;&lt;br /&gt;ತಳಿತ ಹೊಗರಿನ ಬಾಯಿ ಧಾರೆಯ&lt;br /&gt;ಹೊಳಹುಗಳ ಹೊಸ ಮಸೆಯ ತಳಪದ&lt;br /&gt;ಬೆಳಗುಗಳ ಬಲಿದಿಂಗಲೀಕ ಸುವರ್ಣ ರೇಖೆಗಳ&lt;br /&gt;ಲುಳಿಯ ಹಂಗನ ಗರಿಯ ಬಿಗುಹಿನ&lt;br /&gt;ಹಿಳುಕುಗಳ ಹೊಗರಂಬು ಕವಿದವು&lt;br /&gt;ತುಳುಕಿದವು ತೂರಿದವು ಕೆದರಿದವಹಿತ ಬಲದಸುವ ೧೩                                                                      &lt;br /&gt;&lt;br /&gt;ಅಳವಿಗೆಡೆ ಧುಮ್ಮಿಕ್ಕಿ ರಥದವ&lt;br /&gt;ರಿಳಿಯ ಬಿದ್ದರು ಭಯದಿ ತೇಜಿಯ&lt;br /&gt;ನಿಳಿದು ರಾವ್ತರು ಕರವ ಮುಗಿದರು ಕೊರಳ ಸಲಹೆನುತ&lt;br /&gt;ಗುಳವ ಸಡಿಲಿಸಿ ಹಾಯ್ಕಿ ಜೋದಾ&lt;br /&gt;ವಳಿಗಳಿಳಿದುದು ಕೈಯ ಕೈದುವ &lt;br /&gt;ನಿಳುವ ಬಾಯಲಿ ಬೆರಳನಿಟ್ಟುದು ವೈರಿ ಪಾಯದಳ ೧೪&lt;br /&gt;&lt;br /&gt;ಎಸಳ ಮೊನೆ ಮೋಹರದ ಸಂದಣಿ&lt;br /&gt;ಯಸಿರನುಳಿದುದು ಕೇಸರಾಕೃತಿ&lt;br /&gt;ಯಸಮ ವೀರರು ಪಥಿಕರಾದರು ಗಗನ ಮಾರ್ಗದಲಿ&lt;br /&gt;ನುಸುಳಿದರು ಕರ್ಣಿಕೆಯ ಕಾಹಿನ&lt;br /&gt;ವಸುಮತೀಶರು ರಾಯನರನೆಲೆ&lt;br /&gt;ದೆಸೆಗೆಡಲು ಮೊಳಗಿದನು ಪಾರ್ಥಕುಮಾರನಳವಿಯಲಿ ೧೫&lt;br /&gt;&lt;br /&gt;ಜರಿದುದಬ್ಜವ್ಯೂಹ ನೂಕಿದ&lt;br /&gt;ಕರಿ ತುರಗ ಕಾಲಾಳು ತೇರಿನ&lt;br /&gt;ಮರಳುದಲೆ ತಾನಿಲ್ಲ ನೆರೆ ನುಗ್ಗಾಯ್ತು ಕುರುಸೇನೆ&lt;br /&gt;ದೊರೆಗಳಹ ದ್ರೋಣಾದಿಗಳು ಕೈ&lt;br /&gt;ಮರೆದು ಕಳೆದರು ಪಾರ್ಥತನಯನ&lt;br /&gt;ಸರಿಯೊರೆಗೆ ಭಟನಾವನೆಂದನು ಕೌರವರ ರಾಯ ೧೬&lt;br /&gt;&lt;br /&gt;ತಂದೆ ಹಡೆಯನೆ ಮಗನನಹುದೋ&lt;br /&gt;ಕಂದ ಕಲ್ಪ ಸಹಸ್ರ ನೋಂತಳೊ&lt;br /&gt;ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ&lt;br /&gt;ಇಂದಿನೀ ಬಲವೀ ಸಮರ ಜಯ&lt;br /&gt;ದಂದವೀ ಸೌರಂಭವೀ ಸರ&lt;br /&gt;ಳಂದವೀ ತೆರಳಿಕೆಯದಾವಂಗೆಂದನವನೀಶ ೧೭&lt;br /&gt;&lt;br /&gt;ಹುರುಡ ಮರೆದೆನು ಮಗನೆ ಸಾಲದೆ&lt;br /&gt;ಭರತಕುಲದಲಿ ನಿನ್ನ ಬೆಳವಿಗೆ&lt;br /&gt;ಯೆರಡು ಕವಲನ್ವಯಕೆ ಕೊಡದೇ ಸುಗತಿ ಸಂಪದವ&lt;br /&gt;ಕರುಳು ಬೀಳವೆ ತನ್ನ ಬಸುರಿಂ&lt;br /&gt;ದುರುಳಿದವದಿರಲೇನು ಫಲ ಮ&lt;br /&gt;ತ್ಸರವೆ ಪಾರ್ಥ ಕೃತಾರ್ಥನೆಂದನು ಕೌರವರ ರಾಯ ೧೮&lt;br /&gt;&lt;br /&gt;ಎನುತ ಬಿಲುದುಡುಕಿದನು ಸೇನಾ&lt;br /&gt;ವನಧಿಗಭಯವನಿತ್ತು ಮರಳುವ&lt;br /&gt;ಜನಪರನು ಜರೆದೆಡಬಲದ ಮನ್ನೆಯರ ಮೂದಲಿಸಿ&lt;br /&gt;ಮೊನೆಗಣೆಯ ತೂಗುತ್ತ ನರ ನಂ&lt;br /&gt;ದನನ ರಥವನು ತರುಬಿ ನಿನ್ನಯ&lt;br /&gt;ತನಯನಡ್ಡೈಸಿದನು ಕೌರವ ರಾಯ ಖಾತಿಯಲಿ ೧೯&lt;br /&gt;&lt;br /&gt;ಮಗುವು ನೀ ಕೆಡಬೇಡ ಹೋಗೆನು&lt;br /&gt;ತಗಣಿತಾಸ್ತ್ರವ ಸುರಿವುತೈತರೆ&lt;br /&gt;ನಗುತ ನಿಂದಭಿಮನ್ಯು ನುಡಿದನು ಕೌರವೇಶ್ವರನ&lt;br /&gt;ಮಗುವು ತಾನಹೆ ತನ್ನ ಬಾಣಕೆ&lt;br /&gt;ಮಗುವುತನ ಬೇರಿಲ್ಲ ನೋಡೆಂ&lt;br /&gt;ದಗಲದಲಿ ಕೂರಂಬ ಸುರಿದನು ಪಾರ್ಥನಂದನನು ೨೦&lt;br /&gt;&lt;br /&gt;ಎಸಲು ಕಣೆ ಮುಕ್ಕುರುಕಿದವು ಹೊಸ&lt;br /&gt;ಮಸೆಯ ಧಾರೆಯ ತೋರ ಕಿಡಿಯಲಿ&lt;br /&gt;ಮುಸುಕಿತರಸನ ತೇರು ತಳಿತವು ಮೆಯ್ಯೊಳಂಬುಗಳು&lt;br /&gt;ಬಸಿವ ರಕುತವ ಜರಿವ ಜೋಡಿನ&lt;br /&gt;ನಸಿದ ಗರ್ವದ ನೆಗ್ಗಿದಾಳ್ತನ&lt;br /&gt;ದೆಸಕದೊಣಗಿಲ ಬಾಯ ಭೂಪನ ಕಂಡನಾ ದ್ರೋಣ ೨೧&lt;br /&gt;&lt;br /&gt;ರಾಯಸಿಲುಕಿದನಕಟಕಟ ರಾ&lt;br /&gt;ಧೇಯ ನಡೆ ಕೃಪ ಹೋಗು ಮಗನೆ ನಿ&lt;br /&gt;ಜಾಯುಧವ ಹಿಡಿ ಶಲ್ಯ ತಡೆಯದಿರೇಳು ಕೃತವರ್ಮ&lt;br /&gt;ರಾಯನನುಜರು ಕೈದುಗೊಳಿ ರಣ&lt;br /&gt;ದಾಯ ತಪ್ಪಿತು ನೃಪತಿ ಮಾರಿಯ &lt;br /&gt;ಬಾಯ ತುತ್ತಾದನು ಶಿವಾ ಎಂದೊರಲಿದನು ದ್ರೋಣ ೨೨&lt;br /&gt;&lt;br /&gt;ಮಾತು ಹಿಂಚಿತು ಮುಂಚಿ ಸುಭಟ&lt;br /&gt;ವ್ರಾತ ಹೊಕ್ಕುದು ಸಿಕ್ಕಿದರಸನ&lt;br /&gt;ಭೀತಿಯನು ಬಿಡಿಸಿದರು ಬೀರಿದರಂಬುಗಳ ಮಳೆಯ&lt;br /&gt;ಸೋತೆವಾವ್ ನೀ ಗೆಲಿದೆ ನಿ&lt;br /&gt;ಮ್ಮಾತಗಳನೀ ಭ್ರೂಣಹತ್ಯಾ&lt;br /&gt;ಪಾತಕಕ್ಕಂಜುವೆನೆನುತ ಕೈಕೊಂಡನಾ ದ್ರೋಣ ೨೩&lt;br /&gt;&lt;br /&gt;ರಾಯನನು ತೊಲಗಿಸಿದರಾ ಕ&lt;br /&gt;ರ್ಣಾಯತಾಸ್ತ್ರರು ರಾಹುವಿನ ಕಟ&lt;br /&gt;ವಾಯ ಚಂದ್ರನ ಸೆಳೆವವೋಲರಿದಾಯ್ತು ಸುಭುಟರಿಗೆ&lt;br /&gt;ಸಾಯಕವ ಸರಿಗೊಳಿಸಿದರು ವ&lt;br /&gt;ಜ್ರಾಯುಧನ ಮೊಮ್ಮನ ರಥವ ನಿ&lt;br /&gt;ರ್ದಾಯದಲಿ ಮುತ್ತಿದರು ಕುರುಸೇನಾ ಮಹಾರಥರು ೨೪&lt;br /&gt;&lt;br /&gt;ಹಸುಳೆತನದಲಿ ಹರನ ಮಗನಾ&lt;br /&gt;ವಿಷಮ ದೈತ್ಯನ ಸೀಳಿ ಬಿಸುಡನೆ&lt;br /&gt;ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ&lt;br /&gt;ಶಿಶುವೆ ನೋಡಭಿಮನ್ಯು ಸುಭಟ&lt;br /&gt;ಪ್ರಸರದಿನಿಬರನೊಂದು ಘಾಯದೊ&lt;br /&gt;ಳುಸಿರ ತೆಗೆಬಗೆ ಮಾಡಿದನು ಧೃತರಾಷ್ಟ್ರ ಕೇಳೆಂದ ೨೫&lt;br /&gt;&lt;br /&gt;ಗುರುಸುತನನೊಟ್ಟೈಸಿ ಶಲ್ಯನ&lt;br /&gt;ಭರವಸವ ನಿಲಿಸಿದನು ಕೃಪನು&lt;br /&gt;ಬ್ಬರದ ಗರ್ವವ ಮುರಿದು ಕೃತವರ್ಮಕನ ನೋಯಿಸಿದ&lt;br /&gt;ಅರಸನನುಜರ ಸದೆದು ಬಾಹ್ಲಿಕ &lt;br /&gt;ದುರುಳ ಸೌಬಲ ಸೋಮದತ್ತರ&lt;br /&gt;ಹುರುಳುಗೆಡಿಸಿದನೊಬ್ಬ ಶಿಶು ಗೆಲಿದನು ಮಹಾರಥರ ೨೬&lt;br /&gt;&lt;br /&gt;ಮುಳುಗಿದಂಬಿನ ಮರುಮೊನೆಯ ಮೈ&lt;br /&gt;ಗಳ ಮಹಾರಥರಾಜಿ ಕದನದ&lt;br /&gt;ನೆಲನ ಬಿಡೆ ಖತಿಗೊಂಡು ಮುರಿದೋಡುವರ ಮೂದಲಿಸಿ&lt;br /&gt;ಬಿಲುದುಡುಕಿ ಸಾರಥಿಗೆ ಸೂಚಿಸಿ&lt;br /&gt;ಮಲೆತ ನೋಡೈ ಮಗುವು ಫಡ ಫಡ&lt;br /&gt;ತೊಲಗು ತೊಲಗೆಂದೆನುತ ರಿಪುವನು ತರುಬಿದನು ಕರ್ಣ ೨೭&lt;br /&gt;&lt;br /&gt;ಗಾರುಗೆಡೆದರೆ ಮೆರೆಯದೋಲೆಯ&lt;br /&gt;ಕಾರತನವೆಮ್ಮೊಡನೆ ನೀ ಮೈ&lt;br /&gt;ದೋರಿ ಮಡಮುರಿವಿಲ್ಲದೆಚ್ಚಾಡಿದರೆ ಸಫಲವಿದು&lt;br /&gt;ತೋರುವೆನು ಕೈಗುಣವನೆನುತೈ&lt;br /&gt;ದಾರು ಶರದಲಿ ಕರ್ಣನೆದೆಯನು&lt;br /&gt;ಡೋರುಗಳೆಯಲು ಬಳಲಿದನು ಪೂರಾಯ ಘಾಯದಲಿ ೨೮&lt;br /&gt;&lt;br /&gt;ಬೆದರಿ ಭೂಕಂಪದಲಿ ಕುಲಗಿರಿ&lt;br /&gt;ಯದಿರುವಂತಿರೆ ಚರಿಸಿ ಕಾಯುವ&lt;br /&gt;ಬಿದಿರಿ ಮರಳುವ ಕಂಗಳಲಿ ಕಲಿಕರ್ಣ ಮೈಮರೆಯೆ&lt;br /&gt;ಕೆದರಿತೀ ಬಲವಕಟ ಕರ್ಣನ&lt;br /&gt;ಸದೆದನೋ ಸಾಹಸಿಕ ಶಿಶು ಕಾ&lt;br /&gt;ದಿದೆವು ನಾವಿನ್ನೆನುತಲಿರೆ ಕಲಿ ಶಲ್ಯನಿದಿರಾದ ೨೯&lt;br /&gt;&lt;br /&gt;ಬಾಲಕನೆ ಹಿಮ್ಮೆಟ್ಟು ಹಿಮ್ಮೆ&lt;br /&gt;ಟ್ಟಾಳುತನವೆಮ್ಮೊಡನೆಯೇ ಮರು&lt;br /&gt;ಳೇಳಿಗೆಯಲುಬ್ಬೆದ್ದು ಕರ್ಣನ ಸದೆದ ಗರ್ವದಲಿ &lt;br /&gt;ಮೇಲನರಿಯಾ ಶಲ್ಯನೊಡನೆಯು&lt;br /&gt;ಕಾಳೆಗವೆ ನಿಮ್ಮಯ್ಯನಿಂದಿನ&lt;br /&gt;ಲೂಳಿಗವ ತಹುದೆನುತ ಸುರಿದನು ಸರಳ ಸರಿವಳೆಯ ೩೦&lt;br /&gt;&lt;br /&gt;ಬಾಲತನವೇನೂಣಯವೆ ಕ&lt;br /&gt;ಟ್ಟಾಳುತನವಾಭರಣವವನೀ&lt;br /&gt;ಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ&lt;br /&gt;ಆಳಿನಂಗವನೆತ್ತ ಬಲ್ಲೆ ಶ&lt;br /&gt;ರಾಳಿಯಲಿ ನಿನ್ನಂಘವಣೆಯ ಛ&lt;br /&gt;ಡಾಳತನವನು ಮುದ್ರಿಸುವೆನೆನುತೆಚ್ಚನಭಿಮನ್ಯು ೩೧&lt;br /&gt;&lt;br /&gt;ಸರಳ ಸರಳಲಿ ಕಡಿದು ಸವೆಯದೆ&lt;br /&gt;ಸರಿ ಮಿಗಿಲ ಕಾದಿದರೆ ಶಲ್ಯನ&lt;br /&gt;ಧರಧುರದ ದೆಖ್ಖಾಳತನವನು ಕಂಡು ಖಾತಿಯಲಿ&lt;br /&gt;ಸರಳ ಹದಿನೈದರಲಿ ಶಲ್ಯನ&lt;br /&gt;ಬರಿಯ ಕೆತ್ತಿದನೈದು ಬಾಣದೊ&lt;br /&gt;ಳುರವ ತೋಡಿದನೊಂದು ನಿಮಿಷಕೆ ಶಲ್ಯ ಸೈಗೆಡೆದ ೩೨&lt;br /&gt;&lt;br /&gt;ತಲೆ ತಿರುಗಿ ತುಟಿಯೊಣಗಿ ಕಂಗಳ&lt;br /&gt;ಬಳೆ ಮರಳಿ ಬಸವಳಿಯೆ ಸಾರಥಿ&lt;br /&gt;ತೊಲಗಿಸಿದನಾ ರಥವನೊಡಹುಟ್ಟಿದನ ವೇದನೆಯ&lt;br /&gt;ನಿಲುಕಿ ಕಂಡನು ಶಲ್ಯನನುಜನು&lt;br /&gt;ಹಿಳುಕು ಹಿಳುಕಿನ ಮೇಲೆ ಸಂಧಿಸಿ&lt;br /&gt;ಮುಳಿದೆಸುತ ತಾಗಿದನು ಖತಿಯಲಿ ಪಾರ್ಥನಂದನನ ೩೩&lt;br /&gt;&lt;br /&gt;ಪೂತು ಶಲ್ಯನ ತಮ್ಮನೇ ಮಾ&lt;br /&gt;ರಾಂತನಣ್ಣನ ಹರಿಬವನು ದಿಟ&lt;br /&gt;ಸೂತ ನೋಡೈ ಸಾಹಸಿಕನೈ ಲೇಸು ಲೇಸೆನುತ&lt;br /&gt;ಆತನಂಬೈದಾರ ಮನ್ನಿಸಿ&lt;br /&gt;ಸೋತುವೊಲು ಮನಗೆಲವ ಮಾಡಿ ನಿ&lt;br /&gt;ಶಾತ ಶರದಿಂದಿಳುಹಿದನು ಶಲ್ಯಾನುಜನ ಶಿರವ ೩೪&lt;br /&gt;&lt;br /&gt;ದೊರೆ ಮಡಿಯೆ ಮದ್ರಾನುಜನ ಬಲ&lt;br /&gt;ತಿರುಗಿತಭಿಮನ್ಯುವಿನ ಹೊಯ್ಲಲಿ&lt;br /&gt;ಹುರುಳುಗೆಟ್ಟುದು ಹೆಸರ ನಾಯಕವಾಡಿ ದುಗುಡದಲಿ&lt;br /&gt;ತರಹರವ ನಾ ಕಾಣೆನೀ ಮೋ&lt;br /&gt;ಹರಕೆ ಗತಿಯೇನೆನುತ ಭರದಲಿ&lt;br /&gt;ಕರೆದು ತೋರಿದನಾ ಕೃಪಾಚಾರ್ಯಂಗೆ ಕಲಿ ದ್ರೋಣ ೩೫&lt;br /&gt;&lt;br /&gt;ಮಗುವೆ ನೋಡಭಿಮನ್ಯು ನಮಗಿದು&lt;br /&gt;ಹೊಗುವಡಳವೇ ಕಾಲರುದ್ರನ&lt;br /&gt;ತಗಹು ನಿಟ್ಟಂತಿದೆ ಕುಮಾರನ ಕೋಪದಾಟೋಪ&lt;br /&gt;ಮೊಗಸಲರಿದು ಭುಜಪ್ರತಾಪದ&lt;br /&gt;ಹೊಗರು ಹೊಸಪರಿಯೆನುತ ರಿಪುಗಳ&lt;br /&gt;ಹೊಗಳುತಿರೆ ಕೇಳಿದನು ಕೌರವ ರಾಯನೀ ನುಡಿಯ ೩೬&lt;br /&gt;&lt;br /&gt;ಕೇಳುತಿರ್ದೈ ಕರ್ಣ ಸೆಲೆ ನ&lt;br /&gt;ಮ್ಮಾಳ ಬೆದರಿಸಿ ನುಡಿದು ರಿಪು ಭಟ&lt;br /&gt;ನಾಳನೇರಿಸಿ ನುಡಿವ ಬಾಹಿರರೇನ ಹೇಳುವೆನು&lt;br /&gt;ಖೂಳರೆಂಬೆವೆ ಗುರುಗಳಿಂದು ವಿ&lt;br /&gt;ಶಾಲಮತಿಗಳು ತಮ್ಮ ಭಾಗ್ಯದ&lt;br /&gt;ಮೇಲೆ ದೈವವನೆಂದು ಫಲವೇನೆನುತ ಬಿಸುಸುಯ್ದ ೩೭&lt;br /&gt;&lt;br /&gt;ವೀರರಂಗವನೆತ್ತ ಬಲ್ಲರು&lt;br /&gt;ಹಾರುವರು ಬೆಳುದಿಂಗಳಿನ ಬಿರು&lt;br /&gt;ಸಾರ ಸುಡುವುದು ಕೈದು ಹಿಡಿದರೆ ಕಲಿಗಳೇ ದ್ವಿಜರು&lt;br /&gt;ವೈರಿಭಟನಿವ ಮಗುವಲಾ ಮನ&lt;br /&gt;ವಾರೆ ಕಾದಲು ಲಕ್ಷ್ಯವಿಲ್ಲೀ&lt;br /&gt;ಯೂರುಗರ ಬೈದೇನು ಫಲವೆಂದರಸ ಹೊರವಂಟ ೩೮&lt;br /&gt;&lt;br /&gt;ಎನಲು ದುಶ್ಯಾಸನನು ರಾಯನ&lt;br /&gt;ಕನಲಿದನು ಖತಿಯೇಕೆ ಜೀಯಿಂ&lt;br /&gt;ದೆನಗೆ ಬೆಸಸಾ ಸಾಕು ಭಂಡರ ಬೈದು ಫಲವೇನು&lt;br /&gt;ದಿನಪ ದೀವಿಗೆಯಾಗಲುಳಿದೀ&lt;br /&gt;ಬಿನಗು ಬೆಳಗಿನ ಹಂಗು ಬೇಹುದೆ&lt;br /&gt;ದನುಜ ದಿವಿಜರ ದಳಕೆ ತನ್ನನು ಬಿಟ್ಟು ನೋಡೆಂದ ೩೯&lt;br /&gt;&lt;br /&gt;ತಳಿತುದೆಡಬಲವಂಕದಲಿ ಹೆ&lt;br /&gt;ಬ್ಬಲ ಛಡಾಳಿಸಿ ಮೊರೆವ ಭೇರಿಯ&lt;br /&gt;ಘುಳುಘುಳು ಧ್ವನಿ ಕೂಡೆ ಜಡಿದುದು ಕಮಲಜಾಂಡಘಟ&lt;br /&gt;ಹಳವಿಗೆಯ ಸೀಗುರಿಯ ಚಮರಾ&lt;br /&gt;ವಳಿಯ ವಿಮಳಚ್ಛತ್ರ ಪಙ್ತೆಯ&lt;br /&gt;ವಳಯದಲಿ ನಭ ಮುಳುಗೆ ಮುತ್ತಿತು (ಪಾ: ಮೂತ್ತಿತು) ಸೇನೆ ರಿಪುಭಟನ ೪೦&lt;br /&gt;&lt;br /&gt;ತಿರುಹು ತೇಜಿಯನಿತ್ತಲಿವದಿರ&lt;br /&gt;ನೊರಸಿ ದುಶ್ಯಾಸನನ ಬೆನ್ನಲಿ&lt;br /&gt;ಕರುಳು ತೆಗೆವೆನು ನೋಡು ಸಾರಥಿ ಬೆಚ್ಚಬೇಡೆನುತ&lt;br /&gt;ಅರಗಿನರಸನ ಬಾಗಿಲಲಿ ದ&lt;br /&gt;ಳ್ಳುರಿಗೆ ತಡವೇ ಹೊಕ್ಕು ನಿಮಿಷದೊ&lt;br /&gt;ಳೊರಸಿದನು ಚತುರಂಗ ಬಲವನು ಕೌರವಾನುಜನ ೪೧&lt;br /&gt;&lt;br /&gt;ಎಲವೊ ಕೌರವ ಕೊಬ್ಬಿ ನರಿ ಹೆ&lt;br /&gt;ಬ್ಬುಲಿಯ ಕೂಸನು ಬೇಡುವಂದದಿ &lt;br /&gt;ಅಳವನರಿಯದೆ ಅಧಮ ರಥಿಕರ ಕೂಡೆ ತೊಡಕುವರೆ&lt;br /&gt;ಮಲೆತು ನೀನೆನ್ನೊಡನೆ ರಣದಲಿ&lt;br /&gt;ಹಳಚಿ ನೀ ತಲೆವೆರಸಿ ಮರಳಿದ&lt;br /&gt;ಡಿಳುಹುವೆನು ಕೈದುವನು ಶರಸನ್ಯಾಸ ನನಗೆಂದ ೪೨&lt;br /&gt;&lt;br /&gt;ಸಾಕು ತರುವಲಿತನದ ಮಾತುಗ&lt;br /&gt;ಳೇಕೆ ಗರುವರ ಮುಂದೆ ವೀರೋ&lt;br /&gt;ದ್ರೇಕದಲಿ ಮೈಮರೆದು ರಣದಲಿ ಹೊಯ್ದು ಹೊಟ್ಟುಗರ&lt;br /&gt;ಆ ಕಿರೀಟಿ ವೃಕೋದರರು ಮೈ&lt;br /&gt;ಸೋಕಿದರೆ ಸಂತೋಷ ನೀನವಿ&lt;br /&gt;ವೇಕಿ ಬಾಲಕನೇನ ಮಾಡುವೆನೆಂದನವ ನಗುತ ೪೩&lt;br /&gt;&lt;br /&gt;ಕೊಳಚೆ ನೀರೊಳಗಾಳುತೇಳುತ&lt;br /&gt;ಜಲಧಿ ಕಾಲ್ದೊಳೆಯೆಂಬ ಭಂಡರ&lt;br /&gt;ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು&lt;br /&gt;ಬಳಿಕ ಭೀಮಾರ್ಜುನರ ಬಯಸುವು&lt;br /&gt;ದೆಲೆ ಮರುಳೆ ನಿನ್ನೊಡಲ ಸೀಳಿಯೆ&lt;br /&gt;ತಿಳಿ ರಕುತದಲಿ ತಾಯ ತುರುಬನು ನಾದಿಸುವೆನೆಂದ ೪೪&lt;br /&gt;&lt;br /&gt;ಕಾತರಿಸದಿರು ಬಾಲ ಭಾಷೆಗ&lt;br /&gt;ಳೇತಕೀವು ನೀ ಕಲಿತ ಬಿಲು ವಿ&lt;br /&gt;ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ&lt;br /&gt;ಭೀತ ಭಟರನು ಹೊಳ್ಳುಗಳೆದ ಮ&lt;br /&gt;ದಾತಿರೇಕದ ಠಾವಿದಲ್ಲೆಂ&lt;br /&gt;ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ ೪೫&lt;br /&gt;&lt;br /&gt;ಬಿಲ್ಲ ಹಿಡಿಯಲು ಕೌರವಾನುಜ&lt;br /&gt;ಬಲ್ಲ ನೋಡೈ ಸೂತ ಮಿಗೆ ತ&lt;br /&gt;ಪ್ಪಲ್ಲ ತಪ್ಪಲ್ಲಂಬು ಬಿದ್ದವು ಗುರಿಯ ಸರಿಸದಲಿ&lt;br /&gt;ನಿಲ್ಲು ನಿಲ್ಲಾದರೆಯೆನುತ ಬಲು&lt;br /&gt;ಬಿಲ್ಲನುಗುಳಿಸಿದನು ಶರೌಘವ&lt;br /&gt;ನೆಲ್ಲಿ ನಭ ದೆಸೆಯೆತ್ತಲೆನೆ ಘಾಡಿಸಿದವಂಬುಗಳು ೪೬&lt;br /&gt;&lt;br /&gt;ಅವನ ನೂರಂಬುಗಳ ಕಡಿದವ&lt;br /&gt;ನವಯವವ ಕೀಲಿಸಿದಡಾಕ್ಷಣ&lt;br /&gt;ವವನಿಯಲಿ ಬಲುಗರುಳು ಬಿದ್ದವು ಭಟನ ಕಿಬ್ಬರಿಯ&lt;br /&gt;ಅವಗಡಿಸಿ ಖಾತಿಯಲಿ ಖಳ ಶರ&lt;br /&gt;ನಿವಹವನು ತುಡುಕಿದನು ಕೊಡಹಿದ&lt;br /&gt;ವವನ ನಿಮಿಷದೊಳರ್ಜುನಾತ್ಮಕನಗಣಿತಾಸ್ತ್ರಗಳು ೪೭&lt;br /&gt;&lt;br /&gt;ತಾಯ ತುರುಬಿಗೆ ಹಾಯ್ದು ಪಾತಕಿ&lt;br /&gt;ನಾಯ ಕೊಂಡಾಡುವರೆ ಕೊಬ್ಬಿದ&lt;br /&gt;ಕಾಯವನು ಕದುಕಿರಿದು ನೆತ್ತರ ನೊರೆಯ ಬಾಸಣಿಸಿ&lt;br /&gt;ತಾಯ ಕರಸುವೆನೆನುತ ಕಮಳ ದ&lt;br /&gt;ಳಾಯತಾಂಬಕನಳಿಯನನುಪಮ&lt;br /&gt;ಸಾಯಕವ ಹೂಡಿದನು ನೋಡಿದನೊಂದು ಚಿತ್ತದಲಿ ೪೮&lt;br /&gt;&lt;br /&gt;ಇವನ ಕೊಂದರೆ ತಂದೆ ಮಿಗೆ ಮೆ&lt;br /&gt;ಚ್ಚುವನೊ ಮುನಿನನೊ ತನ್ನ ನುಡಿ ಸಂ&lt;br /&gt;ಭವಿಸದೆಂಬನೊ ಭೀಮಸೇನನ ಭಾಷೆಗಂಜುವೆನು&lt;br /&gt;ಇವನ ತಾನೇ ಕೊಲಲಿ ನಮಗಿ&lt;br /&gt;ನ್ನಿವನ ತೊಡಕೇ ಬೇಡ ಕದನದೊ&lt;br /&gt;ಳಿವನ ಭಂಗಿಸಿ ಬಿಡುವೆನೆಂದನು ತನ್ನ ಮನದೊಳಗೆ ೪೯&lt;br /&gt;&lt;br /&gt;ಕಾಯ್ದುಕೊಳ್ಳೈ ಕೌರಾವಾನುಜ&lt;br /&gt;ಹೊಯ್ದು ಹೋಗಲು ಬಹುದೆ ಹರನಡ&lt;br /&gt;ಹಾಯ್ದೆಡೆಯು ಗೆಲುವೆನು ಕಣಾ ನಿಲ್ಲೆನುತ ತೆಗೆದೆಸಲು&lt;br /&gt;ಬಾಯ್ದೆಗೆದು ಕೇಸುರಿಯ ಕಾರುತ&lt;br /&gt;ಕೈದುವೆದೆಯಲಿ ಕೊಂಡು ಬೆನ್ನಲಿ&lt;br /&gt;ಹಾಯ್ದಡವನೋರ್ಗುಡಿಸಿದನು ಕುರುಸೇನೆ ಕಳವಳಿಸೆ ೫೦&lt;br /&gt;&lt;br /&gt;ಅಹಹ ಕೈತಪ್ಪಾಯ್ತು ರಾಯನ&lt;br /&gt;ಸಹಭವನು ನೊಂದನು ಶಿವಾ ಎನು&lt;br /&gt;ತಹಿತ ಸುಭಟರು ಸರಿಯೆ ಸಾರಥಿ ತಿರುಹಿದನು ರಥವ&lt;br /&gt;ಬಹಳ ಬಲ ನುಗ್ಗಾಯ್ತು ಶಿಶುವಿನ&lt;br /&gt;ಸಹಸ ಕುಂದದೆನುತ್ತ ಖತಿಯಲಿ&lt;br /&gt;ಮಿಹಿರಸುತನಡಹಾಯ್ದು ತಡೆದನು ಮತ್ತೆ ಬಾಲಕನ ೫೧&lt;br /&gt;&lt;br /&gt;ಸಾರು ಸಾರಭಿಮನ್ಯು ಫಡ ಇ&lt;br /&gt;ನ್ನಾರ ಬಸುರನು ಹೊಗುವೆ ನಿನ್ನವ&lt;br /&gt;ರಾರ ಸಂತತಿ ಮಾಡಿಕೊಳಲಿ ಭವತ್ ಪರೋಕ್ಷದಲಿ&lt;br /&gt;ಭೂರಿ ಬಲವನು ಸದೆವ ಗರ್ವವಿ&lt;br /&gt;ದಾರ ಕೂಡೆ ಧನುರ್ಧರಾಗ್ರಣಿ &lt;br /&gt;ವೀರ ಕರ್ಣ ಕಣಾ ಎನುತ ತೆಗೆದೆಚ್ಚನತಿರಥನ ೫೨&lt;br /&gt;&lt;br /&gt;ಬಲ್ಲೆನುಂಟುಂಟಖಿಳ ವೀರರೊ&lt;br /&gt;ಳಿಲ್ಲ ಸರಿದೊರೆ ನಿನಗೆ ಬಾಯಲಿ&lt;br /&gt;ಬಲ್ಲಿದನು ನೀನಹೆ ಭಟಾಂಗದ ಮಾತದಂತಿರಲಿ&lt;br /&gt;ಒಳ್ಳೆ ಗಡ ಪಾವುಡವ ವಾಸುಗಿ&lt;br /&gt;ಯಲ್ಲಿಗಟ್ಟಿತು ಗಡ ಮಹಾಹವ&lt;br /&gt;ಮಲ್ಲ ಮಡ ಮುರಿಯದಿರೆನುತ ಹೊಕ್ಕೆಚ್ಚನಭಿಮನ್ಯು ೫೩&lt;br /&gt;&lt;br /&gt;ಇರುಳುರಾಯನ ಮನೆಗೆ ಕಪ್ಪವ&lt;br /&gt;ತೆರುವುದೋ ಹಗಲೆಲವೊ ಕೆಲಬರ&lt;br /&gt;ನಿರಿದ ದರ್ಪವದಾರೊಡನೆ ಫಡ ಮರಳು ಮರಳೆನುತ&lt;br /&gt;ಕಿರುಮೊನೆಯ ಮುಗುಳಂಬುಗಳ ಸೈ&lt;br /&gt;ಗರೆದನಭಿಮನ್ಯುವಿನ ಮೆಯ್ಯಲಿ&lt;br /&gt;ತುರುಗಿದವು ಮರಿದುಂಬಿ ಕೆಂದಾವರೆಗೆ ಕವಿವಂತೆ ೫೪&lt;br /&gt;&lt;br /&gt;ಸುರಪನಂಕುಶವೌಕಿದರೆ ಮೆ&lt;br /&gt;ಯ್ಯರಿಯದೈರಾವತಕೆ ಕಬ್ಬಿನ&lt;br /&gt;ಲಿರಿದರಂಜಿಕೆಯುಂಟೆ ನಿನ್ನಯ ಕಣೆಗಳೌಕಿದರೆ&lt;br /&gt;ತರಳುವನೆ ಅಭಿಮನ್ಯುವೆನುತ&lt;br /&gt;ಬ್ಬರಿಸಿ ಕರ್ಣನ ಕಾಯವನು ಹುಗಿ&lt;br /&gt;ಲಿರಿದನೆಂಟಂಬಿನಲಿ ತೋದುದು ತೇರು ರಕ್ತದಲಿ ೫೫&lt;br /&gt;&lt;br /&gt;ಮಳೆಗೆ ಮೊಗದಿರುಹುವುದೆ ಬಡಬಾ&lt;br /&gt;ನಳನೆಲವೊ ನಿನ್ನಂಬು ತಾಕಿದ&lt;br /&gt;ರಳುಕುವೆನೆ ತಾನೆನುತ ರವಿಸುತನೆಚ್ಚನತಿರಥನ&lt;br /&gt;ಹಿಳುಕು ಕವಿದವು ಭಟನ ಕೈ ಮೈ&lt;br /&gt;ಗಳಲಿ ಮಿನುಗಿದವಿರುಳು ಮರನಲಿ&lt;br /&gt;ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ ೫೬&lt;br /&gt;&lt;br /&gt;ಹೂಣಿಗರು ಕೆಲರಿವರು ಇವದಿರ&lt;br /&gt;ಗೋಣನರಿವರೆ ಇವರ ಜೀವದ&lt;br /&gt;ಕೇಣಿಕಾರರು ಖಾತಿಗೊಂಬರು ಭೀಮ ಫಲಗುಣರು&lt;br /&gt;ಮಾಣದಿವದಿರು ಮತ್ತೆ ರಣದಲಿ&lt;br /&gt;ಕಾಣೆನಿದಕಿನ್ನನುವನೆನುತ&lt;br /&gt;ಕ್ಷೀಣಭುಜಬಲನೆಚ್ಚು ಕಡಿದನು ಸೂತಜನ ಧನುವ ೫೭&lt;br /&gt;&lt;br /&gt;ಕೈದು ಮುರಿಯಲು ಮುಂದೆ ನೂಕದೆ&lt;br /&gt;ಹಾಯ್ದನಾ ರವಿಸೂನು ಬಳಿಕಡ&lt;br /&gt;ಹಾಯ್ದು ತಡೆದನು ಬವರವನು ಕರ್ಣಾತ್ಮಜನು ಕಡುಗಿ&lt;br /&gt;ಐದು ಬಾಣದಲವನ ಕೊರಳನು&lt;br /&gt;ಕೊಯ್ದನರ್ಜುನ ಸೂನುವಾತನ&lt;br /&gt;ನೊಯ್ದರಂತಕದೂತರದ್ಬುತವಾಯ್ತು ಸಂಗ್ರಾಮ ೫೮&lt;br /&gt;&lt;br /&gt;ಘಾಯವಡೆದನು ಶಲ್ಯ ರವಿಸುತ&lt;br /&gt;ನಾಯುಧವ ಬಿಟ್ಟೋಡಿದನು ಕುರು&lt;br /&gt;ರಾಯನನುಜನು ಬದುಕುವರೆ ಮೆಯ್ಯೆಲ್ಲ ಬಾದಣವು&lt;br /&gt;ಸಾಯದುಳಿದವರಿಲ್ಲ ಮಿಕ್ಕಿನ&lt;br /&gt;ನಾಯಕರೊಳಕಟೆನಲು ಕುರುಬಲ&lt;br /&gt;ಬಾಯ ಬಿಡೆ ಶಲ್ಯನ ಕುಮಾರಕ ಹೊಕ್ಕನಾಹವವ ೫೯&lt;br /&gt;&lt;br /&gt;ಆ ಕುಮಾರನ ಸೇನೆ ಗಡಣಿಸಿ&lt;br /&gt;ನೂಕಿತುರವಣಿಸಿದುದು ತುರಗಾ&lt;br /&gt;ನೀಕವಿಭತತಿ ತೂಳಿದವು ತುಡುಕಿದವು ರಥಿನಿಕರ&lt;br /&gt;ತೋಕಿದವು ಕೈದುಗಳ ಮಳೆ ರಣ&lt;br /&gt;ದಾಕೆವಾಳರ ಸನ್ನೆಯಲಿ ಸಮ&lt;br /&gt;ರಾಕುಳರು ಕೆಣಕಿದರು ರಿಪುಕಲ್ಪಾಂತ ಭೈರವನ ೬೦&lt;br /&gt;&lt;br /&gt;ಭಟ ಛಡಾಳಿಸಿದನು ಘೃತಾಹುತಿ&lt;br /&gt;ಘಟಿಸಿದಗ್ನಿಯವೋಲು ರಣ ಚೌ&lt;br /&gt;ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹ ನಾದದಲಿ&lt;br /&gt;ನಿಟಿಲ ನೇತ್ರನ ಕೋಪಶಿಖಿ ಲಟ&lt;br /&gt;ಕಟಿಸುವಂತಿರೆ ಹೆಚ್ಚಿದತಿ ಬಲ&lt;br /&gt;ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ ೬೧&lt;br /&gt;&lt;br /&gt;ಧರೆ ಬಿರಿಯೆ ಬೊಬ್ಬೆಯಲಿ ಬಲದ&lt;br /&gt;ಬ್ಬರಣೆ  ದೆಖ್ಖಾದೆಖ್ಖೆಯಾಗಲು&lt;br /&gt;ಧರಣಿಪತಿ ಮರುಗಿದನು ಮಗನೇನಾದನೋ ಎನುತ&lt;br /&gt;ಕರೆದು ಭೀಮನ ನಕುಳನನು ಸಂ&lt;br /&gt;ಗರಕೆ ಧೃಷ್ಟದ್ಯುಮ್ನ ದ್ರುಪದರ&lt;br /&gt;ಪರಠವಿಸಿ ಕಳುಹಿದನು ಸೌಭದ್ರಂಗೆ ಪಡಿಬಲವ ೬೨&lt;br /&gt;&lt;br /&gt;ಗದೆಯ ತಿರುಹುತ ಸಿಂಹನಾದದ&lt;br /&gt;ಲೊದರಿ ಮಗನಾವಡೆಯೆನುತ ನೂ&lt;br /&gt;ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ&lt;br /&gt;ಅದಟನೈತರೆ ಹೋಗಲೀಯದೆ&lt;br /&gt;ಮೊದಲ ಬಾಗಿಲ ಕಟ್ಟಿಕೊಂಡ&lt;br /&gt;ಗ್ಗದ ಜಯದ್ರಥ ಭೀಮನೊಳು ಬಲುಗಾಳೆಗವ ಹಿಡಿದ ೬೩&lt;br /&gt;&lt;br /&gt;ತೆರಹುಗೊಡು ಫಡ ಫಡ ಜಯದ್ರಥ&lt;br /&gt;ಹೆರತೆಗೆದು ಸಾರೆನುತ ಹೂಣಿಗ&lt;br /&gt;ನುರುಬಿದರೆ ಮಾರಾಂತು ಭೀಮನ ಕಡುಹ ನಿಲಿಸಿದನು&lt;br /&gt;ಮರೆದು ಕಳೆಯಭಿಮನ್ಯುವನು ಮೈ&lt;br /&gt;ಮರೆಯದೆನ್ನಲಿ ಕಾದು ಮಾತಿನ&lt;br /&gt;ಬಿರುಬಿನಲಿ ಫಲವಿಲ್ಲೆನುತ ಕೆಂಗೋಲ ತೊಡಚಿದನು ೬೪&lt;br /&gt;&lt;br /&gt;ಬವರದಲಿ ಕಲಿಪಾರ್ಥನಲ್ಲದೆ&lt;br /&gt;ಪವನತನಯಾದಿಗಳ ಗೆಲುವರೆ&lt;br /&gt;ಶಿವನ ಕೃಪೆಯೆನಗುಂಟು ಮುನ್ನೆನುತಾ ಜಯದ್ರಥನು&lt;br /&gt;ಕವಲುಗೋಲಲಿ ಭೀಮನನು ಪರಿ&lt;br /&gt;ಭವಿಸಿದನು ಸಹದೇವನಕುಳರ&lt;br /&gt;ತಿವಿದು ಧೃಷ್ಟದ್ಯುಮ್ನ ಮೊದಲಾದಗಣಿತರ ಗೆಲಿದ ೬೫&lt;br /&gt;&lt;br /&gt;ಪಡಿಬಲವ ಬರಲೀಯದನಿಲಜ&lt;br /&gt;ನೊಡನೆ ಸೈಂಧವ ಕಾದುತಿರಲಿ&lt;br /&gt;ಮ್ಮಡಿಸಿತಾಹವವಿತ್ತ ಮೋಹರ ಮಧ್ಯ ರಂಗದಲಿ&lt;br /&gt;ಕಡುಗಿ ನೂಕುವ ಕದನ ರಾಗಿಗ&lt;br /&gt;ಳೊಡನೆ ಕಾದುವ ಪಾರ್ಥತನಯನ&lt;br /&gt;ಬಿಡಿ ಸರಳು ಬೀರಿದವು ರಮಣರನಮರ ವಧುಗಳಿಗೆ ೬೬&lt;br /&gt;&lt;br /&gt;ತರಿದನಾನೆಯ ಥಟ್ಟುಗಳ ಮು&lt;br /&gt;ಕ್ಕುರಿಕಿದನು ಕಾಂಭೋಜ ತೇಜಿಯ&lt;br /&gt;ನುರುಬಿ ಹೊಯ್ದನು ಸೂನಿಗೆಯ ತೇರುಗಳ ತಿಂತಿಣಿಯ&lt;br /&gt;ಮುರಿದನೊಗ್ಗಿನ ಪಾಯ್ದಳವನ &lt;br /&gt;ಳ್ಳಿರಿವ ಹೆಣ ಕುಣಿದಾಡೆ ಭಟ ಬೇ&lt;br /&gt;ಸರದೆ ಕೊಂದನು ವೈರಿಸೇನೆಯನರಸ ಕೇಳೆಂದ ೬೭&lt;br /&gt;&lt;br /&gt;ಒರಸಿದನು ಹದಿನೆಂಟು ಸಾವಿರ&lt;br /&gt;ಕರಿ ಘಟೆಯನೈವತ್ತು ಸಾವಿರ&lt;br /&gt;ತುರುಗವನು ಮೂವತ್ತು ಸಾವಿರ ವರ ಮಹಾರಥರ&lt;br /&gt;ಧುರದಿ ಲಕ್ಷ ಪದಾತಿಯನು ಸಂ&lt;br /&gt;ಹರಿಸಿ ಶಲ್ಯ ಕುಮಾರಕನ ಕ&lt;br /&gt;ತ್ತರಿಸಿದನು ಗೋನಾಳಿಯನು ದಿವ್ಯಾಸ್ತ್ರಧಾರೆಯಲಿ ೬೮&lt;br /&gt;&lt;br /&gt;ಮಡಿದನಕಟಾ ತಮ್ಮ ಸಖನೆಂ&lt;br /&gt;ದಡಸಿದಳಲಿನೊಳೆದ್ದು ಕೋಪದ&lt;br /&gt;ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ&lt;br /&gt;ಸಿಡಿದ ಮೀಸೆಯ ಬಿಗಿದ ಹುಬ್ಬಿನ&lt;br /&gt;ಜಡಿವ ರೋಮಾಂಚನದ ಖಾತಿಯ&lt;br /&gt;ಕಡುಹುಕಾರರು ಮಸಗಿದರು ದುರ್ಯೋಧನಾತ್ಮಕರು ೬೯&lt;br /&gt;&lt;br /&gt;ಚಂಡ ಭುಜಬಲನೊಡನೆ ಮಕ್ಕಳ&lt;br /&gt;ತಂಡವೆದ್ದುದು ಬಿಗಿದ ಬಿಲ್ಲಿನ&lt;br /&gt;ದಂಡವಲಗೆಯ ಮುಸುಡಿ ಮುದ್ಗ ಕಠಾರಿಯುಬ್ಬಣದ&lt;br /&gt;ಗಂಡುಗಲಿಗಳು ಕವಿದರದಿರುವ&lt;br /&gt;ಖಂಡಯದ ಮುಡುಹುಗಳ ಗಂಧದ&lt;br /&gt;ಮಂಡನದ ಮೈಸಿರಿಯ ಪರಿಮಳ ಪೂರರೊಗ್ಗಿನಲಿ ೭೦&lt;br /&gt;&lt;br /&gt;ತಳಿತ ಸತ್ತಿಗೆಗಳ ವಿಡಾಯಿಯ&lt;br /&gt;ಲೊಲೆವ ಚಮರಿಯ ವಜ್ರ ಮಕುಟದ&lt;br /&gt;ಹೊಳಹುಗಳ ಹೊಗೆ ಮೀಸೆಗೆದರಿನ ಬಿರುದಿನುಬ್ಬಟೆಯ&lt;br /&gt;ಕೆಲಬಲದ ವೇಲಾಯತರ ವೆ&lt;br /&gt;ಗ್ಗಳದ ರಾವ್ತರ ಗಡಣ ನಾಲಗೆ&lt;br /&gt;ದಳೆದುದೆನೆ ಹೊಳೆಹೊಳೆವಡಾಯುಧ ಭಟರು ನೂಕಿದರು ೭೧&lt;br /&gt;&lt;br /&gt;ಭಾಪುರೇ ಕೌರವನ ಸುತರಾ&lt;br /&gt;ಟೋಪವೊಳ್ಳಿತು ಬಂದ ಬರವಿನ&lt;br /&gt;ಚಾಪಲದಲೊದಗಿದರೆ ಲೇಸಲ್ಲಿದರ ಫಲವೇನು&lt;br /&gt;ಕಾಪುರುಷರೇ ಕಾಣಬಹುದೆಂ&lt;br /&gt;ದಾ ಪುರಂದರ ಸುತನ ಸುತ ನಿಜ&lt;br /&gt;ಚಾಪವನು ನೇವರಿಸುತ್ತಿದ್ದನು ಬಗೆಯದರಿಬಲವ ೭೨&lt;br /&gt;&lt;br /&gt;ಮುಗುಳದಿರು ಶಲ್ಯಾತ್ಮಕನನುಗು&lt;br /&gt;ಳುಗುಳು ನಿನ್ನಯ ಬಸಿರ ಸೀಳಿಯೆ&lt;br /&gt;ತೆಗೆವೆವೆಮ್ಮಯ ಸಖನನೆನುತಾ (ಪಾ: ಸಖನೆನುತಾ) ಲಕ್ಷಣಾದಿಗಳು&lt;br /&gt;ತೆಗೆದೆಸುತ ಮೇಲಿಕ್ಕಿದರು ತಾ&lt;br /&gt;ರೆಗಳು ನೆಣಗೊಬ್ಬಿನಲಿ ರಾಹುವ&lt;br /&gt;ತೆಗೆದು ಬದುಕುಲು ಬಲ್ಲವೇ ಧೃತರಾಷ್ಟ್ರ ಕೇಳೆಂಡ ೭೩&lt;br /&gt;&lt;br /&gt;ದಿಟ್ಟರೋ ಲಕ್ಷಣನವರು ಜಗ&lt;br /&gt;ಜಟ್ಟಿಗಳಲಾ ರಾಜಕುಲದಲಿ&lt;br /&gt;ಹುಟ್ಟಿದರೆ ಕೆಲರೀಸು ಚಪಳತೆ ಯಾರಿಗುಂಟೆನುತ&lt;br /&gt;ಕಟ್ಟಿದನು ಕಣೆಗಳಲಿ ಸುತ್ತಲು&lt;br /&gt;ತಟ್ಟಿವಲೆಗಳ ಸೋಹಿನಲಿ ಬೆ&lt;br /&gt;ನ್ನಟ್ಟಿ ಪಾರ್ಥಕುಮಾರ ಸದೆದನು ವೈರಿಮೃಗ ಕುಲವ ೭೪&lt;br /&gt;&lt;br /&gt;ಆ ಸುಯೋಧನ ಸುತರ ಸರಳ ವಿ&lt;br /&gt;ಳಾಸವನು ಖಂಡಿಸಿದನವದಿರ&lt;br /&gt;ಬೀಸರಕೆ ಬಂದಡ್ಡ ಬೀಳುವ ಭಟರ ಕೆಡೆಯೆಚ್ಚ&lt;br /&gt;ರೋಷವಹ್ನಿಯ ಕೆದರೆ ಕವಿವ ಮ&lt;br /&gt;ಹೀಶರನು ಮಾಣಿಸಿದನವನೀ&lt;br /&gt;ವಾಸವನು ವಾಸವನ ಮೊಮ್ಮನುದಾರ ಸಮರದಲಿ ೭೫&lt;br /&gt;&lt;br /&gt;ಫಡ ಕುಮಾರಕ ದೊದ್ದೆಗರ ಸದೆ&lt;br /&gt;ಬಡಿದ ಗರ್ವಿತತನವಕಟ ನ&lt;br /&gt;ಮ್ಮೊಡನೆಯೇ ನೋಡಿಲ್ಲಿ ಮೇಳವೆ ಸಾರು ಸಾರೆನುತ&lt;br /&gt;ಒಡನೊಡನೆ ನಾರಾಚ ನಿಚಯವ&lt;br /&gt;ಗಡಣಿಸಿದರೇನೆಂಬೆನವರು&lt;br /&gt;ಗ್ಗಡದ ಬಿಲು ವಿದ್ಯಾತಿಶಯವನು ಸಮರಭೂಮಿಯಲಿ ೭೬&lt;br /&gt;&lt;br /&gt;ಸರಳ ಮೊನೆಯಲಿ ವೈರಿ ಸುಭಟರ&lt;br /&gt;ಕರುಳ ತೆಗೆದನು ರಣದೊಳಾಡುವ&lt;br /&gt;ಮರುಳ ಬಳಗವ ತಣಿಸಿದನು ಕಡಲಾದುದರುಣಜಲ&lt;br /&gt;ತರಳನರೆಯಟ್ಟಿದನು ಧುರದಲಿ&lt;br /&gt;ದುರುಳ ದುರಿಯೋಧನನ ಮಕ್ಕಳ&lt;br /&gt;ಮರಳಲೀಯದೆ ಭಟರ ಕೇಣಿಯ ಕೊಂಡನಭಿಮನ್ಯು ೭೭&lt;br /&gt;&lt;br /&gt;ಉರುಗನಿಕ್ಕಡಿಗಾರ ಹುಲ್ಲಿನ&lt;br /&gt;ಸರವಿಗಂಜುವುದುಂಟೆ ಕರ್ಣಾ&lt;br /&gt;ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ&lt;br /&gt;ಎರಡು ಶರದಲಿ ಲಕ್ಷಣನ ಸಂ&lt;br /&gt;ಹರಿಸಿದನು ಹದಿನೈದು ಬಾಣದ&lt;br /&gt;ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ ೭೮&lt;br /&gt;&lt;br /&gt;ತಳಿತ ಚೂತದ ಸಸಿಗಳವನಿಗೆ&lt;br /&gt;ಮಲಗುವಂತಿರೆ ರಾಜಪುತ್ರರು&lt;br /&gt;ಹೊಳೆವ ಪದಕದ ಕೊರಳ ತಲೆಗಿಂಬಾದ ತೋಳುಗಳ&lt;br /&gt;ಬಳಿರಕುತದಲಿ ನನೆದ ಸೀರೆಯ&lt;br /&gt;ತಳಿತ ಖಂಡದ ಬಿಗಿದ ಹುಬ್ಬಿನ&lt;br /&gt;ದಳಿತ ದಂಷ್ಟ್ರಾನನದಲೆಸೆದರು ಸಾಲ ಶಯನದಲಿ ೭೯&lt;br /&gt;&lt;br /&gt;ಇಕ್ಕಿದಿರಲಾ ರಾಜಪುತ್ರರ&lt;br /&gt;ನಕ್ಕಟಕಟಾ ಸ್ವಾಮಿದ್ರೋಹರು&lt;br /&gt;ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು&lt;br /&gt;ಹಕ್ಕಲಾದುದು ನಮ್ಮ ಬಲ ಶಿಶು&lt;br /&gt;ಸಿಕ್ಕನಿನ್ನೂ ಪಾಂಡವರ ಪು&lt;br /&gt;ಣ್ಯಕ್ಕೆ ಸರಿಯಿಲ್ಲೆನುತ ಕೌರವರಾಯ ಗರ್ಜಿಸಿದ ೮೦&lt;br /&gt;&lt;br /&gt;ಕುಲವ ನೋಡಿದಡಿಲ್ಲ ತನ್ನಯ&lt;br /&gt;ಬಲಹು ನೋಡಿದಡಿಲ್ಲ ಕದನದೊ&lt;br /&gt;ಳುಳಿವ ನೋಡಿದರಿಲ್ಲಲಾ ಪತಿಯೆಂಬ ಪಾತಕಿಯ&lt;br /&gt;ಇಳೆಯೊಳೋಲೆಯಕಾರರೆಂಬರ&lt;br /&gt;ತಲೆಗೆ ತಂದನು ತೃಣವನೆಂದ&lt;br /&gt;ಗ್ಗಳೆಯರನು ಮೂದಲಿಸಿ ಬಯ್ದನು ಸುಯ್ದು ಕುರುರಾಯ ೮೧&lt;br /&gt;&lt;br /&gt;ಕೇಳುತಿದ್ದರು ಪತಿಯ ಮೂದಲೆ&lt;br /&gt;ಗಾಳಿಯಲೆ ದಳ್ಳಿಸುವ ಶೌರ್ಯ&lt;br /&gt;ಜ್ವಾಲೆ ಜಡಿದುದು ಖಾತಿಯಲಿ ಹೊಗರೇರಿದಾನನದ&lt;br /&gt;ಆಳುತನವುಬ್ಬೆದ್ದು ಕಡು ಹೀ&lt;br /&gt;ಹಾಳಿಕಾರರು ಕೈದು ಕೊಂಡರು&lt;br /&gt;ಬಾಲಕನ ತರುಬಿದರು ದೊರೆಗಳು ಕೇಳು ಧೃತರಾಷ್ಟ್ರ ೮೨&lt;br /&gt;&lt;br /&gt;(ಸಂಗ್ರಹ: ಸತ್ಯ,ಶೈಲ,ಮೋಹನ ಮತ್ತು ಪ್ರಿಯ - ಹಾಸನ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-4171059609783830211?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/4171059609783830211/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=4171059609783830211&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/4171059609783830211'/><link rel='self' type='application/atom+xml' href='http://www.blogger.com/feeds/742145181089395829/posts/default/4171059609783830211'/><link rel='alternate' type='text/html' href='http://gaduginabharata.blogspot.com/2010/06/blog-post.html' title='ದ್ರೋಣಪರ್ವ: ೦೫. ಐದನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-6072990379547110012</id><published>2010-05-19T00:00:00.001+05:30</published><updated>2010-05-19T00:02:09.024+05:30</updated><category scheme='http://www.blogger.com/atom/ns#' term='೦೪. ವಿರಾಟಪರ್ವ'/><title type='text'>ವಿರಾಟಪರ್ವ: ೦೯. ಒಂಬತ್ತನೆಯ ಸಂಧಿ</title><content type='html'>ಸೂ.ರಾಯ ಕೌರವ ಸೈನ್ಯ ಕದಳೀ&lt;br /&gt;ವಾಯುವುತ್ತರ ಸಹಿತ ನಿಜಪರ&lt;br /&gt;ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ&lt;br /&gt;&lt;br /&gt;ಕೇಳು ಜನಮೇಜಯ ಧರಿತ್ರೀ&lt;br /&gt;ಪಾಲ ಭಂಗದಲಖಿಳ ಕೌರವ&lt;br /&gt;ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು&lt;br /&gt;ಮೇಲು ಮುಸುಕಿನ ಮೊಗದ ವಾದ್ಯದ&lt;br /&gt;ಮೇಳ ಮೋನದಲಖಿಳ ನೃಪರು ನಿ&lt;br /&gt;ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ ೦೧&lt;br /&gt;&lt;br /&gt;ಬಳಿಕ ಫಲುಗುಣನತ್ತಲಾ ಮರ&lt;br /&gt;ದೊಳಗೆ ಕೈದುವನಿರಿಸಿ ಮುನ್ನಿನ&lt;br /&gt;ಹುಲು ರಥವ ಮೇಳೈಸಿ ಸಾರಥಿತನವನಳವಡಿಸೆ&lt;br /&gt;ಇಳಿದು ಪಾರ್ಥನ ಮೈದಡವಿ ಕಪಿ&lt;br /&gt;ಕುಲಲಲಾಮನು ವನಕೆ ಹಾಯ್ದನು&lt;br /&gt;ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ ೦೨&lt;br /&gt;&lt;br /&gt;ಕರೆದು ದೂತರಿಗರುಹು ನೀನೇ&lt;br /&gt;ಧುರವ ಜಯಿಸಿದೆನೆನ್ನು ನಾವಿ&lt;br /&gt;ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ&lt;br /&gt;ಅರಸ ನಿನ್ನನೆ ಮನ್ನಿಸಲಿ ಪುರ&lt;br /&gt;ಪರಿಜನಂಗಳು ನಿನ್ನ ವಿಜಯದ&lt;br /&gt;ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ ೦೩&lt;br /&gt;&lt;br /&gt;ಎನಲು ನೀನೇ ಬಲ್ಲ ಕರ ಲೇ&lt;br /&gt;ಸೆನುತ ದೂತರ ಕರೆದು ಮತ್ಸ್ಯನ&lt;br /&gt;ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು&lt;br /&gt;ಜನಕನಲ್ಲಿಗೆ ಪೋಗಿಯೆಂದಾ&lt;br /&gt;ತನು ನಿಯಾಮಿಸುತಿರ್ದನತ್ತಲು&lt;br /&gt;ಜನಪ ಕುಂತೀಸುತನು ಸಹಿತೈತಂದನರಮನೆಗೆ ೦೪&lt;br /&gt;&lt;br /&gt;ಅರಮನೆಯ ಹೊಕ್ಕವನಿಪತಿಯು&lt;br /&gt;ತ್ತರನ ಕಾಣದೆ ಕಂದನೆತ್ತಲು&lt;br /&gt;ಸರಿದನೆನೆ ರಾಣಿಯರು ಬಿನ್ನವಿಸಿದರು ಭೂಪತಿಗೆ&lt;br /&gt;ಕುರು ಬಲವನಂಗೈಸೆ ಮಿಗೆಯು&lt;br /&gt;ತ್ತರೆಯ ಗುರು ಸಾರಥಿತನವನನು&lt;br /&gt;ಕರಿಸಿದನು ಕೆಲಬಲನ ಹಾರದೆ ಕದನಕೈದಿದನು ೦೫&lt;br /&gt;&lt;br /&gt;ಎಂದರೊಡಲೊಳು ಕೂರಲಗು ಮುರಿ&lt;br /&gt;ದಂದದಲಿ ಕಳವಳಿಸಿದನು ಮನ&lt;br /&gt;ನೊಂದನಕಟ ಕುಮಾರನೆತ್ತಲು ರಾಯ ದಳವೆತ್ತ&lt;br /&gt;ಬಂದವರು ಭೀಷ್ಮಾದಿಗಳು ತಾ&lt;br /&gt;ನಿಂದು ತರಹರಿಸುವೊಡೆ ತಾನೇ&lt;br /&gt;ನಿಂದುಧರನೇ ಮರುಳಲಾ ಮಗನೆನುತ ಚಿಂತಿಸಿದ ೦೬&lt;br /&gt;&lt;br /&gt;ಮಗಗೆ ಪಡಿಬಲವಾಗಿ ಬಲು ಮಂ&lt;br /&gt;ತ್ರಿಗಳನವನಿಪ ಬೀಳುಗೊಟ್ಟನು&lt;br /&gt;ದುಗುಡದಿಂದಿರೆ ಹೊಳಲ ಕೈಸೂರೆಗಳ ಕಳಕಳದ&lt;br /&gt;ಮೊಗದ ಹರುಷದಲಖಿಳ ದೂತಾ&lt;br /&gt;ಳಿಗಳು ಬಂದುದು ಗುಡಿಯ ಕಟ್ಟಿಸು&lt;br /&gt;ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ ೦೭&lt;br /&gt;&lt;br /&gt;ರಾಯ ಕುವರ ಪಿತಾಮಹನು ರಿಪು&lt;br /&gt;ರಾಯ ಕುವರ ಕುಠಾರ ಕೌರವ&lt;br /&gt;ರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ&lt;br /&gt;ಜೀಯ ಬಿನ್ನಹ ಕರ್ಣ ಗುರು ಗಾಂ&lt;br /&gt;ಗೇಯ ಮೊದಲಾದಖಿಳ ಕೌರವ&lt;br /&gt;ರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ ೦೮&lt;br /&gt;&lt;br /&gt;ಕೇಳಿ ಮಿಗೆ ಹಿಗ್ಗಿದನು ತನು ಪುಳ&lt;br /&gt;ಕಾಳಿ ತಳಿತುದು ಬಹಳ ಹರುಷದ&lt;br /&gt;ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು&lt;br /&gt;ಲಾಲಿಸುತ ಸರ್ವಾಂಗ ಹರುಷದೊ&lt;br /&gt;ಳಾಳೆ ಜನಪ ಪಸಾಯಿತವ ದೂ&lt;br /&gt;ತಾಳಿಗಿತ್ತನು ಸುಲಿದರವದಿರು ರಾಯನೋಲಗವ ೦೯&lt;br /&gt;&lt;br /&gt;ಇದಿರುಗೊಳ ಹೇಳೆನಲು ಸರ್ವಾಂ&lt;br /&gt;ಗದಲಿ ಮಣಿ ಮೌಕ್ತಿಕದ ಸಿಂಗಾ&lt;br /&gt;ರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ&lt;br /&gt;ಸುದತಿಯರು ಹೊರವಂಟರೊಗ್ಗಿನ&lt;br /&gt;ಮೃದು ಮೃದಂಗದ ಕಹಳೆಗಳು ಸಂ&lt;br /&gt;ಪದದ ಸೊಂಪಿನಲೆಸೆಯೆ ರಾಜಾಂಗನೆಯರನುವಾಯ್ತು ೧೦&lt;br /&gt;&lt;br /&gt;ಕವಿದು ನೂಕುವ ಹರುಷವನು ಸಂ&lt;br /&gt;ತವಿಸಲರಿಯೆನು ಕಂಕ ನಿನ್ನೊಡ&lt;br /&gt;ನೆವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತೆನಲು&lt;br /&gt;ಅವನಿಪತಿ ಕೇಳ್ ಜೂಜಿನಲಿ ಪಾಂ&lt;br /&gt;ಡವರು ಸಿಲುಕಿದರವರ ವಿಧಿಯನು&lt;br /&gt;ಭುವನದಲಿ ಬಲ್ಲವರದಾರೆಂದನು ವಿರಾಟಂಗೆ ೧೧&lt;br /&gt;&lt;br /&gt;ಅವರು ರಾಜ್ಯವನೊಡ್ಡಿ ಸೋತವೊ&lt;br /&gt;ಲೆವಗೆ ಪಣ ಬೇರಿಲ್ಲ ಹರ್ಷೋ&lt;br /&gt;ತ್ಸವ ಕುಮಾರಾಭ್ಯುದಯ ವಿಜಯಶ್ರವಣ ಸುಖ ಮಿಗಲು&lt;br /&gt;ಎವಗೆ ಮನವಾಯ್ತೊಡ್ಡು ಸಾರಿಯ&lt;br /&gt;ನಿವಹವನು ಹೂಡೆನಲು ಹೂಡಿದ&lt;br /&gt;ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು ೧೨&lt;br /&gt;&lt;br /&gt;ಕೇಳಿ ಸಮತಳಿಸಿತ್ತು ಮತ್ಸ್ಯ ನೃ&lt;br /&gt;ಪಾಲನೆಂದನು ಕಂಕ ನೋಡೈ&lt;br /&gt;ಕಾಳಗವನುತ್ತರನು ಗೆಲಿದನು ರಾಯ ಥಟ್ಟಿನಲಿ&lt;br /&gt;ಶೂಲಪಾಣಿಗೆ ಸೆಡೆಯದಹಿತ ಭ&lt;br /&gt;ಟಾಳಿ ಸೋತುದು ದಿವಿಜ ನರರೊಳು &lt;br /&gt;ಹೋಲುವವರುಂಟೇ ಕುಮಾರನನೇನ ಹೇಳೆಂದ ೧೩&lt;br /&gt;&lt;br /&gt;ಸೋತುದುಂಟರಿ ಸೇನೆ ಸುರಭಿ&lt;br /&gt;ವ್ರಾತ ಮರಳಿದುದುಂಟು ಗೆಲವಿದು&lt;br /&gt;ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ&lt;br /&gt;ಮಾತು ಹೋಲುವೆಯಹುದು ಜಗ ವಿ&lt;br /&gt;ಖ್ಯಾತ ಸಾರಥಿಯಿರೆ ಕುಮಾರಗೆ&lt;br /&gt;ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ ೧೪&lt;br /&gt;&lt;br /&gt;ಎಲೆ ಮರುಳೆ ಸನ್ಯಾಸಿ ಮತ್ಸರ&lt;br /&gt;ದೊಳಗೆ ಮುಳುಗಿದ ಚಿತ್ತ ನಿನ್ನದು&lt;br /&gt;ಗೆಲವಿನಲಿ ಸಂದೇಹವೇ ಹೇಳಾವುದದ್ಭುತವು&lt;br /&gt;ಅಳುಕುವನೆ ಸುಕುಮಾರ ಸಾರಥಿ&lt;br /&gt;ಬಲುಹನುಳ್ಳವನೇ ನಪುಂಸಕ&lt;br /&gt;ನಲಿ ನಿರಂತರ ಪಕ್ಷವೆಂದು ವಿರಾಟ ಖತಿಗೊಂಡ ೧೫&lt;br /&gt;&lt;br /&gt;ನಾರಿಯರ ಮೈಗುರುಹು ಪುರುಷರ&lt;br /&gt;ಚಾರು ಚಿಹ್ನವ ಕೂಡಿಕೊಂಡಿಹ&lt;br /&gt;ಸಾರಥಿಯ ದೆಸೆಯಿಂದ ಕುವರನು ಗೆಲಿದನೆಂಬುದನು&lt;br /&gt;ಸೈರಿಸಿದೆ ನಾನಿನ್ನವರೆ ಮ&lt;br /&gt;ತ್ತಾರೊಡನೆ ಮಾತಾಡದಿರು ನಿ&lt;br /&gt;ಸ್ಸಾರ ಹೃದಯನು ಕಂಕ ನೀ ದುಷ್ಟಾತ್ಮ ಹೋಗೆಂದ ೧೬&lt;br /&gt;&lt;br /&gt;ಖತಿಯ ಹಿಡಿಯದಿರರಸ ದಿಟ ನೀ&lt;br /&gt;ನತಿಶಯವ ಬಯಸುವರೆ ಜನ ಸ&lt;br /&gt;ಮ್ಮತವು ಸಾರಥಿ ಗೆಲಿದನೆಂದೇ ಹೊಯಿಸು ಡಂಗುರವ&lt;br /&gt;ಸುತನು ಸಾರಥಿಯೆಂದು ಸಾರಿಸು&lt;br /&gt;ವಿತಥವಲ್ಲಿದು ಪಕ್ಷಪಾತ&lt;br /&gt;ಸ್ಥಿತಿಯನಾಡೆವು ಕವಲು ನಾಲಗೆಯಿಲ್ಲ ತನಗೆಂದ ೧೭&lt;br /&gt;&lt;br /&gt;ನಿನ್ನ ಮೋಹದ ಕಂಗಳಿಗೆ ಮಗ&lt;br /&gt;ನುನ್ನತೋನ್ನತ ಸತ್ವನೆಂದೇ&lt;br /&gt;ಮುನ್ನ ತೋರಿತು ಹೊಲ್ಲೆಹವೆ ಸಂಸಾರಕ ಭ್ರಮೆಗೆ&lt;br /&gt;ಇನ್ನು ಗೆಲಿದವನಾ ಬೃಹನ್ನಳೆ&lt;br /&gt;ನಿನ್ನ ಮಗಗಳುಕುವರೆ ಭೀಷ್ಮನು&lt;br /&gt;ಕರ್ಣ ಕೃಪ ಗುರು ಗುರುತನೂಭವರೆಂದನಾ ಕಂಕ ೧೮&lt;br /&gt;&lt;br /&gt;ಎನಲು ಖತಿ ಬಿಗುಹೇರಿ ಹಲು ಹಲು&lt;br /&gt;ದಿನುತೆ ಕಂಗಳಲುರಿಯನುಗುಳುತ&lt;br /&gt;ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ&lt;br /&gt;ಜನಪತಿಯ ಹಣೆಯೊಡೆಯಲಿಡೆ ಜಾ&lt;br /&gt;ಜಿನ ಗಿರಿಯ ನಿರ್ಜರದವೊಲು ಭೋಂ&lt;br /&gt;ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು ೧೯&lt;br /&gt;&lt;br /&gt;ಸೈರಿಸುತ ಕೈಯೊಡ್ಡಿ ರಕುತದ&lt;br /&gt;ಧಾರೆಯನು ಕೈತುಂಬ ಹಿಡಿದತಿ&lt;br /&gt;ಧೀರನೋರೆಯ ನೋಟದಲಿ ಸೈರಂಧ್ರಿಯನು ಕರೆಯೆ&lt;br /&gt;ನಾರಿ ಹರಿತಂದಕಟ ನೊಂದನು&lt;br /&gt;ಕಾರುಣಿಕ ಸನ್ಯಾಸಿಯೆನುತ ವಿ&lt;br /&gt;ಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ ೨೦&lt;br /&gt;&lt;br /&gt;ಮಡದಿ ಕರಪಲ್ಲವದಲೊರೆಸಿದ&lt;br /&gt;ಳಡಿಗಡಿಗೆ ಹಣೆಯನು ಕಪೋಲವ&lt;br /&gt;ತೊಡೆದು ತೊಳೆದಳು ಮುಖವನದನವ ಕಂಡು ಬೆರಗಾಗಿ&lt;br /&gt;ಹಿಡಿದೆ ರಕುತವನೇಕೆ ಕಾಮಿನಿ&lt;br /&gt;ನುಡಿ ನಿಧಾನವನಿವರು ನೊಂದರೆ&lt;br /&gt;ಮಿಡುಕಲೇತಕೆ ನೀನೆನುತ ದುರುಪದಿಯ ಬೆಸಗೊಂಡ ೨೧&lt;br /&gt;&lt;br /&gt;ಉರಿದು ಹೋಹುದು ನಿನ್ನ ರಾಜ್ಯದ&lt;br /&gt;ಸಿರಿಯು ಬದುಕಿದೆಯೊಂದು ಕಣೆಯಕೆ&lt;br /&gt;ಪರಮ ಯತಿ ಕಾಯಿದನು ಕೈಯಲಿ ತುಂಬಿ ಶೋಣಿತವ&lt;br /&gt;ಅರಸ ಕೇಳೀ ಮುನಿಯ ನೆತ್ತರು&lt;br /&gt;ಧರೆಯೊಳೊಕ್ಕೊಡೆಯಾ ಪ್ರದೇಶವ&lt;br /&gt;ನೊರಸಿ ಕಳೆವುದು ದಿಟ ಬೃಹನ್ನಳೆಗೇರಿಸಿದ ಬಿರುದು ೨೨&lt;br /&gt;&lt;br /&gt;ಈಕೆ ಯಾರಿವರಾರು ನಾಟ್ಯ&lt;br /&gt;ವ್ಯಾಕರಣ ಪಂಡಿತ ಬೃಹನ್ನಳೆ&lt;br /&gt;ಯೀಕೆಗೇನಹನರಿಯ ಬಾರದು ಕಾಲು ಕೀಲುಗಳ&lt;br /&gt;ಏಕೆ ನನಗದರರಿತವೆಂದವಿ&lt;br /&gt;ವೇಕಿಯಿರೆ ಬಳಿಕಿತ್ತ ಪುರದಲಿ&lt;br /&gt;ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ ೨೩&lt;br /&gt;&lt;br /&gt;ಇದಿರು ಬಂದರು ಮಂತ್ರಿಗಳು ವರ&lt;br /&gt;ಸುದತಿಯರು ಸೂಸಿದರು ಸೇಸೆಯ&lt;br /&gt;ನುದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ&lt;br /&gt;ವದನವಿದೆ ಕಳೆಗುಂದಿ ಜಯದ&lt;br /&gt;ಭ್ಯುದಯ ತಾನೆಂತೆನುತ ವರ ಕೋ&lt;br /&gt;ವಿದರು ತಮ್ಮೊಳಗಾಡುತಿರ್ದರು ಕೂಡೆ ಗುಜುಗುಜಿಸಿ ೨೪&lt;br /&gt;&lt;br /&gt;ಎಂದಿನವನುತ್ತರನು ಗಂಗಾ&lt;br /&gt;ನಂದನನನೀ (ಪಾ: ನಂದನನೀ) ಹೂಹೆ ಗೆಲಿದನು&lt;br /&gt;ಸಂದ ಸುಭಟ ದ್ರೋಣ ಕರ್ಣಾದಿಗಳನೋಡಿಸಿದ&lt;br /&gt;ಎಂದು ಕೆಲಬರು ಕೆಲಬರಿವ ಗೆಲಿ&lt;br /&gt;ದಂದವಾಗಿರದೀ ಬೃಹನ್ನಳೆ&lt;br /&gt;ಯಿಂದ ಸಂಭಾವಿಸುವುದೆಂದುದು ಮಂದಿ ತಮತಮಗೆ ೨೫&lt;br /&gt;&lt;br /&gt;ಲೀಲೆ ಮಿಗಲುತ್ತರನು ಪುರಜನ&lt;br /&gt;ಜಾಲ ಜೀಯೆನಲಿದಿರು ಬಂದ ನಿ&lt;br /&gt;ವಾಳಿಗಳ ನೂಕಿದನು ಕೈವಾರಿಗಳ ಕೋಪಿಸುತ&lt;br /&gt;ಆಲಿಯವನಿಯ ಬರೆಯೆ ಮುಸುಕಿನ&lt;br /&gt;ಮೇಲು ದುಗುಡದ ಭಾರದಲಿ ರಾ&lt;br /&gt;ಜಾಲಯಕೆ ಬರಲಿದಿರು ಬಂದಪ್ಪಿದನು ನಂದನನ ೨೬&lt;br /&gt;&lt;br /&gt;ಬಾ ಮಗನೆ ವಸುಕುಲದ ನೃಪ ಚಿಂ&lt;br /&gt;ತಾಮಣಿಯೆ ಕುರುರಾಯ ಮೋಹರ&lt;br /&gt;ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ&lt;br /&gt;ಕಾಮಿನಿಯರುಪ್ಪಾರತಿಗಳಭಿ&lt;br /&gt;ರಾಮ ವಸ್ತ್ರ ನಿವಾಳಿ ರತ್ನ&lt;br /&gt;ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ ೨೭&lt;br /&gt;&lt;br /&gt;ಬೊಪ್ಪ ಸಾಕೀ ಬಯಲ ಡೊಂಬೆನ&lt;br /&gt;ಗೊಪ್ಪುವುದೆ ವೀರೋಪಚಾರವಿ&lt;br /&gt;ದೊಪ್ಪುವರಿಗೊಪ್ಪುವುದು ತೆಗೆಸೆನಲರಸ ನಸುನಗುತ&lt;br /&gt;ದರ್ಪವುಳ್ಳಂಗೀಸು ಮಂಗಳ&lt;br /&gt;ವೊಪ್ಪದೇನೈ ಜಗದೊಳಾವಂ&lt;br /&gt;ಗಪ್ಪುದೀ ಬಲವೀ ನಿಗರ್ವಿತೆಯೆಂದನಾ ಮತ್ಸ್ಯ ೨೮&lt;br /&gt;&lt;br /&gt;ಮಗನೆ ಕರ್ಣ ದ್ರೋಣ ಭೀಷ್ಮಾ&lt;br /&gt;ದಿಗಳನೊಬ್ಬನೆ ಗೆಲಿದೆಯೀ ಕಾ&lt;br /&gt;ಳಗದ ಕಡುಗಲಿತನಗಳುಂಟೇ ಪೂರ್ವ ಪುರುಷರಲಿ&lt;br /&gt;ದುಗುಡವೇಕೆನ್ನಾಣೆ ಹೆತ್ತರ&lt;br /&gt;ಮೊಗಕೆ ಹರುಷವ ತಂದೆಲಾ ಹಂ&lt;br /&gt;ಗಿಗನೆ ನೀ ತಲೆ ಗುತ್ತಲೇಕೆಂದೆತ್ತಿದನು ಮುಖವ ೨೯&lt;br /&gt;&lt;br /&gt;ಕಾದಿ ಗೆಲಿದವ ಬೇರೆ ಸಾರಥಿ&lt;br /&gt;ಯಾದ ತನಗೀಸೇಕೆ ನಿಮ್ಮಡಿ&lt;br /&gt;ಯಾದರಿಸಲೊಡೆಮುರಿಚ ಬಲ್ಲನೆ ನಾಚಿಸದಿರೆನಲು&lt;br /&gt;ಕಾದಿದಾತನು ನೀನು ಸಾರಥಿ&lt;br /&gt;ಯಾದವನು ತಂಗಿಯ ಬೃಹನ್ನಳೆ&lt;br /&gt;ವಾದ ಬೇಡಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ ೩೦&lt;br /&gt;&lt;br /&gt;ಅದಟುತನವೆನಗುಂಟೆ ಬೆಂದುದ&lt;br /&gt;ಬೆದಕಿ ನೋಯಿಸಬೇಡ ಹಗಲಿನ&lt;br /&gt;ಕದನವನು ಗೆಲಿದಾತ ಬೇರಿಹ ಬೊಪ್ಪ ನುಡಿಯದಿರು&lt;br /&gt;ಉದಯದಲಿ ಗೆಲಿದಾತನನು ನಿ&lt;br /&gt;ಮ್ಮಿದಿರಿನಲಿ ತೋರುವೆನು ಬೀಳ್ಕೊಡಿ&lt;br /&gt;ಸದನಕೆಂದು ಕುಮಾರ ಕಳುಹಿಸಿಕೊಂಡನರಮನೆಗೆ ೩೧&lt;br /&gt;&lt;br /&gt;ಇತ್ತಲರ್ಜುನ ದೇವ ಸಾರಿದ&lt;br /&gt;ನುತ್ತರೆಯ ಭವನವನು ತಾ ತಂ&lt;br /&gt;ದುತ್ತಮಾಂಬರ ವಿವಿಧ ರತ್ನಾಭರಣ ವಸ್ತುಗಳ&lt;br /&gt;ಇತ್ತನಾ ಕನ್ನಿಕೆಗೆ ಮುದ ಮಿಗ&lt;br /&gt;ಲುತ್ತರೆಯ ಮನೆಯಿಂದ ಶಶಿಕುಲ&lt;br /&gt;ಮತ್ತವಾರಣ ಬಂದನಾ ಭೀಮಾಗ್ರಜನ ಹೊರೆಗೆ ೩೨&lt;br /&gt;&lt;br /&gt;ಬಳಿಕ ಸಂಕೇತದಲಿ ಭೂಪನ&lt;br /&gt;ನಿಳಯವನು ಕಲಿಭೀಮ ಹೊಕ್ಕನು&lt;br /&gt;ನಳಿನಮುಖಿ ಸಹದೇವ ನಕುಲರು ಬಂದರಾ ಕ್ಷಣಕೆ&lt;br /&gt;ಫಲುಗುಣನು ಹೊಡವಂಟನಿಬ್ಬರಿ&lt;br /&gt;ಗುಳಿದವರು ಪಾರ್ಥಂಗೆ ವಂದಿಸ&lt;br /&gt;ಲೊಲಿದು ಬಿಗಿಯಪ್ಪಿದನು ಪರಿತೋಷದಲಿ ಸಮಬಲರ ೩೩&lt;br /&gt;&lt;br /&gt;ಉಳಿದ ನಾಲ್ವರು ಕಲಿ ತ್ರಿಗರ್ತರ&lt;br /&gt;ಗೆಲಿದ ಪರಿಯನು ಪಾರ್ಥ ಕೌರವ&lt;br /&gt;ಬಲವ ಭಂಗಕೆ ತಂದ ಪರಿಯನು ಹೇಳುತಿರುತಿರಲು&lt;br /&gt;ನಿಲುಕಿ ರಾಯನ ಹಣೆಯ ಗಾಯವ&lt;br /&gt;ಬಳಿಕ ಕಂಡನಿದೇನು ನೊಸಲಿಂ&lt;br /&gt;ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ ೩೪&lt;br /&gt;&lt;br /&gt;ಅನವಧಾನದೊಳಾಯ್ತು ಸಾಕದ&lt;br /&gt;ನೆನೆಯಲೇತಕೆ ಮಾಣೆನಲು ಮಿಗೆ&lt;br /&gt;ಕನಲುತರ್ಜುನನರಿದನಾ ದ್ರೌಪದಿಯ ಸೂರುಳಿಸಿ&lt;br /&gt;ಮನದಲುರಿದೆದ್ದನು ವಿರಾಟನ&lt;br /&gt;ತನುವ ಹೊಳ್ಳಿಸಿ ರಕುತವನು ಶಾ&lt;br /&gt;ಕಿನಿಯರಿಗೆ ಹೊಯಿಸುವೆನು ಹೊಲ್ಲೆಹವೇನು ಹೇಳೆಂದ ೩೫&lt;br /&gt;&lt;br /&gt;ಕಳುಹಬೇಕೇ ಕೀಚಕೇಂದ್ರನ&lt;br /&gt;ಬಳಗವಿದ್ದಲ್ಲಿಗೆ ವಿರಾಟನ&lt;br /&gt;ತಲೆಯ ಋಣ ಸಾಲಿಗನಲೇ ಶಿವ ಶಿವ ಮಹಾದೇವ&lt;br /&gt;ನೆಲದೊಳೊಕ್ಕುದೆ ರಕ್ತವವದಿರ&lt;br /&gt;ಕುಲವ ಸವರುವೆನಿವನ ಸೀಳಿದು&lt;br /&gt;ಬಲಿಯ ಕೊಡುವೆನು ಭೂತಗಣಕೆನುತೆದ್ದನಾ ಭೀಮ ೩೬&lt;br /&gt;&lt;br /&gt;ಕಾಕ ಬಳಸಲು ಬೇಡ ಹೋ ಹೋ&lt;br /&gt;ಸಾಕು ಸಾಕೈ ತಮ್ಮ ಮಾಣು&lt;br /&gt;ದ್ರೇಕವನು ನೆಲ ರಕ್ತ ಕಂಡರೆ ನನ್ನ ಮೇಲಾಣೆ&lt;br /&gt;ಈ ಕಮಲಲೋಚನೆಯ ಸೆರಗಿಗೆ&lt;br /&gt;ಸೇಕವಾಯಿತು ರಕುತವತಿ ಸ&lt;br /&gt;ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನನಿಲಜನ ೩೭&lt;br /&gt;&lt;br /&gt;ಕೊಂಬೆನಾತನ ಜೀವವನು ಪತಿ&lt;br /&gt;ಯೆಂಬ ಗರ್ವವನವನ ನೆತ್ತಿಯ&lt;br /&gt;ತುಂಬಿ ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ&lt;br /&gt;ಅಂಬುಜಾಕ್ಷಿಯ ಕೀಚಕನ ಬೇ&lt;br /&gt;ಳಂಬವೀತನ ಕೂಟ ಭೂತ ಕ&lt;br /&gt;ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ ೩೮&lt;br /&gt;&lt;br /&gt;ಇವನ ನಾವೋಲೈಸಿ ಕೈಯೊಡ&lt;br /&gt;ನಿವಗೆ ಮುನಿದೊಡೆಯೇನನೆಂಬುದು&lt;br /&gt;ಭುವನ ಜನವು ಭ್ರಮಿಸದಿರು ಸೈರಣೆಗೆ ಮನ ಮಾಡು&lt;br /&gt;ಎವಗೆ ನೋವಿನ ಹೊತ್ತು ದುಷ್ಕೃತ&lt;br /&gt;ವಿವರಣದ ಫಲವಿದಕೆ ಲೋಗರ&lt;br /&gt;ನವಗಡಿಸಿದೊಡೆ ಹಾನಿಯೆಮಗೆನೆ ಭೀಮನಿಂತೆಂದ ೩೯&lt;br /&gt;&lt;br /&gt;ಬರಿಯ ಧರ್ಮದ ಜಾಡ್ಯದಲಿ ಮೈ&lt;br /&gt;ಮರೆದು ವನದಲಿ ಬೇವು ಬಿಕ್ಕೆಯ&lt;br /&gt;ನರಸಿ ತೊಳಲಿದು ಸಾಲದೇ ಹದಿಮೂರು ವತ್ಸರದಿ&lt;br /&gt;ಉರುಕುಗೊಂಡೊಡೆ ರಾಜ ತೇಜವ&lt;br /&gt;ಮೆರೆವ ದಿನವೆಂದಿಹುದು ನೀವಿ&lt;br /&gt;ನ್ನರಿಯಿರೆಮ್ಮನು ಹರಿಯ ಬಿಡಿ ಸಾಕೆಂದನಾ ಭೀಮ ೪೦&lt;br /&gt;&lt;br /&gt;ಉದಯದಲಿ ನಾವಿನಿಬರಾತನ&lt;br /&gt;ಸದನದಲಿ ನೃಪಪೀಠವನು ಗ&lt;br /&gt;ರ್ವದಲಿ ನೆಮ್ಮುವೆವಾತ ನಮ್ಮಲಿ ಖೋಡಿಯನು ಹಿಡಿಯೆ&lt;br /&gt;ಮದಮುಖನನೊರಸುವೆವು ಹರುಷದ&lt;br /&gt;ಲಿದಿರುಗೊಂಡೊಡೆ ಮನ್ನಿಸುವ ಮಾ&lt;br /&gt;ತಿದುವೆ ಸನ್ಮತವೆಂದು ಸಂತೈಸಿದನು ಪವನಜನ ೪೧&lt;br /&gt;&lt;br /&gt;(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)&lt;br /&gt;(ಕರಡು ತಿದ್ದಿದ್ದು: ಸಂದೀಪ ನಡಹಳ್ಳಿ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-6072990379547110012?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/6072990379547110012/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=6072990379547110012&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/6072990379547110012'/><link rel='self' type='application/atom+xml' href='http://www.blogger.com/feeds/742145181089395829/posts/default/6072990379547110012'/><link rel='alternate' type='text/html' href='http://gaduginabharata.blogspot.com/2010/05/blog-post_19.html' title='ವಿರಾಟಪರ್ವ: ೦೯. ಒಂಬತ್ತನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-1852272437530262735</id><published>2010-05-18T23:58:00.000+05:30</published><updated>2010-05-19T00:00:04.988+05:30</updated><category scheme='http://www.blogger.com/atom/ns#' term='೦೪. ವಿರಾಟಪರ್ವ'/><title type='text'>ವಿರಾಟಪರ್ವ: ೦೮. ಎಂಟನೆಯ ಸಂಧಿ</title><content type='html'>ಸೂ: ರಾಯ ರಿಪುಬಲಜಲಧಿ ವಡಬನ&lt;br /&gt;ಜೇಯನರ್ಜುನನಖಿಳ ಕೌರವ&lt;br /&gt;ರಾಯ ದಳವನು ಜಯಿಸಿದನು ಸಮ್ಮೋಹನಾಸ್ತ್ರದಲಿ&lt;br /&gt;&lt;br /&gt;ಮರಳಿದವು ತುರು ಮಾರಿಗೌತಣ&lt;br /&gt;ಮರಳಿ ಹೇಳಿತು ಹಸಿದ ಹೆಬ್ಬುಲಿ&lt;br /&gt;ಮೊರೆಯ ದನಿದೋರಿದವು ಹುಲುಮೃಗವೇನನುಸುರುವೆನು&lt;br /&gt;ಧರಣಿಪನ ಹಿಂದಿಕ್ಕಿ ಸೌಬಲ&lt;br /&gt;ದುರುಳ ದುಶ್ಶಾಸನ ಜಯದ್ರಥ&lt;br /&gt;ರುರುಬಿದರು ತರುಬಿದರು ಪರಬಲ ಕಾಲಭೈರವನ ೧&lt;br /&gt;&lt;br /&gt;ಹತ್ತುಸಾವಿರ ರಥ ಸಹಿತ ಭಟ&lt;br /&gt;ರೊತ್ತಿ ಕವಿದರು ಲಗ್ಗೆವರೆಯಲಿ&lt;br /&gt;ಬಿತ್ತರಿಸಿ ಬೈಬೈದು ಸಾರುವ ಗೌರುಗಹಳೆಗಳ&lt;br /&gt;ಸತ್ತಿಗೆಯ ಸಾಲುಗಳೊಳಂಬರ&lt;br /&gt;ಕೆತ್ತುದೆನೆ ಕುಲಶೈಲ ನಿಚಯದ&lt;br /&gt;ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು ೨&lt;br /&gt;&lt;br /&gt;ಚಂಬಕನ ಹರೆ ಡಕ್ಕೆ ಡಮರುಗ&lt;br /&gt;ಬೊಂಬುಳಿಯ ಗೋಮುಖದ ಡೌಡೆಯ&lt;br /&gt;ಕೊಂಬು ಕಹಳೆಯ ರಾಯ ಗಿಡಿಮಿಡಿ ಪಟಹ ಡಿಂಡಿಮದ&lt;br /&gt;ತಂಬಟದ ನಿಸ್ಸಾಳವಂಬರ&lt;br /&gt;ತುಂಬಿದುದು ನೆಲ ಕುಸಿಯೆ ಬಲವಾ&lt;br /&gt;ಡಂಬರದಲರ್ಜುನನ ಮುಸುಕಿತು ದೊರೆಯ ಸನ್ನೆಯಲಿ ೩&lt;br /&gt;&lt;br /&gt;ಮರಳಿದವು ತುರುವೆಂಬ ಗರ್ವದ&lt;br /&gt;ಗಿರಿಗೆ ಕೋ ಕುಲಿಶವನು ಸೇನೆಯ&lt;br /&gt;ನೊರೆಸಿದುತ್ಸವ ಜಲಧಿಗಿದೆ ಕೋ ವಾಡಬಾನಲನ&lt;br /&gt;ಅರಸನಲುಕಿದನೆಂಬ ಜಯದು&lt;br /&gt;ಬ್ಬರದ ಬೆಳೆಸಿರಿಗಿದೆ ನಿದಾಘದ&lt;br /&gt;ಬಿರುಬಿಸಿಲು ಕೊಳ್ಳೆಂದು ಕೈಗೊಂಡೆಚ್ಚರತಿರಥರು ೪&lt;br /&gt;&lt;br /&gt;ಮೊಗಕೆ ಹರಿಗೆಯನೊಡ್ಡಿ ಕಾಲಾ&lt;br /&gt;ಳಗಿದು ಕವಿದುದು ಸರಳ ಪರಿಯಲಿ&lt;br /&gt;ಬಿಗಿದು ಬಿಲ್ಲಾಳೌಕಿತುರವಣಿಸಿದರು ಸಬಳಿಗರು&lt;br /&gt;ಉಗಿದಡಾಯುಧದಲಿರಿದರು ಭಾ&lt;br /&gt;ಷೆಗಳ ರಾವ್ತರು ಕೆಂಗರಿಯ ಕೋ&lt;br /&gt;ಲುಗಳ ಹೆಮ್ಮಳೆಗರೆದು ಕವಿದರು ಜೋದರುರವಣಿಸಿ ೫&lt;br /&gt;&lt;br /&gt;ಅರರೆ ರಾವುತು ರಾವುತೆಂಬ&lt;br /&gt;ಬ್ಬರಣೆ ಮಸಗಿದುದೊಂದು ದೆಸೆಯಲಿ&lt;br /&gt;ಸರಿಸ ಸಬಳಿಗ ಪೂತು ಪಾಯಕುಯೆಂಬ ಕಳಕಳಿಕೆ&lt;br /&gt;ಧಿರುರೆ ಸಾರಥಿ ಹಳು ಹಳೆಂಬ&lt;br /&gt;ಬ್ಬರಣೆ ಮಸಗಿದುದೊಂದು ಕಡೆಯಲಿ&lt;br /&gt;ಕರಿಘಟೆಯ ಕಡುಹೊಂದು ಕಡೆಯಲಿ ಮುಸುಕಿತರ್ಜುನನ ೬&lt;br /&gt;&lt;br /&gt;ಸುರಪನಡವಿಯ ಚುಚ್ಚಿದೊಡೆ ಸುರ&lt;br /&gt;ರರಮನೆಯ ಗಾಯಕರ ಗೆಲಿದೊಡೆ&lt;br /&gt;ಜರಡು ತಂತ್ರದ ಮೀನನೆಚ್ಚೊಡೆ ರಾಯ ಕಟಕದಲಿ&lt;br /&gt;ಗೊರವನೊಳು ಕಾದಿದೊಡೆ ಹೆಂಗುಸ&lt;br /&gt;ನಿರುಳು ಕದ್ದೋಡಿದೊಡೆ ದಿಟ&lt;br /&gt;ನೀ ಧುರಕೆ ಧೀರನೆ ಪಾರ್ಥ ಫಡಯೆನುತೆಚ್ಚರತಿರಥರು ೭&lt;br /&gt;&lt;br /&gt;ಭಂಡರುಲಿದೊಡೆ ಗರುವರದ ಮಾ&lt;br /&gt;ರ್ಕೊಂಡು ನುಡಿವರೆ ಸಾಕಿದೇತಕೆ&lt;br /&gt;ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ&lt;br /&gt;ಕೊಂಡ ಹೆಜ್ಜೆಗೆ ಹಂಗಿಗರು ಮಿಗೆ&lt;br /&gt;ಗಂಡುಗೆಡದಿರಿ ನಿಮ್ಮ ಬಗೆಗಳ&lt;br /&gt;ಕಂಡು ಬಲ್ಲೆನೆನುತ್ತ ಫಲುಗುಣನೆಚ್ಚನತಿರಥರ ೮&lt;br /&gt;&lt;br /&gt;ಗುರುಸುತನ ಬಳಿ ರಥವನೈಸಾ&lt;br /&gt;ವಿರವ ಕೊಂದನು ಕರ್ಣನೊಡೆನೆಯ&lt;br /&gt;ವರ ಮಹಾರಥರೆಂಟು ಸಾವಿರವನು ರಣಾಗ್ರದಲಿ&lt;br /&gt;ಗುರು ನದೀಜರ ಬಳಿ ರಥವ ಸಾ&lt;br /&gt;ವಿರವ ಕೃಪ ಸೈಂಧವ ಸುಯೋಧನ&lt;br /&gt;ರರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ ೯&lt;br /&gt;&lt;br /&gt;ತುರಗ ದಳವೆಂಬತ್ತು ಸಾವಿರ&lt;br /&gt;ಕರಿಘಟೆಯನೈವತ್ತು ಸಾವಿರ&lt;br /&gt;ವರರಥವ ಹುಡಿ ಮಾಡಿದನು ಹನ್ನೆರಡು ಸಾವಿರವ&lt;br /&gt;ಧುರಕೆ ವೆಗ್ಗಳವಾದ ರಥಿಕರ&lt;br /&gt;ಶಿರವ ತರಿದನು ಮೂರು ಕೋಟಿಯ&lt;br /&gt;ನರಸು ಕಾಲಾಳುಗಳ ಗಣನೆಯನರಿಯೆ ನಾನೆಂದ ೧೦&lt;br /&gt;&lt;br /&gt;ಸವಗ ಸೀಳಿತು ಕೃಪನ ಭೀಷ್ಮನ&lt;br /&gt;ಕವಚ ಹರಿದುದು ದ್ರೋಣ ನೊಂದನು&lt;br /&gt;ರವಿಯ ಮಗ ಮಸೆಗಂಡನಶ್ವತ್ಥಾಮ ಮೈಮರೆದ&lt;br /&gt;ಅವನಿಪತಿಗೇರಾಯ್ತು ಸಲೆ ಸೈಂ&lt;br /&gt;ಧವ ಶಕುನಿ ದುಶ್ಶಾಸನಾದಿಗ&lt;br /&gt;ಳವಯವದಲಂಬುಗಳನಾಯ್ದರು ತೋದ ರಕುತದಲಿ ೧೧&lt;br /&gt;&lt;br /&gt;ಕದಿವಡೆದುದಾ ಚೂಣಿಬಲ ಬೆಂ&lt;br /&gt;ಗೊಡದ ನಾಯಕರಾಂತು ತಮಗಿ&lt;br /&gt;ನ್ನೊಡಲುಗಳ ಮೇಲಾಶೆಯೇಕಿನ್ನೆನುತ ಮಿಗೆ ಮಸಗಿ&lt;br /&gt;ಸೆಡೆದು ಸೊಪ್ಪಾದಖಿಳ ಸುಭಟರ&lt;br /&gt;ಗಡಣವನು ಮೇಳೈಸಿ ಮಗುಳವ&lt;br /&gt;ಗಡಿಸಿ ನೂಕಿತು ಸೇನೆ ಭೀಷ್ಮ ದ್ರೋಣರಾಜ್ಞೆಯಲಿ ೧೨&lt;br /&gt;&lt;br /&gt;&lt;br /&gt;ಖತಿಯಲಶ್ವತ್ಥಾಮನೀ ರವಿ&lt;br /&gt;ಸುತನ ಜರೆದನು ಗಾಯವಡೆದೈ&lt;br /&gt;ಪ್ರತಿಭಟನ ಭಾರವಣೆ ಲೇಸೇ ಕರ್ಣ ನೀನರಿವೈ&lt;br /&gt;ಅತಿಬಲನು ನೀನಹಿತ ಬಲ ವನ&lt;br /&gt;ಹುತವಹನು ನೀನಿರಲು ಕುರು ಭೂ&lt;br /&gt;ಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ ನೀನೆಂದ ೧೩&lt;br /&gt;&lt;br /&gt;ಭಟನು ನಾನಿರಲುಭಯ ರಾಯರ&lt;br /&gt;ಕಟಕದೊಳಗಿನ್ನಾವನೆಂದು&lt;br /&gt;ಬ್ಬಟೆಯ ನುಡಿಗಳ ನುಡಿದು ಬಾಚಿದೆ ಕೌರವನ ಧನವ&lt;br /&gt;ಭಟನು ಫಲುಗುಣನಹನು ತೋರಾ&lt;br /&gt;ಪಟುತನವನೆಲೆಯಪಜಯ ಸ್ತ್ರೀ&lt;br /&gt;ವಿಟನೆ ವಿಹ್ವಲನಾದೆಯೆಂದನು ದ್ರೋಣಸುತ ನಗುತ ೧೪&lt;br /&gt;&lt;br /&gt;ಆಗಲೇರಿಸಿ ನುಡಿದ ನುಡಿ ತಾ&lt;br /&gt;ನೀಗಳೇನಾಯಿತ್ತು ನುಡಿಗಳ&lt;br /&gt;ತಾಗನರಿಯದೆ ತರಿಚುಗೆಡೆವರೆ ಗರುವರಾದವರು&lt;br /&gt;ಈಗಳಾವ್ ಹಾರುವರು ಕ್ಷತ್ರಿಯ&lt;br /&gt;ನಾಗಿ ನೀನರ್ಜುನನ ತುರುಗಳ&lt;br /&gt;ಬೇಗ ಮರಳಿಚಿ  ತಂದು ತೋರದೆ ಮಾಣೆ ದಿಟವೆಂದ ೧೫&lt;br /&gt;&lt;br /&gt;ಎಲವೊ ಗರುಡಿಯ ಕಟ್ಟಿ ಸಾಮವ&lt;br /&gt;ಕಲಿಸಿ ಬಳಿಕಾ ಕೋಲ ಮಕ್ಕಳ &lt;br /&gt;ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆಮಗೆ &lt;br /&gt;ಕಲಹವೇತಕೆ ಕಾಣ ಬಹುದೆಂ&lt;br /&gt;ದಲಘು ಭುಜಬಲ ಭಾನುಸುತ ಕಡು&lt;br /&gt;ಮುಳಿದು ಫಡ ಫಡ ಪಾರ್ಥ ಮೈದೋರೆನುತ ಮಾರಾಂತ ೧೬&lt;br /&gt;&lt;br /&gt;ಇತ್ತಲಿತ್ತಲು ಪಾರ್ಥ ನಿಲು ನಿಲು&lt;br /&gt;ಮುತ್ತಯನ ಹಾರುವರನಂಜಿಸಿ&lt;br /&gt;ಹೊತ್ತುಗಳೆದೊಡೆ ಹೋಹುದೇ ಕೈದೋರು ಮೈದೋರು&lt;br /&gt;ತೆತ್ತಿಗರ ಕರೆ ನಿನ್ನ ಬೇರನು&lt;br /&gt;ಕಿತ್ತು ಕಡಲೊಳು ತೊಳೆವ ರಿಪುಭಟ&lt;br /&gt;ಮೃತ್ಯುವರಿಯಾ ಕರ್ಣನೆನುತಿದಿರಾಗಿ ನಡೆತಂದ ೧೭&lt;br /&gt;&lt;br /&gt;ಉಂಟು ನೀನಾಹವದೊಳಗೆ ಗೆಲ&lt;br /&gt;ಲೆಂಟೆದೆಯಲಾ ನಿನ್ನ ಹೋಲುವ&lt;br /&gt;ರುಂಟೆ ವೀರರು ಕೌರವೇಂದ್ರನ ಬಹಳ ಕಟಕದಲಿ&lt;br /&gt;ಟೆಂಟಣಿಸದಿದಿರಾಗು ನಿನ್ನಯ&lt;br /&gt;ಸುಂಟಿಗೆಯನಿತ್ತಖಿಳ ಭೂತದ&lt;br /&gt;ನಂಟನರ್ಜುನನೆನಿಸಿಕೊಂಬೆನು ಕರ್ಣ ಕೇಳೆಂದ ೧೮&lt;br /&gt;&lt;br /&gt;ಚಕಿತಚಾಪರು ಗಾಢ ಬದ್ಧ&lt;br /&gt;ಭ್ರುಕುಟಿ ಭೀಷಣಮುಖರು ರೋಷ&lt;br /&gt;ಪ್ರಕಟ ಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ&lt;br /&gt;ವಿಕಟ ಶೌರ್ಯೋತ್ಕಟ ಮಹಾ ನಾ&lt;br /&gt;ಯಕರು ನಿಷ್ಠುರ ಸಿಂಹ ಗರ್ಜನೆ&lt;br /&gt;ವಿಕಳಿತಾಚಲ ಸನ್ನಿವೇಶರು ಹೊಕ್ಕು ತರುಬಿದರು ೧೯&lt;br /&gt;&lt;br /&gt;ಪೂತುರೇ ಬಿಲುಗಾರ ಮಝರೇ&lt;br /&gt;ಸೂತನಂದನ ಬಾಣ ರಚನಾ&lt;br /&gt;ನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ&lt;br /&gt;ಆತುಕೊಳ್ಳೈ ನಮ್ಮ ಬಲುಮೆಗ&lt;br /&gt;ಳೇತರತಿಶಯವೆನುತ ಸರಳಿನ&lt;br /&gt;ಸೇತುವನು ಕಟ್ಟಿದನು ಗಗನಾಂಗಣಕೆ ಕಲಿಪಾರ್ಥ ೨೦&lt;br /&gt;&lt;br /&gt;ಮೇಲುಗೈಯಹೆ ಬಿರುದರೊಳು ಬಿ&lt;br /&gt;ಲ್ಲಾಳು ನೀನಹೆ ಚಾಪವಿದ್ಯಾ&lt;br /&gt;ಭಾಳನೇತ್ರನ ಗರುಡಿಯಲ್ಲಾ ಕಲಿತ ಮನೆ ನಿನಗೆ&lt;br /&gt;ಕೋಲು ನಮ್ಮವು ಕೆಲವು ಸಮಗೈ&lt;br /&gt;ಯಾಳೆ ನಿಮಗಾವೆನುತ ನೋಟಕ&lt;br /&gt;ರಾಲಿ ಝೋಂಮಿಡೆ ಕರ್ಣ ತುಳುಕಿದನಂಬಿನಂಬುಧಿಯ ೨೧&lt;br /&gt;&lt;br /&gt;ಅಹಹ ಫಲುಗುಣ ನೋಡಲಮ್ಮೆನು&lt;br /&gt;ಬಹಳ ಬಾಣಾದ್ವೈತವಾದುದು&lt;br /&gt;ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ&lt;br /&gt;ರಹವ ಮಾಡದಿರೆಲವೊ ತನಗಿದು&lt;br /&gt;ಗಹನವೇ ನೋಡೆನುತ ನರನತಿ&lt;br /&gt;ಸಹಸದಲಿ ಕೆದರಿದನು ಕರ್ಣನ ಬಾಣಪಂಜರವ ೨೨&lt;br /&gt;&lt;br /&gt;ವೀರನಲ್ಲಾ ಬನದ ರಾಜ ಕು&lt;br /&gt;ಮಾರನಲ್ಲಾ ಕೌರವನ ಬಡಿ&lt;br /&gt;ಹೋರಿಯಲ್ಲಾ ತಿರಿದಿರೈ ದಿಟವೇಕಚಕ್ರದಲಿ&lt;br /&gt;ನಾರಿಯರ ನಾಟಕದ ಚೋಹವ&lt;br /&gt;ನಾರು ತೆಗೆದರು ಪಾರ್ಥ ನಿನಗೀ&lt;br /&gt;ಶೌರಿಯದ ಸಿರಿಯೆಂತೆನುತ ತೆಗೆದೆಚ್ಚನಾ ಕರ್ಣ ೨೩&lt;br /&gt;&lt;br /&gt;ಬಲುಗಡಿಯನಹೆ ಬೇಟೆಗಾರರ&lt;br /&gt;ಬಳಗವುಳ್ಳವನಹೆ ವಿರೋಧಿಯ&lt;br /&gt;ದಳಕೆ ನೀನೊಡ್ಡುಳ್ಳ ಭಟನಹೆ ಸ್ವಾಮಿ ಕಾರ್ಯದಲಿ&lt;br /&gt;ತಲೆಯ ತೆರುವವನಹೆ ಕುಭಾಷೆಗೆ&lt;br /&gt;ಮುಳಿವವರು ನಾವಲ್ಲ ಸೈರಿಸು&lt;br /&gt;ಬಳಿಕೆನುತ ಕಲಿಪಾರ್ಥ ಸುರಿದನು ಸರಳ ಸರಿವಳೆಯ ೨೪&lt;br /&gt;&lt;br /&gt;ಅದ್ದನೋ ಬಾಣಾಂಬುಧಿಯಲೊಡೆ&lt;br /&gt;ಬಿದ್ದನೋ ವಿತಳದಲಿ ಮೇಣ್ವಿಧಿ&lt;br /&gt;ಕದ್ದನೋ ಕೈವಾರವೇತಕೆ ಕಾಣೆನಿನಸುತನ&lt;br /&gt;ತಿದ್ದಿತಾತನ ದೆಸೆ ನದೀಸುತ&lt;br /&gt;ನಿದ್ದನಾದೊಡೆ ಕೌರವೇಂದ್ರನ&lt;br /&gt;ಹೊದ್ದ ಹೇಳೆಂದೊದರುತಿರ್ದುದು ಕೂಡೆ ಕುರುಸೇನೆ ೨೫&lt;br /&gt;&lt;br /&gt;ಇಡಿದ ಮೋಡದ ಮುತ್ತಿಗೆಯ ಮೇ&lt;br /&gt;ಲೊಡೆದು ಮೂಡುವ ರವಿಯವೋಲ್ ನೆರೆ&lt;br /&gt;ಕಡಿದು ಶರಪಂಜರವ ಮುಸುಕಿದನರ್ಜುನನ ರಥವ&lt;br /&gt;ನಡುಗಿದನು ವೈರಾಟ ಹಯವಡಿ&lt;br /&gt;ಗಡಿಗೆ ನೊಂದವು ಹನುಮನಂಬರ&lt;br /&gt;ವೊಡೆಯೆ ಬೊಬ್ಬಿರಿದನು ಮಹಾದ್ಭುತವಾಯ್ತು ನಿಮಿಷದಲಿ ೨೬&lt;br /&gt;&lt;br /&gt;ಸೋಲವಾಯಿತು ಕರ್ಣಗೆಂಬರ&lt;br /&gt;ನಾಲಗೆಯ ಕೊಯ್ಯೆಲವೊ ಬಿಡು ಬಿ&lt;br /&gt;ಲ್ಲಾಳು ರಾಯನ ಪಟ್ಟದಾನೆ ವಿರೋಧಿ ಭೂಪತಿಯ&lt;br /&gt;ಭಾಳದಕ್ಕರ ತೊಡೆಯಿತೋ ತೆಗೆ&lt;br /&gt;ಕಾಳಗವನೆಂದಖಿಳ ಕುರುಬಲ&lt;br /&gt;ಜಾಲ ಬೊಬ್ಬಿಡೆ ಕರ್ಣ ಮೆರೆದನು ಬಿಲ್ಲ ಬಲುಮೆಯಲಿ ೨೭&lt;br /&gt;&lt;br /&gt;ಅರಿಭಟನ ಶಿರಜಾಲವನು ಸಂ&lt;br /&gt;ಹರಿಸಿದನು ನಿಮಿಷದಲಿ ಫಲುಗುಣ&lt;br /&gt;ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ&lt;br /&gt;ಶರಚತುಷ್ಟಯದಿಂದ ಕರ್ಣನ&lt;br /&gt;ಕರದ ಬಿಲ್ಲನು ಕಡಿಯೆ ಭಗ್ನೋ&lt;br /&gt;ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ ೨೮&lt;br /&gt;&lt;br /&gt;ಓಟವೇ ಅಪಜಯದ ಬೊಡ್ಡಿಯ&lt;br /&gt;ಬೇಟವೇ ಬೆಸಗೊಳ್ಳಿರೈ ಒಳ&lt;br /&gt;ತೋಟಿಗೊತ್ತಾಳಹುದು ನಾಲಗೆಯೀಗಳೇನಾಯ್ತು&lt;br /&gt;ಆಟವಿಕ ಭೂಪತಿಯ ಕೀರ್ತಿಯ&lt;br /&gt;ಕೂಟಣಿಗರೊಗ್ಗಾಯ್ತು ತೆಗೆ ಮರು&lt;br /&gt;ಳಾಟವಿನ್ನೇಕೆನುತ ಪಾರ್ಥನ ತಾಗಿದನು ದ್ರೋಣ ೨೯&lt;br /&gt;&lt;br /&gt;ಇದಿರುಗೊಳ್ಳೈ ಪಾರ್ಥ ವಿಪ್ರರಿ&lt;br /&gt;ಗದಟುತನವೆಲ್ಲಿಯದು ಕರ್ಣನ&lt;br /&gt;ಸದೆಬಡಿದ ಸಾಹಸಕೆ ಹಿಗ್ಗದಿರೆಮ್ಮ ಕೈಗುಣವ&lt;br /&gt;ಕದನದಲಿ ನೀ ನೋಡು ಕೈ ಸಾ&lt;br /&gt;ರಿದವು ಗಡ ಕಾಮಾರಿ ಹಿಡಿವ&lt;br /&gt;ಗ್ಗದ ಶರಾವಳಿಯದರ ಪರಿಯೆಂತೆಮಗೆ ತೋರೆಂದ ೩೦&lt;br /&gt;&lt;br /&gt;ಇದಿರುಗೊಂಡೆನು ವಂದಿಸಿದೆನೆ&lt;br /&gt;ಮ್ಮುದಯ ನಿಮ್ಮದು ನಿಮ್ಮ ಕೃಪೆಯಲಿ&lt;br /&gt;ವಿದಿತವೆನಗೀ ವಿದ್ಯೆ ನೀವ್ ಕಾಮಾರಿ ಮುರವೈರಿ&lt;br /&gt;ಹೃದಯ ನಿಮ್ಮದು ಕಾಳಗಕೆ ನಿ&lt;br /&gt;ಮ್ಮಿದಿರೊಳಾಳೇ ತಾನು ಕರುಣಾ&lt;br /&gt;ಸ್ಪದರು ನೀವೆಂದೆಚ್ಚನರ್ಜುನನವರ ಸಿರಿಪದಕೆ ೩೧&lt;br /&gt;&lt;br /&gt;ವಿನಯವುಚಿತವೆ ತತ್ತ ಸಮರದ&lt;br /&gt;ಮೊನೆಯೊಳಾರಿದಿರಾದಡಿರಿವುದು&lt;br /&gt;ಜನಪರಿಗೆ ಕರ್ತವ್ಯವದು ಸಾಕುಳಿದ ಮಾತೇನು&lt;br /&gt;ತನುಜ ಸೈರಿಸು ಸೈರಿಸೆಂದೆ&lt;br /&gt;ಚ್ಚನು ನಿರಂತರ ಬಾಣ ವರುಷವ&lt;br /&gt;ನನಿಮಿಷಾವಳಿ ಪೂತುರೆನೆ ಕೈದೋರಿದನು ದ್ರೋಣ ೩೨&lt;br /&gt;&lt;br /&gt;ಭಾವಿಸಲು ಪ್ರತಿಬಿಂಬದಲಿ ಬೇ&lt;br /&gt;ರಾವುದತಿಶಯವುಂಟು ನೀವೆನ&lt;br /&gt;ಗಾವ ಪರಿಯನು ಕಲಿಸಿದಿರಿ ನಿಮಗೊಪ್ಪಿಸುವೆನದನು&lt;br /&gt;ನೀವು ನೋಡುವದೆನುತ ನರನೆಸ&lt;br /&gt;ಲಾವುದಂಬರವಾವುದವನಿಯ&lt;br /&gt;ದಾವುದರಿ ಬಲವೆನಲು ಹಬ್ಬಿತು ಪಾರ್ಥ ಶರಜಾಲ ೩೩&lt;br /&gt;&lt;br /&gt;ವಿಷಯ ಲಂಪಟತನದಲಾವ್ ನಿ&lt;br /&gt;ರ್ಮಿಸಿದೆವಶ್ವತ್ಥಾಮನನು ನ&lt;br /&gt;ಮ್ಮೆಸೆವ ಮೋಹದ ಕಂದನೈಯೆಲೆಪಾರ್ಥ ನೀನೆಮಗೆ&lt;br /&gt;ಎಸುಗೆಗಾರರದಾರಿಗೀ ಶರ&lt;br /&gt;ವಿಸರ ಸಂಭವಿಸುವುದಿದಾರಿಗೆ&lt;br /&gt;ವಿಷಮ ವೀರನ ಕೈಯ ಚಳಕವಿದೆಂದನಾ ದ್ರೋಣ ೩೪&lt;br /&gt;&lt;br /&gt;ಎನುತ ಸುರಿದನು ಸರಳ ಸಾರವ&lt;br /&gt;ನನಲ ಗರ್ಭದ ಬಾಯ ಧಾರೆಗ&lt;br /&gt;ಳನಿಲ ಗರ್ಭದ ಗರಿಗಳಶನಿಯ ಗರ್ಭ ಮಿಂಟೆಗಳ&lt;br /&gt;ಮೊನೆಯ ಬಂಬಲುಗಿಡಿಯ ಹೊರಗಿನ&lt;br /&gt;ತನಿಹೊಗೆಯ ಹೊದರುಗಳ ಪುಂಖ&lt;br /&gt;ಧ್ವನಿಯ ದಟ್ಟಣೆ ಮಿಗಲು ಕವಿದವು ದ್ರೋಣನಂಬುಗಳು ೩೫&lt;br /&gt;&lt;br /&gt;ದೇವ ಭಾರದ್ವಾಜ ಬಲು ವಿ&lt;br /&gt;ದ್ಯಾ ವಿಷಯ ನವರುದ್ರ ಘನ ಶ&lt;br /&gt;ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ&lt;br /&gt;ಕೋವಿದನು ಶರತಿಮಿರವನು ಗಾಂ&lt;br /&gt;ಡೀವಿಯಗಣಿತ ಬಾಣ ಭಾನು ಕ&lt;br /&gt;ರಾವಳಿಯಲಪಹರಿಸಿದನು ಸುರರಾಜಸುತ ನಗುತ ೩೬&lt;br /&gt;&lt;br /&gt;ಹಿಳುಕನೀದುದೊ ಗಗನವಂಬಿನ&lt;br /&gt;ಜಲಧಿ ಜರಿದುದೊ ಪಾರ್ಥನೆಂಬ&lt;br /&gt;ಗ್ಗಳ ವಿರಿಂಚನ ಬಾಣ ಸೃಷ್ಟಿಯೊ ಬಲ್ಲನಾವವನು&lt;br /&gt;ಇಳೆಯ ಮರ್ತ್ಯರು ಶಿವ ಶಿವಾ ತೆಗೆ&lt;br /&gt;ಫಲುಗುಣಗೆ ಸರಿಯೆಂಬವರ ಬಾಯ್&lt;br /&gt;ಹುಳಿವುದೋ ಗುಣಕೇಕೆ ಮತ್ಸರವೆಂದುದಮರಗಣ ೩೭&lt;br /&gt;&lt;br /&gt;ಬಳಿಕ ಪಾರ್ಥನ ಬಾಣದಲಿ ಬಸ&lt;br /&gt;ವಳಿಯೆ ಸಾರಥಿ ಮೆಲ್ಲ ಮೆಲ್ಲನೆ&lt;br /&gt;ತೊಲಗಿಸಿದನಾ ರಥವನಿತ್ತಲು ಕರ್ಣನೀಕ್ಷಿಸಿದ&lt;br /&gt;ಎಲೆಲೆ ಕಟಕಾಚಾರ್ಯ ಗೆಲಿದನು&lt;br /&gt;ಫಲುಗುಣನನಿನ್ನೇನು ಕೌರವ&lt;br /&gt;ಬಲದ ಹಗೆ ಹರಿವಾಯ್ತು ರಾಜಾಭ್ಯುದಯವಿನ್ನೆಂದ ೩೮&lt;br /&gt;&lt;br /&gt;ಫಡ ಫಡೆಲವೊ ಕರ್ಣ ಸಾರಥಿ&lt;br /&gt;ಮಡಿದರೇನದು ಸೋಲವೇ ಕಾ&lt;br /&gt;ಳ್ಗೆಡೆಯದಿರು ನೋಡಾದಡಯ್ಯನ ಹರಿಬದಾಹವವ&lt;br /&gt;ನುಡಿಗೆ ತೆರನಾಯ್ತೆಂಬ ಖುಲ್ಲರ&lt;br /&gt;ಬೆಡಗ ನೋಡೆನುತುಗ್ರ ಚಾಪವ&lt;br /&gt;ಮಿಡಿದು ಮಂಡಿಸಿ ಹರನ ಹೋಲುವ ಸುಭಟ ಮಾರಾಂತ ೩೯&lt;br /&gt;&lt;br /&gt;ಆವುದೈ ನೀನರಿದ ಬಿಲು ವಿ&lt;br /&gt;ದ್ಯಾ ವಿಷಯ ಘನ ಚಾಪ ವೇದಾ&lt;br /&gt;ರ್ಥಾವಳಿಯು ಶರಮೌಕ್ತಿಕೋಪನ್ಯಾಸವೆಂತೆಂತು&lt;br /&gt;ಕೋವಿದರ ಭೂಸುರರ ಯುಕ್ತಿಯ&lt;br /&gt;ನೀವು ಕೊಂಡಿರೆ ಶಸ್ತ್ರವಿದ್ಯಾ&lt;br /&gt;ಭಾವ ಗೋಷ್ಠಿಯ ಬಲ್ಲಡರಿಯೆಂದೆಚ್ಚನರ್ಜುನನ ೪೦&lt;br /&gt;&lt;br /&gt;ಅಕ್ರಮವ ತಿರಿಭುವನ ವಿದ್ಯಾ&lt;br /&gt;ಚಕ್ರವರ್ತಿಗಳೆಂದು ನೀವೀ&lt;br /&gt;ವಿಕ್ರಮದ ಮಾತಿನಲಿ ಮೇಗರೆ ಮೆರೆವ ಭಟರುಗಳೆ&lt;br /&gt;ಶಕ್ರನಳುಕುವ ಬಾಹುಬಲ ರಿಪು&lt;br /&gt;ಚಕ್ರದೊಳಗಿನ್ನಾರಿಗುಂಟದು&lt;br /&gt;ವಕ್ರ ಭಣಿತೆಗೆ ಸಲುವುದಶ್ವತ್ಥಾಮನೆನುತೆಚ್ಚ ೪೧&lt;br /&gt;&lt;br /&gt;ಅರ್ಜುನನ ಶರವಿದ್ಯೆ ವಿವರಿಸೆ&lt;br /&gt;ದುರ್ಜಯವಲಾ ಗರುವತನದಲಿ&lt;br /&gt;ಗರ್ಜಿಸಿದೊಡೇನಹುದೆನುತ ಗುರುಸೂನು ಹರುಷದಲಿ&lt;br /&gt;ನಿರ್ಜರರು ಮಝ ಭಾಪುರೆನಲಾ&lt;br /&gt;ವರ್ಜಿಸಿದ ತಿರುವಿನಲಿ ಸಂಗರ&lt;br /&gt;ನಿರ್ಜಿತೇಂದ್ರಿಯನೆಸಲು ಕಣೆಗಳು ಕವಿದವಂಬರಕೆ ೪೨&lt;br /&gt;&lt;br /&gt;ಗುರುತನೂಜನಲಾ ವಿಭಾಡಿಸಿ&lt;br /&gt;ಹುರುಳುಗೆಡಿಸಲು ಬಹುದೆ ನೋಡು&lt;br /&gt;ತ್ತರ ಸುಯೋಧನ ಸೈನ್ಯಶರಧಿಯ ಗುಂಪಿನತಿಬಲರ&lt;br /&gt;ಹರನ ಸರಿದೊರೆಯಸ್ತ್ರ ವಿದ್ಯಾ&lt;br /&gt;ಧರರು ಮರ್ತ್ಯರೊಳಾರು ಲೇಸೆಂ&lt;br /&gt;ದುರುಳೆಗಡಿದನು ಪಾರ್ಥನಶ್ವತ್ಥಾಮನಂಬುಗಳ ೪೩&lt;br /&gt;&lt;br /&gt;ಗುರುಸುತನ ಶರಜಾಲವನು ಸಂ&lt;br /&gt;ಹರಿಸಿ ಮಗುಳಸ್ತ್ರೌಘವನು ವಿ&lt;br /&gt;ಸ್ತರಿಸಿದನು ಕಲಿಪಾರ್ಥನೀತನ ಸರಳುಗಳ ಸವರಿ&lt;br /&gt;ತರಣಿ ಬಿಂಬವ ನಭವ ಹೂಳ್ದುದು&lt;br /&gt;ಗುರುಸುತನ ಸಾಮರ್ಥ್ಯವಿಂತಿ&lt;br /&gt;ಬ್ಬರಿಗೆ ಸಮಬಲವಾಗಿ ಸಮತಳಿಸಿತ್ತು ರಣಕೇಳಿ ೪೪&lt;br /&gt;&lt;br /&gt;ತೀರವರ್ಜುನನಂಬು ರಣದಲಿ&lt;br /&gt;ತೀರಿದವು ಗುರುಸುತನ ಶರ ಕೈ&lt;br /&gt;ವಾರವೇ ಕೈಗುಂದಿ ನಿಂದನು ದ್ರೋಣನಂದನನು&lt;br /&gt;ಮೇರು ಮೊಗದಿರುಹಿತ್ತಲಾ ರಣ&lt;br /&gt;ಧೀರನಶ್ವತ್ಥಾಮ ಸೋತನು&lt;br /&gt;ಸಾರೆನುತ ಕೃಪನುರುಬಿದನು ತರುಬಿದನು ಫಲುಗುಣನ ೪೫&lt;br /&gt;&lt;br /&gt;ತಂದೆ ಮಕ್ಕಳು ಸೋತರಿನ್ನೇ&lt;br /&gt;ನೆಂದು ಮುಯ್ಯಾನದಿರು ನಿಲು ನಿ&lt;br /&gt;ಲ್ಲೆಂದು ಕೃಪನಡ ಹಾಯ್ದು ಪಾರ್ಥನ ರಥವ ತರುಬಿದನು&lt;br /&gt;ಬಂದ ಪರಿ ಲೇಸೆನುತ ಫಲುಗುಣ&lt;br /&gt;ನೊಂದು ಕನಲಂಬಿನಲಿ ಗುರುಗಳಿ&lt;br /&gt;ಗಿಂದು ವಂದಿಸಬೇಕೆನುತ ಕೀಲಿಸಿದನಾ ರಥವ ೪೬&lt;br /&gt;&lt;br /&gt;ತರಹರಿಸಿ ಶರವೈದರಲಿ ಸಂ&lt;br /&gt;ಹರಿಸಿ ಕೊಳ್ಳೆಂದೆಚ್ಚೊಡೀತನ&lt;br /&gt;ತುರಗವನು ತಾಗಿದವು ನೊಂದವು ರಥದ ವಾಜಿಗಳು&lt;br /&gt;ಕೆರಳಿ ಫಲುಗುಣನರ್ಧ ಚಂದ್ರದ&lt;br /&gt;ಸರಳಿನಲಿ ಸಾರಥಿಯ ತುರಗವ&lt;br /&gt;ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ ೪೭&lt;br /&gt;&lt;br /&gt;ಎಲೆಲೆ ಕರ್ಣ ದ್ರೋಣ ಗುರುಸುತ&lt;br /&gt;ರಲಘು ಭುಜಬಲ ಕೃಪನು ಹೊಕ್ಕಿರಿ&lt;br /&gt;ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ&lt;br /&gt;ಗೆಲುವನೊಬ್ಬನೆ ನಮ್ಮ ಬಲದಲಿ&lt;br /&gt;ನಿಲುಕಿ ಹಿಂಗುವ ಸುಭಟರಿನಿಬರು&lt;br /&gt;ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ ೪೮&lt;br /&gt;&lt;br /&gt;ಬಾಯ ಬಿಟ್ಟುದು ಸಕಲ ಕೌರವ&lt;br /&gt;ರಾಯದಳ ವಡಮುಖದಲದಟರು&lt;br /&gt;ಹಾಯಿದರು ತಡವೇನು ತೆರದೆರಸಾಯ್ತು ಕುರುಸೇನೆ&lt;br /&gt;ಕಾಯಬೇಕೆಂದೆನುತ ವರ ಗಾಂ&lt;br /&gt;ಗೇಯ ಚಾಪವ ಮಿಡಿದು ಬೆರಳಲಿ&lt;br /&gt;ಸಾಯಕವ ತೂಗುತ್ತ ತಡೆದನು ಪಾರ್ಥನುರವಣೆಯ ೪೯&lt;br /&gt;&lt;br /&gt;ಓಡಿದವರಲ್ಲಲ್ಲಿ ಧೈರ್ಯವ&lt;br /&gt;ಮಾಡಿತಚ್ಚಾಳೊಗ್ಗಿನಲಿ ಹುರಿ&lt;br /&gt;ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದಲಿ&lt;br /&gt;ಕೂಡೆ ಗರಿಗಟ್ಟಿತು ಚತುರ್ಬಲ&lt;br /&gt;ಜೋಡು ಮಾಡಿತು ಕವಿದುದೀತನ&lt;br /&gt;ಕೂಡೆ ಘನ ಗಂಭೀರ ಭೇರಿಯ ಬಹಳ ರಭಸದಲಿ ೫೦&lt;br /&gt;&lt;br /&gt;ತೊಲಗು ರಾಯ ಪಿತಾಮಹನ ಖತಿ&lt;br /&gt;ಬಲುಹು ತೆತ್ತಿಗರಹರೆ ರುದ್ರನ&lt;br /&gt;ನಳಿನನಾಭನ ಕರೆಸು ನೀ ಶಿಶು ಸಾರು ಸಾರೆನುತ&lt;br /&gt;ಉಲಿವ ಬಳಿಯ ಮಹಾರಥರ ಕಳ&lt;br /&gt;ಕಳದ ಕಹಳೆಯ ಪಾಠಕರ ಗಾ&lt;br /&gt;ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ ೫೧&lt;br /&gt;&lt;br /&gt;ಪೂತುರೇ ಕಲಿ ಪಾರ್ಥ ಭುವನ&lt;br /&gt;ಖ್ಯಾತನಾದೈ ಕಂದ ದ್ರೋಣನ&lt;br /&gt;ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು&lt;br /&gt;ಬೀತುದೇ ನಿಮ್ಮವಧಿ ಕುರುಕುಲ&lt;br /&gt;ಜಾತವನು ಹರೆಗಡಿದು ನಿಮ್ಮಯ&lt;br /&gt;ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ ೫೨&lt;br /&gt;&lt;br /&gt;ನಿಮ್ಮ ಕಾರುಣ್ಯಾವಲೋಕನ&lt;br /&gt;ವೆಮ್ಮ ಸಿರಿ ಬೇರೆಮಗೆ ಕಾಳಗ&lt;br /&gt;ದಮ್ಮುಗೆಯ ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ&lt;br /&gt;ಬಿಮ್ಮು ಬೀಸರವಹುದೆ ನಿಮ್ಮಯ&lt;br /&gt;ಸೊಮ್ಮಿನವರಿಗೆ ಬೇರೆ ರಾಜ್ಯದ&lt;br /&gt;ಹೆಮ್ಮೆ ತಾ ನಮಗೇಕೆನುತ ಕೈಯೊಡನೆ ನರನೆಚ್ಚ ೫೩&lt;br /&gt;&lt;br /&gt;ಎಸಲು ಪಾರ್ಥನ ಬಾಣವನು ಖಂ&lt;br /&gt;ಡಿಸುತ ಸೂತನನೆರಡರಲಿ ಕೀ&lt;br /&gt;ಲಿಸಿದನೈದಂಬಿನಲಿ ಹನುಮನ ಹಣೆಯನೊಡೆಯೆಚ್ಚ&lt;br /&gt;ನಿಶಿತ ಶರವೆಂಟರಲಿ ಕವಚವ&lt;br /&gt;ಕುಸುರಿದರಿದನು ನರನ ವಕ್ಷದ&lt;br /&gt;ಬೆಸುಗೆ ಬಿಡೆ ಮೂರಂಬಿನಲಿ ಮುರಿಯೆಚ್ಚು ಬೊಬ್ಬಿರಿದ ೫೪&lt;br /&gt;&lt;br /&gt;ಅರಿಯ ಶರಹತಿಗುತ್ತರನ ತನು&lt;br /&gt;ಬಿರಿಯೆ ಬಸವಳಿದನು ಕಪೀಶ್ವರ&lt;br /&gt;ನೊರಲಿದನು ರಾವಣನ ಗಾಯವ ನೆನೆದನಡಿಗಡಿಗೆ&lt;br /&gt;ಮರೆದು ಮಲಗಿದ ಸೂತನನು ನಾ&lt;br /&gt;ಲ್ಕೆರಡು ಗಳಿಗೆಯು ಬೀಸಿ ಮೂಗಿನೊ&lt;br /&gt;ಳೆರಲ ಕಂಡನು ಪಾರ್ಥನೆತ್ತಿದನಳುಕಿದುತ್ತರನ ೫೫&lt;br /&gt;&lt;br /&gt;ಕವಳವಿದ ಕೋ ಬಾಣ ಶಸ್ತ್ರಾ&lt;br /&gt;ನಿವಹ ಧಾರಾಸ್ತಂಭವಿನ್ನಾ&lt;br /&gt;ಹವದೊಳಂಜದಿರೆನುತೆ ಕೊಡಲುತ್ತರನು ದುಗುಡದಲಿ&lt;br /&gt;ಬವರದಾದಿಯನರಿಯದನ ಕೊಂ&lt;br /&gt;ದವನು ನೀನೋ ಭೀಷ್ಮನೋಯೆವ&lt;br /&gt;ಲವನ ನುಡಿಗರ್ಜುನನು ನಗುತಪರಾಧವುಂಟೆಂದ ೫೬&lt;br /&gt;&lt;br /&gt;ಹದುಳಿಸಿನ್ನಂಜದಿರು ಬಾಣೌ&lt;br /&gt;ಘದ ವಿದಾರಣವಿದು ವಿಚಾರಿಸ&lt;br /&gt;ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು&lt;br /&gt;ಒದೆದು ಕೊಳುತೈದಾನೆ ಸಿಂಧದ&lt;br /&gt;ತುದಿಯ ಹನುಮನು ವಜ್ರಮಯ ದೇ&lt;br /&gt;ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ ೫೭&lt;br /&gt;&lt;br /&gt;ಎಂದು ಮೂರಂಬಿನಲಿ ಗಂಗಾ&lt;br /&gt;ನಂದನನ ಮುಸುಕಿದನು ಸಾರಥಿ&lt;br /&gt;ನೊಂದನಾ ಧ್ವಜ ದಂಡವುಡಿದುದು ರಥ ವಿಸಂಚಿಸಿತು&lt;br /&gt;ಮುಂದುಗೆಟ್ಟನು ಭೀಷ್ಮನಹುದೋ&lt;br /&gt;ತಂದೆಯೆನುತಾರಂಬಿನಲಿ ಖತಿ&lt;br /&gt;ಯಿಂದ ಪಾರ್ಥನನೆಸಲು ಥಟ್ಟುಗಿದಂಬು ಹಾರಿದವು ೫೮&lt;br /&gt;&lt;br /&gt;ಒರತುದರ್ಜುನನೊಡಲಿನಲಿ ದುರು&lt;br /&gt;ದುರಿಸಿ ಸುರಿದುದು ಅರುಣಮಯ ಜಲ&lt;br /&gt;ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾ ಶರವ&lt;br /&gt;ತರಿದನೆಡೆಯಲಿ ಭೀಷ್ಮನುರೆ ಬೊ&lt;br /&gt;ಬ್ಬಿರಿದು ಬಳಿಕಾಗ್ನೇಯ ಬಾಣದ&lt;br /&gt;ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ ೫೯&lt;br /&gt;&lt;br /&gt;ವರುಣ ಬಾಣದಲಸ್ತ್ರವನು ಸಂ&lt;br /&gt;ಹರಿಸಿದನು ಕಲಿ ಭೀಷ್ಮನೊಬ್ಬೊ&lt;br /&gt;ಬ್ಬರು ಪರಾಜಯ ರೋಷಪಾವಕ ವಿಸ್ಫುಲಿಂಗಿತರು&lt;br /&gt;ಹರಿಸಿದರು ಕೌಬೇರ ಮಾರುತ&lt;br /&gt;ನಿರುತಿ ಯಮ ಪುರುಹೂತ ಶಂಕರ&lt;br /&gt;ಪರಿ ಪರಿಯ ಪ್ರತ್ಯಸ್ತ್ರವನು ಗಾಂಗೇಯ ಫಲುಗುಣರು ೬೦&lt;br /&gt;&lt;br /&gt;ಮಲೆತು ನಿಲುವೊಡೆ ಭೀಷ್ಮನಲ್ಲದೆ&lt;br /&gt;ಕೆಲರು ಪಾರ್ಥನ ದಿವ್ಯ ಬಾಣಾ&lt;br /&gt;ವಳಿಯ ಗಾರಾಗಾರಿಗಿದಿರೇ ಭೀಷ್ಮನುರವಣೆಗೆ&lt;br /&gt;ಕಲಿ ಧನಂಜಯನಲ್ಲದಿದಿರಲಿ&lt;br /&gt;ನಿಲುವರುಂಟೇ ಭುಜಗ ಸುರ ನರ&lt;br /&gt;ರೊಳಗೆ ಕೆಲರೆಂದಿಂದ್ರ ನುಡಿದನು ಬೆರಳನೊಲೆದೊಲೆದು ೬೧&lt;br /&gt;&lt;br /&gt;ಪೂತು ಪಾಯಕು ಪಾರ್ಥ ಬಿಲು ವಿ&lt;br /&gt;ದ್ಯಾತಿಶಯದಲಿ ಭೀಷ್ಮನೀ ಪುರು&lt;br /&gt;ಹೂತನಮರಾರಿಗಳ ಮಿಕ್ಕರಲಾ ಮಹಾದೇವ&lt;br /&gt;ಈತಗಳು ಜನಿಸಿದೊಡೆ ಹಿಂದೆ ಮ&lt;br /&gt;ಹೀತಳವ ಕದ್ದೊಯ್ವನೇ ಖಳ&lt;br /&gt;ಸೀತೆ ಬನದಲಿ ನವೆವಳೇಯೆನುತಿರ್ದುದಮರಗಣ ೬೨&lt;br /&gt;&lt;br /&gt;ಹಿಂದೆ ಕರ್ಣನ ಕೈಮೆಯನು ಗುರು&lt;br /&gt;ನಂದನನ ಬಿಲುಗಾರತನವನು&lt;br /&gt;ಮಂದರೋಪಮ ಧೈರ್ಯವಾಚಾರಿಯನ ಪರಿಣತೆಯ&lt;br /&gt;ಇಂದು ಕೃಪನಗ್ಗಳಿಕೆಯನು ನಲ&lt;br /&gt;ವಿಂದ ಕಂಡೆನಿದಾರ ಪರಿಯ&lt;br /&gt;ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ ೬೩&lt;br /&gt;&lt;br /&gt;ಎನೆ ಕುಮಾರಕ ಕಾರ್ತವೀರ್ಯಾ&lt;br /&gt;ರ್ಜುನನಾತನ ತೋರ ತೋಳಿನ&lt;br /&gt;ಬನವ ಕಡಿದನು ವೀರಭಾರ್ಗವ ರಾಮನತಿ ಬಲನು&lt;br /&gt;ಮುನಿದು ಮಲೆತೊಡೆ ಭೀಷ್ಮನಾತನ&lt;br /&gt;ಮನಕೆ ಭೀತಿಯನಿತ್ತನೀತನೊ&lt;br /&gt;ಳೆನಗೆ ಸರಿನೂಕುವದೆ ಕಾಳಗವೆಂದನಾ ಪಾರ್ಥ ೬೪&lt;br /&gt;&lt;br /&gt;ಮತ್ತೆ ಗಂಗಾಸೂನು ಪಾರ್ಥನ&lt;br /&gt;ತೆತ್ತಿಸಿದನೈದಂಬಿನಲಿ ರಥ&lt;br /&gt;ಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ&lt;br /&gt;ಹುತ್ತಕುರಗನು ಬಗಿದು ಹೊಗುವವೊ&lt;br /&gt;ಲುತ್ತರಿಸಿದವು ಸರಳು ಮಿಗೆ ಧೃತಿ&lt;br /&gt;ವೆತ್ತು ಫಲುಗುಣನವರನೆಚ್ಚನು ಹತ್ತು ಬಾಣದಲಿ ೬೫&lt;br /&gt;&lt;br /&gt;ನರನ ಶರದಲಿ ಭೀಷ್ಮನೆದೆ ತನು&lt;br /&gt;ಬಿರಿಯೆ ಮೈ ಝೋಂಪಿಸಿತು ಸಲೆ ತರ&lt;br /&gt;ಹರಿಸಲರಿಯದೆ ಮಲಗಿ ನಿಂದನು ರಥದ ಕಂಬುಗೆಯ&lt;br /&gt;ಅರರೆ ಸೋತನು ಭೀಷ್ಮನಿನ್ನೇ&lt;br /&gt;ನುರಿದುದೋ ಕುರುಸೇನೆ ಯಾವೆಡೆ&lt;br /&gt;ದೊರೆಯೆನುತ ಬಾಯ್ಬಿಡಲು ಕೌರವರಾಯ ಮಾರಾಂತ ೬೬&lt;br /&gt;&lt;br /&gt;ಸೀಳು ನಾಯ್ಗಳ ಬಾಯ ಕೆಲಬಲ&lt;br /&gt;ದಾಳ ಹಂಗಿನ ದೊರೆಯೆ ಸುಭಟರ&lt;br /&gt;ಸೋಲವದು ರಾಯರಿಗೆ ಸೋಲವೆ ನೂಕು ನೂಕೆನುತ&lt;br /&gt;ಕೋಲ ಹೊದೆಗಳ ಕೆದರಿ ಸಿಂಧದ&lt;br /&gt;ಮೇಲೆ ಹಾವನು ಹಾಯ್ಕಿ ಸಾರಥಿ&lt;br /&gt;ಮೇಳವಿಸಲವನಿಪನ ರಥವನು ನೆರೆದುರತಿರಥರು ೬೭&lt;br /&gt;&lt;br /&gt;ಕಲಕಿ ಕೆದರಿದ ಬಲಜಲಧಿಯೊ&lt;br /&gt;ಬ್ಬುಳಿಗೆ ಬಂದುದು ತಳಿತ ಸತ್ತಿಗೆ&lt;br /&gt;ಗಳ ವಿಡಾಯಿಯಲಳ್ಳಿರಿವ ನಿಸ್ಸಾಳ ಕೋಟಿಗಳ&lt;br /&gt;ಉಲಿವ ಕಹಳೆಯ ಬೈಗುಳೆಡಗೈ&lt;br /&gt;ತಳದ ಬಾಯ್ಬಲಗೈಯನೊಲವುತ&lt;br /&gt;ಬಳಿಕ ಭಟ್ಟರು ಹೊಗಳಿದರು ಕೌರವನ ಬಿರುದುಗಳ ೬೮&lt;br /&gt;&lt;br /&gt;ಒಗ್ಗು ಮುರಿಯದೆ ಸೇನೆ ಮೊಳಗುವ&lt;br /&gt;ಲಗ್ಗೆವರೆಯಲಿ ಹೆಣನ ತುಳಿದೊಡೆ&lt;br /&gt;ಮುಗ್ಗಿ ಕವಿದುದು ಕೌರವೇಂದ್ರನ ಮೊಗದ ಸನ್ನೆಯಲಿ&lt;br /&gt;ಹುಗ್ಗಿಗರ ಬಲುಹುರಿಯ ನಿಗುಚುವೆ&lt;br /&gt;ನಿಗ್ಗುವೆನು ನಿಲ್ಲೆನುತ ಸೇನೆಯ&lt;br /&gt;ನಗ್ಗಡಲೊಳಿಕ್ಕಿದನು ಫಲುಗುಣನಗಣಿತಾಸ್ತ್ರದಲಿ ೬೯&lt;br /&gt;&lt;br /&gt;ವೀರರಿದಿರಹ ಹೊತ್ತು ರಣ ಮೈ&lt;br /&gt;ಲಾರರಾದರು ಮರಳಿ ತೆಗೆವುತ&lt;br /&gt;ಭೈರವನ ಸಾರೂಪ್ಯವಾದರು ಪೂತು ಮಝರೆನುತ&lt;br /&gt;ಕೌರವನು ಕರ್ಣಾದಿಗಳ ನುಡಿ&lt;br /&gt;ಯೋರೆ ಹದರಿನೊಳವಗಡಿಸಿ ಹೊಂ&lt;br /&gt;ದೇರ ದುವ್ವಾಳಿಸುತ ಮೂದಲಿಸಿದನು ಫಲುಗುಣನ ೭೦ &lt;br /&gt;&lt;br /&gt;ಬಾಲ ವೃದ್ಧರ ವಿಪ್ರರನು ನೀ&lt;br /&gt;ಕಾಳಗದೊಳೋಡಿಸಿದೆನೆಂದೇ&lt;br /&gt;ಮೇಲು ಪೋಗಿನಲಿರಲು ಬೇಡೆಲೆ ಪಾರ್ಥ ಮರುಳಾದೈ&lt;br /&gt;ಆಳಿದಡವಿಯ ರಾಜ್ಯವಲ್ಲದೆ&lt;br /&gt;ಮೇಲೆ ಧರಣಿಯ ಬಯಸಿದೊಡೆ ನಿಮ&lt;br /&gt;ಗಾಳಲೀವೆನೆ ಹೋಗು ಹೋಗಾರಣ್ಯಕೆನುತೆಚ್ಚ ೭೧&lt;br /&gt;&lt;br /&gt;ಗಾರುಗೆಡೆಯದಿರೆಲವೊ ಸತ್ಯವ&lt;br /&gt;ಮೀರಲಮ್ಮದೆ ಲೋಕ ನಿನ್ನನು&lt;br /&gt;ದೂರ ಬೇಕೆಂದಡವಿಯೊಕ್ಕೆವು ಹೊಲ್ಲೆಯೇನಿದಕೆ&lt;br /&gt;ಜಾರಿ ಹೋಯಿತ್ತವಧಿಯಿನ್ನೀ&lt;br /&gt;ಮೀರಿ ಗಳಹುವ ನಿನ್ನ ಗಂಟಲ&lt;br /&gt;ನೂರಿ ರಾಜ್ಯವ ತೆಗೆವೆ ಸೈರಿಸೆನ್ನುತ್ತ ನರನೆಚ್ಚ ೭೨&lt;br /&gt;&lt;br /&gt;ಅರಿಯೆ ನೀನೆಲೆ ಮರುಳೆ ಗರುಡನ&lt;br /&gt;ತರವಳಿಕೆಯಲಿ ಹಾವು ಕನ್ನವ&lt;br /&gt;ಕೊರೆದು ಬದುಕುವದೇ ವೃಥಾ ಕಕ್ಕುಲಿತೆ ನಿನಗೇಕೆ&lt;br /&gt;ತರಿದು ತಿರಿಕಲ್ಲಾಡುವೆನು ನಿ&lt;br /&gt;ಮ್ಮುರುವರೈವರ ಶಿರವನರ್ಜುನ&lt;br /&gt;ಬರಿದೆ ಗಳಹುದಿರೆನುತ ಕೌರವರಾಯ ತೆಗೆದೆಚ್ಚ ೭೩&lt;br /&gt;&lt;br /&gt;ಗರುಡ ನೀನಹೆ ನಿನ್ನ ಪಕ್ಕವ&lt;br /&gt;ಮುರಿದು ಹೆಡತಲೆಗಡರಿ ಬೆನ್ನೆಲು&lt;br /&gt;ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯೆ&lt;br /&gt;ತರಹರಿಸಿ ಕಲಿಯಾಗುಯೆಂದ&lt;br /&gt;ಬ್ಬರಿಸಿ ಕೌರವನೆದೆಯನುಗುಳಿದ&lt;br /&gt;ನೆರಡು ಬಾಣದೊಳರುಣ ಜಲದೊರೆತೆಗಳ ಕಾಣಿಸಿದ ೭೪&lt;br /&gt;&lt;br /&gt;ನವ ನಿಕಾರಿಯ ವಲ್ಲಿ ಸೀರೆಗ&lt;br /&gt;ಳವಯವದ ರಕುತದಲಿ ತೋದವು&lt;br /&gt;ಜವವಳಿದು ಸಾರಥಿಗೆ ಸೂಚಿಸೆ ರಥವ ಮರಳಿಚಿದ&lt;br /&gt;ಕವಿದನರ್ಜುನನೋಡದಿರು ಕೌ&lt;br /&gt;ರವ ಪಲಾಯನವಕಟಕಟ ಪಾ&lt;br /&gt;ರ್ಥಿವರ ಪಂಥವೆ ಮರಳಿ ನಿಂದಿರು ಕೊಲುವದಿಲ್ಲೆಂದ ೭೫&lt;br /&gt;&lt;br /&gt;ಮಾತು ಹಳಸದ ಮುನ್ನ ಕೈಗಳು&lt;br /&gt;ಸೋತು ತೆಗೆದವೆ ಹೊಳ್ಳುವಾತಿದು&lt;br /&gt;ನೀತಿಯೇ ನರಪತಿಗಳಿಗೆ ಬಹು ಭಂಗವನ್ವಯಕೆ&lt;br /&gt;ಭೀತನಲ್ಲದೆ ಕಾದಿ ಮಡಿದನ&lt;br /&gt;ಮಾತುಗಳಲಾ ಪುಣ್ಯಕಥನವು&lt;br /&gt;ಭೂತಳಾಧಿಪ ಮರಳಿ ನೋಡೆನ್ನಾಣೆ ನೀನೆಂದ ೭೬&lt;br /&gt;&lt;br /&gt;ಹುರುಳುಗೆಟ್ಟುದು ಗರುವತನವೆಂ&lt;br /&gt;ದರಸ ನಾಚಿದನಧಿಕ ಶೌರ್ಯೋ&lt;br /&gt;ತ್ಕರುಷೆಯಲಿ (ಪಾ: ತ್ಕರ್ಷೆಯಲಿ) ಕಲಿಯಾಗಿ ನಿಂದನು ಮತ್ತೆ ಕಾಳಗಕೆ&lt;br /&gt;ದೊರೆಯ ದುಗುಡವ ಕಂಡು ತಮ ತಮ&lt;br /&gt;ಗುರವಣಿಸಿದರು ಸಕಲ ಸುಭಟರು&lt;br /&gt;ಹೊರಳಿಗಟ್ಟಿತು ಸೇನೆ ನಿಚ್ಚಟರಳಿವ ನಿಶ್ಚಯಿಸಿ ೭೭&lt;br /&gt;&lt;br /&gt;ನೊಂದನವನಿಪ ನಿಂದು ಪಾರ್ಥನ&lt;br /&gt;ಕೊಂದು ತೋರುವೆನೆಂದು ರವಿಸುತ&lt;br /&gt;ನೊಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು&lt;br /&gt;ಒಂದು ಕಡೆಯಲಿ ಮಸಗಿದರು ಗುರು&lt;br /&gt;ನಂದನನು ವೃಷಸೇನ ಸೈಂಧವ&lt;br /&gt;ರೊಂದು ಕಡೆಯಲಿ ಭೀಷ್ಮ ಕೃಪ ದುಶ್ಶಾಸನಾದಿಗಳು ೭೮&lt;br /&gt;&lt;br /&gt;ಗುರು ಚಡಾಳಿಸಿ ಹೊಕ್ಕನೊಮ್ಮಿಂ&lt;br /&gt;ಗುರವಣಿಸಿದನು ಬಾಹ್ಲಿಕನು ಭಾ&lt;br /&gt;ಸುರ ಕಳಿಂಗ ಸುಕೇತು ಭೂರಿಶ್ರವನು ದುಸ್ಸಹನು&lt;br /&gt;ನರನ ಮುತ್ತಿದರೊಂದು ಕಡೆಯಲಿ&lt;br /&gt;ತೆರಳಿಕೆಯ ತೇರಿನಲಿ ಬಲ ಮೋ&lt;br /&gt;ಹರಿಸಿ ಕವಿದುದು ಸುತ್ತ ಮುತ್ತಿತು ಕಲಿ ಧನಂಜಯನ ೭೯&lt;br /&gt;&lt;br /&gt;ಅಂಗವಿಸಿತರಿ ಸೇನೆ ಲೋಕವ&lt;br /&gt;ನುಂಗಿ ಕುಣಿಯಲು ಬಗೆವ ಭರ್ಗನ&lt;br /&gt;ರಂಗಭೂಮಿಯ ತೊಳೆವ ಜಲಧಿಯ ಜೋಕೆಯಂದದಲಿ&lt;br /&gt;ಭಂಗಿತರ ಮರುವಲಗೆಯಲಿ ಸ&lt;br /&gt;ರ್ವಾಂಗಬಲ ಜೋಡಿಸಿತು ನಮ್ಮುಳಿ&lt;br /&gt;ವಿಂಗೆ ಹದನೇನೆನುತ ಮತ್ಸ್ಯನ ಸೂನು ಚಿಂತಿಸಿದ ೮೦&lt;br /&gt;&lt;br /&gt;ನೆರೆದ ತಿಮಿರದ ಥಟ್ಟು ಸೂರ್ಯನ&lt;br /&gt;ತೆರಳಿಚುವವೊಲ್ ಮೇಘ ಘಟೆಗಳು&lt;br /&gt;ಮುರಿದು ಮೋಹರವೌಕಿ ಪವನನ ಸೆರಗ ಹಿಡಿವಂತೆ&lt;br /&gt;ತೆರಳೊದತ್ತಂಬರಿಸಿ ಕುರುಬಲ&lt;br /&gt;ವೊರಲಿ ಹೆಣನನು ತುಳಿದು ಮೇಲ&lt;br /&gt;ಬ್ಬರಿಸಿ ಬರೆ ಸನ್ಮೋಹನಾಸ್ತ್ರವ ಹೂಡಿದನು ಪಾರ್ಥ ೮೧&lt;br /&gt;&lt;br /&gt;ಎಸಲು ಸನ್ಮೋಹನದ ಶರ ಪಸ&lt;br /&gt;ರಿಸಿತು ಬಲದಲಿ ಬಹಳ ನಿದ್ರಾ&lt;br /&gt;ವ್ಯಸನ ವಿಹ್ವಲಿತಾಂತರಂಗರು ಮೈಯ್ಯನೊಲೆದೊಲೆದು&lt;br /&gt;ಉಸುರ ಸಂಚದ ನಾಡಿಯವಗಾ&lt;br /&gt;ಹಿಸಲು ಕೊರೆದರು ಗುರುಕಿಡುತ ತಲೆ&lt;br /&gt;ಮುಸುಕಿನಲಿ ನೆರೆ ತೆಕ್ಕೆಗೆಡೆದುದು ನಿಖಿಳ ಕುರುಸೇನೆ ೮೨&lt;br /&gt;&lt;br /&gt;ತನುವನೊಲೆದವು ದಡದಡಿಸಿ ಕಿವಿ&lt;br /&gt;ಗೊನೆಯ ಜೋಲಿಸಲಲ್ಲಿ ಮಡಿಗಾ&lt;br /&gt;ಲಿನಲಿ ಕುಸಿದವು ಕೊರಳ ಮರಳಿಚಿ ಕೈಯ್ಯನೊಳಗಿಟ್ಟು&lt;br /&gt;ತೊನೆದು ಕೆಡೆದವು ಜೋಧರಾಗಳು&lt;br /&gt;ಕನಲಿ ಕೆಡೆದರು ಗುರು ನದೀಜರ&lt;br /&gt;ಘನ ಬಲಂಗಳೊಳಯುತ ಕೋಟಿ ಗಜಂಗಳುರುಳಿದವು ೮೩&lt;br /&gt;&lt;br /&gt;ದೃಗುಯುಗಳವರೆದೆರೆಯೆ ರೋಮಾ&lt;br /&gt;ಳಿಗಳು ತೆಕ್ಕೆಯ ಸಾರೆ ಕೊರಳರೆ&lt;br /&gt;ಮುಗುಳೆ ಹಿಂಗಾಲ್ಗೊಂಡು ಖುರವನು ತೂಗಿಯೊಲೆದೊಲೆದು&lt;br /&gt;ಬಿಗುವು ಸಹಿತವೆ ಹೊನ್ನ ಮರಗೋ&lt;br /&gt;ಡುಗಳ ಮೇಲಡಗೆಡೆದು ನಿದ್ರಾ&lt;br /&gt;ಮುಗುದರಾದರು ರಾವುತರು ತೂಕಡಿಸಿದವು ತುರಗ ೮೪&lt;br /&gt;&lt;br /&gt;ಬಿಲು ಸೆಳೆಯೆ ಕೈದುಗಳು ಕೈಯಿಂ&lt;br /&gt;ಚಲಿಸಲೊಬ್ಬರನೊಬ್ಬರತ್ತಲು&lt;br /&gt;ಮಲಗಿ ಬೆಂಬತ್ತಳಿಕೆ ಬದಿಯೊಳಗಡಸಿ ತೋಳುಗಳ&lt;br /&gt;ತಲೆಯೊಳಾನಿಸಿ ಗುರುಗುರಿಸಿ ರಥ&lt;br /&gt;ದೊಳಗೆ ಸಾರಥಿವೆರಸಿ ನಿದ್ರಾ&lt;br /&gt;ಕುಳರು ಜೊಮ್ಮಿನ ಮೇಲೆ ಮೈಮರೆದಿರ್ದರತಿರಥರು ೮೫&lt;br /&gt;&lt;br /&gt;ಸರಳ ಸೊಕ್ಕವಗಡಿಸಿ ಸಲೆ ಮೈ&lt;br /&gt;ಮರೆದನಿತ್ತಲು ದ್ರೋಣ ರಥದಲಿ&lt;br /&gt;ಪರಮ ನಿದ್ರಾಗುಪ್ತನಾದನು ತನ್ನ ಮಗ ಸಹಿತ&lt;br /&gt;ಕರದ ಬಿಲು ಶರ ಸರಿಯೆ ಕಂಗಳು&lt;br /&gt;ಮುರಿಯೆ ಕರ್ಣನು ಕೆನ್ನೆಗೆದೆಯೊಳು&lt;br /&gt;ದುರುಳ ದುರ್ಯೋಧನ ಸಹಿತ ಮೈಮರೆದುದರಿಸೇನೆ ೮೬&lt;br /&gt;&lt;br /&gt;ಸೇನೆ ಮೈಮರೆದೊರಗಿದದಟ ನಿ&lt;br /&gt;ಧಾನವೊಗೆದರುಹಿತ್ತು ನಿದ್ರಾ&lt;br /&gt;ಮಾನ ವಿಭ್ರಮಿಸಿತ್ತು ಬಲು ಸಂಸಾರದಂದದಲಿ&lt;br /&gt;ಏನ ಹೇಳುವೆನದನು ಕದನದ&lt;br /&gt;ಕಾನನದೊಳತಿರಥರು ವಿಜಯ ವಿ&lt;br /&gt;ಹೀನಬಲ ಸನ್ಮೋಹನಾಸ್ತ್ರದ ಬಾಧೆಗೊಳಗಾಯ್ತು ೮೭&lt;br /&gt;&lt;br /&gt;ಕನಸು ಮೇಣೆಚ್ಚರು ಸುಷುಪ್ತಿಗ&lt;br /&gt;ಳೆನಿಪವಸ್ಥಾ ತ್ರಿತಯದಲಿ ಜೀ&lt;br /&gt;ವನು ವಿಸಂಚಿಸಿ ಬೀಳ್ವನಲ್ಲದೆ ಶರಕೆ ಸಿಲುಕುವನೆ&lt;br /&gt;ಇನಿತು ಬಲ ತೂಕಡಿಸಿ ಝೋಂಪಿಸಿ&lt;br /&gt;ತನಿಗೆಡೆಯೆ ಭಾಗೀರಥೀ ನಂ&lt;br /&gt;ದನನು ನಿರ್ಮಲನಾಗಿ ತೊಳ ತೊಳಗಿದನು ರಥದೊಳಗೆ ೮೮&lt;br /&gt;&lt;br /&gt;ಎಣಿಸುವರೆ ಏಕಾದಶಾಕ್ಷೋ&lt;br /&gt;ಹಿಣಿಯ ಬಲವನು ಪಾರ್ಥನೊಬ್ಬನೆ&lt;br /&gt;ರಣದೊಳಗೆಡಹಿದನು ಮೋಹನ ಮಂತ್ರ ಬಾಣದಲಿ&lt;br /&gt;ಕುಣಿದು ಕುಸುಮದ ಸರಿವುಗಳ ಸಂ&lt;br /&gt;ದಣಿಯನಮರರು ಸೂಸಿದರು ಫಲು&lt;br /&gt;ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ ೮೯&lt;br /&gt;&lt;br /&gt;ಇಳಿದು ದ್ರೋಣನ ಚರಣ ಕಮಲಂ&lt;br /&gt;ಗಳಿಗೆ ತನ್ನಯ ನೊಸಲ ಚಾಚಿದ&lt;br /&gt;ನಳವಿಯಲಿ ಭೀಷ್ಮಂಗೆ ಮೈಯಿಕ್ಕಿದನು ರಥದೊಳಗೆ&lt;br /&gt;ಸುಲಿದು ಕರ್ಣನ ಮುಕುಟ ಪಟ್ಟೆಯ&lt;br /&gt;ಸೆಳೆದು ದುರ್ಯೋಧನನ ವಸ್ತ್ರವ&lt;br /&gt;ಸುಲಲಿತಾಭರಣವನು ನೀ ತೆಗೆಯೆಂದನುತ್ತರಗೆ ೯೦&lt;br /&gt;&lt;br /&gt;ಧರಣಿಪಾಲರ ಮುಕುಟವನು ಕ&lt;br /&gt;ತ್ತರಿಸಿ ದುಶ್ಶಾಸನನ ಘನ ಶಿರ&lt;br /&gt;ವರದ ರತ್ನವನುಡಿದು ಭೂರಿಶ್ರವ ಜಯದ್ರಥರ&lt;br /&gt;ಹೊರಳಿಚಿದನು ವಿಶೋಕ ಕುವರರ&lt;br /&gt;ಹುರುಳುಗೆಡಿಸಿದನಖಿಳ ರಾಯರ&lt;br /&gt;ಶಿರಕೆ ಭಂಗವ ಹೊರಿಸಿ ಫಲುಗುಣನಡರಿದನು ರಥವ ೯೧&lt;br /&gt;&lt;br /&gt;ಫಲುಗುಣನ ನೇಮದಲಿ ರಥದಿಂ&lt;br /&gt;ದಿಳಿದನುತ್ತರನವನಿಪನ ಕೋ&lt;br /&gt;ಮಲ ಸುವಸ್ತ್ರಾಭರಣ ಕರ್ಣನ ಕೃಪನ ಗುರುಸುತನ&lt;br /&gt;ಸುಲಲಿತಾಂಬರ ರತ್ನಭೂಷಣ&lt;br /&gt;ಗಳನು ಕೊಂಡಡರಿದನು ರಥವನು&lt;br /&gt;ಬಿಲುದುಡುಕಿ ಗಾಂಗೇಯನಡಹಾಯ್ದನು ಧನಂಜಯನ ೯೨&lt;br /&gt;&lt;br /&gt;ಎರಡು ಶರದಲಿ ಚಾಪವನು ಕ&lt;br /&gt;ತ್ತರಿಸಿ ಭೀಷ್ಮನ ನಿಲಿಸಿ ಕೌರವ&lt;br /&gt;ಧರಣಿಪಾಲನ ಮುಕುಟವನು ಮೂರಂಬಿನಲಿ ಕಡಿದು&lt;br /&gt;ತಿರುಗಿದನು ಕಲಿಪಾರ್ಥ ನಗುತು&lt;br /&gt;ತ್ತರ ಸಹಿತ ಬನ್ನಿಯಲಿ ಕೈದುವ&lt;br /&gt;ನಿರಿಸಿ ಮುನ್ನಿನ ಹುಲು ರಥದಿ ನಿಜನಗರಿಗೈತಂದ ೯೩&lt;br /&gt;&lt;br /&gt;(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)&lt;br /&gt;(ಕರಡು ತಿದ್ದಿದ್ದು: ಸಂದೀಪ ನಡಹಳ್ಳಿ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-1852272437530262735?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/1852272437530262735/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=1852272437530262735&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/1852272437530262735'/><link rel='self' type='application/atom+xml' href='http://www.blogger.com/feeds/742145181089395829/posts/default/1852272437530262735'/><link rel='alternate' type='text/html' href='http://gaduginabharata.blogspot.com/2010/05/blog-post_18.html' title='ವಿರಾಟಪರ್ವ: ೦೮. ಎಂಟನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-4052332390269171331</id><published>2010-05-13T02:16:00.000+05:30</published><updated>2010-05-13T02:17:31.280+05:30</updated><category scheme='http://www.blogger.com/atom/ns#' term='೦೮. ಕರ್ಣಪರ್ವ'/><title type='text'>ಕರ್ಣಪರ್ವ: ೦೪. ನಾಲ್ಕನೆಯ ಸಂಧಿ</title><content type='html'>ಸೂ: ರಾಯದಳ ಮಝ ಪೂತುರೆನೆ ರಿಪು&lt;br /&gt;ರಾಯ ಸೇನೆಯ ಮುರಿದು ಪಾಂಡವ&lt;br /&gt;ರಾಯ ಧರ್ಮಕುಮಾರ ಗೆಲಿದನು ಕೌರವೇಶ್ವರನ  &lt;br /&gt;&lt;br /&gt;ಫಡ ಫಡೆಲವೋ ಶಲ್ಯ ಮಕ್ಕಳ&lt;br /&gt;ಬಡಿದು ಬೆರೆದೈ ಬಾಹುಬಲದಲಿ&lt;br /&gt;ತೊಡರು ನಿನಗೆಡಗಾಲಲಿದೆಯೆನುತೊದೆದು ನಿಜರಥವ&lt;br /&gt;ಘುಡುಘುಡಿಸಿ ರೋಮಾಂಚನದ ಹೊರ&lt;br /&gt;ಗುಡಿಯ ಸೊಂಪಿನ ಮೈಯ್ಯ ಕಡುಗಲಿ&lt;br /&gt;ತಡೆದನೇಕಾಂಗದಲಿ ಸಾತ್ಯಕಿ ಶಲ್ಯ ಭೂಪತಿಯ ೧&lt;br /&gt;&lt;br /&gt;ಬಾಯಿ ಬಡಿಕರು ಯಾದವರು ಗರು&lt;br /&gt;ವಾಯಿ ನಿನಗೆಲ್ಲಿಯದು ಸುಭಟರಿ&lt;br /&gt;ಗಾಯುಧದ ಸಿಂಗಾರವೋ ಮೇಣ್ ಕಾಲ ನೇವುರವೊ&lt;br /&gt;ಸಾಯಕವ ಹಿಡಿ ಸಾಕು ಸೋಲದ &lt;br /&gt;ತಾಯಿಮನೆ ನಿನಗಿದಿರಲಿದೆ ನಿ&lt;br /&gt;ನ್ನಾಯತವ ತಾನರಿಯೆನೆನುತೋರಂತೆ ತೆಗೆದೆಚ್ಚ ೨&lt;br /&gt;&lt;br /&gt;ಎಲವೋ ಮಾದ್ರಾಬಾಹಿರನೆ ಬಿಡು&lt;br /&gt;ಗಳಹತನವೇ ನಮ್ಮೊಡನೆ ತೊ&lt;br /&gt;ಟ್ಟಳುಕೆ ಗರಿನಾಲಗೆಯ ಕೊಯ್ವೆನು ಮಾಣು ಮಾಣೆನುತ&lt;br /&gt;ಬಿಲುದಿರುವನುಗುಳಿಸಿದನಂಬಿನ&lt;br /&gt;ಬೆಳಸನಾರಳವಡಿಸುವರು ದಿಗು&lt;br /&gt;ವಳೆಯ ನೆರೆಯದಿದೆತ್ತಣದು ಬಿಲುಗಾರತನವೆಂದ ೩&lt;br /&gt;&lt;br /&gt;ಬಾಯಿಬಡಿಕರು ನಾವು ನೀ ಗರು&lt;br /&gt;ವಾಯಿಕಾರನು ಬಯ್ವ ಬಿರುದಿನ &lt;br /&gt;ಬಾಯ ನೋಡಾಯೆನುತ ತೋಟಿಗೆ ತೆರಹುಗೊಡದೆಸಲು&lt;br /&gt;ಸಾಯಕದ ಹೊದೆ ಹಲವು ಶಲ್ಯಗೆ&lt;br /&gt;ಬೀಯವಾದವು ಬಳಿಕ ಕೌರವ&lt;br /&gt;ರಾಯನನುಜನು ತರುಬಿ ನಿಂದನು ಸಾತ್ಯಕಿಯ ರಥವ ೪&lt;br /&gt;&lt;br /&gt;ಹಳಚಿದವು ರಥವೆರಡು ಬಲುಗೈ&lt;br /&gt;ಗಳಿಗೆ ಬಲಿದುದು ಬವರ ಕೌರವ&lt;br /&gt;ಬಲದ ಭಟರಲಿ ಹತ್ತು ಸಾವಿರ ರಥಿಕರನುವಾಯ್ತು&lt;br /&gt;ಒಳಹೊಗಿಸಿ ಸಾತ್ಯಕಿಯ ಸಿಕ್ಕಿಸಿ&lt;br /&gt;ಗೆಲುವ ತವಕವ ಕಂಡು ಕೆಣಕಿದ&lt;br /&gt;ರಳವಿಯಲಿ ಸಹದೇವ ನಕುಳರು ಕೌರವಾನುಜನ ೫&lt;br /&gt;&lt;br /&gt;ತೆಗೆಸಿದನು ಸಾತ್ಯಕಿಯನೀತನ&lt;br /&gt;ಬಿಗಿದನಂಬಿನಲವನ ಬಾಣಾ&lt;br /&gt;ಳಿಗಳ ಕಡಿದನು ಘಾಸಿಮಾಡಿದನವನ ರಥಹಯವ&lt;br /&gt;ಜಗುಳಿದನು ಕಲಿ ನಕುಲ ರಥ ವಾ&lt;br /&gt;ಜಿಗಳ ಜೋಡಣೆ ಬಿಚ್ಚಿ ರಕುತವ&lt;br /&gt;ನೊಗಡಿಸಲು ಸಹದೇವನೆಚ್ಚನು ನಿನ್ನ ನಂದನನ ೬&lt;br /&gt;&lt;br /&gt;ಸರಳ ಸೈರಿಸಿ ನಿನ್ನ ಮಗನ&lt;br /&gt;ಬ್ಬರಿಸಿ ಮಾದ್ರೀಸುತನನೆಚ್ಚನು&lt;br /&gt;ತರಹರಿಸಿ ಮಗುಳೆಚ್ಚನಾತನು ಕೌರವಾನುಜನ&lt;br /&gt;ಮರುಳೆ ನೀನೇನಹೆ ಮಹಾ ಸಂ&lt;br /&gt;ಗರಕೆ ಕಳುಹಾ ನಿನ್ನವರನೆನು&lt;br /&gt;ತುರವನೆಚ್ಚನು ಜರಿಯೆ ಜೋಡಿನ ಚಿಪ್ಪು ದೆಸೆದೆಸೆಗೆ ೭&lt;br /&gt;&lt;br /&gt;ನೋವನೇ ನೊಣವೂರಿದರೆ ಸಹ&lt;br /&gt;ದೇವನೆಲವೋ ನಿನ್ನ ಕೊಂದಡೆ&lt;br /&gt;ಪಾವಮಾನಿಗೆ ಪಂಥ ತಪ್ಪುವುದೆನುತ ಖಾತಿಯಲಿ&lt;br /&gt;ತಾವಕನ ಸಾರಥಿಯ ರಥ ತುರ&lt;br /&gt;ವಯಳಿಯನಾಯುಧವ ಖಂಡಿಸೆ&lt;br /&gt;ಜೀವಗಳ್ಳರ ದೇವ ಪಸರಿಸಿದನು ಪಲಾಯನವ ೮&lt;br /&gt;&lt;br /&gt;ರಾಯನನುಜನ ಹರಿಬದಲಿ ರಾ&lt;br /&gt;ಧೇಯ ಹೊಕ್ಕನು ಸ್ವಾಮಿದ್ರೋಹರ &lt;br /&gt;ಕಾಯಿದರೆ ಕೈಕೊಳ್ಳದೌಷಧವಾವುದಿವದಿರಿಗೆ&lt;br /&gt;ನೋಯಿಸುವೆನೊಮ್ಮೆನುತ ತಿರುವಿನ &lt;br /&gt;ಸಾಯಕದ ಕಿವಿಗಡಿಯ ತೆರಹಿನ &lt;br /&gt;ರಾಯ ದಳಪತಿ ತರುಬಿದನು ಮಾದ್ರೀಸುತನ ರಥವ ೯&lt;br /&gt;&lt;br /&gt;ಸಾರು ನೀ ಸಹದೇವ ಜಗದ ವಿ&lt;br /&gt;ಕಾರಿಯಿವನೀ ಕರ್ಣನಿವನ ದೊ&lt;br /&gt;ಠಾರಿಸುವ ನಾಲಗೆಯ ಕೊಯ್ಲಿಗೆ ಶಸ್ತ್ರವಿದೆಯೆನುತ &lt;br /&gt;ಸಾರಥಿಯ ಬೋಳೈಸಿ ಚಾಪದ &lt;br /&gt;ನಾರಿಯನು ದನಿಮಾಡಿ ನಕುಲನು&lt;br /&gt;ದಾರ ಕರ್ಣನ ಮುಟ್ಟಿ ಬಂದನು ಚಾಚಿದನು ರಥವ ೧೦&lt;br /&gt;&lt;br /&gt;ಆರಿವರು ನಕುಳಾಂಕರೇ ಜ&lt;br /&gt;ಜ್ಜಾರತನವೇ ನಮ್ಮೊಡನೆ ನೀ &lt;br /&gt;ವಾರು ಪಾಂಡುಕುಮಾರರೋ ಮಾದ್ರೀಕುಮಾರಕರೊ&lt;br /&gt;ಭಾರಿಯಾಹವದೆಡೆಗೆ ನಿಮ್ಮನಿ&lt;br /&gt;ದಾರು ಬಿಟ್ಟರುಪಾಯದಲಿ ನಿಮ&lt;br /&gt;ಗಾರು ಮುನಿದರು ಶಿವ ಶಿವೆಂದನು ಕರ್ಣ ನಸುನಗುತ ೧೧&lt;br /&gt;&lt;br /&gt;ತೊಲತೊಲಗು ತರುವಲಿಗೆ ರಣವಿದು&lt;br /&gt;ಸುಲಭವೇ ಲೋಕೈಕವೀರರು &lt;br /&gt;ಹಲಬರಿದರೊಳು ಹೊಕ್ಕು ಹೊದಕುಳಿಗೊಂಡು ಹೋದರಲೆ&lt;br /&gt;ಗೆಲುವ ನಂಬುಗೆ ನಿನ್ನ ತಂದುದು&lt;br /&gt;ಕೊಲೆಗೆ ನೋಡಾದರೆಯೆನುತ ಕೈ&lt;br /&gt;ಚಳಕದಲಿ ಮುಸುಕಿದನು ಮೊನೆಗಣೆಯಿಂದ ರಿಪುಭಟನ ೧೨&lt;br /&gt;&lt;br /&gt;ಬಿಗಿದ ಬಾಣದ ದಡ್ಡಿಯನು ತಳ&lt;br /&gt;ಮಗುಚಿದನು ನೂರಂಬಿನಲಿ ಹೇ&lt;br /&gt;ಳಿಗೆಯ ಮುಚ್ಚಳ ತೆಗೆದ ಹಾವಿನವೋಲು ಝೋಂಪಿಸುತ&lt;br /&gt;ಹೊಗರನುಗುಳುವ ಹೊಸ ಮಸೆಯ ಕೋ&lt;br /&gt;ಲುಗಳ ಕವಿಸಿದನಾತನಂಬಿನ&lt;br /&gt;ಝಗೆಯ ಝಳದಲಿ ಮುಳುಗಿ ಮೋನದೊಳಿರ್ದನಾ ಕರ್ಣ ೧೩&lt;br /&gt;&lt;br /&gt;ಆಳು ನೀನಹುದೆಲವೊ ಕರ್ಣ ವಿ&lt;br /&gt;ಶಾಲಮತಿ ನೀ ಲೇಸು ಮಾಡಿದೆ &lt;br /&gt;ಬಾಲರಾದಡೆ ಭಂಗವೇ ಜಾವಳನೆ ಅಭಿಮನ್ಯು&lt;br /&gt;ಕೋಲ ಸೈರಿಸು ಸೈರಿಸಾದಡೆ&lt;br /&gt;ಭಾಳಲಿಪಿ ಸಂಕರುಷ ವಿಪುಳ ಶ&lt;br /&gt;ರಾಳಿಯನೆ ಕೊಳ್ಳೆನುತ ನಕುಲನನೆಚ್ಚನಾ ಕರ್ಣ ೧೪&lt;br /&gt;&lt;br /&gt;ತಾಗಿದವು ನಾಲ್ಕಂಬು ದೇಹದ &lt;br /&gt;ಬೇಗಡೆಯಲೆಂಟಂಬು ನುಸುಳಿದ &lt;br /&gt;ವಾಗ ಹದಿನಾರಂಬು ಹರಿದವು ಮತ್ತೆ ಬಳಸಲಿಸಿ&lt;br /&gt;ಸೂಗುರಿಸಿ ಝೊಮ್ಮಿನಲಿ ಮುಂದಕೆ&lt;br /&gt;ಬಾಗಿ ಬಿದ್ದನು ಸಾರಥಿಯ ಕೈ &lt;br /&gt;ಲಾಗಿನಲಿ ತಿರುಗಿದನು ನಕುಳನು ರಾಜ ಮೋಹರಕೆ ೧೫&lt;br /&gt;&lt;br /&gt;ಹರಿಬದಾಹವವೆನಗೆ ತನಗೆಂ&lt;br /&gt;ದುರವಣಿಸಿದರು ಚೇಕಿತಾನಕ&lt;br /&gt;ದುರುಳ ಧೃಷ್ಟದ್ಯುಮ್ನ ಪಾಂಡ್ಯ ಶಿಖಂಡಿ ಸೃಂಜಯರು&lt;br /&gt;ಬರಲಿ ಬರಲೀ ಹೊಟ್ಟ ತೂರುವ &lt;br /&gt;ಡರಸು ಮೋಹರವೇಕೆ ಸಾಕೆಂ&lt;br /&gt;ದರಿಭಟರು ತರುಬಿದರು ಕೃಪ ಕೃತವರ್ಮ ಸೌಬಲರು ೧೬&lt;br /&gt;&lt;br /&gt;ದಳಪತಿಯ ಹಿಂದಿಕ್ಕಿ ಪಾಂಡವ &lt;br /&gt;ಬಲ ಮಹಾರಥರುರವಣಿಸಿ ಮೂ&lt;br /&gt;ದಲಿಸಿ ನಿಂದರು ಕೊಂದರಿದಿರೇರುವ ಚತುರ್ಬಲವ&lt;br /&gt;ಕೊಲೆಗೆ ಬೇಸರರಿವರು ಸಾವುದ &lt;br /&gt;ಕಳುಕದವದಿರು ಹೇಳುವೆಡೆ ನಾ&lt;br /&gt;ವಲಸಿದೆವು ಧೃತರಾಷ್ಟ್ರ ಎಂದನು ಸಂಜಯನು ನೃಪನ ೧೭&lt;br /&gt;&lt;br /&gt;ವಿರಥರಾದ ಶಿಖಂಡಿ ಮೊದಲಾ&lt;br /&gt;ದರಿಭಟರು ಜಾರಿದರು ಸುಭಟರ &lt;br /&gt;ನೊರಸಿ ಕೊಂದೇರಿದನು ಕೆದರಿದರವರು ರಿಪುಬಲವ &lt;br /&gt;ದೊರೆಗೆ ಹತ್ತಿರೆಯಾಯ್ತು ಕಾಳೆಗ&lt;br /&gt;ವರಿದೆನಲು ನಿಸ್ಸಾಳಕೋಟಿಯ&lt;br /&gt;ಧರದುರದ ದೆಖ್ಖಾಳದಲಿ ತಲೆದೋರಿದನು ಪಾರ್ಥ ೧೮&lt;br /&gt;&lt;br /&gt;ಭಟರ ತೆಗೆತೆಗೆ ಪಾರ್ಥನೋ ರಿಪು&lt;br /&gt;ಕಟಕ ಭೈರವನೋ ವೃಥಾ ಸಂ&lt;br /&gt;ಕಟದ ಸನ್ನಾಹದಲಿ ಸುಭಟರ ಮಾರಬೇಡೆನುತ &lt;br /&gt;ಲಟಕಟಿಸಿ ಬಲವೊದರಲಪ್ರತಿ &lt;br /&gt;ಭಟರು ಬಳಿಕನುವಾಯ್ತು ವಿಜಯೋ&lt;br /&gt;ತ್ಕಟದಲಿಪ್ಪತ್ತೈದು ಸಾವಿರ ವರ ಮಹಾರಥರ ೧೯&lt;br /&gt;&lt;br /&gt;ನೂಕಿದರು ಸಂಶಪ್ತಕರು ಬಲ&lt;br /&gt;ದಾಕೆವಾಳರ ತೆಗಸಿ ಬಹಳೋ&lt;br /&gt;ದ್ರೇಕ ಸಾಹಸರೊದಗಿದರು ಕಂಪಿತ ಕುಳಾಚರರು&lt;br /&gt;ತೋಕಿದರು ಶರವಳೆಯಲರ್ಜುನ&lt;br /&gt;ಸಾಕು ಸಾರೈ ನಿನ್ನ ಜೊತ್ತಿನ&lt;br /&gt;ಜೋಕೆಯಾಹವವಲ್ಲೆನುತ ತೆಗೆದೆಚ್ಚದಿರಿರಾಗಿ ೨೦&lt;br /&gt;&lt;br /&gt;ಆರಿದಿಪ್ಪತೈದು ಸಾವಿರ&lt;br /&gt;ತೇರು ಸರಿಸದಲೊಂದು ವಾಘೆಯ&lt;br /&gt;ಲೇರಿದವು ನಿಪ್ಪಸರದಲಿ ನಿಲುವಾತನಾರಿದಕೆ&lt;br /&gt;ಸಾರಿಗೆಗೆ ಸಾರಿಗೆಗೆ ಬಾಣಾ&lt;br /&gt;ಸಾರವಿಪ್ಪತೈದು ಸಾವಿರ&lt;br /&gt;ವಾರು ಸೈರಿಸಿ ನಿಲುವರೆನುತಿದ್ದುದು ಸುರಸ್ತೋಮ ೨೧&lt;br /&gt;&lt;br /&gt;ಸುರಿದುದತಿವಳೆಯೆಂದು ಕುಲಗಿರಿ&lt;br /&gt;ಕರಗುವುದೆ ಮೇಗರೆಯ ಶಿಲೆಯಿ &lt;br /&gt;ಬ್ಬೆರಳು ನೆನೆವುದೆ ನಾಡ ಹಂತಿಯಲಳುಕುವರ್ಜುನನೆ&lt;br /&gt;ಅರಿ ಮಹಾರಥರನಿಬರೈಸರ&lt;br /&gt;ಸರಳು ಸಂಖ್ಯಾತೀತವದರೊಂ&lt;br /&gt;ದುರವಣೆಗೆ ಪೈಸರಿಸಿತಿಲ್ಲವನೀಶ ಕೇಳೆಂದ ೨೨&lt;br /&gt;&lt;br /&gt;ಅವರ ಶರಸಂಘಾತವನು ಕಡಿ&lt;br /&gt;ದವರ ಸಾರಥಿಗಳನು ರಥವಾ&lt;br /&gt;ಹವನು ಧನುವನು ಸಿಂಧವನು ಸೀಗುರಿಯ ಝಲ್ಲರಿಯ &lt;br /&gt;ಅವರ ಪದಕ ಕಿರೀಟ ಕಂಕಣ&lt;br /&gt;ವಿವಿಧ ಕರ್ಣಾಭರಣ ಕೇಯೂ&lt;br /&gt;ರವನು ಕಡಿಕಡಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ೨೩&lt;br /&gt;&lt;br /&gt;ಘಾಯವಡೆದರು ಘಾಸಿಯಾದರು &lt;br /&gt;ಬಾಯಲೊಕ್ಕುದು ಕರುಳು ಮಕ್ಕಳು&lt;br /&gt;ತಾಯಿಗಾಗದೆ ಕೆಟ್ಟರೆಂಬುದ ಕಾಣಲಾಯ್ತಿಲ್ಲಿ&lt;br /&gt;ನಾಯಕರು ಹಲರುಳಿದುದಧಿಕರು&lt;br /&gt;ಹಾಯಿದರು ಹೂಣಿಗರು ಹರಿಹಂ&lt;br /&gt;ಚಾಯಿತಿಪ್ಪತೈದುಸಾವಿರ ವರ ಮಹಾರಥರು ೨೪ &lt;br /&gt;&lt;br /&gt;ಎಲೆಲೆ ಸಂಶಪ್ತಕರ ಭಾರಿಯ &lt;br /&gt;ಬಲ ಮುರಿದು ಬರುತಿದೆ ವಿಘಾತಿಗೆ &lt;br /&gt;ನಿಲುವರಿಲ್ಲಾ ಸೂರೆವೋಯಿತು ರಾಯನಭಿಮಾನ &lt;br /&gt;ಜಲಧಿ ಬರುತುದು ರಾಜ್ಯಕಾರ್ಯಕೆ &lt;br /&gt;ನಿಲುವಡಿದು ಹೊತ್ತೆನುತ ಮಂತ್ರಿಗ&lt;br /&gt;ಳುಲಿಯೆ ಕೌರವರಾಯ ಕಂಡನು ಪಾರ್ಥನುರವಣೆಯ ೨೫&lt;br /&gt;&lt;br /&gt;ಕರವ ನೆಗಹಿದನಕಟ ಹೋಹೋ&lt;br /&gt;ಬಿರುದರಂಜದಿರಂಜದಿರಿ ನಿ&lt;br /&gt;ಮ್ಮರಿಭಟಗೆ ನಾಲ್ಕಿಲ್ಲ ಕೈಕಣ್ಣಿಲ್ಲ ನೊಸಲಿನಲಿ&lt;br /&gt;ದೊರೆಯ ಕೈಯನು ಕಂಡ ಬಳಿಕೋ&lt;br /&gt;ಸರಿಸಿರೈ ಪರಿವಾರ ದೂರದ &lt;br /&gt;ಲಿರಿ ವೃಥಾ ಭಯವೇಕೆನುತ ಕುರುರಾಯನನುವಾದ ೨೬&lt;br /&gt;&lt;br /&gt;ಕೂಡೆ ಗರಿಗಟ್ಟಿತು ಚತುರ್ಬಲ&lt;br /&gt;ಜೋಡು ಮಾಡಿತು ರಾಯನಿದಿರಲಿ&lt;br /&gt;ಹೇಡಿ ಕಲಿಯಹರೆಂಬರಿವದಿರು  ಹೇವಮಾರಿಗಳೆ&lt;br /&gt;ಜಾಡಿಸುವ ಝಲ್ಲರಿಯ ಮೋರೆಗೆ &lt;br /&gt;ನೀಡಿ ಮರುಳುವ ಸೀಗುರಿಯ ದಳ &lt;br /&gt;ವೇಡಿಸಿತು ಕಲ್ಪಾಂತ ರಂಜಿತ ಮೇಘಡಂಬರವ ೨೭&lt;br /&gt;&lt;br /&gt;ಸರಕಟಿಸಿ ದಳ ಸರ್ವಲಗ್ಗೆಯ &lt;br /&gt;ಲುರವಣಿಸೆ ಯಮಸೂನು ಕಂಡನು&lt;br /&gt;ನರನ ತೆಗೆತೆಗೆ ಇಂದಿನಾವಹ ನಮ್ಮ ಮೇಲೆನುತ&lt;br /&gt;ಅರಸ ನಡೆದನು ರಾಜ ಮೋಹರ &lt;br /&gt;ಹೊರಳಿಗಟ್ಟಿತು ಪ್ರಳಯ ಸಮರ&lt;br /&gt;ಸ್ಪುರಿತ ಬಹಳಾರ್ಣವದ ಲಹರಿಯ ಲಳಿಯ ಲಗ್ಗೆಯಲಿ ೨೮&lt;br /&gt;&lt;br /&gt;ಎರಡು ದಳ ಗಂಟಿಕ್ಕಿದುದು ನೆಲ&lt;br /&gt;ಬಿರಿಯೆ ಬೆರಸಿತು ಹೊಯ್ದರುರುಳುವ&lt;br /&gt;ಶಿರದ ಬೀಳುವ ಭಟರ ಮೆದೆಗೆಡೆವಾನೆ ಕುದುರೆಗಳ&lt;br /&gt;ಪರಿವಿಡಿಯದಂತಿರಲಿ ದೊರೆದೊರೆ&lt;br /&gt;ಯುರವಣಿಸಿ ಹಳಚಿದರು ಪಾಂಡವ&lt;br /&gt;ರರಸ ಕೌರವರರಸರೆಚ್ಚಾಡಿದರು ಮೂದಲಿಸಿ ೨೯&lt;br /&gt;&lt;br /&gt;ಅರಸರಿವರೇ ಶಿವಶಿವಾ ನಿ&lt;br /&gt;ಷ್ಕರುಣರೈ ನೀವೆಮ್ಮವೊಲು ಮೊನೆ&lt;br /&gt;ಸರಳು ಮಾನ್ಯರನರಿವವೇ ನೀವೇಕೆ ರಣವೇಕೆ&lt;br /&gt;ಒರಟರರ್ಜುನ  ಭೀಮರತಿ ನಿ&lt;br /&gt;ಷ್ಠುರರು ನಾವಡಿಮೇಲಹೆವು ನೀವ್&lt;br /&gt;ಮರಳಿ ಬಿಜಯಂಗೈವುದೆಂದನು ಕೌರವರರಾಯ ೩೦  &lt;br /&gt;&lt;br /&gt;ಕೋಲ ಬಲುಹುಂಟಾಗೆ ನಾಲಗೆ&lt;br /&gt;ಹೋಲ ನುಡಿಯದು ಹೊಲ್ಲದೇನಿದು&lt;br /&gt;ಖೂಳ ಕಟಕಿಯ ಮಾತು ಬೇಡಂಬಿನಲಿ ಮಾತಾಡು&lt;br /&gt;ಆಳುತನಕಾಭರಣವೇ ಮಾ&lt;br /&gt;ತಾಳಿತನ ಕೈದೋರದಹಿತನ &lt;br /&gt;ಮೇಲಣೇರಿನ ಬಾಯ ಸುಭಟರ ಹೊಗಳಬೇಡೆಂದ ೩೧&lt;br /&gt;&lt;br /&gt;ಖರೆಯರಲ್ಲಾ ನೀವು ಕೊಂತಿಯ&lt;br /&gt;ವರ ಕುಮಾರರು ನಿಮ್ಮೊಡನೆ ಸಂ&lt;br /&gt;ಗರಕೆ ಸರಿಸರೆ ನಾವು ಸಂತೈಸಾದಡೆಂದೆಸಲು&lt;br /&gt;ಸರಳು ಗಹನವ ಹೊದಿಸಿದವು ಹೂಂ&lt;br /&gt;ಕರಿಸಿದವು ಹರೆಗಡಿದವರಿಮೋ&lt;br /&gt;ಹರವ ಮುರಿದವು ಮುಸುಕಿದವು ಮೋದಿದವು ರಿಪುಭಟರ ೩೨&lt;br /&gt;&lt;br /&gt;ಎಚ್ಚನೆಂಟಂಬಿನಲಿ ಕೌರವ &lt;br /&gt;ನೆಚ್ಚ ಬಾಣವ ಕಡಿದು ನೂರರ&lt;br /&gt;ಲೆಚ್ಚನೀತನ ರಥವನದ ಪರಿಹರಿಸಿ ಕುರುರಾಯ&lt;br /&gt;ಎಚ್ಚನರಸನನಾ ಶರವ ಕಡಿ&lt;br /&gt;ದೆಚ್ಚನವನಿಪನುಭಯರಾಯರ&lt;br /&gt;ನಿಚ್ಚಟಕೆ ಮಝಪೂತುರೆಂದುದು ಮೇಲೆ ಸುರಕಟಕ ೩೩&lt;br /&gt;&lt;br /&gt;ದ್ಯುಮಣಿ ಪಡುವಣ ಕಡಲ ಸಾರುವ &lt;br /&gt;ಸಮಯವಾಯಿತ್ತುಭಯರಾಯರ&lt;br /&gt;ಸಮರ ಸೌರಂಭಾತಿಶಯವಿಮ್ಮಡಿಸಿತಡಿಗಡಿಗೆ&lt;br /&gt;ಆಮಿತ ರೋಷ ವಿಧೂತ ಪಾಣಿ&lt;br /&gt;ಭ್ರಮಿತ ಶರತತಿ ವಿಸ್ಫುಲಿಂಗ&lt;br /&gt;ಭ್ರಮಿತ ಭುವನತ್ರಯರು ಕಾದಿದರರಸ ಕೇಳೆಂದ ೩೪&lt;br /&gt;&lt;br /&gt;ಗೆಲುವು ನಮಗಾಯ್ತೆಂದು ಕೌರವ&lt;br /&gt;ರುಲಿದರೆಮಗಗ್ಗಳಿಕೆಯೆಂದವ&lt;br /&gt;ರುಲಿವುತಿರ್ದರು ಕಾದಿದರು ಸಮಜೋಳಿ ಜೋಕೆಯಲಿ&lt;br /&gt;ಬಳಿಕ ಯಮನಂದನನ ಕೈ ವೆ&lt;br /&gt;ಗ್ಗಳಿಸಿ ತಾಗಿತು ನಿನ್ನ ತನುಜನ&lt;br /&gt;ಬಿಲು ಸರಳು ರಥ ಸೂತ ವಾಜಿಗಳೊರಗಿದವು ಧರೆಗೆ ೩೫&lt;br /&gt;&lt;br /&gt;ಸೆಳೆದು ಹಿರಿಯುಬ್ಬಣವನವನಿಪ&lt;br /&gt;ಕೆಲಕೆ ಚಿಗಿದನು ಹಾ ಮಹಾದೇ&lt;br /&gt;ವೆಲೆಲೆ ದೊರೆ ದೊರೆ ಹಗೆಗೆ ಸಿಕ್ಕಿದೆನೆನುತ ಬಲ ಬೆದರೆ&lt;br /&gt;ಬಿಲುದುಡುಕಿ ಕೃತವರ್ಮ ಕೃಪ ಸೌ&lt;br /&gt;ಬಲ ಕೃಪಾನುಜ ಶಲ್ಯ ಗುರುಸುತ &lt;br /&gt;ದಳಪತಿಗಳೇರಿದರು ರಾಯನ ಸುತ್ತುವಳಯದಲಿ ೨೬&lt;br /&gt;&lt;br /&gt;ದೊರೆಗೆ ಬಿದ್ದುದು ಭಾರಿಯಾವಹ &lt;br /&gt;ವರರೆ ಬರಹೇಳೆನುತ ಕವಿದುದು&lt;br /&gt;ಸರಳ ಹೊದೆಗಳ ಕೆದರಿ ಸಾತ್ಯಕಿ ಭೀಮ ಕೈಕೆಯರು&lt;br /&gt;ಬಿರುದ ಧೃಷ್ಟದ್ಯುಮ್ನ ಮಾದ್ರೇ&lt;br /&gt;ಯರು ಶಿಖಂಡಿ ಯುಯುತ್ಸು ಸೃಂಜಯ&lt;br /&gt;ತರಳ ಪಂಚದ್ರೌಪದೇಯರು ಮುತ್ತಿದರು ನೃಪನ ೩೭&lt;br /&gt;&lt;br /&gt;ಬಳಿಕ ಸಂಕುಳ ಸಮರವತಿ ವೆ&lt;br /&gt;ಗ್ಗಳಿಸಿತದನೇನೆಂಬೆನಂಬುಧಿ&lt;br /&gt;ಗಿಳಿದನಂಬುಜಮಿತ್ರ ಬೆನ್ನಲಿ ತಿಮಿರ ಬಳಿಸಲಿಸೆ&lt;br /&gt;ಗೆಲಿದು ಹೋಗದಿರೆಂದು ಕೌರವ&lt;br /&gt;ನಳವಿಗೊಟ್ಟನು ಮತ್ತೆ ಧರ್ಮಜ &lt;br /&gt;ಬಿಲುದಿರುವ ನೇವರಿಸಿ ನಿಂದನು ಸಮರಕನುವಾಗಿ ೩೮&lt;br /&gt;&lt;br /&gt;ರಾಯರಿಬ್ಬರ ಮನದ ತಿಮಿರದ&lt;br /&gt;ತಾಯಿಮನೆಯೆಂಬವೊಲು ತಾ ಪೂ&lt;br /&gt;ರಾಯದಲಿ ನುಂಗಿದುದು ಕತ್ತಲೆ ನಿಮಿಷದಲಿ ಜಗವ&lt;br /&gt;ರಾಯ ಮೋಹರ ತೆಗೆದವೆರಡು ವಿ&lt;br /&gt;ಡಾಯಿಯಲಿ ಬಹುವಿಧದ ವಾದ್ಯ ನ&lt;br /&gt;ವಾಯಿ ಮಿಗೆ ನಲವಿನಲಿ ಬಂದರು ಪಾಳೆಯಂಗಳಿಗೆ ೩೯&lt;br /&gt;&lt;br /&gt;(ಸಂಗ್ರಹ: ಸುಬ್ರಹ್ಮಣ್ಯ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-4052332390269171331?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/4052332390269171331/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=4052332390269171331&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/4052332390269171331'/><link rel='self' type='application/atom+xml' href='http://www.blogger.com/feeds/742145181089395829/posts/default/4052332390269171331'/><link rel='alternate' type='text/html' href='http://gaduginabharata.blogspot.com/2010/05/blog-post_13.html' title='ಕರ್ಣಪರ್ವ: ೦೪. ನಾಲ್ಕನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-8192528644187666823</id><published>2010-05-12T00:27:00.000+05:30</published><updated>2010-05-12T00:28:36.794+05:30</updated><category scheme='http://www.blogger.com/atom/ns#' term='೦೮. ಕರ್ಣಪರ್ವ'/><title type='text'>ಕರ್ಣಪರ್ವ: ೦೩. ಮೂರನೆಯ ಸಂಧಿ</title><content type='html'>ಸೂ :   ರಣಭಯಂಕರನಹಿತ ಸುಭಟರ&lt;br /&gt;ಹಣಿದವನು ಹೊಯ್ದಾಡಿ ಸಾತ್ಯಕಿ&lt;br /&gt;ಕೆಣಕಿದನು ಕಲಕಿದನು ಕುರುಸೇನಾ ಮಹಾರ್ಣವವ&lt;br /&gt;&lt;br /&gt;ಬೀಳಲಗ್ಗದ ಕ್ಷೇಮಧೂರ್ತಿ ನೃ&lt;br /&gt;ಪಾಲಕನ ಪರಿವಾರ ರೋಷ ಕ&lt;br /&gt;ರಾಳ ಶಿಖಿಪರಿತಪ್ತ ಕಂಪಿತ ಖಡ್ಗದೊಗ್ಗಿನಲಿ&lt;br /&gt;ಆಳಿದನ ಮರಣದಲಿ ಹಿಂದಣ &lt;br /&gt;ಕೂಳಿನಾಸೆಯ ಕುನ್ನಿಗಳಿರೆನು &lt;br /&gt;ತಾಳು ಕವಿದುದು ಭೀಮ ಫಡ ಫಡ ನಿಲ್ಲು ನಿಲ್ಲೆನುತ ೧&lt;br /&gt;&lt;br /&gt;ಕಳೆದು ಮೂದಲಿಸಿದರೆ ಹುಲ್ಲೆಯ &lt;br /&gt;ಮರಿಗಳಿಗೆ ಖತಿಗೊಂಬುದೇ ಮದ&lt;br /&gt;ಕರಿ ಕರೂಪದ ಕೊಬ್ಬಿನವದಿರು ಹಿಂದೆ ಹತ್ತಿದರೆ&lt;br /&gt;ಮರಳಬಲ್ಲನೆ ಭೀಮನಿವರ&lt;br /&gt;ಬ್ಬರಿಸಿ ಕವಿದರು ಹತ್ತು ಸಾವಿರ &lt;br /&gt;ತುರಗ ಸರಿಸದಲೇರಿದವು ಪಡಿಮುಖದ ಬಲ ಬೆದರೆ ೨&lt;br /&gt;&lt;br /&gt;ರಾವುತೋ ಎನಿತೊಂದು ಹಂತಿಯ &lt;br /&gt;ಸಾವಿನಾತಗಳೇರಿದರು ಪರಿ&lt;br /&gt;ಧಾವನೋದ್ಗತ ಧೂಳಿ ಮುಸುಕಿತು ತರಣಿ ಮಂಡಲವ&lt;br /&gt;ಆ ವೃಕೋದರ ಗತಿಯ ಕಂಡನು &lt;br /&gt;ರಾವುತರ ದೃಢವಾಘೆ ವಾಘೆಯ &lt;br /&gt;ಲಾವಣಿಗೆ ಲೇಸೆನುತ ಸಾತ್ಯಕಿ ತುಡುಕಿದನು ಧನುವ ೩&lt;br /&gt;&lt;br /&gt;ಅರರೆ ರಾವುತು ಜಾಗು ಸ್ವಾಮಿಯ &lt;br /&gt;ಹರಿಬಕೋಸುಗ ಹಗೆಯ ಹೊಯ್ದಿರಿ &lt;br /&gt;ಬಿರುದರಹುದೋ ಎನುತ ಮೀರುವ ಹಯವ ಮುರಿಯೆಸುತ&lt;br /&gt;ಸರಳನೊಂದನೆ ತೊಡಚಿ ತುರಗದ &lt;br /&gt;ಕೊರಳ ವಾಘೆಯ ಕರವ ರಾವ್ತರ &lt;br /&gt;ಶಿರನೆಚ್ಚನು ಕೊಂದನೀಪರಿ ಹತ್ತು ಸಾವಿರವ ೪&lt;br /&gt;&lt;br /&gt;ಬಿದ್ದವಗಣಿತ ತುರಗ ದಳ ಕೈ&lt;br /&gt;ಮುದ್ದೆಗೊಂಡನು ಕಾಲನಸುವಿಡಿ&lt;br /&gt;ದಿದ್ದವರ ನಾ ಕಾಣೆ ತೊಡಕಿದ ವೈರಿ ಬಲದೊಳಗೆ &lt;br /&gt;ಹದ್ದು ಕಾಗೆಗೆ ನಿನ್ನವರು ಸಾ&lt;br /&gt;ಲಿದ್ದು ಬೋನವ ಸವಸಿದರು ಬಲ&lt;br /&gt;ವಿದ್ದು ಮಾಡುವುದೇನು ನಿಮಗಿನ್ನರಸ ಕೇಳೆಂದ ೫&lt;br /&gt;&lt;br /&gt;ಥಟ್ಟು ಮುರಿದುದು ಕೊಂಡ ನೆಲವನು&lt;br /&gt;ಬಿಟ್ಟು ಹಿಂಗಿತು ನಮ್ಮ ಬಲ ಮೈ&lt;br /&gt;ಬಿಟ್ಟು ತಲೆದೋರಿದನು ಸಾತ್ಯಕಿ ದೊರೆಗಳಿದಿರಿನಲಿ&lt;br /&gt;ದಿಟ್ಟನಾರಿವನೀಸು ಮುಷ್ಟಾ&lt;br /&gt;ಮುಷ್ಟಿಯಲಿ ಬಂದವನೆನುತ ಜಗ&lt;br /&gt;ಜಟ್ಟಿಗಳು ವಿಂದಾನುವಿಂದರು ನಿಂದರಿದಿರಿನಲಿ ೬&lt;br /&gt;&lt;br /&gt;ಕವಿದುದಿವದಿರ ಸೇನೆ ಸಾತ್ಯಕಿ&lt;br /&gt;ಹವಣನರಿಯದೆ ಹೊಕ್ಕು ಸಿಕ್ಕಿದ&lt;br /&gt;ನವರೊಳಗೆ ಕಟ್ಟಿದವು ಸುತ್ತಲು ಸಾವಿರಾನೆಗಳು&lt;br /&gt;ನವ ಸಹಸ್ರ ತುರಂಗ ಕಾಲಾ &lt;br /&gt;ಳವಗಡಿಸಿತೈವತ್ತು ಸಾವಿರ &lt;br /&gt;ವವನಿತಳ ನುಗ್ಗಾಯ್ತು ಪದಘಟ್ಟಣೆಯ ಘಲ್ಲಣೆಗೆ ೭&lt;br /&gt;&lt;br /&gt;ಕೆಣಕಿದರೆ ಭುಗಿಲೆಂದುದೀತನ &lt;br /&gt;ರಣ ಪರಾಕ್ರಮವಹ್ನಿ ಕರಡದ&lt;br /&gt;ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ&lt;br /&gt;ಕಣೆಯ ಕಾಣೆನು ಸುತ್ತಲೊಟ್ಟುವ&lt;br /&gt;ಹೆಣನ ಕಂಡೆನಿದಾವ ಬಾಳೆಯ &lt;br /&gt;ಹಣೆದವೋ ನಿನ್ನಾಳು ಕುದುರೆಯನರಿಯೆ ನಾನೆಂದ ೮&lt;br /&gt;&lt;br /&gt;ದೊರೆಗಳವದಿರು ತಮ್ಮ ಬಲ ಸಂ&lt;br /&gt;ವರಣೆ ನೆಗ್ಗಿದ ಹೇವದಲಿ ಹೊಡ&lt;br /&gt;ಕರಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ&lt;br /&gt;ಸರಳ ಬರವೊಳ್ಳಿತು ಮಹಾ ದೇ&lt;br /&gt;ವರಸು ಮಕ್ಕಳಲೇ ವಿರೋಧವೆ&lt;br /&gt;ಹರಹರತಿಸಾಹಸಿಕರಹುದಹುದೆನುತ ತೆಗೆದೆಚ್ಚ ೯&lt;br /&gt;&lt;br /&gt;ಏನನೆಂಬೆನು ಮೊದಲ ಲಗ್ಗೆಯ &lt;br /&gt;ಲಾ ನಿಶಿತಶರ ದೈತ್ಯಭಟ ವಿಂ&lt;br /&gt;ದಾನುವಿಂದರ ಜೀವ ಧುಮ್ಮಿಕ್ಕಿದುದು ಜವಪುರಿಗೆ&lt;br /&gt;ಚೀನ ಭೋಟ ಕರೂಷ ಖರ್ಪರ &lt;br /&gt;ಸೂನು ಜೋನೆಗ ತುರಕ ಬರ್ಬರ &lt;br /&gt;ಸೇನೆ ತಾಗಿತು ತಾಗಿದಾಗಳೆ ನೀಗಿದುದು ತಲೆಯ ೧೦&lt;br /&gt;&lt;br /&gt;ಮುರಿದುದಿದು ನಮ್ಮವರು ಸಾತ್ಯಕಿ &lt;br /&gt;ಯುರುಬೆಗಾನುವರಿಲ್ಲ ದೊರೆ ಕೈ&lt;br /&gt;ಮರೆದನೋ ಕಾಳಾಯ್ತೆನುತ ಕುರುಸೇನೆ ಕಳವಳಿಸೆ&lt;br /&gt;ಜರೆದು ಮೂದಲಿಸಿದನು ಮಾದ್ರೇ&lt;br /&gt;ಶ್ವರನ ದುಶ್ಯಾಸನನ ಸೌಬಲ &lt;br /&gt;ಗುರುಜ ಕೃತವರ್ಮಾದಿ ಪರಿವಾರವನು ಕಲಿಕರ್ಣ ೧೧&lt;br /&gt;&lt;br /&gt;ಪೂತು ಮಝ ದಳಪತಿಯ ಚಿತ್ತದ &lt;br /&gt;ಖಾತಿ ಕೊಬ್ಬಿತು ನಮ್ಮ ಭುಜ ಬಲ&lt;br /&gt;ವೇತಕಿದು ಬಳಿಕೇನು ಸಾತ್ಯಕಿ ಸರಸವೇ ತಮಗೆ&lt;br /&gt;ಭೂತನಾಥನ ಕಡುಹ ತಡೆವಭಿ &lt;br /&gt;ಜಾತರಲ್ಲಾ ತಾವೆನುತ ನಿಜ&lt;br /&gt;ಸೂತರನು ಬೋಳೈಸಿ ನೂಕಿತು ಗುರುಸುತಾದಿಗಳು ೧೨&lt;br /&gt;&lt;br /&gt;ಮುರಿದ ಬಲ ಗರಿಗಟ್ಟಿತೊಗ್ಗಿನ&lt;br /&gt;ಲೊರಲಿದವು ನಿಸ್ಸಾಳ ಕಹಳೆಯ &lt;br /&gt;ಬಿರುಸರದ ಬಹುವಿಧದ ವಾದ್ಯಧ್ವನಿಯ ಕಳಕಳದ &lt;br /&gt;ತುರುಗಿ ತೂಳುವ ಸಿಂಧ ಸೆಳೆ ಮಡ &lt;br /&gt;ಲಿರಿವ ಝಲ್ಲರಿ ಪಲ್ಲವದ ನಿಡು &lt;br /&gt;ದೆರೆಯ ಧವಳಚ್ಛತ್ರ ಚಮರದೊಳೊದಗಿತತಿರಥರು ೧೩  &lt;br /&gt;&lt;br /&gt;ಮುಂಕಣಿಯಲಿಟ್ಟಣಿಸಿದರು ಭಾ&lt;br /&gt;ರಂಕದಾಳುಗಳೆಂಟು ಸಾವಿರ &lt;br /&gt;ಬಿಂಕದತಿರಥರೆಂಟು ಕೋಟಿ ತುರಂಗ ಪಾಯದಳ&lt;br /&gt;ಶಂಕಿಸುವನೇ ಬಳಿಕ ಯದುಕುಲ&lt;br /&gt;ದಂಕಕಾರನು ನಿಂದನನಿಬರಿ&lt;br /&gt;ಗಂಕ ಝಂಕೆಯನೇನನೆಂಬೆನು ಸಾತ್ಯಕಿಯ ಮನದ ೧೪&lt;br /&gt;&lt;br /&gt;ಭಾರಿಯಾಹವವಾಯ್ತು ಖಿಳದಳ&lt;br /&gt;ಭಾರ ಬಿದ್ದುದು ಸಾತ್ಯಕಿಯ ಸುರ &lt;br /&gt;ನಾರಿಯರ ತೋಳಿನಲಿ ಕಾಬುದು ನೆಲನ ರಿಣ ಹರಿದು&lt;br /&gt;ಹೋರಿದರೆ ಹುರುಳಿಲ್ಲೆನುತ ಪರಿ&lt;br /&gt;ವಾರವೊರಲಿತು ಪಾಂಡ್ಯ ಕೈಕೆಯ &lt;br /&gt;ಕೇರಳರ ಹಿಂದಿಕ್ಕಿ ಪಡಿಬಲವಾದನಾ ಭೀಮ ೧೫&lt;br /&gt;&lt;br /&gt;ಮುಂದೆ ಹರಿದರು ಪಾಂಡು ತನಯರ &lt;br /&gt;ನಂದನರು ತಾವೈವರೀತನ &lt;br /&gt;ಹಿಂದುಳುಹಿ ಹಿಂಡಿದರು ಹೇರಾಳದ ಚತುರ್ಬಲವ&lt;br /&gt;ಕೊಂದರಗ್ಗದ ಚಿತ್ರಸೇನನ &lt;br /&gt;ಬಂದ ಹರಿಬದ ಚಿತ್ರನನು ಗುರು&lt;br /&gt;ನಂದನನು ಬಳಿಕವರ ಬೆದರಿಸಿ ನೂಕಿದನು ರಥವ ೧೬&lt;br /&gt;&lt;br /&gt;ಹೆರತೆಗೆದು ಕೆಲಸಾರಿ ಮಕ್ಕಳು&lt;br /&gt;ಮರಿಗಳಿಗೆ ರಣವೇಕೆ ಪಾಂಡವ &lt;br /&gt;ರುರುವ ಸಂತತಿ ನೀವಕಟ ಎನುತವರನೊಡಹಾಯ್ಸಿ&lt;br /&gt;ಇರಿವ ಭಟನಹೆ ಯಾದವರ ಬಡ&lt;br /&gt;ಕರುವೆ ಬಾ ಬಾ ಎಂದು ಚಿಟಿಕಿಸಿ &lt;br /&gt;ಕರೆದು ಗುರುಸುತ ಸಾತ್ಯಕಿಯ ತಾಗಿದನು ನಗೆಮಾಡಿ ೧೭&lt;br /&gt;&lt;br /&gt;ಸಾರು ನೀ ಸಾರೆಲವೊ ಭೀಮನ &lt;br /&gt;ತೋರಗರುಳಿನ ದಂಡೆಯನು ಕೈ&lt;br /&gt;ಯಾರೆ ಮಾರಿಗೆ ಮುಡಿಸುವೆನು ಫಡ ಭೀಮ ನಿಲ್ಲೆನುತ&lt;br /&gt;ಆರಿದನು ಜಗ ನಡುಗಲಾ ಜಂ&lt;br /&gt;ಭಾರಿ ಜವಗೆಡೆ ಬೊಬ್ಬಿರಿದನಾ&lt;br /&gt;ಭಾರತದ ಭಾರಣೆಯಲೈದಿದನನಿಲ ನಂದನನ ೧೮&lt;br /&gt;&lt;br /&gt;ಗುರುತನೂಜ ಕಣಾ ವಿರೋಧಿ&lt;br /&gt;ಸ್ಮರಕಪರ್ದಿ ಕಣಾ ವೃಕೋದರ &lt;br /&gt;ಕರಿ ಮೃಗೇಂದ್ರ ಕಣಾ ಕಣಾಳಿಯ ಕಾಯ್ದುಕೊಳ್ಳೆನುತ&lt;br /&gt;ಸರಳನೆಚ್ಚನು ಸರಳನಾ ಬಳಿ &lt;br /&gt;ಸರಳು ಮುಂಚಿದುದಾ ಸರಳ ಬಳಿ&lt;br /&gt;ಸರಳು ಮುಂಚಿದುದಾವ ಕೈಚಳಕವೊ ಶಿವಾ ಎಂದ ೧೯&lt;br /&gt;&lt;br /&gt;ತಿರುಗಿ ನಿಂದನು ಪವನಸುತನೆಲೆ&lt;br /&gt;ಗುರುಜ ನಿನ್ನಗ್ಗಳಿಕೆಗಳ ಜಗ &lt;br /&gt;ವರಿಯದೇ ಫಡ ಭಟ್ಟನಾದೈ ನಿನಗೆ ನೀನೆನುತ &lt;br /&gt;ಸರಳ ಬಳಿಸರಳುಗಳನಾ ಲಘು &lt;br /&gt;ತರದ ಲೆಕ್ಕದಲೆಸೆವ ವಿವರದ &lt;br /&gt;ಪರಿವಿಡಿಯ ವೇಗಾಯ್ಲತನವನು ತೋರಿದನು ಭೀಮ ೨೦&lt;br /&gt;&lt;br /&gt;ಜಾಗು ಮಝರೇ ಭೀಮ ಬಲುಗೈ&lt;br /&gt;ಲಾಗು ಮರೆಯದಲಾ ಶರೌಘ&lt;br /&gt;ತ್ಯಾಗದಸ್ತ್ರ ಪ್ರವರ ಬಂಧವ ಮತ್ತೆ ನೋಡೆನುತ&lt;br /&gt;ಆ ಗಗನವಿದು ಧರಣಿಯಿದು ದಿ&lt;br /&gt;ಗ್ಬಾಗವೆಲ್ಲಿಯದೆಂಬ ವಿವರವ&lt;br /&gt;ನಾಗಳರಿಯೆನು ದ್ರೋಣನಂದನನೆಚ್ಚನನಿಲಜನ ೨೧     &lt;br /&gt;&lt;br /&gt;ಎಲೆಲೆ ಹಾರುವನೇಕೆ ಹರಿಮೇ&lt;br /&gt;ಖಳೆಯ ಕೇಳಿಕೆಯೇಕೆ ಪಡಿಮ&lt;br /&gt;ದ್ದಳೆಯಬಡಿಕರ ಬಿಂಕ ಮೇಳವವಿಲ್ಲಲಾ ನಿನಗೆ&lt;br /&gt;ಹೊಲುಬುಗೆಡುವನೆ ಭೀಮನೀ ಸರ&lt;br /&gt;ಳೊಳಗೆ ಹುಸಿಯೇಕೆನುತ ಬಾಣಾ &lt;br /&gt;ವಳಿಯ ನಿಮಿಷಕೆ ಕಡಿದು ಗುರುಜನನೆಚ್ಚನಾ ಭೀಮ ೨೨&lt;br /&gt;&lt;br /&gt;ರಥದ ಮೇಲಂಬುಗಳು ರಿಪು ಸಾ&lt;br /&gt;ರಥಿಯ ಮೈಯಲಿ ಘಾಯ ತುರಗ&lt;br /&gt;ವ್ಯಥೆಯನೇವೇಳುವೆನು ಟೆಕ್ಕೆಯವೈದೆ ಬಾಣಮಯ&lt;br /&gt;ಶಿಥಿಲವಾದುವು ಗಾಲಿಗಳು ಬಳಿ&lt;br /&gt;ರಥಿಕರೀತನ ಬಿಟ್ಟು ಹಾಯ್ದರು &lt;br /&gt;ಪೃಥುಳಬಲನೈ ಭೀಮನೆಚ್ಚನು ಗುರುತನೂಭವನ ೨೩&lt;br /&gt;&lt;br /&gt;ನೊಗವನೀಡಾಡಿದನು ಕುದುರೆಗ&lt;br /&gt;ಳೊಗಡಿಸಲು ರಕುತವನು ಸಾರಥಿ&lt;br /&gt;ಬಿಗಿದ ಹಿಳುಕುಗಳೌಕಿದವು ತೇರಿನಲಿ ಸಿಂಧದಲಿ&lt;br /&gt;ಒಗುವ ನೆತ್ತರ ಸುರಿವ ಬಾಣದ &lt;br /&gt;ನುಗುತೆಗಂಡಿಯ ಮೆಯ್ಯ ಭೀಮನ &lt;br /&gt;ಬೆಗಡು ಮೊಳೆತುದು ಗುರುತನೂಭವನೆಚ್ಚನನಿಲಜನ ೨೪&lt;br /&gt;&lt;br /&gt;ಈತನೆಚ್ಚನು ಮತ್ತೆ ಶರ ಸಂ&lt;br /&gt;ಘಾತವೋ ಗುರುಸುತನ ತನುವೋ&lt;br /&gt;ಪೂತ ಮುತ್ತವೊ ತಳಿತೆಸೆವ ಕೆಂದಾವರೆಯ ಬನವೊ&lt;br /&gt;ಭೀತಿ ಬಿಗಿದುದು ದಿಟ್ಟತನದನು&lt;br /&gt;ಧಾತುಗೆಟ್ಟುದು ನೋಡಿ ಕಂಗಳು&lt;br /&gt;ಸೋತು ಮರಳಿದನಿತ್ತಲಶ್ವತ್ಥಾಮ ಮೈಮರೆದ ೨೫&lt;br /&gt;&lt;br /&gt;ನನೆದ ಜಾಜಿನ ಗಿರಿಯೊ ಭೀಮನ&lt;br /&gt;ತನುವೊ ಖಂಡಿತ ರಕ್ತಚಂದನ &lt;br /&gt;ಬನವೊ ರಥವೋ ತಳಿತಶೋಕೆಯ ಮರನೊ ಸಾರಥಿಯೊ&lt;br /&gt;ಮನ ಹಣುಗಿ ತುಟಿಯೊಣಗಿ ನೋಟದ &lt;br /&gt;ಮೊನೆ ಮುರಿದು ಝೋಂಪಿಸುತ ಮುಂದಣಿ&lt;br /&gt;ಗೊನೆದು ಬಿದ್ದನು ಭೀಮ ಪಾಂಡವ ಸೇನೆ ಕಳವಳಿಸೆ ೨೬  &lt;br /&gt;&lt;br /&gt;ಅಹಹ ವೈರಿಗೆ ಧರೆಗೆ ಪಾಣಿ &lt;br /&gt;ಗ್ರಹಣವಾಯಿತೆ ಪಾಂಡುಸುತರಿಗೆ&lt;br /&gt;ಬಹ ವಿಪತ್ತುಗಳೊಳಗಿದೊಂದೇ ಕಳಶವಾದುದಲ&lt;br /&gt;ಅಹಿತರಿಗೆ ಗೆಲುವಾಯ್ತು ನಮಗಿ &lt;br /&gt;ಲ್ಲಿಹುದು ಮತವಲ್ಲೆನುತ ಸಾರಥಿ&lt;br /&gt;ಸಹಸಿಗನ ಸಂತೈಸಿ ತಂದನು ರಾಜಮಂದಿರಕೆ ೨೭&lt;br /&gt;&lt;br /&gt;ತಂದೆಯಳಿದಾ ಹೊತ್ತು ಹಗೆಯನು&lt;br /&gt;ಕೊಂದು ಸಾಯದೆ ದೇಹ ಮೋಹಕೆ&lt;br /&gt;ನಿಂದು ನೀ ನಿಶ್ಶಂಕನಾದೈ ವೈರಿಶರಹತಿಗೆ&lt;br /&gt;ಎಂದು ಸಾರಥಿ ಶೋಕಿಸುತ ಗುರು&lt;br /&gt;ನಂದನನ ಕೊಂಡೊಯ್ದನಿತ್ತಲು &lt;br /&gt;ಸಂದಣಿಸಿತತಿರಥರು ಸೌಬಲ ಶಲ್ಯ ಮೊದಲಾಗಿ ೨೮&lt;br /&gt;&lt;br /&gt;ದೊರೆಗಳಿಬ್ಬರ ಸೋಲವನು ವಿ&lt;br /&gt;ಸ್ತರಿಸಿ ಹೊಕ್ಕದು ಮತ್ತೆ ಮಾದ್ರೇ&lt;br /&gt;ಶ್ವರ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು&lt;br /&gt;ಅರಿಬಲದಲಾ ದ್ರೌಪದೇಯರು &lt;br /&gt;ಹರಿಯನುಜ ಮಾದ್ರೇಯ ಕೈಕೆಯ&lt;br /&gt;ವರಯುಧಾಮನ್ಯೂತ್ತಮೌಂಜಸ ಪಾಂಡ್ಯ ಸೃಂಜಯರು ೨೯&lt;br /&gt;&lt;br /&gt;ಬಲಿದುದಾಹವ ಮತ್ತೆ ಚಾತು&lt;br /&gt;ರ್ಬಲ ಛಡಾಳಿಸಿ ಕಾದುತಿರ್ದುದು&lt;br /&gt;ಮುಳಿದು ಶಲ್ಯನ ಕೊಡೆ ಪಂಚದ್ರೌಪದೀಸುತರು&lt;br /&gt;ಅಳವಿಗೊಟ್ಟಿರಿಯಕಟಕಟ ಮ&lt;br /&gt;ಕ್ಕಳಿರ ನಿಮಗೇಕಿದು ಯುಧಿಷ್ಠಿರ &lt;br /&gt;ಫಲುಗುಣರ ಬರಹೇಳಿರೆನುತೆಚ್ಚನು (ಪಾ: ಬರಹೇಳೆನುತಲೆಚ್ಚನು) ಮಹಾಸ್ತ್ರದಲಿ ೩೦&lt;br /&gt;&lt;br /&gt;ಎಚ್ಚನಿವನಿವನೊಡನೆ ಬಾಣವ&lt;br /&gt;ಕೊಚ್ಚಿದರು ಕೊಡಹಿದರು ಶರದಲಿ&lt;br /&gt;ಚುಚ್ಚಿದನು ಜೀಕುಳಿಯ ಬಿಟ್ಟನು ನೆತ್ತರನು ನೆಲಕೆ&lt;br /&gt;ಬೆಚ್ಚಿದವು ರಥವಾಜಿ ಹತ್ತಿಗೆ&lt;br /&gt;ಬಿಚ್ಚಿ ರಥ ನುಗ್ಗಾಯ್ತು ಶೌರ್ಯದ&lt;br /&gt;ಕೆಚ್ಚು ಮುರಿದುದು ಹಿಂಗಿದರು ಪಾಂಡವಕುಮಾರಕರು ೩೧  &lt;br /&gt;&lt;br /&gt;(ಸಂಗ್ರಹ : ಸುಬ್ರಹ್ಮಣ್ಯ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-8192528644187666823?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/8192528644187666823/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=8192528644187666823&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/8192528644187666823'/><link rel='self' type='application/atom+xml' href='http://www.blogger.com/feeds/742145181089395829/posts/default/8192528644187666823'/><link rel='alternate' type='text/html' href='http://gaduginabharata.blogspot.com/2010/05/blog-post_12.html' title='ಕರ್ಣಪರ್ವ: ೦೩. ಮೂರನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-4160562581782145853</id><published>2010-05-11T00:40:00.001+05:30</published><updated>2010-05-11T00:41:59.062+05:30</updated><category scheme='http://www.blogger.com/atom/ns#' term='೧೦. ಗದಾಪರ್ವ'/><title type='text'>ಗದಾಪರ್ವ: ೦೩. ಮೂರನೆಯ ಸಂಧಿ</title><content type='html'>ಸೂ. ರಾಯದಳ ಸಲೆ ಸವೆಯೆ ಸಮರದ&lt;br /&gt;ನಾಯಕರು ನೆರೆ ಮುರಿಯಲಾ ದ್ವೈ&lt;br /&gt;ಪಾಯನ ಸರೋವರವ ಹೊಕ್ಕನು ಕೌರವರ ರಾಯ&lt;br /&gt;&lt;br /&gt;ಕೇಳು ಜನಮೇಜಯ ಧರಿತ್ರೀ&lt;br /&gt;ಪಾಲ ಕುರುಪತಿ ಹೆಗಲ ಗದೆಯಲಿ&lt;br /&gt;ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ&lt;br /&gt;ಆಳ ಕಾಣೆನು ಛತ್ರ ಚಮರದ&lt;br /&gt;ವೀಳೆಯದ ವಿಸ್ತಾರವಿಭವವ&lt;br /&gt;ಬೀಳುಕೊಟ್ಟನು ನಡೆದನಿಂದ್ರ ದಿಶಾಭಿಮುಖವಾಗಿ ೧&lt;br /&gt;&lt;br /&gt;ಅಕಟ ನಮ್ಮಯ ಪೂರ್ವರಾಜ&lt;br /&gt;ಪ್ರಕರಕೀ ವಿಧಿಯಾಯ್ತಲಾ ಕಂ&lt;br /&gt;ಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು&lt;br /&gt;ಶಕುನಿಮತ ವಿಷಬೀಜವೇ ಬಾ&lt;br /&gt;ಧಕವ ತಂದುದಲಾ ಯುಧಿಷ್ಠಿರ&lt;br /&gt;ಸಕಲ ಬಲ ಪರಿಶೇಷವೇನೆಂದರಸ ಬೆಸೆಗೊಂಡ ೨&lt;br /&gt;&lt;br /&gt;ಧರಣಿಪತಿ ಕೇಳ್ ಧರ್ಮಜನ ಮೋ&lt;br /&gt;ಹರದೊಳುಳಿದುದು ತೇರು ಸಾವಿರ&lt;br /&gt;ವೆರಡು ಗಜವೇಳ್ನೂರು ಮಿಕ್ಕುದು ಲಕ್ಕ ಪಾಯದಳ&lt;br /&gt;ತುರಗ ಸಾವಿರವೈದು ಸಾತ್ಯಕಿ&lt;br /&gt;ವರ ಯುಧಾಮನ್ಯೂತ್ತಮೌಂಜಸ&lt;br /&gt;ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು ೩&lt;br /&gt;&lt;br /&gt;ಆ ಸುಯೋಧನ ಸೇನೆಯಲಿ ಧರ&lt;br /&gt;ಣೀಶ ಕೃಪ ಕೃತವರ್ಮ ಗುರುಸುತ&lt;br /&gt;ರೈಸುಬಲದಲಿ ನಾಲ್ವರುಳಿದರು ಹೇಳಲೇನದನು&lt;br /&gt;ಏಸು ಬಲವೆನಿತೈಶ್ವರಿಯವಿ&lt;br /&gt;ದ್ದೇಸು ಭಟರಿನಿತಗ್ಗಳೆಯರಿ&lt;br /&gt;ದ್ದೇಸರಲಿ ಫಲವೇನು ದೈವವಿಹೀನರಿವರೆಂದ ೪&lt;br /&gt;&lt;br /&gt;ಇತ್ತಲೀ ಸಂಜಯನ ತಂದುದು&lt;br /&gt;ಮೃತ್ಯು ಧೃಷ್ಟದ್ಯುಮ್ನನೀತನ&lt;br /&gt;ಕುತ್ತಿ ಕೆಡಹಿದಡಾಗದೇ ಕುರುಡಂಗೆ ರಣರಸವ&lt;br /&gt;ಬಿತ್ತರಿಸುವನು ಕೌರವನ ಜಯ&lt;br /&gt;ದತ್ತಲೆರಕ ದುರಾತ್ಮನನು ಕೈ&lt;br /&gt;ವರ್ತಿಸಾ ಯಮನಗರಿಗೆಂದನು ಸಾತ್ಯಕಿಯ ಕರೆದು ೫&lt;br /&gt;&lt;br /&gt;ಸೆಳೆದಡಾಯ್ದವ ಸಂಜಯನ ಹೆಡ&lt;br /&gt;ತಲೆಗೆ ಹೂಡಿದನರಿವ ಸಮಯಕೆ&lt;br /&gt;ಸುಳಿದನಗ್ಗದ ಬಾದರಾಯಣನವನ ಪುಣ್ಯದಲಿ&lt;br /&gt;ಎಲೆಲೆ ಸಾತ್ಯಕಿ ಲೇಸುಮಾಡಿದೆ&lt;br /&gt;ಖಳನೆ ಸಂಜಯನೆಮ್ಮ ಶಿಷ್ಯನ&lt;br /&gt;ಕೊಲುವುದೇ ನೀನೆನುತ ಕೊಂಡನು ಕೊರಳಡಾಯುಧವ ೬&lt;br /&gt;&lt;br /&gt;ದೇವ ನಿಮ್ಮಯ ಶಿಷ್ಯನೇ ಪರಿ&lt;br /&gt;ಭಾವಿಸೆನು ತಾನರಿದೆನಾದಡೆ&lt;br /&gt;ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ&lt;br /&gt;ನೀವು ಬಿಜಯಂಗೈವುದೆನೆ ಬದ&lt;br /&gt;ರಾವಳೀಮಂದಿರಕೆ ತಿರುಗಿದ&lt;br /&gt;ನಾ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ ೭&lt;br /&gt;&lt;br /&gt;ಅರಸ ಕೇಳೈ ಸಂಜಯನು ಬರ&lt;br /&gt;ಬರಲು ಕಂಡನು ದೂರದಲಿ ನಿರಿ&lt;br /&gt;ಗರುಳ ಕಾಲ್ದೊಡಕುಗಳ ಖಂಡದ ಜಿಗಿಯ ಜಾರುಗಳ&lt;br /&gt;ಕರಿಗಳೊಟ್ಟಿಲನೇರಿಳಿದು ಪೈ&lt;br /&gt;ಸರಿಸಿ ಮಿದುಳಿನ ಜೋರು ಜೊಂಡಿನ&lt;br /&gt;ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ ೮&lt;br /&gt;&lt;br /&gt;ಎಡಹುದಲೆಗಳ ದಾಂಟಿ ರಕುತದ&lt;br /&gt;ಮಡುವಿನಲಿ ಗದೆಯೂರಿ ನೆಲೆಗಳ&lt;br /&gt;ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ&lt;br /&gt;ಅಡಿಗಡಿಗೆ ಹೇರಾನೆಗಳ ಹೇ&lt;br /&gt;ರೊಡಲ ಹತ್ತಿಳಿದೇರಿ ಝೊಂಪಿಸಿ&lt;br /&gt;ಮಿಡುಕಿ ನಿಲುವನು ಬಳಲಿದೂರ್ಧ್ವಶ್ವಾಸ ಲಹರಿಯಲಿ ೯&lt;br /&gt;&lt;br /&gt;ಓಡದಿಹ ನರಿ ಹದ್ದು ಕಾಗೆಗೆ&lt;br /&gt;ಕೂಡ ಗದೆಯನು ಬೀಸುವನು ಬಿಡೆ&lt;br /&gt;ನೋಡುವನು ಹೆಣದಿನಿಹಿಗಳ ಹೇರಾಳ ರಕ್ಕಸರ&lt;br /&gt;ತೋಡುಗೈಗಳ ಮಿದುಳ ಬಾಯ್ಗಳ&lt;br /&gt;ಬಾಡುಗರುಳಿನ ಚೀತ್ಕೃತಿಯ ತಲೆ&lt;br /&gt;ಯೋಡುಗಳ ತನಿರಕುತ ಪಾನದ ಶಾಕಿನೀಜನವ ೧೦&lt;br /&gt;&lt;br /&gt;ಕಂದ ಪಖ್ಖಲೆಗಳಲಿ ತೀವಿದ&lt;br /&gt;ಮಂದ ರಕುತದ ತೋದ ತಲೆಗಳ&lt;br /&gt;ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ&lt;br /&gt;ಸಂದಣಿಸಿ ಹರಿದೇರ ಬಾಯ್ಗಳೊ&lt;br /&gt;ಳೊಂದಿ ಬಾಯ್ಗಳನಿಡುವ ಪೂತನಿ&lt;br /&gt;ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ ೧೧&lt;br /&gt;&lt;br /&gt;ಕುಣಿವ ಕರಿಗಳ ತಲೆಯ ಮಡುಹಿನ&lt;br /&gt;ಲಣೆದು ಹಜ್ಜೆಯನಿಡುತ ಭೂತದ&lt;br /&gt;ಹೆಣನ ತೀನಿಗೆ ತವಕಿಸುವ ವೇತಾಳ ಸಂತತಿಯ&lt;br /&gt;ರಣದೊಳಗೆ ಕೈಯೂರಿ ಮಿಗೆ ಹಳ&lt;br /&gt;ವೆಣನ ಹೊಲಸಿಗೆ ಹೇಸಿ ಹರಿದಡಿಗಡಿಗೆ ಸುಯ್ವವನ ೧೨ &lt;br /&gt;&lt;br /&gt;ಕಡಿವಡೆದ ಹಕ್ಕರಿಕೆ ರೆಂಚೆಯ&lt;br /&gt;ತಡಿಗಳಲಿ ಕುಳ್ಳಿರ್ದು ಮೊಣಕಾ&lt;br /&gt;ಲ್ಗಡಿಯ ಗಾಢವ್ರಣದ ನೆಣವಸೆಗೆಸೆರ ಬಳಿಬಳಿದು&lt;br /&gt;ಗಡಣ ಹೆಣದರಹುಗಳೊಳಗೆ ಕಾ&lt;br /&gt;ಲಿಡುತ ಸೋದಿಸಿ ಮುಂದೆ ಹೆಜ್ಜೆಯ&lt;br /&gt;ನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ ೧೩&lt;br /&gt;&lt;br /&gt;ಕಡಿದ ಕೈದುಗಳೊಟ್ಟಿಲಲಿ ತನಿ&lt;br /&gt;ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ&lt;br /&gt;ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ&lt;br /&gt;ಅಡಸಿ ಹೆಜ್ಜೆಯನಿಡುತ ರಕುತದ&lt;br /&gt;ಮಡುವನೆಡಬಲಕಿಕ್ಕಿ ಮೆಲ್ಲನೆ&lt;br /&gt;ನಡೆದು ದೈವವ ಬಯ್ದುಬಯ್ದಡಿಗಡಿಗೆ ಸುಯ್ವವನ ೧೪&lt;br /&gt;&lt;br /&gt;ಭೂತರವ ಭೇತಾಳ ಕಲಹ ವಿ&lt;br /&gt;ಭೂತ ಜಂಬುಕ ಘೂಕ ಕಾಕ&lt;br /&gt;ರ್ವಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು&lt;br /&gt;ಅತು ಮರಳಿದು ಹಿಂದು ನೋಡಿ ಪ&lt;br /&gt;ರೇತ ವಿಭವವಲಾ ಎನುತ ಛಲ&lt;br /&gt;ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ ೧೫&lt;br /&gt;&lt;br /&gt;ಹೇಳುವಡೆ ಕುರುಪತಿಯನೇ ನೆರೆ&lt;br /&gt;ಹೋಲುವನು ಗದೆ ಹೆಗಲಲದೆ ಮೇ&lt;br /&gt;ಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ&lt;br /&gt;ಹೋಲುವುದು ಜನವೊಬ್ಬರೊಬ್ಬರ&lt;br /&gt;ನಾಳೊಳೊಬ್ಬನೊ ಮೇಣು ಕುರು ಭೂ&lt;br /&gt;ಪಾಲಕನೊ ನೋಡುವೆನೆನುತ ಸಂಜಯನು ನಡೆತಂದ ೧೬&lt;br /&gt;&lt;br /&gt;ಬಂದು ಕಂಡನು ರಾಜವನ ಮಾ&lt;br /&gt;ಕಂದನನು ಧೃತರಾಷ್ಟ್ರ ರಾಯನ&lt;br /&gt;ಕಂದನನು ದೌರ್ಜನ್ಯವಲ್ಲೀ ವಿಪುಳಕಂದನನು&lt;br /&gt;ಮುಂದುವರಿವ ವಿಲೋಚನಾಂಬುಗ &lt;br /&gt;ಳಿಂದ ಸೈರಣೆ ಮಿಗದೆ ಸಂಜಯ&lt;br /&gt;ನಂದು ದೊಪ್ಪನೆ ಕೆಡೆದು ಹೊರಳಿದನರಸನಂಘ್ರಿಯಲಿ ೧೭&lt;br /&gt;&lt;br /&gt;ಕಡಲತಡಿ ಪರಿಯಂತ ರಾಯರ&lt;br /&gt;ಗಡಣದಲಿ ನೀನೊಬ್ಬನೆಂಬೀ&lt;br /&gt;ನುಡಿಗೆ ನಿಶ್ಚಯವೀಗಲಾಯಿತು ತಂದೆ ಕುರುರಾಯ&lt;br /&gt;ಬಿಡದೆ ಬಾಗುವ ನೃಪರ ಮಕುಟದೊ&lt;br /&gt;ಳಿಡುವ ಕೋಮಲ ಚರಣವಿದರೊಳು&lt;br /&gt;ನಡೆಯಲೆಂತೈ ಕಲಿತೆ ಎಂದನು ಸಂಜಯನು ನೃಪನ ೧೮&lt;br /&gt;&lt;br /&gt;ರಣಮುಖದೊಳೇಕಾದಶಾಕ್ಷೋ&lt;br /&gt;ಹಿಣಿಗೆ ಹರಿವಾಯ್ತೇ ಯುಧಿಷ್ಠಿರ&lt;br /&gt;ನುಣಲಿ ಧರೆಯನು ಗೋತ್ರವಧವಿನ್ಯಸ್ತ ಕಿಲ್ಬಿಷವ&lt;br /&gt;ಸೆಣಸ ಮಾಡಿದೆ ದೈವದಲಿ ಧಾ&lt;br /&gt;ರುಣಿಯ ಹುದುವಿನ ಸಿರಿಗೆ ಸೇರದೆ&lt;br /&gt;ಹಣಿದವಾಡಿದೆ ರಾಜವಂಶದ ಕಲ್ಪತರುವನವ ೧೯&lt;br /&gt;&lt;br /&gt;ಶಶಿರುಚಿಗೆ ಸೈರಿಸದ ಸಿರಿಮುಡಿ&lt;br /&gt;ಬಿಸಿಲ ಸೆಕೆಗಾಂತುದೆ ಸುಗಂಧ &lt;br /&gt;ಪ್ರಸರಪೂರ್ಣಘ್ರಾಣವೀ ಹಳೆವೆಣನ ಹೊಲಸಿನಲಿ&lt;br /&gt;ಉಸುರುದೆಗಹಾಹುದೆ ಸುಗೀತದ&lt;br /&gt;ರಸದ ಮಧುವಿಂಗಾಂತ (ಪಾ: ಮಧುವಿಗಾಂತ) ಕಿವಿ ವಾ&lt;br /&gt;ಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ ೨೦&lt;br /&gt;&lt;br /&gt;ಲಲಿತ ಮೃದುತರ ಹಂಸತೂಳದ&lt;br /&gt;ಲುಳಿತ ಕೋಮಲ ಕಾಯ ಕೈದುಗ&lt;br /&gt;ಳೆಲುಗಳೊಟ್ಟಿಲ ಹಾಸಿನಲಿ ಪೈಸರಿಸಿ ಮಲಗಿತಲಾ&lt;br /&gt;ಸುಳಿಯೆ ಕೈಗೊಡುವರಸುಗಳ ಕೆಲ&lt;br /&gt;ಬಲದ ಪಾಯವಧಾರಿನವರನು&lt;br /&gt;ಕಳುಹಿ ಬಂದೈ ಸಾರ್ವಭೌಮರ ಚಿಹ್ನವಿದೆಯೆಂದ ೨೧&lt;br /&gt;&lt;br /&gt;ಎತ್ತಣೇಕಾದಶ ಚಮೂಪತಿ&lt;br /&gt;ಯೆತ್ತಣೀಯೇಕಾಕಿತನ ತಾ&lt;br /&gt;ನೆತ್ತ ಗಜಹಯ ರಥ ಸುಖಾಸನದತಿಶಯದ ಸುಳಿವು&lt;br /&gt;ಎತ್ತಣೀ ಕೊಳಗುಳದ ಕಾಲ್ನಡೆ&lt;br /&gt;ಯೆತ್ತಣಾಹವದಭಿಮುಖತೆ ಬಳಿ&lt;br /&gt;ಕೆತ್ತಣಪಜಯವಿಧಿಯೆ ಘಟನೆ ನೃಪಾಲ ನಿನಗೆಂದ ೨೨&lt;br /&gt; &lt;br /&gt;ಮುಳಿದಡಗ್ಗದ ಪರಶುರಾಮನ&lt;br /&gt;ಗೆಲಿದನೊಬ್ಬನೆ ಭೀಷ್ಮ ಪಾಂಡವ&lt;br /&gt;ಬಲದ ಸಕಲ ಮಹಾರಥರ ಸಂಹರಿಸಿದರು ದ್ರೋಣ&lt;br /&gt;ದಳಪತಿಯ ಮಾಡಿದಡೆ ಪಾರ್ಥನ&lt;br /&gt;ತಲೆಗೆ ತಂದನು ಕರ್ಣನೀಯ&lt;br /&gt;ಗ್ಗಳೆಯರಗ್ಗಿತು ಕೆಡೆಯಲೊಬ್ಬನೆ ಕೆಟ್ಟೆ ನೀನೆಂದ ೨೩&lt;br /&gt;&lt;br /&gt;ಅವರು ಬದುಕಿದರೈವರೂ ನಿ&lt;br /&gt;ನ್ನವರೊಳಗೆ ನೀನುಳಿಯೆ ನೂರ್ವರು&lt;br /&gt;ಸವರಿತವರೈವರು ಕುಮಾರರು ಸೌಖ್ಯ ಜೀವಿಗಳು &lt;br /&gt;ಜವನ ಸಿವಡಿಗೆ ಹತ್ತಿದರು ನಿ&lt;br /&gt;ನ್ನವರು ಮಕ್ಕಳು ನೂರು ದೈವವ&lt;br /&gt;ನವಗಡಿಸಿ ದುಃಸ್ಥಿತಿಗೆ ಬಂದೈ ತಂದೆ ಕುರುರಾಯ ೨೪&lt;br /&gt;&lt;br /&gt;ಗೆಲಿದನರಸನು ಹಸ್ತಿನಾಪುರ&lt;br /&gt;ದೊಳಗೆ ಕಟ್ಟಿಸು ಗುಡಿಯನೆಂಬೆನೊ&lt;br /&gt;ತಲೆಬಳಿಚಿ ತಾನೋಡಿ ಬದುಕಿದನೆಂಬೆನೋ ಮೇಣು&lt;br /&gt;ಲಲನೆಯರಿಗೇನೊಸಗೆ ಕುರುಡನ&lt;br /&gt;ನಳಿಸುವೆನೊ ನಗಿಸುವೆನೊ ತಾಯಿಗೆ&lt;br /&gt;ಕಲಿಸು ಬುದ್ಧಿಯನೇನನೆಂಬೆನು ಭೂಪ ಕೇಳೆಂದ ೨೫&lt;br /&gt;&lt;br /&gt;ಏನು ಸಂಜಯ ಕೌರವೇಶ್ವರ&lt;br /&gt;ನೇನ ಮಾಡಿದನಲ್ಲಿ ಕೊಂತೀ&lt;br /&gt;ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ&lt;br /&gt;ಏನು ಹದನೈ ಶಕುನಿ ರಣದೊಳ&lt;br /&gt;ಗೇನ ಮಾಡಿದನೆಂದು ಬೆಸಗೊಳ&lt;br /&gt;ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ ೨೬&lt;br /&gt;&lt;br /&gt;ಹಿಂದೆ ರಾಯನ ಪಟ್ಟದರಸಿಯ&lt;br /&gt;ತಂದು ಭಾರಿಯ ಭಂಗಬಡಿಸಿದೆ&lt;br /&gt;ಬಂದು ಹರಿಯೈದೂರ ಬೇಡಿದರವರ ಚಿತ್ತದಲಿ&lt;br /&gt;ಕಂದ ಬಿತ್ತಿದೆ ಕದನದಲಿ ನೀ&lt;br /&gt;ನೊಂದು ನೆಳಲುಳಿಯಲು ಸಹೋದರ&lt;br /&gt;ವೃಂದ ತನುಜ ಜ್ಞಾತಿ ಬಾಂಧವರಳಿದರದರಿಂದ ೨೭&lt;br /&gt;&lt;br /&gt;ಕೇಳು ಸಂಜಯ ಪೂರ್ವ ಸುಕೃತದ&lt;br /&gt;ಶಾಳಿವನವೊಣಗಿದೊಡೆ ಭಾರಿಯ&lt;br /&gt;ತೋಳಗುತ್ತಿನ ಜಯಲಕುಮಿ ಜಂಗಳವ ಜಾರಿದಡೆ&lt;br /&gt;ಭಾಳಲಿಪಿಗಳ ಲೆಕ್ಕವನು ಪ್ರತಿ&lt;br /&gt;ಕೂಲವಿಧಿ ಪಲ್ಲಟಿಸಿ ಬರೆದಡೆ&lt;br /&gt;ಹೇಳಿ ಫಲವೇನೆನುತ ತುಂಬಿದನರಸ ಕಂಬನಿಯ ೨೮&lt;br /&gt;&lt;br /&gt;ಕದಡಿತಂತಃಕರಣ ವಿಕ್ರಮ&lt;br /&gt;ದುದಧಿ ನೆಲೆಯಾಯಿತು ನಿರರ್ಥತೆ &lt;br /&gt;ಒದರಿದಡೆ ಫಲವೇನು  ಸಂಜಯ ಹಿಂದನೆಣಸದಿರು&lt;br /&gt;ಕದನದಲಿ ದುಶ್ಯಾಸನನ ತೇ&lt;br /&gt;ಗಿದನಲಾ ಬಕವೈರಿ ತಮ್ಮನ&lt;br /&gt;ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ ೨೯&lt;br /&gt;&lt;br /&gt;ನರನ ಬಸುರಲಿ ಕರ್ಣನನು ಭೂ&lt;br /&gt;ವರನ ಸೀಳಿದು ಶಲ್ಯವನು ಕಾ&lt;br /&gt;ತರಿಸದಿರು ಶಕುನಿಯನುಳೂಕನ ಯಮಳರಿಬ್ಬರಲಿ&lt;br /&gt;ಹರಿಬಕಿದಿರಾಗಲಿ ಮುರಾಂತಕ&lt;br /&gt;ಹರಹಿಕೊಳಲಿ ಮದೀಯಬಾಹು&lt;br /&gt;ಸ್ಫುರಣ ಶಕ್ತಿಗೆ ಭಂಗಬಾರದು ನೋಡು ನೀನೆಂದ ೩೦&lt;br /&gt;&lt;br /&gt;ಕಾನನಕೆ ಕೈಯಿಕ್ಕುವರೆ ಪವ&lt;br /&gt;ಮಾನನನು ಪಾವಕನು ಬಯಸುವ&lt;br /&gt;ಭಾನು ಭಾರಿಯ ತಮವ ತಿವಿವನದಾರ ನೆರವಿಯಲಿ&lt;br /&gt;ಈ ನಿಭೃತ ಗದೆಯಿರಲು ಕುಂತೀ&lt;br /&gt;ಸೂನುಗಳ ಕೈಕೊಂಬೆನೇ ಮನ&lt;br /&gt;ಹೀನನೈ ನೀನಕಟ ಸಂಜಯ ಎಂದನಾ ಭೂಪ ೩೧&lt;br /&gt;&lt;br /&gt;ಆಳು ಬಿದ್ದುದು ಬೇಹ ನಾಯಕ&lt;br /&gt;ರೋಲಗಿಸಿತಮರಿಯರನೀ ರಣ&lt;br /&gt;ದೂಳಿಗಕೆ ನಾನೊಬ್ಬನೆಂದೇ ನಿನಗೆ ತೋರಿತಲಾ&lt;br /&gt;ಆಳ ಹಂಗನು ನಾಯಕರ ಬಿಲು&lt;br /&gt;ಗೋಲ ಜೋಡಿನ ಬಲವ ಚಿತ್ತದೊ&lt;br /&gt;ಳಾಳಿದೊಡೆ ಧೃತರಾಷ್ಟ್ರರಾಯನ ಕಂದನಲ್ಲೆಂದ ೩೨&lt;br /&gt;&lt;br /&gt;ಖಾತಿ ಕಂದದು ಮನದ ಧೈರ್ಯದ&lt;br /&gt;ಧಾತು ಕುಂದದು ಲಜ್ಜೆಯಭಿಮತ&lt;br /&gt;ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ&lt;br /&gt;ಏತಕಿದು ನಿನ್ನೀ ಪ್ರಳಾಪ ವಿ&lt;br /&gt;ಧೂತರಿಪು ಕುರುರಾಯನೆಂಬೀ&lt;br /&gt;ಖ್ಯಾತಿಯಲ್ಲದೆ ಬೇರೆ ರಾಜ್ಯವನೊಲ್ಲೆ ನಾನೆಂದ ೩೩&lt;br /&gt;&lt;br /&gt;ಜೀಯ ನಿಮ್ಮಡಿಗಳಿಗೆ ಗುರು ಗಾಂ&lt;br /&gt;ಗೇಯ ವಿದುರಾದಿಗಳು ಹೇಳಿದ &lt;br /&gt;ಜೋಯಿಸವ ಕೈಕೊಂಡಿರೇ ನಮ್ಮೀ ಪ್ರಳಾಪದಲಿ&lt;br /&gt;ರಾಯ ಫಲವೇನೈ ಯುಧಿಷ್ಠಿರ&lt;br /&gt;ರಾಯನೊಲಿದಂತಿರಲಿ ನಿಮ್ಮಯ&lt;br /&gt;ತಾಯಿತಂದೆಗೆ ಹೇಳ್ವೆನೇನನು ಬುದ್ದಿಗಲಿಸೆಂದ ೩೪&lt;br /&gt;&lt;br /&gt;ಇದೆ ಸರೋವರವೊಂದು ಹರಿದೂ&lt;br /&gt;ರದಲಿ ಭುವನಖ್ಯಾತ ತನ್ಮ&lt;br /&gt;ಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ&lt;br /&gt;ಕದನದಲಿ ಕೌಂತೇಯರನು ಯಮ&lt;br /&gt;ಸದನದಲಿ ತೋರುವೆನು ತಾನೆಂ&lt;br /&gt;ಬುದು ರಹಸ್ಯವು ಜನನಿ ಜನಕಂಗರುಹು ನೀನೆಂದ ೩೫&lt;br /&gt;&lt;br /&gt;ತೆಗೆಸು ಪಾಳೆಯವೆಲ್ಲವನು ಗಜ&lt;br /&gt;ನಗರಿಗೈದಿಸು ರಾಣಿಯರ ದಂ&lt;br /&gt;ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ&lt;br /&gt;ಹಗೆಯ ವಿಜಯವ ಹರಹದಿರು ನಂ&lt;br /&gt;ಬುಗೆಯ ನುಡಿಯಲಿ ಭಾನುಮತಿಯರ&lt;br /&gt;ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ ೩೬ &lt;br /&gt;&lt;br /&gt;ಎನುತ ಸಂಜಯಸಹಿತ ಕೌರವ&lt;br /&gt;ಜನಪ ಬಂದನು ತತ್ಸರೋವರ&lt;br /&gt;ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ&lt;br /&gt;ತನುವಿಗಾಪ್ಯಾಯನದಿನಂತ&lt;br /&gt;ರ್ಮನಕೆ ಪಲ್ಲಟವಾಯ್ತು ಭೀಮನ&lt;br /&gt;ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ ೩೭&lt;br /&gt;&lt;br /&gt;ಉಲಿವ ಕೋಕಿಲ ಪಾಠಕರ ಮೊರೆ&lt;br /&gt;ವಳಿಕುಳದ ಗಾಯಕರ ಹಂಸಾ&lt;br /&gt;ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯರರ&lt;br /&gt;ಅಲರ್ದ ಹೊಂದಾವರೆಯ ನವಪರಿ&lt;br /&gt;ಮಳದ ಸಿಂಹಾಸನದಿ ಲಕ್ಷ್ಮೀ&lt;br /&gt;ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ ೩೮&lt;br /&gt;&lt;br /&gt;ಬಂದು ತಡಿಯಲಿ ಸಂಜಯನ ಕರೆ&lt;br /&gt;ದೆಂದನೀ ಸರಸಿಯಲಿ ತಾನಿಹೆ&lt;br /&gt;ನಿಂದಿನೀ ದಿವಸವನು ಕಳೆವೆನು ಕೊಳನ ಮಧ್ಯದಲಿ&lt;br /&gt;ಮುಂದೆ ಪಾಂಡವರೈವರನು ಗೆಲಿ&lt;br /&gt;ದಂದು ಹೊಗುವೆನು ಗಜಪುರವನಿಂ&lt;br /&gt;ತೆಂದು ಜನನಿಗೆ ಜನಕವಿದುರರಿಗರುಹು ನೀನೆಂದ ೩೯&lt;br /&gt;&lt;br /&gt;ಚಾರು ಚಂದ್ರೋಪಲದ ರಮ್ಯಾ&lt;br /&gt;ಗಾರದಲಿ ಮಣಿಮಯದ ಬಹುವಿ&lt;br /&gt;ಸ್ತಾರ ಭದ್ರೋಪರಿಯ ಭವನದ ಚಿತ್ರಶಾಲೆಯಲಿ&lt;br /&gt;ಸಾರಮಣಿ ಪರಿಯಂಕ ಪರಿಸಂ&lt;br /&gt;ಸ್ಕಾರದಲಿ ಮಲಗುವ ಮಹೀಪತಿ&lt;br /&gt;ನೀರೊಳೊರಗುವನೆಂದು ಸಂಜಯನೊರಲಿದನು ಹೊರಳಿ ೪೦&lt;br /&gt;&lt;br /&gt;ಒರಲದಿರು ಸಂಜಯ ವಿರೋಧಿಗ&lt;br /&gt;ಳರಿವರಾನಿದ್ದೆಡೆಯನಿಲ್ಲಿಯೆ&lt;br /&gt;ಮರೆದು ಕಳೆ ಪಾಳೆಯವ ತೆಗೆಸಬುಜಾಕ್ಷಿಯರ ಕಳುಹು&lt;br /&gt;ತೆರಹುಗೊಡು ನೀ ಹೋಗೆನುತ ಮುಂ&lt;br /&gt;ಜೆರಗನಳವಡೆ ಸೆಕ್ಕಿ ಪೂರ್ವದ &lt;br /&gt;ಲರಿದ ಸಲಿಲಸ್ತಂಭವಿದ್ಯೆಯನರಸ ಚಿಂತಿಸಿದ ೪೧&lt;br /&gt;&lt;br /&gt;ಚರಣವದನಕ್ಷಾಲನಾಂತಃ&lt;br /&gt;ಕರಣಶುದ್ದಿಯಲಾಚಮನವಿ&lt;br /&gt;ಸ್ತರಣದಲಿ ಸತ್ಪ್ರಣವವಂಗನ್ಯಾಸವಿಧಿಗಳಲಿ&lt;br /&gt;ವರುಣ ಮಂತ್ರಾಕ್ಷರದ ಜಪಪರಿ&lt;br /&gt;ಕರಣದಲಿ ನಿರ್ಣಿಕ್ತ ಚೇತಃ&lt;br /&gt;ಸ್ಪುರಣ ಸಲಿಲಸ್ತಂಭನವನವನೀಶ ಮಂತ್ರಿಸಿದ ೪೨&lt;br /&gt;&lt;br /&gt;ದ್ಯುಮಣಿ ಮೊದಲಾದಖಿಳ ಸುರರಿಗೆ&lt;br /&gt;ನಮಿಸಿ ವರುಣಧ್ಯಾನವನು ಹೃ&lt;br /&gt;ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು&lt;br /&gt;ಕುಮತಿಯಿಳಿದನು ಜಾನು ಕಟಿ ಹೃ&lt;br /&gt;ತ್ಕಮಲಗಳ ಮುಖ ಮೂರ್ಧ ಪರಿಯಂ&lt;br /&gt;ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ ೪೩&lt;br /&gt;&lt;br /&gt;ಕುರುಪತಿಯ ಬೀಳ್ಕೊಂಡು ಸಂಜಯ&lt;br /&gt;ಮರಳಿದನು ತನಗಾದ ಹಿಂದಣ&lt;br /&gt;ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ&lt;br /&gt;ಧುರದ ಮಧ್ಯದೊಳೊಬ್ಬನೇ ನಡೆ&lt;br /&gt;ತರುವ ಭೂತಾವಳಿಯನೀಕ್ಷಿಸಿ &lt;br /&gt;ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ ೪೪&lt;br /&gt;&lt;br /&gt;ಬರುತ ಸಂಜಯ ದೂರದಲಿ ಕೃಪ&lt;br /&gt;ಗುರುಸುತರ ಕೃತವರ್ಮಕನ ಕಂ&lt;br /&gt;ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ&lt;br /&gt;ಭರತಕುಲ ಮೊದಲೊಂದು ಬಳಿಕಾ&lt;br /&gt;ಯ್ತೆರಡುಕವಲೊಬ್ಬರಿಗೆ ಜಯವಿ&lt;br /&gt;ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ ೪೫&lt;br /&gt;&lt;br /&gt;(ಸಂಗ್ರಹ: ಸಂತೋಷ್ ಮತ್ತು ರಶ್ಮಿ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-4160562581782145853?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/4160562581782145853/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=4160562581782145853&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/4160562581782145853'/><link rel='self' type='application/atom+xml' href='http://www.blogger.com/feeds/742145181089395829/posts/default/4160562581782145853'/><link rel='alternate' type='text/html' href='http://gaduginabharata.blogspot.com/2010/05/blog-post_11.html' title='ಗದಾಪರ್ವ: ೦೩. ಮೂರನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-5995795177948281792</id><published>2010-05-06T01:11:00.000+05:30</published><updated>2010-05-06T01:12:48.501+05:30</updated><category scheme='http://www.blogger.com/atom/ns#' term='೧೦. ಗದಾಪರ್ವ'/><title type='text'>ಗದಾಪರ್ವ: ೦೨ ಎರಡನೆಯ ಸಂಧಿ</title><content type='html'>ಸೂ. ಸಕಲಬಲ ನುಗ್ಗಾಯ್ತು ಸಮಸ&lt;br /&gt;ಪ್ತಕರು ಮಡಿದರು ಪಾರ್ಥಶರದಲಿ&lt;br /&gt;ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ&lt;br /&gt;&lt;br /&gt;ಕೇಳು ಜನಮೇಜಯ ಧರಿತ್ರೀ&lt;br /&gt;ಪಾಲ ಸಂಜಯ ಬಂದು ಕುರುಭೂ&lt;br /&gt;ಪಾಲಕನನರಸಿದನು ಸಂಗರ ರಂಗಭೂಮಿಯಲಿ&lt;br /&gt;ಮೇಲುಸುಯಿಧಾನದ ತುರಂಗಮ&lt;br /&gt;ಜಾಲ ಸಹಿತಗಲದಲಿ ಕುರುಭೂ&lt;br /&gt;ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ ೧&lt;br /&gt;&lt;br /&gt;ವಂದಿಗಳ ನಿಸ್ಸಾಳಬಡಿಕರ&lt;br /&gt;ಮಂದಿ ಹಡಪಿಗ ಚಾಹಿ ಸೂತರ&lt;br /&gt;ಸಂದಣಿಗಳೌಷಧಿಕ ಹಯಗಜಸಂವಿಧಾಯಕರು&lt;br /&gt;ನಿಂದುದದು ಸಂಖ್ಯಾತವಿನಿಬರ&lt;br /&gt;ನಂದು ಸಂಜಯ ಕರೆದು ಕೇಳಿದ&lt;br /&gt;ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ ೨&lt;br /&gt;&lt;br /&gt;ಕೂಡೆ ಸಂಜಯನರಸಿದನು ನಡೆ&lt;br /&gt;ಜೋಡಿನವು ನಾನೂರು ಕುದುರೆಯ&lt;br /&gt;ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ&lt;br /&gt;ನೋಡುತಿರೆ ಸಾತ್ಯಕಿ ಚತುರ್ಬಲ&lt;br /&gt;ಗೂಡಿ ಕವಿದನು ಹಯಬಲವ ಹುಡಿ&lt;br /&gt;ಮಾಡಿದನು ನಾನೂರ ಕೊಂದನು ಸರಳ ಸಾರದಲಿ ೩&lt;br /&gt;&lt;br /&gt;ಹಿಡಿದು ಸಂಜಯನನು ವಿಭಾಡಿಸಿ&lt;br /&gt;ಕೆಡಹಿದನು ಬಲುರಾವುತರನವ&lt;br /&gt;ಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು&lt;br /&gt;ಫಡಫಡೆಲವೊ ಸಂಜಯನ ಬಿಡು&lt;br /&gt;ಬಿಡು ಮದೀಯ ಮಹಾಶರಕೆ ತಲೆ&lt;br /&gt;ಗೊಡುವಡಿದಿರಾಗೆನುತ ತರುಬಿದರಿವರು ಸಾತ್ಯಕಿಯ ೪&lt;br /&gt;&lt;br /&gt;ದ್ರೋಣಸುತ ಕುರುಪತಿಯ ಸಮರಕೆ&lt;br /&gt;ಹೂಣಿಗನಲೇ ಬಲ್ಲೆವಿದರಲಿ&lt;br /&gt;ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ&lt;br /&gt;ಕಾಣಲಹುದಂತಿರಲಿ ನಿಮಗೀ&lt;br /&gt;ಕೇಣದಲಿ ಫಲವಿಲ್ಲ ಕೃಪ ತ&lt;br /&gt;ನ್ನಾಣೆ ನೀ ಮರುಳೆಂದು ಸಾತ್ಯಕಿ ಸುರಿದನಂಬುಗಳ ೫&lt;br /&gt;&lt;br /&gt;ಕೋಡಕಯ್ಯಲಿ ತಿರುಗಿ ಕೃಪ ಕೈ&lt;br /&gt;ಮಾಡಿದನು ಕೃತವರ್ಮನೆಸುಗೆಯ&lt;br /&gt;ತೋಡುಬೀಡಿನ ಭರವ ಬಲ್ಲವನಾರು ಸಮರದಲಿ&lt;br /&gt;ನೋಡಲೀತನ ಗರುಡಿಯಲಿ ಶ್ರವ&lt;br /&gt;ಮಾಡಿದವರೇ ಮೂರು ಜಗವ ವಿ&lt;br /&gt;ಭಾಡಿಸುವರೆನೆ ಹೊಗಳ್ವನಾವನು ದ್ರೋಣನಂದನನ ೬&lt;br /&gt;&lt;br /&gt;ಎಚ್ಚನಶ್ವತ್ಥಾಮನಾ ಕೃಪ&lt;br /&gt;ನೆಚ್ಚನಾ ಕೃತವರ್ಮಕನು ಕವಿ&lt;br /&gt;ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ&lt;br /&gt;ಬೆಚ್ಚಿದನೆ ಬೆದರಿದನೆ ಕೈಕೊಂ&lt;br /&gt;ಡೆಚ್ಚು ಸಾತ್ಯಕಿ ರಿಪುಶರಾಳಿಯ&lt;br /&gt;ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ ೭ &lt;br /&gt;&lt;br /&gt;ಎಲೆಲೆ ಸಾತ್ಯಕಿಗಾಹವದ ಧುರ&lt;br /&gt;ಬಲುಹೆನಲು ಸೃಂಜಯರು ಸೋಮಕ&lt;br /&gt;ಬಲ ಶಿಖಂಡಿ ದ್ರುಪದನಂದನ ಪಾಂಡವಾತ್ಮಜರು&lt;br /&gt;ಚಳಪತಾಕೆಯ ವಿವಿಧವಾದ್ಯದ&lt;br /&gt;ಕಳಕಳದ ಕೈದುಗಳ ಹೊಳಹಿನ&lt;br /&gt;ತಳಪ ಝಳಪಿಸೆ ಜೋಡಿಸಿತು ಸಾತ್ಯಕಿಯ ಬಳಸಿನಲಿ ೮&lt;br /&gt;&lt;br /&gt;ಹರಿಯದಿಲ್ಲಿಯ ಬವರ ರಾಯನ&lt;br /&gt;ನರಸಬೇಹುದು ಕುರುಪತಿಯ ಮುಂ&lt;br /&gt;ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲ ಶರರಚನೆ&lt;br /&gt;ಅರಿವೆವೀ ಸಾತ್ಯಕಿಯ ಸಮರದ&lt;br /&gt;ಮುರುಕವನು ಬಳಿಕೆನುತ ಕೌರವ &lt;br /&gt;ನರಿಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು ೯&lt;br /&gt;&lt;br /&gt;ತೆರಳಿದರು ಗುರುನಂದನಾದಿಗ&lt;br /&gt;ಳರಿನೃಪಾಲನ ಕಾಣೆವಾತನ&lt;br /&gt;ನರಸಬೇಹುದು ಶಕುನಿ ದುರ್ಯೋಧನ ಸುಶರ್ಮಕರು &lt;br /&gt;ದೊರೆಗಳಿದು ಪರಿಶಿಷ್ಟರುಪಸಂ&lt;br /&gt;ಹರಣವೇ ಕರ್ತವ್ಯವಿದು ದು&lt;br /&gt;ಸ್ತರಣಶ್ರಮಫಲವೆಂದು ನುಡಿದನು ಧರ್ಮಸುತ ನಗುತ ೧೦&lt;br /&gt;&lt;br /&gt;ಮಸಗಿದುದು ಪರಿವಾರ ಕೌರವ&lt;br /&gt;ವಸುಮತೀಶ್ವರನರಕೆಯಲಿ ದಳ&lt;br /&gt;ಪಸಿರಿತು ಬಿಡದರಸಿ ಕಂಡರು ಕಳನ ಮೂಲೆಯಲಿ&lt;br /&gt;ಮಿಸುಪ ಸಿಂಧದ ಸೀಗುರಿಯ ಝಳ&lt;br /&gt;ಪಿಸುವಡಾಯ್ದ ಸಿತಾತಪತ್ರ&lt;br /&gt;ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ ೧೧&lt;br /&gt;&lt;br /&gt;ಅದೆ ಸುಯೋಧನನೊದ್ಡು ನಸುದೂ&lt;br /&gt;ರದಲಿ ಕವಿಕವಿಯೆನುತ ಧಾಳಿ&lt;br /&gt;ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ&lt;br /&gt;ಹೊದರು ಹಳಚಿತು ಭಟರು ಭುಜಗ&lt;br /&gt;ರ್ವದಲಿ ಗರುವರ ಗಾಢ ಶೌರ್ಯದ&lt;br /&gt;ಮದಕೆ ಮಡುಮುರಿಯಾಯ್ತು ಸಿಲುಕಿತು ಮೌನ ಮೋನದಲಿ ೧೨&lt;br /&gt;&lt;br /&gt;ಹೆಗಲ ಹಿರಿಯುಬ್ಬಣದ ಕೈತಳ&lt;br /&gt;ಮಗುಚಲಮ್ಮದ ವಾಘೆಯಲಿ ಕೈ&lt;br /&gt;ಬಿಗಿದುದುದಂಕಣೆದೊಡಕಿನಲಿ ಮರನಾದವಂಘ್ರಿಗಳು&lt;br /&gt;ಬಗೆಯ ಮಡಿ ಮಸಳಿಸಿತು ವೀರಕೆ&lt;br /&gt;ಬೆಗಡು ಹುದುವನೆಯಾಯ್ತು ಕೈನಂ&lt;br /&gt;ಬುಗೆಗೆ ಮರಳಿದರೊಬ್ಬರೊಬ್ಬರು ರಾಯರಾವುತರು ೧೩&lt;br /&gt;&lt;br /&gt;ಬಂದುದಾ ಮೋಹರ ಸಘಾಡದಿ&lt;br /&gt;ನಿಂದುದೀ ಬಲ ಸೂಠಿಯಲಿ ಹಯ&lt;br /&gt;ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ&lt;br /&gt;ನೊಂದುದಾಚೆಯ ಭಟರು ಘಾಯದೊ&lt;br /&gt;ಳೊಂದಿತೀಚೆಯ ವೀರರುಭಯದ&lt;br /&gt;ಮಂದಿ ಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ ೧೪&lt;br /&gt;&lt;br /&gt;ಜಾರಿದನೆ ಕುರುಪತಿಯಕಟ ಮೈ&lt;br /&gt;ದೋರನೇ ನಮಗೂರುಗಳ ಕೊಡ&lt;br /&gt;ಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ&lt;br /&gt;ತೋರಿಸನೆ ಖಂಡೆಯದ ಸಿರಿ ಮೈ&lt;br /&gt;ದೋರಹೇಳೋ ಕರೆಯೆನುತ ತಲೆ&lt;br /&gt;ದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ ೧೫&lt;br /&gt;&lt;br /&gt;ಫಡಫಡೆಲವೋ ಪಾರ್ಥ ಕುರುಪತಿ&lt;br /&gt;ಯಡಗುವನೆ ನಿನ್ನಡಗ ತರಿದುಣ&lt;br /&gt;ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು&lt;br /&gt;ಗಡಬಡಿಸಿ ಪರರುನ್ನತಿಯ ಕೆಡೆ&lt;br /&gt;ನುಡಿದು ಫಲವೇನೆನುತ ಪಾರ್ಥನ&lt;br /&gt;ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ ೧೬&lt;br /&gt;&lt;br /&gt;ಮುತ್ತಿದವು ರಥವೇಳುನೂರರು&lt;br /&gt;ವತ್ತು ಹಯವೈನೂರು ಸಾವಿರ&lt;br /&gt;ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ&lt;br /&gt;ತೆತ್ತಿಸದವಂಬುರವಣಿಸಿ ದೂ&lt;br /&gt;ಹತ್ತಿ ಹೊಳೆದವು ಸಮರದಲಿ ಮುಖ&lt;br /&gt;ಕೆತ್ತುದನೆ ಕೈದುಗಳ ರುಚಿ ವೇಢೈಸಿತರ್ಜುನನ ೧೭&lt;br /&gt;&lt;br /&gt;ಶಕುನಿ ಸಹದೇವನನುಳೂಕನು&lt;br /&gt;ನಕುಲನನು ಕುರುರಾಯನನುಜರು&lt;br /&gt;ಚಕಿತ ಚಾಪನ ಕೆಣಕಿದರು ಪವಮಾನನಂದನನ&lt;br /&gt;ಅಕಟ ಫಲುಗುಣ ಎನುತ ಸಮಸ&lt;br /&gt;ಪ್ತಕರು ಕವಿದರು ನೂರು ಗಜದಲಿ&lt;br /&gt;ಸಕಲದಳಕೊತ್ತಾಗಿ ನಿಂದನು ಕೌರವರಾಯ ೧೮&lt;br /&gt;&lt;br /&gt;ಏರಿದರು ಸಮಸಪ್ತಕರು ಕೈ&lt;br /&gt;ದೋರಿದರು ಫಲುಗುಣನ ಜೋಡಿನೊ&lt;br /&gt;ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ&lt;br /&gt;ನೂರು ಶರದಲಿ ಬಳಿ ವಿಶಿಖ ನಾ&lt;br /&gt;ನೂರರಲಿ ಬಳಿಶರಕೆ ಬಳಿಶರ&lt;br /&gt;ವಾರು ಸಾವಿರದಿಂದ ತರಿದನು ಪಾರ್ಥನರಿಬಲವ ೧೯&lt;br /&gt;&lt;br /&gt;ಕಡಿವಡೆದವೇಳ್ನೂರು ರಥ ಮುರಿ&lt;br /&gt;ವಡೆದವೈನೂರಶ್ವಚಯ ಮುಂ&lt;br /&gt;ಗೆಡೆದವಂದೈನೂರು ಗಜವಿಪ್ಪತ್ತು (ಪಾ: ಗಜವಿಪ್ಪತು) ಸಾವಿರದ&lt;br /&gt;ಕಡುಗಲಿಗಳುದುರಿತು ತ್ರಿಗರ್ತರ&lt;br /&gt;ಪಡೆ ಕುರುಕ್ಷೇತ್ರದಲಿ ಪಾರ್ಥನ&lt;br /&gt;ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ ೨೦&lt;br /&gt;&lt;br /&gt;ದೊರೆಗಳವರಲಿ ಸತ್ಯಕರ್ಮನು&lt;br /&gt;ವರ ಸುಶರ್ಮನು ದ್ರೋಣಸಮರದೊ&lt;br /&gt;ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ&lt;br /&gt;ಧುರದ ಶಪಥದೊಳರ್ಜುನನ ಸಂ&lt;br /&gt;ಗರಕೆ ಬೇಸರಿಸಿದ ಪರಾಕ್ರಮ&lt;br /&gt;ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ ೨೧&lt;br /&gt;&lt;br /&gt;ತರಿದನಗ್ಗದ ಸತ್ಯಕರ್ಮನ&lt;br /&gt;ಧುರವ ಸಂತೈಸುವ ತ್ರಿಗರ್ತರ&lt;br /&gt;ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ&lt;br /&gt;ಒರಸಿದನು ಕುರುರಾಯನಾವೆಡೆ&lt;br /&gt;ಬರಲಿ ತನ್ನಾಪ್ತರಿಗೆ ಕೊಟ್ಟೆನು&lt;br /&gt;ಹರುವನಿನ್ನಾಹವ ವಿಲಂಬವ ಮಾಡಬೇಡೆಂದ ೨೨&lt;br /&gt;&lt;br /&gt;ಇತ್ತ ಭೀಮನ ಕೂಡೆ ನೂರರು&lt;br /&gt;ವತ್ತು ಗಜ ಸಹಿತರಿಭಟರೊಳು&lt;br /&gt;ದ್ವೃತ್ತನಿದಿರಾದನು ಸುದರ್ಶನನಂಧನೃಪಸೂನು&lt;br /&gt;ಹೆತ್ತಳವ್ವೆ ವಿರೋಧಿಸೇನೆಯ &lt;br /&gt;ಮತ್ತ ಗಜಘಟೆಗೋಸುಗರವಿವು&lt;br /&gt;ಮತ್ತೆ ದೊರಕವು ಕೊಂದಡೆಂದುಮ್ಮಳಿಸಿದನು ಭೀಮ ೨೩ &lt;br /&gt;&lt;br /&gt;ಸೊಕ್ಕಿದಾನೆಯ ಕೈಯ ಕದಳಿಯ&lt;br /&gt;ನಿಕ್ಕಿ ಬಿಡಿಸುವನಾರು ಪವನಜ&lt;br /&gt;ನೆಕ್ಕತುಳದಲಿ ದಂತಿಘಟೆಗಳ ಮುರಿದನುರವಣಿಸಿ&lt;br /&gt;ಇಕ್ಕಡಿಯ ಬಸುರುಚ್ಚುಗಳ ನರ&lt;br /&gt;ಸುಕ್ಕುಗಳ ನಾಟಕದವೊಲು ಕೈ&lt;br /&gt;ಯಿಕ್ಕಿದಾನೆಯ ಹಿಂಡು ಮುರಿದುದು ನಿಮಿಷಮಾತ್ರದಲಿ ೨೪&lt;br /&gt;&lt;br /&gt;ಕೆಡಹಿ ದುರ್ಯೋಧನನ ತಮ್ಮನ&lt;br /&gt;ನಡಗುದರಿ ಮಾಡಿದನುಳೂಕನ&lt;br /&gt;ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ&lt;br /&gt;ತುಡುಕಿದನು ಸಹದೇವನಂಬಿನ&lt;br /&gt;ಗಡಣದಲಿ ಸೌಬಲನ ಸೇನೆಯ&lt;br /&gt;ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ ೨೫&lt;br /&gt;&lt;br /&gt;ಎಲವೊ ಕಪಟದ್ಯೂತ ಬಂಧದೊ&lt;br /&gt;ಳಳಲಿಸಿದಲಾ ಪಾಪಿ ಕೌರವ&lt;br /&gt;ಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ&lt;br /&gt;ಸಿಲುಕಿದೆಯಲಾ ನಮ್ಮ ಬಾಣದ&lt;br /&gt;ಬಲೆಗೆ ನಿನ್ನನು ಕಾವನಾವವ&lt;br /&gt;ನೆಲೆ ಕುಠಾರ ಎನುತ್ತ ನುಡಿದನು ನಗುತ್ತ ಸಹದೇವ ೨೬&lt;br /&gt;&lt;br /&gt;ವ್ಯರ್ಥವಲೆ ಸಹದೇವ ನಿನ್ನ ಕ&lt;br /&gt;ದರ್ಥನಕೆ ಫಲವಿಲ್ಲ ನೀ ಕದ &lt;br /&gt;ನಾರ್ಥಿಯೇ ದಿಟ ತೋರಿಸಾದರೆ ಬಾಹುವಿಕ್ರಮವ&lt;br /&gt;ಪಾರ್ಥ ಭೀಮರ ಮರೆಯೊಳಿರ್ದು ನಿ&lt;br /&gt;ರರ್ಥಕರನಿರಿದಿರಿದು ಜಯವ ಸ&lt;br /&gt;ಮರ್ಥಿಸುವೆ ಫಡ ಹೋಗೆನುತ ತೆಗೆದೆಚ್ಚನಾ ಶಕುನಿ ೨೭&lt;br /&gt;&lt;br /&gt;ಮರುಗದಿರು ನಿನ್ನುಭಯ ಪಕ್ಷವ&lt;br /&gt;ತರಿದು ತುಂಡವ ಸೀಳುವೆನು ತಾ&lt;br /&gt;ಮರೆವನೇ ಭವದೀಯ ರಚಿತ ವಿಕಾರ ವಿಭ್ರಮವ&lt;br /&gt;ನೆರೆ ಪತತ್ರಿಗಳಿವೆ ಪತತ್ರಿಯ&lt;br /&gt;ಮರುವೆಸರು ನಿನಗಿವರ ಕೇಣಿಗೆ&lt;br /&gt;ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ ೨೮&lt;br /&gt;&lt;br /&gt;ಎಸಲು ಸಹದೇವಾಸ್ತ್ರವನು ಖಂ&lt;br /&gt;ಡಿಸಿ ಶರೌಘದಿನಹಿತವೀರನ&lt;br /&gt;ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ&lt;br /&gt;ಕುಸುರಿದರಿದತಿರಥನ ಬಾಣ&lt;br /&gt;ಪ್ರಸರವನು ರಥ ತುರುಗವನು ಭಯ&lt;br /&gt;ರಸದೊಳದ್ದಿದನುದ್ದಿದನು ಸಹದೇವ ಸೌಬಲನ ೨೯&lt;br /&gt;&lt;br /&gt;ತೇರು ಹುಡಿಹುಡಿಯಾಗೆ ಹೊಯ್ದನು&lt;br /&gt;ವಾರುವನ ಮೇಲುಗಿದಡಾಯುಧ&lt;br /&gt;ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ&lt;br /&gt;ವೀರನಹೆಯೋ ಶಕುನಿ ಜೂಜಿನ&lt;br /&gt;ಚೋರವಿದ್ಯೆಯ ಬಿಟ್ಟೆಲಾ ಜು&lt;br /&gt;ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ ೩೦&lt;br /&gt;&lt;br /&gt;ಬಳಿಕ ಕಾಲಾಳಾಗಿ ಖಡುಗವ&lt;br /&gt;ಝಳಪಿಸುತ ಬರೆ ಶಕ್ತಿಯಲಿ ಕೈ&lt;br /&gt;ಚಳಕ ಮಿಗೆ ಸಹದೇವನಿಟ್ಟನು ಸುಬಲನಂದನನ&lt;br /&gt;ಖಳನೆದೆಯನನೊದೆದಪರಭಾಗಕೆ&lt;br /&gt;ನಿಲುಕಿತದು ಗಾಂಧಾರಬಲ ಕಳ&lt;br /&gt;ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ ೩೧&lt;br /&gt;&lt;br /&gt;ಕವಿದುದಾ ಪರಿವಾರ ವಡಬನ&lt;br /&gt;ತಿವಿವ ತುಂಬಿಗಳಂತೆ ಶಕುನಿಯ&lt;br /&gt;ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ&lt;br /&gt;ತೆವರಿಸಿದನನಿಬರ ಚತುರ್ಬಲ&lt;br /&gt;ನಿವಹವನು ನಿಮಿಷಾರ್ಧದಲಿ ಸಂ&lt;br /&gt;ತವಿಸಿದನು ಸಹದೇವ ಕೊಂದನು ಸೌಬಲನ ಬಲವ ೩೨&lt;br /&gt;&lt;br /&gt;ಹರಿಬದಲಿ ಹೊಕ್ಕೆರಡು ಸಾವಿರ&lt;br /&gt;ತುರುಗ ಬಿದ್ದವು ನೂರು ಮದಸಿಂ&lt;br /&gt;ಧುರಕೆ ಗಂಧನವಾಯ್ತು ಪಯದಳವೆಂಟು ಸಾವಿರದ&lt;br /&gt;ಬರಹ ತೊಡೆದುದು ನೂರು ರಥ ರಿಪು&lt;br /&gt;ಶರದೊಳಕ್ಕಾಡಿತು ವಿಡಂಬದ&lt;br /&gt;ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ ೩೩&lt;br /&gt;&lt;br /&gt;ಓಡಿದವರಲ್ಲಲ್ಲಿ ಧೈರ್ಯವ &lt;br /&gt;ಮಾಡಿ ಹರಿಹಂಚಾದ ಸುಭಟರು&lt;br /&gt;ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ&lt;br /&gt;ಓಡಲೇಕಿನ್ನೊಂದು ಹಲಗೆಯ&lt;br /&gt;ನಾಡಿ ನೋಡುವೆನೆಂಬವೊಲು ಕೈ&lt;br /&gt;ಮಾಡಿದನು ಕುರುರಾಯನಾ ಸಹದೇವನಿದಿರಿನಲಿ ೩೪&lt;br /&gt;&lt;br /&gt;ಧರಣಿಪನ ಥಟ್ಟಣೆಗೆ ನಿಲ್ಲದೆ&lt;br /&gt;ತೆರಳಿದನು ಸಹದೇವನಾತನ&lt;br /&gt;ಹಿರಿಯನಡ್ದೈಸಿದಡೆ ಕೊಟ್ಟನು ಬೋಳೆಯಂಬಿನಲಿ&lt;br /&gt;ಶರಹತಿಗೆ ಸೆಡೆದಾ ನಕುಲ ಪೈ&lt;br /&gt;ಸರಿಸಿದನು ನೂರಾನೆಯಲಿ ಡಾ&lt;br /&gt;ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ ೩೫&lt;br /&gt;&lt;br /&gt;ಎಲೆ ನಪುಂಸಕ ಧರ್ಮಸುತ ಫಡ&lt;br /&gt;ತೊಲಗು ಕರೆಯಾ ನಿನಗೆ ಭೀಮನ&lt;br /&gt;ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ&lt;br /&gt;ಮಲೆತು ಮೆರೆಯಾ ಕ್ಷತ್ರಧರ್ಮವ&lt;br /&gt;ನಳುಕದಿರು ನೀ ನಿಲ್ಲೆನುತಲಿ&lt;br /&gt;ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ ೩೬&lt;br /&gt;&lt;br /&gt;ತೂಳಿ ತುಳಿದವು ನೂರು ಗಜ ಭೂ&lt;br /&gt;ಪಾಲಕನ ನೆರೆಗಡಿತದಡವಿಗೆ&lt;br /&gt;ಬಾಳೆ ಹೆಮ್ಮರವಾಯ್ತು ಗಡ ಫಡ ನೂಕು ನೂಕೆನುತ&lt;br /&gt;ಆಲಿ ಕಿಡಿಯೆಡೆ ಕುಣಿವ ಮೀಸೆ ಕ&lt;br /&gt;ರಾಳ ವದನದ ಬಿಗಿದ ಹುಬ್ಬಿನ&lt;br /&gt;ಮೇಲುಗೋಪದ ಭೀಮ ಬಂದನು ಬಿಟ್ಟ ಸೂಠಿಯಲಿ ೩೭&lt;br /&gt;&lt;br /&gt;ನೆತ್ತಿಯಗತೆಯೊಳೂರಿದಂಕುಶ&lt;br /&gt;ವೆತ್ತಿದಡೆ ತಲೆಗೊಡಹಿದವು ಬೆರ&lt;br /&gt;ಳೊತ್ತುಗಿವಿಗಳ ಡಾವರಿಪ ಡಾವರದ ಡಬ್ಬುಕದ&lt;br /&gt;ಕುತ್ತುವಾರೆಯ ಬಗೆಯದಾನೆಗ&lt;br /&gt;ಳಿತ್ತ ಮುರಿದವು ಸಿಂಹನಾದಕೆ&lt;br /&gt;ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ ೩೮&lt;br /&gt;&lt;br /&gt;ಮೆಟ್ಟಿದನು ಬಲವಂಕವನು ಹೊರ&lt;br /&gt;ಗಟ್ಟಿದನು ವಾಮದ ಗಜಂಗಳ&lt;br /&gt;ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ&lt;br /&gt;ಘಟ್ಟಸಿದನೊಗ್ಗಿನ ಗಜಂಗಳ&lt;br /&gt;ಥಟ್ಟುಗೆಡಹಿದನಮಮ ಹೆಣಸಾ&lt;br /&gt;ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ ೩೯&lt;br /&gt;&lt;br /&gt;ಉಳಿದುದಿದಿರಲಿ ಛತ್ರ ಚಮರಾ&lt;br /&gt;ವಳಿಯವರು ಹಡಪಿಗರು ಬಿರುದಾ&lt;br /&gt;ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು&lt;br /&gt;ಸಲಿಲ ಭಕ್ಷ್ಯವಿದಾನಗಜಹಯ&lt;br /&gt;ಕುಲದ ರಕ್ಷವ್ರಣಚಿಕಿತ್ಸಕ&lt;br /&gt;ದಳಿತ ರಥಚಾರಕರು ಕಾರ್ಮುಕಬಾಣದಾಯಕರು ೪೦&lt;br /&gt;&lt;br /&gt;ಕುದುರೆ ರಾವ್ತರು ಜೋದಸಂತತಿ&lt;br /&gt;ಮದಗಜವ್ರಜವತಿರಥಾವಳಿ&lt;br /&gt;ಪದಚರರು ಚತುರಂಗಬಲವೊಂದುಳಿಯದಿದರೊಳಗೆ&lt;br /&gt;ಪದದಲೇ ಕೌರವನೃಪತಿ ಜಾ&lt;br /&gt;ರಿದನು ಕುಂತೀಸುತರು ಬಹಳಾ&lt;br /&gt;ಭ್ಯುದಯರಾದರು ವೀರನಾರಾಯಣನ ಕರುಣದಲಿ ೪೧&lt;br /&gt;&lt;br /&gt;(ಸಂಗ್ರಹ: ಸಂತೋಷ್ ಮತ್ತು ರಶ್ಮಿ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-5995795177948281792?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/5995795177948281792/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=5995795177948281792&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/5995795177948281792'/><link rel='self' type='application/atom+xml' href='http://www.blogger.com/feeds/742145181089395829/posts/default/5995795177948281792'/><link rel='alternate' type='text/html' href='http://gaduginabharata.blogspot.com/2010/05/blog-post_3628.html' title='ಗದಾಪರ್ವ: ೦೨ ಎರಡನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-7492463893348259337</id><published>2010-05-06T00:33:00.002+05:30</published><updated>2010-05-06T00:38:23.752+05:30</updated><category scheme='http://www.blogger.com/atom/ns#' term='೦೮. ಕರ್ಣಪರ್ವ'/><title type='text'>ಕರ್ಣಪರ್ವ: ೦೨ ಎರಡನೆಯ ಸಂಧಿ</title><content type='html'>ಸೂ : ಭೀಮ ವಿಕ್ರಮಕುರುಬಲದೊಳು&lt;br /&gt;ದ್ಧಾಮ ಕರ್ಣಾಹವದೊಳಗ್ಗದ&lt;br /&gt;ಕ್ಷೇಮಧೂರ್ತಿ ನೃಪಾಲಕನ ಕೆಡಹಿದನು ಕಲಿಭೀಮ&lt;br /&gt;&lt;br /&gt;ಮಗನು ದಳಪತಿಯಾದ ಗಡ ಕಾ&lt;br /&gt;ಳೆಗವ ನೋಡುವೆನೆಂಬವೊಲು ಜಗ&lt;br /&gt;ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ&lt;br /&gt;ಹೊಗರು ಕುವಳಯಕಳಿಯೆ ಸೊಂಪಿನ&lt;br /&gt;ನಗೆ ಸರೋರುಹಕೊಗೆಯೆ ವಿರಹದ&lt;br /&gt;ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ ೧&lt;br /&gt;&lt;br /&gt;ಸೂಳು ಮಿಗಲಳ್ಳಿರಿದವುರು ನಿ&lt;br /&gt;ಸ್ಸಾಳಕೋಟಿಗಳುದಯದಲಿ ದಿಗು&lt;br /&gt;ಜಾಲ ಜರಿಯಲು ಝಾಡಿಗೆದರುವ ಗೌರುಗಹಳೆಗಳ&lt;br /&gt;ತೂಳುವರೆಗಳ ರಾಯ ಗಿಡಗನ &lt;br /&gt;ಘೋಳ ಘೋರದ ಘೋಷವವನಿಯ&lt;br /&gt;ಸೀಳೆ ನಡೆದುದು ಸೇನೆ ರವಿನಂದನನ ನೇಮದಲಿ ೨&lt;br /&gt;&lt;br /&gt;ಮೋಹರಿಸಿತಿದು ನಡೆದು ಮಕರ&lt;br /&gt;ವ್ಯೂಹದಲಿ ಬಳಿಕರ್ಧಚಂದ್ರ&lt;br /&gt;ವ್ಯೂಹದಲಿ ಬಂದೊಡ್ಡಿ ನಿಂದುದು ಪಾಂಡುಸುತಸೇನೆ&lt;br /&gt;ಮೋಹರಿಸಲೊಡವೆರಸಿ ಹೊಯ್ದರು &lt;br /&gt;ಗಾಹುಗತಕವನುಳಿದು ಚೂಣಿಯ&lt;br /&gt;ಸಾಹಸಿಗರು ಸನಾಮರೊದಗಿದರೆರಡು ಥಟ್ಟಿನಲಿ ೩&lt;br /&gt;&lt;br /&gt;ಹೊಯ್ದು ಮುಗ್ಗಿತು ಭಟರು ವೆಗ್ಗಳ&lt;br /&gt;ಕೈದುಕಾರರು ತಲೆಗೆ ಸಂದರು &lt;br /&gt;ಮೈದೆಗೆಯದೊಡವೆರಸಿ ಹೊಕ್ಕರು ಬೇಹಬೇಹವರು&lt;br /&gt;ಕೊಯ್ದ ಕೊರಳಿನ ಕೊರೆದ ತೋಳಿನ &lt;br /&gt;ಹಾಯ್ದ ಮೂಳೆಯ ಸುರಿವ ಕರುಳಿನ &lt;br /&gt;ಲೆಯ್ದೆ ಪಡೆಗೇರಾಯ್ತು ಚೂಣಿಯ ಚಾತುರಂಗದಲಿ ೪&lt;br /&gt;&lt;br /&gt;ಇಂದು ಬರಹೇಳರ್ಜುನನ ರಣ&lt;br /&gt;ವಿಂದಲೇ ಭೀಮಂಗೆ ಮನದಲಿ&lt;br /&gt;ಕಂದು ಕಸರಿಕೆ ಬೇಡ ಕಾದಲಿ ಧರ್ಮನಂದನನು&lt;br /&gt;ಹಿಂದೆ ನಂಬಿಸಿ ಭೀಷ್ಮಗುರುವನು&lt;br /&gt;ಕೊಂದ ಗೆಲುವಿನಲುಬ್ಬ ಬೇಡೆಮ&lt;br /&gt;ಗಿಂದು ದಳವಾಯ್ ಕರ್ಣನೆಂದುದು ಭಟರು ಬೊಬ್ಬಿರಿದು ೫&lt;br /&gt;&lt;br /&gt;ತೇರು ಬಿಟ್ಟವು ಸೂಠಿಯಲಿ ಜ&lt;br /&gt;ಜ್ಝಾರ ರಾವ್ತರು ವಾಘೆ ಸರಿಸದ&lt;br /&gt;ಲೇರಿದರು ಕಾರ್ಮುಗಿಲ ಬಲವೆನೆ ಕವಿದವಾನೆಗಳು&lt;br /&gt;ಆರಿದರೆ ನೆಲ ಬಿರಿಯೆ ಬೆರೆಸಿತು &lt;br /&gt;ಪೌರಕರು ಸಬಳಿಗರು ಬಿಲ್ಲಿನ&lt;br /&gt;ಭೂರಿ ಭಟರಳ್ಳಿರಿದು ಕೆಣಕಿತು ಕೆದರಿ ರಿಪುಬಲವ ೬&lt;br /&gt;&lt;br /&gt;ಮುರಿಯದಹಿತರ ಥಟ್ಟು ನಮ್ಮದು &lt;br /&gt;ತೆರಹುಗೊಡದೌಂಕಿತ್ತು ದೊರೆಗಳು&lt;br /&gt;ಹೊರಗೆ ಲಗ್ಗೆಯ ಮಾಡಿ ತೋರಿದರೊಡನೆ ಪಡಿಬಲವ&lt;br /&gt;ಉರುಬಿದರು ವೃಷಸೇನ ಸೌಬಲ &lt;br /&gt;ಗುರುಜ ಕೃಪ ಕೃತವರ್ಮ ದುರ್ಮುಖ &lt;br /&gt;ವರ ವಿಕರ್ಣ ಕ್ಷೇಮಧೂರ್ತಿ ಬೃಹದ್ರಥಾದಿಗಳು ೭&lt;br /&gt;&lt;br /&gt;ಸೂತಸುತ ದಳಪತಿಯೆ ಫಡ ಮು&lt;br /&gt;ಯ್ಯಾಂತರೇ ಮುಂಬಿಗರು ಬಿರುದಿನ &lt;br /&gt;ಬೂತುಗಳ ಬೊಬ್ಬಾಟ ಬಿಡದೇ ಕಂಡು ಕಾಣರಲ &lt;br /&gt;ಸೋತ ಸಮರದ ಕೇಣಿಕಾರರು &lt;br /&gt;ಕೂತರೋ ಜಯಸಿರಿಗೆ ಹೊಯ್ ಹೊ&lt;br /&gt;ಯ್ಯೀತಗಳನೆನುತೇರಿದರು ಪಾಂಡವ ಮಹಾರಥರು ೮  &lt;br /&gt;&lt;br /&gt;ನೂಕಿತೊಂದೇ ವಾಘೆಯಲಿ ರಥ&lt;br /&gt;ನಾಕು ಸಾವಿರ ಬಲುಗುದುರೆ ಹದಿ&lt;br /&gt;ನಾಕು ಸಾವಿರ ನೂರು ಕರಿಘಟೆ ಲಕ್ಕ ಪಾಯದಳ&lt;br /&gt;ಜೋಕೆ ಜವಗೆಡೆ ಮುರಿವಡೆದು ಬಲ&lt;br /&gt;ದಾಕೆವಾಳರು ಸರಿಯೆ ಸೋಲದ&lt;br /&gt;ನೂಕು ನೂಕಾಯಿತ್ತು ಕೌರವರಾಯ ಸೇನೆಯಲಿ ೯&lt;br /&gt;&lt;br /&gt;ಫಡಫಡೆತ್ತಲು ಸ್ವಾಮಿದ್ರೋಹರು &lt;br /&gt;ಸಿಡಿದರೋ ನಿಜಕುಲದ ಬೇರ್ಗಳ&lt;br /&gt;ಕಡಿದರೋ ಕುರುಬಲದ ಕಾಹಿನ ಪಟ್ಟದಾನೆಗಳು&lt;br /&gt;ಕೊಡನ ಫಣಿಯಿದು ಪಾಂಡವರ ಬಲ&lt;br /&gt;ತುಡುಕಬಹುದೇ ಎನುತ ಸೇನೆಯ &lt;br /&gt;ತಡೆದು ನಿಂದನು ಕ್ಷೇಮಧೂರ್ತಿ ಸಹಸ್ರಗಜಸಹಿತ ೧೦&lt;br /&gt;&lt;br /&gt;ತರಿಸಿ ಲೋಹದ ಜತ್ತರಟ್ಟವ &lt;br /&gt;ಹರಹಿದರು ಸೂಲಿಗೆಯ ಬಂಡಿಯ&lt;br /&gt;ನಿರಿಸಿದರು ಕೆಲಬಲದ ಕಡೆಯಲಿ ಸಬಳಿಗರ ನಿಲಿಸಿ&lt;br /&gt;ತುರಗ ರಥ ಬಿಲ್ಲಾಳನೊತ್ತಾ&lt;br /&gt;ಗಿರಿಸಿ ಲಗ್ಗೆಯ ಲಹರಿಯಲಿ ಮೋ&lt;br /&gt;ಹರಿಸಿದರು ಪಾಂಚಾಲ ಕೈಕೆಯರವರ ಥಟ್ಟಿನಲಿ ೧೧&lt;br /&gt;&lt;br /&gt;ನೀಡಿ ಬರಿಕೈಗಳಲಿ ಸೆಳೆದೀ&lt;br /&gt;ಡಾಡಿದವು ಬಂಡಿಗಳನೌಕಿದ&lt;br /&gt;ಕೋಡ ಕೈಯಲಿ ಸಬಳಿಗರ ಸೀಳಿದವು ದೆಸೆದೆಸೆಗೆ&lt;br /&gt;ಹೂಡು ಜಂತ್ರದ ಜತ್ತರಟ್ಟವ &lt;br /&gt;ನಾಡಲೇತಕೆ ಹಿಂದಣೊಡ್ಡನು &lt;br /&gt;ಝಾಡಿಸಿದವೀ ಕ್ಷೇಮಧೂರ್ತಿ ನೃಪಾಲನಾನೆಗಳು ೧೨&lt;br /&gt;&lt;br /&gt;ರಾಯದಳ ಕಳವಳಿಸೆ ಗಜಘಟೆ &lt;br /&gt;ಘಾಯಘಾಯಕೆ ನೆಲನ ಕೊಂಡವು &lt;br /&gt;ಹಾಯಿದವು ರಥ ಹಯವ ಸೆಳೆದವು ಹೊದರ ಹರೆಗಡಿದು &lt;br /&gt;ನಾಯಕರ ಕಡೆನುಡಿವ ಬೈಗುಳ &lt;br /&gt;ಬಾಯ ಬೊಬ್ಬೆಯ ಕೈಯ ಹೊಯ್ಗುಳ &lt;br /&gt;ದಾಯಿಗರಲೇ ಎನುತ ಮೂದಲಿಸಿದನು ತಮ್ಮೊಳಗೆ ೧೩&lt;br /&gt;&lt;br /&gt;ಕೆದರಿತರನೆಲೆ ರಾಯ ಥಟ್ಟನು &lt;br /&gt;ಕೆದರಿಸಿದವಾನೆಗಳು ಹಗೆಗಳ&lt;br /&gt;ಮದಮುಖಕೆ ಮಾರೊಡ್ಡ ಮೆರೆದರೆ ಪೂತುರೇ ಎನುತ &lt;br /&gt;ತುದಿವೆರೆಳ ತುಟಿಯುಬ್ಬರಕೆ ಗಜ &lt;br /&gt;ಬೆದರೆ ಗಜರೋಹಕರ ಗರ್ಜಿಸಿ&lt;br /&gt;ಗದೆಯ ತಿರುಹುತ ಹೊಕ್ಕನಿವರೊಡ್ಡಿನಲಿ ಕಲಿಭೀಮ ೧೪&lt;br /&gt;&lt;br /&gt;ಗರುಡನೂರವರೆರೆವರೇ ನಾ&lt;br /&gt;ಗರಿಗೆ ತನಿಯನು ಭೀಮಸೇನನ&lt;br /&gt;ಬಿರುದಿನೋಲೆಯಕಾರರೇನಂಜುವರೆ ಮಾರ್ಬಲಕೆ&lt;br /&gt;ಕರಿಘಟೆಯ ಕೆದರಿದರು ಕೇಣದ &lt;br /&gt;ಧುರವ ಬಲ್ಲರೆ ಗಜದ ಕರುಳಲಿ&lt;br /&gt;ಕರುಳ ತೊಡಕಲು ಬಿದ್ದುವೈಸಾವಿರ ಮಹಾರಥರು ೧೫&lt;br /&gt;&lt;br /&gt;ಮುಂಗುಡಿಯ ಮುರಿದೌಕಿ ಭೀಮಂ &lt;br /&gt;ಗಂಘವಿಸಿದನು ಕ್ಷೇಮಧೂರ್ತಿ ಮ&lt;br /&gt;ತಂಗಜದ ಮೇಲೆಸುತ ಬಲು ನಾರಾಚ ಸೋನೆಯಲಿ&lt;br /&gt;ಅಂಘವಣೆಯಹುದೋ ಮಹಾದೇ&lt;br /&gt;ವಂಗೆ ನೂಕದು ಪೂತು ಮಝರೆಯ &lt;br /&gt;ಭಂಗನೋ ನೀನೆನುತ ಮೂದಲಿಸಿದನು ಕಲಿಭೀಮ ೧೬&lt;br /&gt;&lt;br /&gt;ಮೇಲುವಾಯ್ದಾ ರೋಹಕರ ಹಿಂ&lt;br /&gt;ಗಾಲ ಹಿಡಿದೀಡಾಡಿ ರಿಪುಗಜ &lt;br /&gt;ಜಾಲದೊಳಗೊಂದಾನೆಯನು ತಾನೇರಿ ಬೊಬ್ಬಿರಿದು &lt;br /&gt;ಘೀಳಿಡುವ ಕರಿ ಕೆದರಲಂಕುಶ &lt;br /&gt;ವಾಳೆ ನೆತ್ತಿಯನಗೆದು ದಂತಿಯ&lt;br /&gt;ತೂಳಿಸಿದನಾ ಕ್ಷೇಮಧೂರ್ತಿಯ ಗಜದ ಸಮ್ಮುಖಕೆ ೧೭&lt;br /&gt;&lt;br /&gt;ಇದು ವಿನೋದವಲೇ ಮದೀಯಾ &lt;br /&gt;ಭ್ಯುದಯವಿದಲೇ (ಪಾ: ಭ್ಯುದಯವಿದಲೆ) ನಮ್ಮ ಕೋಪವ&lt;br /&gt;ನಿದಿರುಗೊಂಡವನಿವನಲೇ ಎನುತೆಚ್ಚನಾ ಭೀಮ&lt;br /&gt;ಸದೆಗ ನೀ ಸಾರೆಲೆವೊ ಭಾರಿಯ&lt;br /&gt;ಮದಗಜದ ಬಡಿಹೋರಿ ಹೋಗೆನು&lt;br /&gt;ತೊದರಿ ಭೀಮನ ಮುಸುಕಿದನು ನಾರಾಚಸೋನೆಯಲಿ ೧೮&lt;br /&gt;&lt;br /&gt;ಆಗಲೀ ನಾಲಗೆಯ ಸಾಲವ&lt;br /&gt;ನೀಗ ಕೈಯಲಿ ತಿದ್ದಿ ಕೊಡುವರೆ&lt;br /&gt;ಹೋಗದೇ ಹೊತ್ತಿಹವೆ ಹೇಳೆನುತೆಚ್ಚನಾ ಭೀಮ&lt;br /&gt;ಆಗಳಾವುದು ನೆಲನು ನಭ ದಿಗು&lt;br /&gt;ಭಾಗವೆಲ್ಲಿಯದೆನಲು ಕಣೆಗಳ&lt;br /&gt;ತೂಗಿ ತುರುಗಿದವರಿಭಟನ ಕರಿಘಟೆಯ ಮೈಗಳಲಿ ೧೯&lt;br /&gt;&lt;br /&gt;ಸರಳ ಮಳೆಯಲಿ ನನೆದು ಕರಿಘಟೆ&lt;br /&gt;ಯುರುಳಿದವು ಕಲ್ಪಾಂತವರುಷದೊ&lt;br /&gt;ಳುರುಳುವದ್ರಿಗಳಂತೆಯೆಸೆದವು ವೈರಿದಂತಿಗಳು&lt;br /&gt;ಎರಡು ಸೀಳಾಯ್ತವನ ಕರಿ ಧರೆ&lt;br /&gt;ಗಿರದೆ ದೊಪ್ಪನೆ ಹಾಯ್ದು ಖಾತಿಯೊ&lt;br /&gt;ಳುರವಣಿಸಿದನು ಕ್ಷೇಮಧೂರ್ತಕ ಸೆಳೆದಡಾಯುಧದಿ ೨೦&lt;br /&gt;&lt;br /&gt;ಕುಣಿದು ಪುಟನೆಗೆದರಿ ಗಜನ ಹೊ &lt;br /&gt;ಯ್ದಣೆದು ಹಿಂಗದ ಮುನ್ನ ತಲೆ ಮೇ&lt;br /&gt;ಲಣಿಗೆ ಚಿಗಿದುದು ಮುಂಡ ನಡೆದುದು ನೂರು ಹಜ್ಜೆಯನು&lt;br /&gt;ಬಣಗು ನೀನಕಟಕಟ ಭೀಮನ &lt;br /&gt;ಕೆಣಕಿ ಬದುಕಿದೆಯೆನುತಲಪ್ಸರ&lt;br /&gt;ಗಣಿಕೆಯರು ನಗುತವನ ಕೊಂಡೊಯ್ದರು ವಿಮಾನದಲಿ ೨೧ &lt;br /&gt;&lt;br /&gt;(ಸಂಗ್ರಹ : ಸುಬ್ರಹ್ಮಣ್ಯ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-7492463893348259337?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/7492463893348259337/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=7492463893348259337&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/7492463893348259337'/><link rel='self' type='application/atom+xml' href='http://www.blogger.com/feeds/742145181089395829/posts/default/7492463893348259337'/><link rel='alternate' type='text/html' href='http://gaduginabharata.blogspot.com/2010/05/blog-post_06.html' title='ಕರ್ಣಪರ್ವ: ೦೨ ಎರಡನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-5836295497269803814</id><published>2010-05-03T02:15:00.003+05:30</published><updated>2010-05-03T02:21:59.727+05:30</updated><category scheme='http://www.blogger.com/atom/ns#' term='೦೮. ಕರ್ಣಪರ್ವ'/><title type='text'>ಕರ್ಣಪರ್ವ: ೦೧. ಒಂದನೆಯ ಸಂಧಿ</title><content type='html'>ಸೂ :  ರಾಯ ಕಟಕಾಚಾರ್ಯನಾ ತರು&lt;br /&gt;        ವಾಯ ಸೇನಾಪಟ್ಟವನು ರಾ&lt;br /&gt; ಧೇಯನಲಿ ರಚಿಸಿದನು ಮುದದಲಿ ಕೌರವರ ರಾಯ&lt;br /&gt;&lt;br /&gt;ಕೇಳು ಜನಮೇಜಯ ಧರಿತ್ರೀ&lt;br /&gt;ಪಾಲ ತೆಗೆದವು ಬಲವೆರಡು ನಿಜ&lt;br /&gt;ಪಾಳಯಕೆ ಪರಿತೋಷ ಖೇದಸ್ತಿಮಿತವಿಕ್ರಮರು&lt;br /&gt;ಕೋಲಗುರುವಿನ ಮರಣವಾರ್ತಾ&lt;br /&gt;ಕಾಲಸರ್ಪನ ತಂದು ಸಂಜಯ&lt;br /&gt;ಹೇಳಿಗೆಯನೀಡಾಡಿದನು ಧೃತರಾಷ್ಟ್ರನಿದಿರಿನಲಿ ೧&lt;br /&gt;&lt;br /&gt;ಬೆದರಿತಾಯಾಸ್ಥಾನ ಧಿಗಿಲೆಂ&lt;br /&gt;ದುದು ಧರಾಧೀಶ್ವರನ ತಂದೆಯ&lt;br /&gt;ಹೃದಯದಲಿ ಹುರುಳೇನು ಬಳಿಕುಳಿದವರ ಮೋರೆಗಳ&lt;br /&gt;ಕದಡಿತಂತಃಕರಣವರಸನ&lt;br /&gt;ಕದಪು ಕೈಯಲಿ ಕೀಲಿಸಿತು ಹೇ&lt;br /&gt;ಳಿದನು ಸಂಜಯ ಮತ್ತೆ ಮೇಲಣ ರಣದ ವಾರ್ತೆಯನು ೨&lt;br /&gt;&lt;br /&gt;ಗುಡಿಯ ಕಟ್ಟಿಸು ಜೀಯ ಬರತುದು&lt;br /&gt;ಕಡಲು ಮುರಿದುದು ಮೇರು ತಿರುಗಿತು&lt;br /&gt;ಪೊಡವಿ ಬಿದ್ದುದು ಭಾನುಮಂಡಲವಹಹ ವಿತಳದಲಿ&lt;br /&gt;ಮಡಿದುದೈ ನಿನ್ನಾನೆ ನಿನ್ನು &lt;br /&gt;ಗ್ಗಡದ ಭಟ ಬೀಳ್ಕೊಂಡನೈ ಕಡಿ&lt;br /&gt;ವಡೆದನೈ ಕಲಿ ಕರ್ಣನೊಸಗೆಯ ಮಾಡಹೇಳೆಂದ ೩&lt;br /&gt;&lt;br /&gt;ಮೊದಲಲಿದ್ದುದು ಜೀವಕಳೆ ಹೃದ&lt;br /&gt;ಯದಲಿ ಹೃದಯವನೊಡೆದು ಮಿಗೆ ಕಂ&lt;br /&gt;ಠದಲಿ ಕವಿದುದು ಮಂಚದಲಿ ಮೈಮರೆದು ಮಲಗಿದನು&lt;br /&gt;ಕೆದರಿತಲ್ಲಿಯದಲ್ಲಿ ರಾಯನ &lt;br /&gt;ಹದನನರಿದೊಳಗೊಳಗೆ ರಾಣಿಯ&lt;br /&gt;ರೊದರಲಂತಃಪುರದಲುಕ್ಕಿತು ಶೋಕರಸ ಜಲಧಿ ೪  &lt;br /&gt;&lt;br /&gt;ಬಾಯ ಬಸುರಿನ ನೊಸಲ ಹೊಯ್ಲಿನ&lt;br /&gt;ರಾಯನರಸಿಯರರಸನಿದಿರಲಿ&lt;br /&gt;ಹಾಯಿದರು ಭಿತ್ತಿಗಳನೊದರಿದರೊಡನೆ ದೆಸೆಯೊದರೆ&lt;br /&gt;ರಾಯನಾವೆಡೆ ಜೀಯ ಕಲಿ ರಾ&lt;br /&gt;ಧೇಯನಾವೆಡೆ ನೂರು ಮಕ್ಕಳು&lt;br /&gt;ಬೀಯವಾದರೆ ಮಾವ ಎಂದರು ಸೊಸೆಯರಡಗೆಡೆದು ೫&lt;br /&gt;&lt;br /&gt;ರವಕುಳವ ನಾನೇನ ಹೇಳುವೆ&lt;br /&gt;ನವನಿಪತಿಯಾ ಕರ್ಣ ಮೊದಲಾ&lt;br /&gt;ದವರ ರಾಣೀವಾಸ ಬಹಳಾಕ್ರಂದನಧ್ವನಿಯ&lt;br /&gt;ಕವಿದುದೊಳಸೂರೆಗರು ಕೋಟೆಯ&lt;br /&gt;ತವಕಿಗರು ಗುಜುಗುಜಿಸೆ ಬಿಗಿದವು&lt;br /&gt;ಭವನ ಭವನ ಕವಾಟ ತತಿ ಗಾಳಾಯ್ತು ಗಜನಗರ ೬&lt;br /&gt;&lt;br /&gt;ನೆರೆದುದಲ್ಲಿಯದಲ್ಲಿ ಸೂರೆಗೆ&lt;br /&gt;ಹರಿದುದಲ್ಲಿಯದಲ್ಲಿ ಮನ ಮ&lt;br /&gt;ತ್ಸರದ ಜಗಳಕೆ ಸೂಳುಬಂಟರು ಹೊಯ್ದರೊಳಗೊಳಗೆ&lt;br /&gt;ಅರಮನೆಯಲಾ ಬೊಬ್ಬೆ ಹಸ್ತಿನ&lt;br /&gt;ಪುರದಲೀ ಬೊಬ್ಬಾಟವಿನ್ನುಳಿ &lt;br /&gt;ದರಸುಗಳ ಪಾಡಾವುದೆಂದನು ಮುನಿ ನೃಪಾಲಂಗೆ ೭&lt;br /&gt;&lt;br /&gt;ಸೂರೆ ಹೋದುದು ನಗರಿ ಖಳರಿಗೆ&lt;br /&gt;ಮಾರಿದರು ಪಟ್ಟಣವನಕಟಾ &lt;br /&gt;ಕಾರುಮದ್ದಿಗೆ ಹೋಹುದೇ (ಪಾ: ಹೋಹುದೆ) ಕೈಮಸಕವವನಿಪನ&lt;br /&gt;ನೂರುಮಕ್ಕಳನಿಕ್ಕಿ ಸಾಧಿಸ&lt;br /&gt;ಲಾರನೇ ಜಯಸಿರಿಯನೆಂದುರೆ &lt;br /&gt;ಮೀರಿ ನುಡಿದುದು ಮಂತ್ರಿಗಳು ಧೃತರಾಷ್ಟ್ರನಿದಿರಿನಲಿ ೮&lt;br /&gt;&lt;br /&gt;ಎರಡು ಗಲ್ಲದ ನಯನವಾರಿಯ &lt;br /&gt;ಹರಿಕುಣಿಯ ನಿಲಿಸಿದನು ಸಂಜಯ &lt;br /&gt;ನರಸನನು ಕುಳ್ಳಿರಿಸಿ ಬೆನ್ನಿಗೆ ಚಾಚಿದನು ಮಲಗ&lt;br /&gt;ಅರಸ ಹದುಳಿಸು ನಿನ್ನ ಸೊಸೆಯರ &lt;br /&gt;ಕರೆದು ಸಂತೈಸಕಟ ಹಸ್ತಿನ &lt;br /&gt;ಪುರದ ಗಾವಳಿಗಜಬಜಕೆ ಡಂಗುರವ ಹೊಯ್ಸೆಂದ ೯&lt;br /&gt;&lt;br /&gt;ಬೀದಿ ಬೀದಿಗಳೊಳಗೆ ಡಂಗುರ &lt;br /&gt;ನಾದವೆಸೆದವು ಕೇರಿ ಕೇರಿಗೆ&lt;br /&gt;ಕೈದುಕಾರರು ನೆರೆದು ನಿಂದರು ಸೂರೆಗರ ಕೆಡಹಿ&lt;br /&gt;ಸುಯ್ಪನಡಿಗಡಿಗೊಲೆದೊಲೆದು ಪರಿ&lt;br /&gt;ಖೇದಶೋಕಜ್ವಲನ ಜನಿತ &lt;br /&gt;ಸ್ವೇದ ಸಲಿಲ ಸ್ತಿಮಿತಕಾಯನು ರಾಯನಿಂತೆಂದ ೧೦&lt;br /&gt;&lt;br /&gt;ಹೇಳು ಸಂಜಯ ನಮ್ಮ ಭಾಗ್ಯದ &lt;br /&gt;ಶಾಳಿವನ ಫಲವಾಯ್ತಲಾ ಕೈ&lt;br /&gt;ಮೇಳವಿಸಿದನೆ ಕರ್ಣನಮರಸ್ತ್ರೀ ಕದಂಬದಲಿ&lt;br /&gt;ಹೇಳು ಹೇಳೆನ್ನಾಣೆ ಮಾತಿನ &lt;br /&gt;ಜಾಳಿಗೆಯ ಮರೆ ಬೇಡ ಕುರುಪತಿ &lt;br /&gt;ಕಾಳೆಗದೊಳಸ್ತಮಿಸಿದನೆ ನುಡಿಯಂಜಬೇಡೆಂದ ೧೧&lt;br /&gt;&lt;br /&gt;ಸಾವೆನಾನೆಂದಂಜದಿರು ಕ&lt;br /&gt;ರ್ಣಾವಸಾನವ ಕೇಳಿ ತನ್ನಯ &lt;br /&gt;ಜೀವವಿದಲಾ ದೇಹದಲಿ ಬೇರಿನ್ನು ಕೆಲಬರಲಿ&lt;br /&gt;ಸಾವೆನೇ ತಾನಕಟ ಕೌರವ&lt;br /&gt;ಜೀವಿಸಲಿ ಮೇಣಳಿಯಲೆಮಗಿ &lt;br /&gt;ನ್ನಾವ ತೊಡಕಿಲ್ಲಿನ್ನು ವಜ್ರಶರೀರ ತಾನೆಂದ ೧೨&lt;br /&gt;&lt;br /&gt;ಘಾಯವಡೆದನು ಭೀಷ್ಮ ಬಳಿಕಿನೊ&lt;br /&gt;ಳಾಯುಧದ ಗುರು ತೊಡಬೆಗಳಚಿದ &lt;br /&gt;ನೀಯವಸ್ಥೆಗೆ ನಮ್ಮ ತಂದನು ಭಾನುನಂದನನು&lt;br /&gt;ಸಾಯನೇ ಮಗನಿನ್ನು ಸಾಕಾ&lt;br /&gt;ನಾಯ ನುಡಿಯಂತಿರಲಿ ಕರ್ಣಂ &lt;br /&gt;ಗಾಯಿತೇ ಕಡೆ ಶೋಕವನು ವಿಸ್ತರಿಸಿ ಹೇಳೆಂದ ೧೩&lt;br /&gt;&lt;br /&gt;ಸರಳ ಕೊರತೆಯೊ ಸಾರಥಿಯ ಮ&lt;br /&gt;ತ್ಸರವೊ ರಥದ ವಿಘಾತಿಯೋ ದು&lt;br /&gt;ರ್ಧರ ಧನುರ್ಭಂಗವೊ ಮಹಾಸ್ತ್ರವ್ಯಥೆಯೊ ರವಿಸತನ&lt;br /&gt;ಹುರುಳುಗೆಡಿಸಿದರೆಂತು ರಿಪು ರಾ&lt;br /&gt;ಯರಿಗೆ ನಾವ್ ಗೋಚರವೆ ದುರಿತೋ&lt;br /&gt;ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ ೧೪&lt;br /&gt;&lt;br /&gt;ಹರುಹುಗೆಟ್ಟುದು ತೇರು ಸಾರಥಿ&lt;br /&gt;ಹುರುಳುಗೆಡಿಸಿಯೆ ನುಡಿದನಂಬಿನ &lt;br /&gt;ಕೊರತೆ ತಾ ಮುನ್ನಾಯ್ತು ದೈವದ್ರೋಹಿಗಳು ನಿಮಗೆ&lt;br /&gt;ಅರಿವಿಜಯವೆಲ್ಲಿಯದು ನೀವ್ ಮನ&lt;br /&gt;ಬರಡರೈ ನಿಮ್ಮನ್ವಯವ ಸಂ&lt;br /&gt;ಹರಿಸಿದಿರಿ ಸಾಕೆಂದು ಸಂಜಯ ತೂಗಿದನು ಶಿರವ ೧೫&lt;br /&gt;&lt;br /&gt;ಸುರ ನರೋರಗರರಿಯೆ ನಾವ್ ಬಾ&lt;br /&gt;ಹಿರರು ಭಂಗಿಸಬೇಡ ಸಾಕಂ&lt;br /&gt;ತಿರಲಿ ಕರ್ಣಾಹವದ ಕರ್ಣಾಮೃತವ ಸುರಿ ಸಾಕು&lt;br /&gt;ಅರಿಗಳಭ್ಯುದಯವನು ನಮ್ಮಪ&lt;br /&gt;ಸರಣವನು ಕಿವಿಯಾರೆ ಕೇಳುವ &lt;br /&gt;ಪರಮ ಸುಕೃತಿಗಳಾವು ನೀ ಹೇಳಂಜಬೇಡೆಂದ ೧೬&lt;br /&gt;&lt;br /&gt;ಹೇಳಿದನು ಬಳಿಕೆರಡು ಥಟ್ಟಿನೊ&lt;br /&gt;ಳಾಳು ಕುದುರೆಯ ಗಜ ರಥವ ಭೂ&lt;br /&gt;ಪಾಲರಳಿದುಳಿದವರ ಲೆಕ್ಕವನೈದೆ ವಿಸ್ತರಿಸಿ&lt;br /&gt;ಕೇಳು ನಿನ್ನಾತನ ವಿನೋದದ &lt;br /&gt;ಖೂಳ ಬೋಳೆಯತನದಲೊದಗಿದ&lt;br /&gt;ಬಾಳಿಕೆಯ ಬೀಸರವನೆಂದನು ಸಂಜಯನು ನಗುತ ೧೭&lt;br /&gt;&lt;br /&gt;ತೊಡರ ತೆಗೆದರು ಕೈಯಡಾಯ್ದವ &lt;br /&gt;ಜಡಿಯಲಮ್ಮರು ಹೊತ್ತ ದುಗುಡದ&lt;br /&gt;ನಿಡು ಮುಸುಕುಗಳ ಬಿಗಿದ ಬೆರಗಿನ ಬಿಟ್ಟ ಕಣ್ಣುಗಳ&lt;br /&gt;ಒಡೆಯನಿದಿರಲಿ ಕುಳ್ಳಿರದೆ ಕೆಲ&lt;br /&gt;ಕಡೆಯ ಕೈದೀವಿಗೆಯ ಮರೆಯಲಿ&lt;br /&gt;ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ ೧೮&lt;br /&gt;&lt;br /&gt;ಸಾಲ ಸಾವಿರ ದೀವಿಗೆಯ ಹರಿ&lt;br /&gt;ದಾಳಿಗಳುಕದೆ ನೃಪರ ಮೋರೆಗ&lt;br /&gt;ಳೋಳಿಗಳ ನೆರೆ ಹೊದ್ದಿ ಕತ್ತಲೆ ನಿಂದುದಲ್ಲಲ್ಲಿ&lt;br /&gt;ಹೇಳನೇನದ ಬಹಳ ದುಗುಡದ &lt;br /&gt;ಪಾಳೆಯವೊ ನಿನ್ನಾತನೋಲಗ &lt;br /&gt;ಶಾಲೆಯೋ ನಾವರಿಯೆವೆಂದನು ಸಂಜಯನು ನೃಪಗೆ ೧೯ &lt;br /&gt;&lt;br /&gt;ಎಲೆ ಮಿಡುಕದಾಸ್ಥಾನ ವೀಳೆಯ &lt;br /&gt;ದೆಲೆಯ ಮಡಿಸುವ ರಭಸವಿಲ್ಲೊಳ &lt;br /&gt;ಗೊಳಗೆ ಸನ್ನೆಗಳೋರೆಗೊರಳುಗಳೌಡುಗಚ್ಚುಗಳ&lt;br /&gt;ಹಳಸಿದಗ್ಗಳಿಕೆಗಳ ಮೀಸಲು &lt;br /&gt;ಗಳೆದ ಬಿರುದಿನ ಮಾನಭಂಗದ &lt;br /&gt;ಕಳವಳದ ಕನಸುಗಳಲಿದ್ದುದು ರಾಯನಾಸ್ಥಾನ ೨೦&lt;br /&gt;&lt;br /&gt;ಕೆತ್ತು ಕೊಂಡಿರಲೇಕೆ ನೀವಿ&lt;br /&gt;ನ್ನುತ್ತರಾಯಿಗಳೆಮ್ಮ ಭಾಗ್ಯದ &lt;br /&gt;ಬಿತ್ತು ಹುರಿದಿರೆ ಬಿರುದ ಭಟರಿದ್ದೇನಮಾಡುವರು   &lt;br /&gt;ಮೆತ್ತಿದಂಬಿನ ಮೆಯ್ಯ ಭೀಷ್ಮನು &lt;br /&gt;ಹೊತ್ತ ಕೈದುವ ಬಿಸುಟ ಕಳಶಜ &lt;br /&gt;ನುತ್ತಮಿಕೆಗಳ ಮೆರೆದರೆಂದನು ಕೌರವರ ರಾಯ ೨೧&lt;br /&gt;&lt;br /&gt;ಬಿಗಿದ ತಿಮಿರದ ಕೆಚ್ಚು ಸೂರ್ಯನ &lt;br /&gt;ಸೊಗಡು ಹೊಯ್ದರೆ ಮುರಿಯದೇ ಕಾ&lt;br /&gt;ಳೆಗಕೆ ಕರ್ಣನ ಕೈದು ಭಂಡಾರಿಸಿದುದಿನ್ನಬರ&lt;br /&gt;ತೆಗೆಸುವೆವು ನಾಳಿನಲಿ ನಿಮ್ಮಯ &lt;br /&gt;ಮೊಗದ ದುಗುಡದ ದಡ್ಡಿಯನು ಮೈ&lt;br /&gt;ದೆಗೆಯದಿರಿ ಕಲಿಯಾಗಿಯೆಂದನು ನೃಪತಿ ಸುಭಟರಿಗೆ ೨೨&lt;br /&gt;&lt;br /&gt;ಜೀಯ ಸಂಶಯವಿಲ್ಲ ಗುರು ಗಾಂ&lt;br /&gt;ಗೇಯರಳುಕಿದರೇನು ಕಲಿ ರಾ&lt;br /&gt;ಧೇಯನೇ ವಜ್ರಾಂಗಿಯಲ್ಲಾ ನಮ್ಮ ಮೋಹರಕೆ&lt;br /&gt;ರಾಯ ನೀ ಪತಿಕರಿಸಿದರೆ ಚ&lt;br /&gt;ಕ್ರಾಯುಧನ ಚಾತುರ್ಯ ಕೊಳ್ಳದು &lt;br /&gt;ಜೀಯ ಕರ್ಣನ ಮುಂದೆಯೆಂದುದು ನಿಖಿಳ ಪರಿವಾರ ೨೩&lt;br /&gt;&lt;br /&gt;ಬೇರೆ ತನಗಗ್ಗಳಿಕೆಯೋಲೆಯ &lt;br /&gt;ಕಾರತನವೇ ರಾಯ ಮನವೊಲಿ&lt;br /&gt;ದೇರಿಸಿದರೇರುವುದು ದೊರೆ ಮನಮುರಿಯೆ ಕುಂದುವುದು&lt;br /&gt;ತೋರಿ ನುಡಿದರೆ ಭೀಷ್ಮ ದ್ರೋಣರು &lt;br /&gt;ಜಾರಿಸಿದ ರಣವೆಮಗೆ ಸದರವೆ&lt;br /&gt;ದೂರುವವರಾವಲ್ಲವೆಂದನು ಭಾನುಸುತ ನಗುತ ೨೪&lt;br /&gt;&lt;br /&gt;ಸಾಕದಂತಿರಲಿನ್ನು ಥಟ್ಟಿಂ&lt;br /&gt;ಗಾಕೆವಾಳರ ಮಾಡು ಸಾಕಾ &lt;br /&gt;ಸ್ತೋಕಪುಣ್ಯರ ಮಾತದೇತಕೆ ಗುರು ನದೀಸುತರ &lt;br /&gt;ಸಾಕಿ ಸಲಹಿದೆ ಕರ್ಣನನು ಹುರು&lt;br /&gt;ಡೇಕೆ ಗುಣದೊಳಗೀತ ಸೇನಾ&lt;br /&gt;ನೀಕಭಾರದ ಹೊರಿಗೆಗಹನೆಂದನು ಕೃಪಾಚಾರ್ಯ ೨೫ &lt;br /&gt;&lt;br /&gt;ಎಮ್ಮ ತೋರಿಸಬೇಡ ಸುಖದಲಿ&lt;br /&gt;ನಿಮ್ಮ ಚಿತ್ತಕೆ ಬಹುದ ಮಾಡುವು&lt;br /&gt;ದೆಮ್ಮ ಹೃದಯ ವ್ಯಥೆಯ ನಾವಿನ್ನಾಡಿ ಫಲವೇನು&lt;br /&gt;ಎಮ್ಮ ಪುಣ್ಯದ ಬೆಳೆಗಳೊಣಗಿದ &lt;br /&gt;ಡಮ್ಮಿ ಮಾಡುವುದೇನು ಕರ್ಣನು &lt;br /&gt;ನಮ್ಮ ದಳವಾಯೆಂದನಶ್ವತ್ಥಾಮನರಸಂಗೆ ೨೬ &lt;br /&gt;&lt;br /&gt;ಆ ಮಹಾರಥ ಭೀಷ್ಮನೇ ಸ್ವೇ&lt;br /&gt;ಚ್ಚಾಮರಣಿಯಾಚಾರ್ಯಚಾಪ&lt;br /&gt;ವ್ಯೋಮಕೇಶನು ಹೊಕ್ಕು ಕಾಣರು ಹಗೆಗೆ ಹರಿವುಗಳ&lt;br /&gt;ಆ ಮಹಾನಾರಾಯಣಾಸ್ತ್ರದ&lt;br /&gt;ಸೀಮೆ ಸೀದುದು ಮಿಕ್ಕ ಭಟರು &lt;br /&gt;ದ್ದಾಮರೇ ಸಾಕಿನ್ನು ಸೇನಾಪತಿಯ ಮಾಡೆಂದ ೨೭&lt;br /&gt;&lt;br /&gt;ಕರಸಿದನು ಭೂಸುರರನೌದುಂ&lt;br /&gt;ಬರದ ಮಣಿ ಮಡಿವರ್ಗ ದೂರ್ವಾಂ&lt;br /&gt;ಕುರ ಸಿತಾಕ್ಷತ ಧವಳಸರ್ಷಪ ವರಫಲಾವಳಿಯ&lt;br /&gt;ತರಿಸಿದನು ಹೊಂಗಳಶ ತತಿಯಲಿ&lt;br /&gt;ವರ ನದೀವಾರಿಗಳನಾಡಂ&lt;br /&gt;ಬರದ ಲಗ್ಗೆಯಲೊದರಿದವು ನಿಸ್ಸಾಳಕೋಟಗಳು ೨೮&lt;br /&gt;&lt;br /&gt;ವಿರಚಿಸಿತು ಪಟ್ಟಾಭಿಷೇಕೋ&lt;br /&gt;ತ್ಕರುಷ ಮಂತ್ರಾಕ್ಷತೆಯ ಮಳೆಗಳ&lt;br /&gt;ಕರೆದರವನೀಸುರರು ಜಯರವ ಮೇಘಘೋಷದಲಿ&lt;br /&gt;ಗುರುಸುತಾದಿ ಮಹಾಪ್ರಧಾನರು&lt;br /&gt;ದರುಶನವ ನೀಡಿದರು ಕರ್ಣನ&lt;br /&gt;ಬಿರುದಿನುಬ್ಬಟೆಲಹರಿ ಮಸಗಿತು ವಂದಿಜಲಧಿಯಲಿ ೨೯&lt;br /&gt;&lt;br /&gt;ಅರಳಿತರಸನ ವದನ ಶಕುನಿಯ&lt;br /&gt;ಹರುಷಮಿಗೆ ದುಶ್ಯಾಸನಂಗು &lt;br /&gt;ಬ್ಬರಿಸೆ ರೋಮಾವಳಿ ವಿಕರ್ಣಾದಿಗಳ ಮನ ನಲಿಯೆ &lt;br /&gt;ಗುರುಜ ಕೃಪ ಕೃತವರ್ಮ ಶಲ್ಯಾ&lt;br /&gt;ದ್ಯರಿಗೆ ಹೂಸಕದೊಲಹು ಮಿಗಿಲಾ&lt;br /&gt;ಯ್ತಿರುಳು ಕರ್ಣಗೆ ಪಟ್ಟವಾಯಿತು ಭೂಪ ಕೇಳೆಂದ ೩೦ &lt;br /&gt;&lt;br /&gt;(ಸಂಗ್ರಹ : ಸುಬ್ರಹ್ಮಣ್ಯ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-5836295497269803814?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/5836295497269803814/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=5836295497269803814&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/5836295497269803814'/><link rel='self' type='application/atom+xml' href='http://www.blogger.com/feeds/742145181089395829/posts/default/5836295497269803814'/><link rel='alternate' type='text/html' href='http://gaduginabharata.blogspot.com/2010/05/blog-post.html' title='ಕರ್ಣಪರ್ವ: ೦೧. ಒಂದನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-8059480547539599188</id><published>2010-04-28T00:03:00.001+05:30</published><updated>2010-05-03T02:19:34.458+05:30</updated><category scheme='http://www.blogger.com/atom/ns#' term='೦೪. ವಿರಾಟಪರ್ವ'/><title type='text'>ವಿರಾಟಪರ್ವ: ೦೭. ಏಳನೆಯ ಸಂಧಿ</title><content type='html'>ಸೂ: ಕದನ ಚೌಪಟ ಮಲ್ಲ ಪರಬಲ&lt;br /&gt;ಮದನ ಮದಹರ ರುದ್ರನಹಿತರ&lt;br /&gt;ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ&lt;br /&gt;&lt;br /&gt;ಭಯವು ಭಾರವಿಸಿತ್ತು ಜನಮೇ&lt;br /&gt;ಜಯ ಮಹೀಪತಿ ಕೇಳು ಕುರು ಸೇ&lt;br /&gt;ನೆಯಲಿ ಭೀಷ್ಮ ದ್ರೋಣರರಿದರು ಪಾರ್ಥನೆಂಬುದನು&lt;br /&gt;ಜಯವು ಜೋಡಿಸಲರಿಯದಿದು ಸಂ&lt;br /&gt;ಶಯದ ಸುಳಿವುತ್ಪಾತ ಶತವಿದು&lt;br /&gt;ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ ೧&lt;br /&gt;&lt;br /&gt;ಸುರಿಸುತಿವೆ ಕಂಬನಿಗಳನು ಗಜ&lt;br /&gt;ತುರಗಚಯವೊರೆಯುಗಿದಡಾಯುಧ&lt;br /&gt;ಮುರಿದು ಬಿದ್ದುದು ಬೀಸುತಿದೆ ಬಿರುಗಾಳಿ ಬಲ ಬೆದರೆ&lt;br /&gt;ಹರಿವುತಿವೆ ತಾರಕಿಗಳಭ್ರದೊ&lt;br /&gt;ಳರುಣಮಯ ಜಲಧಾರೆಯಿದೆ ತರ&lt;br /&gt;ತರದಲಿದೆ ಪಡಿಸೂರ್ಯಮಂಡಲವೆಂದನಾ ದ್ರೋಣ ೨&lt;br /&gt;&lt;br /&gt;ಇದೆ ಬಹಳ ಭೂಕಂಪವದುಭುತ&lt;br /&gt;ವಿದೆ ದಿಶಾವಳಿ ಧೂಮಕೇತುಗ&lt;br /&gt;ಳಿದೆ ಪತಾಕಾಭಂಗವಿದೆ ವಿಪರೀತ ಪರಿವೇಷ&lt;br /&gt;ಇದು ಸಮಾಹಿತವಲ್ಲ ರಾಜಾ&lt;br /&gt;ಭ್ಯುದಯಕರವೇ ಭೀಷ್ಮ ನಮ್ಮನು &lt;br /&gt;ಸದೆಯದಿಹನೇ ಸುರಪನಂದನನೆಂದನಾ ದ್ರೋಣ ೩&lt;br /&gt;&lt;br /&gt;ಬಿರಿಯಲಬುಜಭವಾಂಡವಿದೆ ಕಪಿ&lt;br /&gt;ವರನ ಕಳಕಳ ದೇವದತ್ತದ&lt;br /&gt;ಧರಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆ&lt;br /&gt;ನರನ ನಿಷ್ಠುರ ಸಿಂಹ ರವವಿದೆ&lt;br /&gt;ತುರಗ ದಳ್ಳುರಿ ಸಾರುತಿದೆ ಸಂ&lt;br /&gt;ಗರಕೆ ಸಾಹಸ ಮಲ್ಲ ಮೊಳಗಿದನೆಂದನಾ ದ್ರೋಣ ೪&lt;br /&gt;&lt;br /&gt;ಬಲವ ಬೆದರಿಸಿ ಹಗೆಯ ಭುಜದ&lt;br /&gt;ಗ್ಗಳಿಕೆಯನೆ ಕೊಂಡಾಡಿ ಸಾಮಿಯ&lt;br /&gt;ನಿಳಕೆಗಾಬಿರಿ ನಿಮ್ಮ ಪೈಕಕೆ ಖುಲ್ಲತನ ಸಹಜ&lt;br /&gt;ಫಲುಗುಣನೆಯಾಗಲಿ ಸುರೇಂದ್ರನೆ&lt;br /&gt;ನಿಲಲಿ ಭಾರ್ಗವ ರಾಮನಾಗಲಿ&lt;br /&gt;ಗೆಲಿದು ಕೊಡುವೆನು ನಿಮಿಷಕೆಂದನು ಖಾತಿಯಲಿ ಕರ್ಣ ೫&lt;br /&gt;&lt;br /&gt;ನರನು ನರನೆಂದೆನವರತ ತಲೆ&lt;br /&gt;ಬಿರಿಯೆ ಹೊಗಳುವಿರಾನಿರಲು ಸಂ&lt;br /&gt;ಗರಕೆ ತಲೆದೋರಿದೊಡೆ ತರಿವೆನು ಲೋಕಪಾಲಕರ&lt;br /&gt;ನರನ ತೆತ್ತಿಗರಹಿರಿ ತತ್ತರೆ&lt;br /&gt;ಪುರದೊಳಗೆ ಕೌರವನವರು ದು&lt;br /&gt;ಶ್ಚರಿತರೆರಡಿಟ್ಟಿಹಿರಿ ಖೂಳರು ನಿಮ್ಮೊಳೇನೆಂದ ೬&lt;br /&gt;&lt;br /&gt;ಹೊಕ್ಕು ತಾ ಬಳಲಿಸಿದೊಡೆ ಹಿಂ&lt;br /&gt;ದಿಕ್ಕಿ ಕೊಂಬವರಾರು ಹಗೆವನ&lt;br /&gt;ಸಿಕ್ಕಿದುರಗವ ಸೆಳೆವನಾವನು ಗರುಡ ತುಂಡದಲಿ&lt;br /&gt;ಎಕ್ಕತುಳದಲಿ ವೈರಿ ಪಾರ್ಥನ&lt;br /&gt;ನೊಕ್ಕಲಿಕ್ಕುವೆನರಸ ನಿನ್ನೀ&lt;br /&gt;ಚುಕ್ಕಿಗಳ ಚಾಪಲವ ಕೇಳದಿರೆಂದನಾ ಕರ್ಣ ೭&lt;br /&gt;&lt;br /&gt;ಎನಲು ಭುಗಿಲೆಂದನು ಕೃಪಾಚಾ&lt;br /&gt;ರ್ಯನು ಸುಯೋಧನ ಕೇಳು ರಾಧಾ&lt;br /&gt;ತನಯನಿವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು&lt;br /&gt;ಅನುವರದೊಳರ್ಜುನನ ಗೆಲುವೊಡೆ&lt;br /&gt;ಯೆನಗೆ ನಿನಗೀತಂಗೆ ಕೆಲಬರಿ&lt;br /&gt;ಗನಿಮಿಪರಿಗಳವಲ್ಲ ಬಲ್ಲೈ ಪಾರ್ಥನಧಟುಗಳ ೮&lt;br /&gt;&lt;br /&gt;ಮಾಡಿದನು ಹರನೊಡನೆ ಖಾಡಾ&lt;br /&gt;ಖಾಡಿಯನು ಸುರಪತಿಯ ತೋಟವ&lt;br /&gt;ಬೇಡಿದೊಡೆ ಬೇಳಿದನು ವಹ್ನಿಗೆ ರಾಜಸೂಯದಲಿ&lt;br /&gt;ರೂಢಿಗುತ್ತರ ಕುರುಗಳರ್ಥವ&lt;br /&gt;ಹೂಡಿಸಿದನರಮನೆಗೆ ದೈತ್ಯರ&lt;br /&gt;ಬೀಡ ಬರಿಗೈದನು ಹಿರಣ್ಯಕಪುರ ನಿವಾಸಿಗಳ ೯&lt;br /&gt;&lt;br /&gt;ಬಾಗಿಸಿದ ಬಿಲ್ಲಿನಲಿ ರಾಯರ&lt;br /&gt;ಮೂಗ ಕೊಯ್ದನು ಮದುವೆಯಲಿ ನೀ&lt;br /&gt;ನೀಗಳೊದರುವೆ ಕೌರವೇಂದ್ರನನಂದು ಬಿಡಿಸಿದೆಲ&lt;br /&gt;ಆ ಗರುವ ಸೈಂಧವನ ಮುಡಿಯ ವಿ&lt;br /&gt;ಭಾಗಿಸಿದ ಭಟನಾರು ಪಾರ್ಥನ&lt;br /&gt;ಲಾಗುವೇಗವನಾರು ಬಲ್ಲರು ಕರ್ಣ ಕೇಳೆಂದ ೧೦&lt;br /&gt;&lt;br /&gt;ಮರುಳ ಕಣ್ಣಿಗೆ ಕೊಡನ ತೋರದ&lt;br /&gt;ಲಿರದೆ ಸಾಸವೆ ನಿಮ್ಮ ಕಣ್ಣಿಗೆ&lt;br /&gt;ನರನು ದೊಡ್ಡಿತು ಉಳಿದ ವೀರರ ಕಣ್ಗೆ ತುಸು ಮಾತ್ರ&lt;br /&gt;ಮರುಳು ಹಾರುವ ಗದ್ಯಪದ್ಯದ&lt;br /&gt;ಸರಸ ವಿದ್ಯಗಳಲ್ಲದೀ ಸಂ&lt;br /&gt;ಗರದ ಕರ್ಕಶ ವಿದ್ಯೆ ನಿಮಗೇಕೆಂದನಾ ಕರ್ಣ ೧೧&lt;br /&gt;&lt;br /&gt;ಹಣೆಗೆ ಮಟ್ಟಿಯ ಬಡಿದು ದರ್ಭೆಯ&lt;br /&gt;ಹಣಿದು ಬೆರಳಲಿ ಸೆಕ್ಕಿ ಧೋತ್ರದ&lt;br /&gt;ದಣಿಬವನು ನಿರಿವಿಡಿದು ಮಹಳದ ಮನೆಯ ಚೌಕದಲಿ&lt;br /&gt;ಮಣೆಗೆ ಮಂಡಿಸಿ ಕುಳ್ಳಿತುಂಬೌ&lt;br /&gt;ತಣದ ವಿದ್ಯವ ಬಲ್ಲಿರಲ್ಲದೆ&lt;br /&gt;ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ ೧೨&lt;br /&gt;&lt;br /&gt;ಇಂದು ಪಿತೃದಿನವಿಂದು ಸಂಕ್ರಮ&lt;br /&gt;ಣಿಂದು ಸೂರ್ಯಗ್ರಹಣ ಹರಿದಿನ&lt;br /&gt;ವಿಂದು ಯಜ್ಞಾರಂಭ ದಿನ ವಡ್ಡಂತಿ ಲೇಸೆಂದು&lt;br /&gt;ಬಂದು ನಾನಾ ಮುಖದ ದಾನಕೆ&lt;br /&gt;ತಂದ ವಸ್ತುವ ಬಾಚಿ ಹೊಳ್ಳಿಸಿ&lt;br /&gt;ತಿಂದು ಕೊಬ್ಬಿದ ನಿಮಗೆ ಸುಭಟರ ಮಾತದೇಕೆಂದ ೧೩&lt;br /&gt;&lt;br /&gt;ಬಲ್ಲಿರೈ ಕೌರವನ ಧನವನು&lt;br /&gt;ಹೊಳ್ಳಿಸಲು  ಮೃಷ್ಟಾನ್ನದಿಂದವೆ&lt;br /&gt;ಡೊಳ್ಳ ಬೆಳಸಿಯೆ ರಾಜಗುರುತನದಿಂದ ಬೆರತಿಹಿರಿ&lt;br /&gt;ಬಿಲ್ಲ ವಿದ್ಯಾ ವಿಷಯ ರಿಪುಭಟ&lt;br /&gt;ಮಲ್ಲರೊಡನೆಯ ಕದನವಿದು ಜಡ&lt;br /&gt;ರೆಲ್ಲರಿಗೆ ಸುಲಭವೆ ಜಪಾನುಷ್ಠಾನವಲ್ಲೆಂದ ೧೪&lt;br /&gt;&lt;br /&gt;ಕೇಳಿದಶ್ವತ್ಥಾಮ ಕಿಡಿಗಳ&lt;br /&gt;ನಾಲಿಗೆಗಳಲುಗಳಿದನು ಕೇಳೆಲೆ&lt;br /&gt;ಖೂಳ ಸೂತನ ಮಗನೆ ಸುಭಟಾಂಗದಲಿ ಖರೆಯನಲ&lt;br /&gt;ಕೀಳು ಜಾತಿಗೆ ತಕ್ಕ ನುಡಿಗಳು&lt;br /&gt;ಮೇಳವಿಸಿದವು ಕುಲವ ನಾಲಗೆ&lt;br /&gt;ಹೇಳಿತೆಂಬುದು ತಪ್ಪದಾಯಿತು ಕರ್ಣ ಕೇಳೆಂದ ೧೫&lt;br /&gt;&lt;br /&gt;ನಗುವೆ ವಿಪ್ರರನಾವ ರಾಯರ&lt;br /&gt;ಮಗನು ಹೇಳಾ ದಾನ ಧರ್ಮಾ&lt;br /&gt;ದಿಗಳೊಳರ್ಧವನಾರು ಕೊಂಬರು ದ್ವಿಜರು ಹೊರಗಾಗಿ&lt;br /&gt;ಜಗವ ರಕ್ಷಿಸಲಾವು ಕೊಂಬೆವು&lt;br /&gt;ಮಗುಳೆ ಕೊಡುವೆವು ಕ್ಷತ್ರ ವೈಶ್ಯಾ&lt;br /&gt;ದಿಗಳು ಕೊಡುವರು ತತ್ಪ್ರತಿಗಹ ಯೋಗ್ಯವಲ್ಲೆಂದ ೧೬&lt;br /&gt;&lt;br /&gt;ಉಳಿದ ವರ್ಣತ್ರಯಕೆ ಬೆಸಕೈ&lt;br /&gt;ವಳತೆಯಲಿ ಶೂದ್ರನು ಕೃತಾರ್ಥನು&lt;br /&gt;ತಿಳಿಯೆ ನೀನಾರಿದರೊಳಗೆ ಕೊಂಬವನೊ ಕೊಡುವವನೊ&lt;br /&gt;ಕುಲವಿಹೀನನ ತಂದು ಕೌರವ&lt;br /&gt;ತಿಲಕ ಪತಿಕರಿಸಿದೊಡೆ ನಾಲಗೆ&lt;br /&gt;ಯುಲಿಯಲಾಯಿತು ಕರ್ಣ ನಿನ್ನವ ಭವವ ನೆನೆಯೆಂದ ೧೭&lt;br /&gt;&lt;br /&gt;ಪರರು ಪತಿಕರಿಸಿದೊಡೆ ಲಜ್ಜೆಗೆ&lt;br /&gt;ಶಿರವ ನಸುಬಾಗುವರು ಗರುವರು&lt;br /&gt;ದುರುಳ ನೀ ದುರುದುಂಬಿತನದಲಿ ನಿನ್ನ ಹೊಗಳಿದೊಡೆ&lt;br /&gt;ಗರುವ ಮಾನ್ಯರು ಮೆಚ್ಚುವರೆ ಸಸಿ&lt;br /&gt;ನಿರು ಮಹಾತ್ಮರು ನಿನ್ನೊಡನೆ ಉ&lt;br /&gt;ತ್ತರವ ಕೊಡುವರೆ ಗಳಹತನ ನಮ್ಮೊಡನೆ ಬೇಡೆಂದ ೧೮&lt;br /&gt;&lt;br /&gt;ತೆಗೆದು ತಾಳಿಗೆ ಗಡಿತನಕ ನಾ&lt;br /&gt;ಲಗೆಯ ಕೀಳ್ವೆನು ಮುನಿದು ತನ್ನೋ&lt;br /&gt;ಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ&lt;br /&gt;ಅಗಣಿತದ ಗರುವರನು ನಿಂದಿಸಿ&lt;br /&gt;ನಗುವೆ ನಿನ್ನನು ಕೊಲುವೆನೆಂದಾ&lt;br /&gt;ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ ೧೯&lt;br /&gt;&lt;br /&gt;ಆಳು ಮತ್ಸರದಧಿಕ ರೋಷದ&lt;br /&gt;ಮೇಲುನುಡಿಯಂಕುರಿಸೆ ಕುರು ಭೂ&lt;br /&gt;ಪಾಲನಿಬ್ಬರ ತೆಗೆದನುಚಿತೋಕ್ತಿಯಲಿ ಸಂತೈಸಿ&lt;br /&gt;ಕಾಳಗಕೆ ತನ್ನವನೊಡನೆ ನಿ&lt;br /&gt;ಮ್ಮಾಳುತನವನು ತೋರಿಯೊಳಗೊಳ&lt;br /&gt;ಗಾಳು ವಾಸಿಯ ತೋಟಿ ಬೇಡೆಂದರಸ ಮಾಣಿಸಿದ ೨೦&lt;br /&gt;&lt;br /&gt;ಬಂದು ಭೀಷ್ಮಂಗೆರಗಿ ಕೈಮುಗಿ&lt;br /&gt;ದೆಂದನೀತನು ಪಾರ್ಥನಾದೊಡೆ&lt;br /&gt;ಹಿಂದಣಂತಿರೆ ನವೆಯಬೇಹುದು ವರುಷ ಹದಿಮೂರ&lt;br /&gt;ಸಂದುದಿಲ್ಲಜ್ಞಾತವಾಸಕೆ&lt;br /&gt;ಮುಂದೆ ದಿನವುಂಟೆನ್ನ ಲೆಕ್ಕ&lt;br /&gt;ಕ್ಕೆಂದು ಕುರುಪತಿ ನುಡಿಯೆ ನಗುತಿಂತೆಂದನಾ ಭೀಷ್ಮ ೨೧&lt;br /&gt;&lt;br /&gt;ಮಗನೆ ಕೇಳಿರೈದು ವರುಷಕೆ&lt;br /&gt;ಮಿಗುವವೆರಡೇ ಮಾಸ ಮಾಸಾ&lt;br /&gt;ದಿಗಳನವರನುಭವಿಸಿದರು ಹದಿಮೂರು ವತ್ಸರವ&lt;br /&gt;ಮಿಗುವವಧಿ ಬುಧರರಿಯೆ ನಿನ್ನಿನ&lt;br /&gt;ಹಗಲು ನಿನ್ನದು ಪಾಂಡುತನಯರು&lt;br /&gt;ಹೊಗುವಡಿಂದಿನ ದಿವಸವವರದು ಕಂದ ಕೇಳೆಂದ ೨೨&lt;br /&gt;&lt;br /&gt;ಜಲಧಿ ಮೇರೆಯನೊದೆದು ಹಾಯಲಿ&lt;br /&gt;ನೆಲನನಿಳುಹಲಿ ದಿಗಿಭವಿನಮಂ&lt;br /&gt;ಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು&lt;br /&gt;ಅಳುಪಲರಿವನೆ ಸತ್ಯಭಾಷೆಗೆ&lt;br /&gt;ಕಲಿ ಯುಧಿಷ್ಠಿರ ನೃಪತಿಯನ್ವಯ&lt;br /&gt;ತಿಲಕನಲ್ಲಾ ಕಂದ ಕೌರವಯೆಂದನಾ ಭೀಷ್ಮ ೨೩&lt;br /&gt;&lt;br /&gt;ಸಾಕದಂತಿರಲಿನ್ನು ಕಾಳಗ&lt;br /&gt;ನೂಕಲರಿಯದು ಪಾರ್ಥ ಕೊಲುವಡೆ&lt;br /&gt;ಬೇಕು ಬೇಡೆಂಬುವರ ಕಾಣೆನು ಹಲವು ಮಾತೇನು&lt;br /&gt;ಆ ಕುಮಾರರ ಕರೆಸಿ ಸಂಧಿಯ&lt;br /&gt;ನಾಕೆವಾಳರ ಮುಂದೆ ಮಾಡಲು&lt;br /&gt;ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳೆಂದ ೨೪&lt;br /&gt;&lt;br /&gt;ಕಂಡುದಳವಿ ವಿರೋಧಿಗೆಮಗೆಯು&lt;br /&gt;ಕೊಂಡುದೇ ಬಲುಗೈದು ಮನ ಮುಂ&lt;br /&gt;ಕೊಂಡು ಹೊಕ್ಕುದು ಕಳನದಲ್ಲದೆ ಪಾಂಡು ಸುತರೊಡನೆ&lt;br /&gt;ಉಂಡು ಮೇಣುಟ್ಟೊಲಿದು ಬದುಕುವ&lt;br /&gt;ಭಂಡತನವೆನಗಿಲ್ಲ ವೈರವ&lt;br /&gt;ಕೊಂಡೆಸಗಬೇಕೆಂದು ಬಿನ್ನವಿಸಿದನು ಕುರುರಾಯ ೨೫&lt;br /&gt;&lt;br /&gt;ಮೇಲೆ ನೆಗಳುವ ಹದನನಿಲ್ಲಿಂ&lt;br /&gt;ಮೇಲೆ ನೀನೇ ಬಲ್ಲೆಯೆನುತ ವಿ&lt;br /&gt;ಶಾಲಮತಿ ಬಿಸುಸುಯ್ದು ಕೌರವ ಕೆಟ್ಟನಕಟೆನುತ&lt;br /&gt;ಕಾಳಗವ ನಾವಾನುವೆವು ಪಶು&lt;br /&gt;ಜಾಲ ಸಹಿತಿಭುಪುರಿಗೆ ನೀ ಕಿರಿ&lt;br /&gt;ದಾಳೊಡನೆ ನಡೆಯೆಂದು ಸೇನೆಯನೆರಡ ಮಾಡಿಸಿದ ೨೬&lt;br /&gt;&lt;br /&gt;ಕೌರವೇಂದ್ರನ ಕೂಡೆ ಸೇನಾ&lt;br /&gt;ಭಾರವನು ಪರುಠವಿಸಿ ಕಳುಹಿದ&lt;br /&gt;ನಾರುಭಟೆಯಲಿ ಭೀಷ್ಮ ನಿಂದನು ಥಟ್ಟ ಮೇಳೈಸಿ&lt;br /&gt;ವೀರ ಕರ್ಣ ದ್ರೋಣ ಗೌತಮ&lt;br /&gt;ಭೂರಿಬಲ ಗುರುಸೂನು ಶಕುನಿ ಮ&lt;br /&gt;ಹಾರಥಾದಿಯ ಕೂಡಿಕೊಂಡನು ನರನ ಸಂಗರಕೆ ೨೭&lt;br /&gt;&lt;br /&gt;ಇತ್ತಲಖಿಲ ಮಹಾರಥಾದಿಯ&lt;br /&gt;ನೊತ್ತಲಿಕ್ಕಿ ಸುಯೋಧನನು ಪುರ&lt;br /&gt;ದತ್ತ ಗೋಕುಲ ಸಹಿತ ಹಾಯ್ದನು ಪೂತು ಮಝರೆನುತ&lt;br /&gt;ಮುತ್ತಯನು ಮಾಡಿದ ನಿಯೋಗದ&lt;br /&gt;ತತ್ತವಣೆ ಲೇಸಾಯ್ತು ಬೇಗದೊ&lt;br /&gt;ಳುತ್ತರನೆ ಕೊಳ್ಳೆಡದ ವಾಘೆಯನೆಂದನಾ ಪಾರ್ಥ ೨೮&lt;br /&gt;&lt;br /&gt;ತುರುಗಳನು ಮರಳಿಚುವದಿದು ನಮ&lt;br /&gt;ಗುರುವ ಕಾರ್ಯವು ಮಿಕ್ಕ ಕೆಲಸದ&lt;br /&gt;ಹೊರಿಗೆಯನು ನಿರ್ಣೈಸಿ ಬಳಿಕಿನಲಿವರ ಸಾಹಸವ&lt;br /&gt;ಅರಿದು ಕೊಂಬೆನು ಕೊಳ್ಳು ವಾಘೆಯ&lt;br /&gt;ನಿರಿತದೆಡೆಯಲಿ ಭೀತಿಗೊಳ್ಳದೆ&lt;br /&gt;ತರಿದು ತಿರುಗುವ ಲಾಗುವೇಗವ ನೋಡು ನೀನೆಂದ ೨೯&lt;br /&gt;&lt;br /&gt;ಎನಲು ಚಪ್ಪರಿಸಿದನು ತೇಜಿಗ&lt;br /&gt;ಳನಿಲ ಜವದಲಿ ನಿಗುರಿದವು ಮುಂ&lt;br /&gt;ಮೊನೆಯವರ ಮನ್ನಿಸದೆ ಬೆಂಬತ್ತಿದನು ಕೌರವನ&lt;br /&gt;ಜನಪ ಬಿಡು ಬಿಡು ತುರುಗಳನು ಫಲು&lt;br /&gt;ಗುಣ ಕಣಾ ಬಂದವನು ಕುರುಕುಲ&lt;br /&gt;ವನ ದವಾನಳನರಿಯೆನುತಲುತ್ತರನು ಬೊಬ್ಬಿರಿದ ೩೦&lt;br /&gt;&lt;br /&gt;ಎಲೆಲೆ ನರ ಜಾರಿದನು ರಾಯನ&lt;br /&gt;ಬಳಿಯ ಹತ್ತಿದನಡ್ಡ ಹಾಯ್ದತಿ&lt;br /&gt;ಬಲನ ತೆಗೆ ನಮ್ಮತ್ತಲೆನುತಾ ದ್ರೋಣ ಗೌತಮರು&lt;br /&gt;ಹಿಳುಕ ಕೆನ್ನೆಗೆ ಸೇದಿ ಬೊಬ್ಬೆಯ&lt;br /&gt;ಕಳಕಳದಿಯಡಗಟ್ಟಿದರು ನಿ&lt;br /&gt;ಲ್ಲೆಲವೊ ಫಲುಗುಣ ಕಾದಿ ನೀನೊಟ್ಟೈಸಿ ಹೋಗೆನುತ ೩೧&lt;br /&gt;&lt;br /&gt;ನಗುತ ಫಲುಗುಣನೆರಡೆರಡು ಕೋ&lt;br /&gt;ಲುಗಳನವರವರಂಘ್ರಿಗೆಚ್ಚನು&lt;br /&gt;ತೆಗೆದು ಹಾಯ್ದನು ಮುಂದೆ ಕೌರವ ರಾಯ ಮೋಹರಕೆ&lt;br /&gt;ಹೊಗರೊಗುವ ಹೊಸ ಕಣೆಯ ದಡ್ಡಿಯ&lt;br /&gt;ಬಿಗಿದನೆಡಬಲನಿದಿರಿನಲಿ ಸೆಗ&lt;br /&gt;ಳಿಗೆಯ ಸಸಿಯಂತಾಯ್ತು ಕೌರವ ಸೇನೆ ನಿಮಿಷದಲಿ ೩೨&lt;br /&gt;&lt;br /&gt;ಬಿರಿದವಾನೆಗಳರ್ಜುನನ ಬಿಲು&lt;br /&gt;ದಿರುವಿನಬ್ಬರಕತಿರಥರ ಬಾ&lt;br /&gt;ಯ್ದೊರಳೆ ಹಾಯ್ದವು ವೀರ ಹನುಮನ ಗಾಡ ಗರ್ಜನೆಗೆ&lt;br /&gt;ಶಿರವೊಡೆದು ಸಿಡಿಯಿತು ಕಿರೀಟಿಯ&lt;br /&gt;ಪರಮ ಶಂಖಧ್ವನಿಗೆ ಕುರುಬಲ&lt;br /&gt;ಹೊರಳಿಯೊಡೆದುದು ಹಾರಿ ಬಿದ್ದುದು ಹೆದರಿ ಹಮ್ಮೈಸಿ ೩೩&lt;br /&gt;&lt;br /&gt;ಎಲೆಲೆ ನರನೋ ಸುಭಟ ಜೀವನ&lt;br /&gt;ದಳವುಳಿಗನೋ ದಿಟ್ಟ ರಾಯರ&lt;br /&gt;ದಳದ ದಾವಾನಲನೊ ಪಾರ್ಥನೊ ಕಾಲಭೈರವನೊ&lt;br /&gt;ಗೆಲುವರಾವೆಡೆ ಕರ್ಣ ಕೃಪ ಸೌ&lt;br /&gt;ಬಲ ಜಯದ್ರಥರೆಂಬವರ ಹೆಡ&lt;br /&gt;ತಲೆಗೆ ನಾಲಗೆ ಹೋಯಿತೆಂದುದು ಕೂಡೆ ಕುರುಸೇನೆ ೩೪&lt;br /&gt;&lt;br /&gt;ಮರಳಿ ಹೊಡೆ ಹಿಂಡಾಕಳನು ಗೋ&lt;br /&gt;ವರನು ಬಿಡು ಹೆಡಗೈಯ ಕೊಯ್ ನ&lt;br /&gt;ಮ್ಮರಸ ನಯದಪ್ಪಿದನು ತುರು ಸೆರೆವಿಡಿವರೇ ನೃಪರು&lt;br /&gt;ಕೊರಳ ಕಡಿತಕೆ ಹೊತ್ತ ಹಗೆವನ&lt;br /&gt;ಸರಳಿಗಸುಗಳ ತೆರೆದಿರೆಂದ&lt;br /&gt;ಬ್ಬರಿಸಿ ಕುರುಬಲ ಬಾಯಬಿಟ್ಟದು ರಾಯರಿದಿರಿನಲಿ ೩೫&lt;br /&gt;&lt;br /&gt;ಬೊಬ್ಬಿರಿದು ನರನೆಸಲು ಕಣೆಗಳು&lt;br /&gt;ಹಬ್ಬಿದವು ಹುರಿಗೊಂಡು ಹೂಣಿಗ&lt;br /&gt;ರೊಬ್ಬುಳಿಯ ಹರೆಗಡಿದು ಕರಿಗಳ ಹೊದರ ಮೆದೆಗೆಡಹಿ&lt;br /&gt;ತೆಬ್ಬನೊದೆದುರೆ ಬಳಿಕ ಗರಿ ಮೊರೆ&lt;br /&gt;ದಬ್ಬರಿಸಿ ಕಬ್ಬಕ್ಕಿ ಗಗನವ&lt;br /&gt;ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ ೩೬&lt;br /&gt;&lt;br /&gt;ತುಡುಕಿ ಖಂಡವ ಕಚ್ಚಿ ಹಾರುವ&lt;br /&gt;ಗಿಡಗನಂತಿರೆ ಭಟರ ಗಂಟಲ&lt;br /&gt;ಕಡಿದು ಹಾಯ್ದಂಬುಗಳು ಬಳಿಯಲಿ ಕೊಂದ ತಲೆಗಳಲಿ&lt;br /&gt;ಅಡಸಿದವು ನಿರಿನಿಟಿಲುಗರೆದೆಲು&lt;br /&gt;ವೊಡೆಯೆ ಥಟ್ಟುಗಿದಾನೆಗಳ ನಡೆ&lt;br /&gt;ಗೆಡಹಿದವು ಗರಿ ಸಹಿತ ಹಾಯ್ದವು ಹಯದ ಹೊಟ್ಟೆಯಲಿ ೩೭&lt;br /&gt;&lt;br /&gt;ಕರುಳ ಬಾಯಲಿ ಕಾರಿ ಕಾಲಾ&lt;br /&gt;ಳೊರಳಿ ಕೆಡೆದುದು ಬೋಳೆಯಂಬುಗ&lt;br /&gt;ಳರಿಯೆ ಸಮ ಸೀಳಾಗಿ ಬಿದ್ದುವು ಗಜದ ಹೋಳುಗಳು&lt;br /&gt;ಕೊರಳು ಹರಿದೊರೆವೆದ್ದ ರಕುತದ&lt;br /&gt;ಹೊರಳಿಗಳ ಹೊನಲಿನಲಿ ಮುಳುಗಿತು&lt;br /&gt;ತುರುಗ ರಥದಳರಾಜಿ ಹೊಸ ಕುಮ್ಮರಿಯ ಹೋಲಿಸಿತು ೩೮&lt;br /&gt;&lt;br /&gt;ಹರಿಗೆ ಖಂಡಿಸಿ ಜೋಡು ಸೀಸಕ&lt;br /&gt;ಜರಿದು ಬಲುದೋಳುಡಿದು ಗೋಣರೆ&lt;br /&gt;ಹರಿದು ನಿಟ್ಟೆಲು ಮುರಿದು ತೊಡೆಯರೆಗಡಿದು ತಲೆಯೊಡೆದು&lt;br /&gt;ನರ ಹರಿದು ಕರುಳೊಕ್ಕು ನೆಣನು&lt;br /&gt;ಬ್ಬರಿಸಿ ಕಾಳಿಜ ಹಾಯ್ದು ನೆತ್ತರು&lt;br /&gt;ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ ೩೯&lt;br /&gt;&lt;br /&gt;ಮುಂದೆ ಕವಿವಂಬುಗಳು ಸುಭಟರ&lt;br /&gt;ಕೊಂದು ಬಿದ್ದವು ಮತ್ತೆ ಬಳಿಯಲಿ&lt;br /&gt;ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ&lt;br /&gt;ಒಂದು ಗುರಿಗೆರಡಂಬ ತೊಡಬೇ&lt;br /&gt;ಡೆಂದು ಪಾರ್ಥನ ಬೇಡಿಕೊಂಡವು&lt;br /&gt;ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ ೪೦&lt;br /&gt;&lt;br /&gt;ಹಿಕ್ಕಿದವು ಹಯಬಲದ ಸುಭಟರ&lt;br /&gt;ನೊಕ್ಕಿ ತೂರಿದವಾನೆಗಳ ಸಾ&lt;br /&gt;ಲಿಕ್ಕಿ ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ&lt;br /&gt;ಮುಕ್ಕಿದವು ಮಲೆತವರ ಮಾಂಸವ&lt;br /&gt;ನಿಕ್ಕಿದವು ದ್ವಿಜಗಣಕೆ ಛತ್ರವ&lt;br /&gt;ನಿಕ್ಕಿದವು ದಿಗುವಳೆಯದಲಿ ರಣಧೀರನಂಬುಗಳು ೪೧&lt;br /&gt;&lt;br /&gt;ಒಗ್ಗೊಡೆಯದೌಕಿದ ಮಹೀಶರು&lt;br /&gt;ಮುಗ್ಗಿದರು ಮುನ್ನಾಳ ಮೇಳದ&lt;br /&gt;ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ&lt;br /&gt;ನುಗ್ಗುನುಸಿಯಾಯ್ತಿರಥರು ಗಜ&lt;br /&gt;ಮೊಗ್ಗರದ ಮೊನೆ ಮುರಿದು ಕಾಲನ&lt;br /&gt;ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು ೪೨&lt;br /&gt;&lt;br /&gt;ಕಾಲದಲಿ ಪರಿಪಕ್ವವಾದ ವಿ&lt;br /&gt;ಶಾಲಿತ ಸ್ಥಾವರದ ಜಂಗಮ&lt;br /&gt;ಜಾಲವನು ಕಾಲಾಗ್ನಿ ಕವಿಕವಿದಟ್ಟಿ ಸುಡುವಂತೆ&lt;br /&gt;ಮೇಲು ಮೇಲೊಡಗವಿವ ಬಾಣ&lt;br /&gt;ಜ್ವಾಲೆಯಲಿ ಕುರುಸೈನ್ಯ ಕಾನನ&lt;br /&gt;ಮಾಲೆಯನು ಕಲಿಪಾರ್ಥ ಪಾವಕನುರುಹಿದನು ಮುಳಿದು ೪೩&lt;br /&gt;&lt;br /&gt;ಯಾವ ಬಿಲ್ಲಾಳಾವ ಲಾಘವ&lt;br /&gt;ದಾವ ಗಾಡಿಕೆ ಯಾವ ಚಳಕವ&lt;br /&gt;ದಾವ ಶರ ಸಂಧಾನವಾವ ವಿಹಾರವಾವ ಪರಿ&lt;br /&gt;ರಾವಣನೊಳಿಂದ್ರಾರಿ ರಾಘವ&lt;br /&gt;ದೇವ ಲಕ್ಷ್ಮಣರಲ್ಲಿ ಕಾಣೆನಿ&lt;br /&gt;ದಾವ ಧನು ಶರವಿದ್ಯೆ ಮಝ ಭಾಪೆಂದನಾ ಹನುಮ ೪೪&lt;br /&gt;&lt;br /&gt;ಕಾಣಬಾರದು ಬಿಡುವ ಹೂಡುವ&lt;br /&gt;ಕೇಣವನು ಪರಮಾಣು ಪುಂಜವ&lt;br /&gt;ಕಾಣವೇ ಕಣ್ಣುಗಳು ನಮ್ಮವು ಮರ್ತ್ಯರಾಲಿಗಳೆ&lt;br /&gt;ಜಾಣಪಣವಿದು ಶಿವ ಸುದರ್ಶನ  &lt;br /&gt;ಪಾಣಿಗಳಿಗಹುದಮರಪತಿ ಪದ&lt;br /&gt;ದಾಣೆ ಹುಸಿಯಲ್ಲೆನುತ ಬೆರಗಾಯ್ತು ಸುರ ಕಟಕ ೪೫&lt;br /&gt;&lt;br /&gt;ಏರುವಡೆದರು ಕೆಲರು ಕೆಲರಸು&lt;br /&gt;ಸೂರೆಯೋದದು ಮತ್ತೆ ಕೆಲರೆದೆ&lt;br /&gt;ಡೋರುಗಳ ಪೂರಾಯ ಗಾಯದಲುಸುರ ತೆಗೆಬಗೆಯ&lt;br /&gt;ಕಾರಿದರು ರಕ್ತವನು ಸಗ್ಗಕೆ&lt;br /&gt;ಗೂರು ಮಾರಾಡಿದರು ತಲೆಗಳ&lt;br /&gt;ಹೇರಿದರು ಹರಣವನುವೊಟ್ಟಿಗೆ ಕಾಲನರಮನೆಗೆ ೪೬&lt;br /&gt;&lt;br /&gt;ಚೆಲ್ಲಿ ಹೋಯಿತು ಕೆಲಕೆ ಕೆಲಬರು&lt;br /&gt;ಬಿಲ್ಲ ಬಿರುಕೋಲುಗಳ ಬಿಸುಟರು&lt;br /&gt;ಗಲ್ಲೆಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ&lt;br /&gt;ಮೆಲ್ಲ ಮೆಲ್ಲನೆ ಸರಿವ ಕೌರವ&lt;br /&gt;ಮಲ್ಲನನು ಕಂಡಟ್ಟಿದನು ತುರು&lt;br /&gt;ಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ ೪೭&lt;br /&gt;&lt;br /&gt;ಕಾಯಲಾಪರೆ ಕರೆಯಿರಾ ಕ&lt;br /&gt;ರ್ಣಾಯತಾಸ್ತ್ರರನಕಟ ಕೌರವ&lt;br /&gt;ರಾಯ ಸಿಲುಕಿದನೆಲ್ಲಿ ಭೀಷ್ಮ ದ್ರೋಣ ಕೃಪರೆನುತ&lt;br /&gt;ಬಾಯ ಬಿಡೆ ಕುರುಸೇನೆ ಗುರು ಗಾಂ&lt;br /&gt;ಗೇಯ ಶಕುನಿ ವಿಕರ್ಣ ಕೃಪ ರಾ&lt;br /&gt;ಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು ೪೮&lt;br /&gt;&lt;br /&gt;ಇತ್ತ ತುರುಗಳ ಬಿಸುಟು ರಾಯನ&lt;br /&gt;ತೆತ್ತಿಗರು ತಲ್ಲಣಿಸಿ ಹಾಯ್ದರು&lt;br /&gt;ಹೊತ್ತಿದವು ಮುಸುಡುಗಳು ಸಂಗರ ವಿಜಯಗರ್ವಿತರ&lt;br /&gt;ಸುತ್ತ ಗೋವರ ಸನ್ನೆಯಲಿ ಪುರ&lt;br /&gt;ದತ್ತ ಮುಂದಾದವು ಪಶುವ್ರಜ&lt;br /&gt;ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ ೪೯&lt;br /&gt;&lt;br /&gt;ಬಿಗಿದ ಕೆಚ್ಚಲ ತೊರೆದೊಗುವ ಹಾ&lt;br /&gt;ಲುಗಳ ಮಿಗೆ ಸೂಳೆದ್ದ ಬಾಲವ&lt;br /&gt;ಮೊಗ ನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ&lt;br /&gt;ಅಗಿದು ಸರಳಿಸಿ ನಿಲುವ ಹೊಸಬರ&lt;br /&gt;ಸೊಗಡಿಗವ್ವಳಿಸುತ್ತ ಗೋವರು&lt;br /&gt;ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ ೫೦&lt;br /&gt;&lt;br /&gt;ಕೆಲವು ಕಡೆಗಂದಿಗಳು ಬಾಲದ&lt;br /&gt;ಬಳಿಗೆ ಮೂಗಿಟ್ಟಡಿಗಡಿಗೆ ಮನ&lt;br /&gt;ನಲಿದು ಮೋರೆಯನೆತ್ತಿ ಸುಕ್ಕಿಸಿ ಮತ್ತೆ ಹರಿ  ಹರಿದು&lt;br /&gt;ಮಲೆತು ಕಾಲಲಿ ನೆಲನ ಕೆರೆದ&lt;br /&gt;ವ್ವಳಿಸಿ ಮತ್ತೊಂದಿದಿರುವರೆ ಬಲು&lt;br /&gt;ಸಲಗನೀಡಿರಿದಾಡುತಿರ್ದದು ಹಿಂಡು ಹಿಂಡಿನಲಿ ೫೧&lt;br /&gt;&lt;br /&gt;ತಿರುಗಿ ಕೆಂದೂಳಿಡುತ ತುರುಗಳು&lt;br /&gt;ಪುರಕೆ ಹಾಯ್ದವು ನಲವು ಮಿಗಲು&lt;br /&gt;ತ್ತರ ಕಿರೀಟಿಗಳಾಂತುಕೊಂಡರು ಮತ್ತೆ ಕಾಳಗವ&lt;br /&gt;ಅರಸು ಮೋಹರ ಮುರಿದು ಹರಿಬವ&lt;br /&gt;ಮರಳಿಚುವ ಮಿಡುಕುಳ್ಳ ವೀರರ&lt;br /&gt;ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ ೫೨&lt;br /&gt;&lt;br /&gt;(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/742145181089395829-8059480547539599188?l=gaduginabharata.blogspot.com' alt='' /&gt;&lt;/div&gt;</content><link rel='replies' type='application/atom+xml' href='http://gaduginabharata.blogspot.com/feeds/8059480547539599188/comments/default' title='Post Comments'/><link rel='replies' type='text/html' href='http://www.blogger.com/comment.g?blogID=742145181089395829&amp;postID=8059480547539599188&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/742145181089395829/posts/default/8059480547539599188'/><link rel='self' type='application/atom+xml' href='http://www.blogger.com/feeds/742145181089395829/posts/default/8059480547539599188'/><link rel='alternate' type='text/html' href='http://gaduginabharata.blogspot.com/2010/04/blog-post_28.html' title='ವಿರಾಟಪರ್ವ: ೦೭. ಏಳನೆಯ ಸಂಧಿ'/><author><name>gadugina bharata</name><uri>http://www.blogger.com/profile/02375893271038104314</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://1.bp.blogspot.com/__VqReZYy-5c/S23MMSkcXfI/AAAAAAAAAAg/lHVUuyYtOiM/S220/kumaravyasa.jpg'/></author><thr:total>0</thr:total></entry><entry><id>tag:blogger.com,1999:blog-742145181089395829.post-3846527310648162199</id><published>2010-04-28T00:01:00.000+05:30</published><updated>2010-04-28T00:02:59.771+05:30</updated><category scheme='http://www.blogger.com/atom/ns#' term='೦೭. ದ್ರೋಣಪರ್ವ'/><title type='text'>ದ್ರೋಣಪರ್ವ: ೦೪. ನಾಲ್ಕನೆಯ ಸಂಧಿ</title><content type='html'>ಸೂ: ರಾಯ ಕಟಕಾಚಾರ್ಯನಾ ಚಾ&lt;br /&gt;ಪಾಯುಧಾಗ್ರಣಿ ಮೋಹಿದನು ಪ&lt;br /&gt;ದ್ಮಾಯುತ ವ್ಯೂಹವನು ಸೈನ್ಯದ ಜಾಣನಾ ದ್ರೋಣ&lt;br /&gt;&lt;br /&gt;ನೀನು ನೆರಹಿದ ಸುಕೃತ ಫಲವದ&lt;br /&gt;ನೇನ ಹೇಳುವೆನಿತ್ತಲುಗ್ಗಡ&lt;br /&gt;ದಾನೆ ಬಿದ್ದುದು ಕಾದಿ ನಸು ಸೊಪ್ಪಾದುದರಿಸೇನೆ&lt;br /&gt;ಧ್ಯಾನವಿತ್ತಲು ರಾಗವತ್ತಲು&lt;br /&gt;ಮೋನವಿತ್ತಲು ರಭಸವತ್ತಲು(ಪಾ: ವಿತ್ತಲು) &lt;br /&gt;ಹಾನಿಯಿತ್ತಲು ವೃದ್ಧಿಯತ್ತಲು ಭೂಪ ಕೇಳೆಂದ ೧&lt;br /&gt;&lt;br /&gt;ಎತ್ತಲೊಲೆವುದು ಧರ್ಮಬಲ ತಾ&lt;br /&gt;ನತ್ತಲೊಲೆವುದು ದೈವ ದೈವವ&lt;br /&gt;ದೆತ್ತಲೊಲೆದಿಹುದತ್ತ ವಿಜಯಶ್ರೀಯ ಕುಡಿನೋಟ&lt;br /&gt;ಹೆತ್ತ ನಿನ್ನೊಡಲಿಂಗೆ ತಂಪಿನ&lt;br /&gt;ತೆತ್ತಿಗನೊ ಮೇಣ್ ಬಹಳ ತಾಪದ&lt;br /&gt;ಮುತ್ತಯನೊ ಕುರುರಾಯನೆಲೆ ಧೃತರಾಷ್ಟ್ರ ಕೇಳೆಂದ ೨&lt;br /&gt;&lt;br /&gt;ಸಾಕು ಸಂಜಯ ನುಡಿಯ ಖಡ್ಗದ&lt;br /&gt;ಲೇಕೆ ಗಂಟಲ ಕೊಯ್ವೆ ತಾನವಿ&lt;br /&gt;ವೇಕದಲುಪಾರ್ಜಿಸಿದ ದುಷ್ಕೃತ ಫಲವೆ ತನಗಾಯ್ತು&lt;br /&gt;ಸಾಕದಂತಿರಲಿನ್ನದೇಹರಿ&lt;br /&gt;ಶೋಕಿಸುವೆನಿಲ್ಲಿಂದ ಮೇಲು&lt;br /&gt;ದ್ರೇಕಿ ಕೌರವನೇನ ನೆಗಳಿದ ಹದನ ಹೇಳೆಂದ ೩&lt;br /&gt;&lt;br /&gt;ಚಿತ್ತವಿಸು ಧೃತರಾಷ್ಟ್ರ ಕೌರವ&lt;br /&gt;ನಿತ್ತನಿರುಳೋಲಗವ ಮಂಜಿನ&lt;br /&gt;ಮುತ್ತಿಗೆಯ ನಭದಂತೆ ಹೊಗೆದುದು ರಾಯನಾಸ್ಥಾನ&lt;br /&gt;ನೆತ್ತಿ ಮುಸುಕಿನ ಕೈಯ ಗಲ್ಲದ&lt;br /&gt;ಕುತ್ತದಲೆ ನೆಟ್ಟಾಲಿಗಳ ಚಲ&lt;br /&gt;ಚಿತ್ತರಿದ್ದುದು ಸಕಲ ನಾಯಕವಾಡಿ ದುಗುಡದಲಿ ೪&lt;br /&gt;&lt;br /&gt;ದುಗುಡವೇಕೈ ನಿಮಗೆ ಕರ್ಣಾ&lt;br /&gt;ದಿಗಳು ನೀವಕ್ಕುಡರೆ ಬಲುಗಾ&lt;br /&gt;ಳೆಗದೊಳಗೆ ಕೈಮಾಡಿ ನೊಂದಿರಿ ಕೊಂದಿರರಿಭಟರ&lt;br /&gt;ಹಗೆಯ ಕಟ್ಟಲು ಕೊಟ್ಟ ಭಾಷೆಯ&lt;br /&gt;ಬಿಗುಹು ಬೀತುದು ಗುರುಗಳಲಿ ನಂ&lt;br /&gt;ಬುಗೆ ನಿರರ್ಥಕವಾಯ್ತೆನುತ ಕುರುರಾಯ ಬಿಸುಸುಯ್ದ ೫&lt;br /&gt;&lt;br /&gt;ದ್ರೋಣ ಮನಗೊಂಡಿರಿವಡಂಬುಜ&lt;br /&gt;ಪಾಣಿಯಿದಿರೇ ನಮ್ಮ ಭಾಗ್ಯದ&lt;br /&gt;ಬಾಣಸಿಗ ವಿಧಿ ವಿಷವ ಬೆರೆಸಿದಡಾರು ಕಾವವರು&lt;br /&gt;ಹೂಣಿ ಹೊಕ್ಕನು ಹಿಡಿದು ವೈರಿ&lt;br /&gt;ಕ್ಷೋಣಿಪನ ತರುಬಿದನು ನಾವ&lt;br /&gt;ಕ್ಷೀಣದುರಿತರು ಹಲುಬಿ ಮಾಡುವುದಾವುದುಂಟೆಂದ ೬&lt;br /&gt;&lt;br /&gt;ಬಲದೊಳಗೆ ಹೆಸರುಳ್ಳವರು ಮು&lt;br /&gt;ಮ್ಮುಳಿತವಾಯಿತ್ತಾನೆ ಕುದುರೆಗ&lt;br /&gt;ಳಳಿದುದಕೆ ಕಡೆಯಿಲ್ಲ ಪವನಜ ಪಾರ್ಥರುಬ್ಬಟೆಯ&lt;br /&gt;ನಿಲಿಸುವಾಪತ್ತಿಗರು ನಮಗಿ&lt;br /&gt;ಲ್ಲಳಲಿ ಮಾಡುವುದೇನೆನುತ ನೃಪ&lt;br /&gt;ತಿಲಕ ಬೇಸರ ನುಡಿಯೆ ಬಳಿಕಿಂತೆಂದನಾ ದ್ರೋಣ ೭&lt;br /&gt;&lt;br /&gt;ಪರಮ ಗರುಡೋದ್ಗಾರ ಮಣಿಯನು&lt;br /&gt;ಗರಳ ಸುಡುವುದೆ ಕೃಷ್ಣರಾಯನ &lt;br /&gt;ಕರುಣ ಕವಚವನೊಡೆಯಲಾಪವೆ ಎಮ್ಮ ಕೈದುಗಳು&lt;br /&gt;ಅರಸ ಮರುಳೈ ಧರ್ಮಪುತ್ರನ&lt;br /&gt;ಬೆರಸಿ ತುಡುಕಲು ತಡೆದನರಿಯಾ&lt;br /&gt;ಮುರಹರನ ಮೈದುನನು ಬಳಿಕೆಮ್ಮಳವೆ ಹೇಳೆಂದ ೮&lt;br /&gt;&lt;br /&gt;ನಾಳೆ ಫಲುಘುಣ ತಪ್ಪಿದರೆ ಭೂ&lt;br /&gt;ಪಾಲಕನ ಕಟ್ಟುವೆನು ರಣದಲಿ &lt;br /&gt;ಶೂಲಿಯಡ್ಡೈಸಿದರೆ ಹಿಡಿವೆನು ಚಿಂತೆ ಬೇಡಿದಕೆ&lt;br /&gt;ಕೇಳು ಪದ್ಮವೂಹದಲಿ ಹೊ&lt;br /&gt;ಕ್ಕಾಳು ಮರಳಿದಡಸ್ತ್ರ ವಿದ್ಯಾ&lt;br /&gt;ಭಾಳಲೋಚನನೆಂಬ ಬಿರುದನು ಬಿಟ್ಟೆ ನಾನೆಂದ ೯&lt;br /&gt;&lt;br /&gt;ಒಳ್ಳಿತಿದು ಕಡುಭಾಷೆ ನಾಳಿನ&lt;br /&gt;ಗೆಲ್ಲವೇ ಗೆಲವರ್ಜುನನು ಹೊ&lt;br /&gt;ಕ್ಕಲ್ಲಿ ಹೊಗುವೆವು ತರುಬಿ ಕಾದುವೆವೆಮ್ಮೆ ಕಳನೊಳಗೆ&lt;br /&gt;ಅಲ್ಲಿ ನೀನೊಲಿದಂತೆ ಮಾಡಿ&lt;br /&gt;ನ್ನೆಲ್ಲವೇತಕೆಯೆನುತ ಸಾಹಸ&lt;br /&gt;ಮಲ್ಲೆರೆದ್ದರು ವೀರ ಸಮಸಪ್ತಕರು ಗರ್ಜಿಸುತ ೧೦&lt;br /&gt;&lt;br /&gt;ಪೂತು ಪಾಯಿಕು ತತ್ತ ಹೊತ್ತಿನೊ&lt;br /&gt;ಳಾತುಕೊಂಬವರಾರು ಪಾರ್ಥಿವ&lt;br /&gt;ಜಾತಿಯಲಿ ರಣದಿಟ್ಟರುಂಟೇ ನಿಮ್ಮ ಹೋಲಿಸಲು &lt;br /&gt;ಸೋತುದರಿಬಲ ಹೋಗೆನುತ ಮು&lt;br /&gt;ಯ್ಯಾಂತು ಮನ್ನಿಸಿ ಹೊನ್ನ ಬಟ್ಟಲೊ&lt;br /&gt;ಳಾತಗಳಿಗೊಲಿದಿತ್ತನೈ ಕರ್ಪುರದ ವೀಳೆಯವ ೧೧&lt;br /&gt;&lt;br /&gt;ಹರೆದುದೋಲಗವಿತ್ತ ಭುವನದೊ&lt;br /&gt;ಳಿರುಳಡವಿಗಡಿತಕ್ಕೆ ಹರಿದವು&lt;br /&gt;ಕಿರಣ ತೆತ್ತಿದವಭ್ರದಲಿ ತಾರಕೆಯ ತೇರುಗಳು&lt;br /&gt;ಹರಿವ ಮಂಜಿನ ನದಿಯ ಹೂಳ್ದವು&lt;br /&gt;ಸರಸವಾಯಿತು ಗಗನತಳ ತಾ&lt;br /&gt;ವರೆಯ ಸಖ ನಿಜರಥವ ನೂಕಿದನುದಯ ಪರ್ವತಕೆ ೧೨&lt;br /&gt;&lt;br /&gt;ಕೆದರಿದವು ನಿಸ್ಸಾಳ ಬರ ಸಿಡಿ&lt;br /&gt;ಲದುಭುತ ಧ್ವನಿಯಲಿ ನಿರಂತರ&lt;br /&gt;ವೊದರಿ ಬಯ್ದವು ಕಹಳೆ ಬಿರುದಾವಳಿಯಲತಿರಥರ&lt;br /&gt;ಕದುಬಿದವು ತಂಬಟದ ದನಿ ದಿಗು&lt;br /&gt;ಸದನವನು ಬಲು ಬೊಬ್ಬೆಯಲಿ ನೆಲ&lt;br /&gt;ನದಿರೆ ನಡೆದುದು ಸೇನೆ ಕಲಶೋದ್ಭವನ ನೇಮದಲಿ ೧೩&lt;br /&gt;&lt;br /&gt;ಉಲಿದು ಸಮಸಪ್ತಕರು ತಮ್ಮಯ&lt;br /&gt;ಕಳನ ಗೆಲಿದರು ಚಾತುರಂಗದ&lt;br /&gt;ದಳದ ತೆರಳಿಕೆ ತೆಕ್ಕೆಮಿಗೆ ಕುರುಸೇನೆ ನಡೆತಂದು&lt;br /&gt;ಕಳನ ವೆಂಠಣಿಸಿದವು ರಾಯನ&lt;br /&gt;ಕೆಲಬಲದ ಸುಯಿಧಾನದಲಿ ರಿಪು&lt;br /&gt;ವಳಯ ಧೂಳೀಪಟನು ಹೊಕ್ಕನು ರಣವನಾ ದ್ರೋಣ ೧೪&lt;br /&gt;&lt;br /&gt;ನೆರೆದ ನಿಜ ಸೇನಾಧಿಪರ ಸಂ&lt;br /&gt;ವರಣೆಗಳ ನೋಡಿದನು ನೀಡಿದ&lt;br /&gt;ನರಿಬಿರುದ ಮಂಡಳಿಕರಿಗೆ ಕಾಳೆಗದ ವೀಳೆಯವ&lt;br /&gt;ಹರಿಗೆ ಹಲಗೆ ಕೃಪಾಣು ತೋಮರ&lt;br /&gt;ಪರುಶು ಕಕ್ಕಡೆ ಕೊಂತ ಮುದ್ಗರ&lt;br /&gt;ಸುರಗಿಯತಿಬಳ ಪಾಯ್ದಳವ ನಿರಿಸಿದನು ವಳಯದಲಿ ೧೫&lt;br /&gt;&lt;br /&gt;ಎಸೆಳೆಸಳು ಮಿಗೆ ಸರಸದಲಿ ಜೋ&lt;br /&gt;ಡಿಸಿದನವನೀಪಾಲರನು ತ&lt;br /&gt;ದ್ಬಿಸಜ ಕರ್ಣಿಕೆಯೊಡ್ಡಿನಲಿ ಬಲಿದನು ಸುಯೋಧನನ&lt;br /&gt;ಪಸರಿಸಿತು ಕೌರವ ಕುಮಾರ&lt;br /&gt;ಪ್ರಸರ ಕೇಸರವಾಯ್ತು ಮೃತ್ಯುವಿ&lt;br /&gt;ನೊಸಗೆಗೆತ್ತಿದ ಗುಡಿಗಳೆನೆ ತಳಿತವು ಪತಾಕೆಗಳು ೧೬&lt;br /&gt;&lt;br /&gt;ನಿಲಿಸಿದನು ರಾವುತರನಾ ಹೊರ&lt;br /&gt;ವಳಯದಲಿ ರಾವುತರು ಮುರಿದರೆ&lt;br /&gt;ನಿಲುವುದೊಗ್ಗಿನ ದಂತಿಘಟೆ ಗಜಸೇನೆಗಡಹಾಗಿ&lt;br /&gt;ತೊಳಗಿದವು ತೇರುಗಳು ತೇರಿನ&lt;br /&gt;ದಳಕೆ ತಾನೊತ್ತಾಗಿ ರಣದ&lt;br /&gt;ಗ್ಗಳೆಯರಿದ್ದುದು ರಾಯನೊಡೆಹುಟ್ಟಿದರು ಸಂದಣಿಸಿ ೧೭&lt;br /&gt;&lt;br /&gt;ಅರನೆಲೆಯ ಸುಯಿಧಾನ ಬಾಹ್ಲಿಕ&lt;br /&gt;ತರಣಿಸುತ ಗುರುಸೂನು ಕೃತವ&lt;br /&gt;ರ್ಮರಿಗೆ ಕೃಪ ದುಶ್ಶಾಸನಾದ್ಯರಿಗಿದಿರಿನಾರೈಕೆ&lt;br /&gt;ಎರಡು ಕೆಲದಲಿ ಶಲ್ಯ ಶಕುನಿಗ&lt;br /&gt;ಳಿರವು ಸೇನೆಯ ಸುತ್ತುವಳಯವ&lt;br /&gt;ಭರವ ಕೈಕೊಂಡಡ್ಡ ಮೆರೆದನು ಗರಡಿಯಾಚಾರ್ಯ (ಪಾ: ಗರುಡಿಯಾಚಾರ್ಯ) ೧೮&lt;br /&gt;&lt;br /&gt;ಹಿಳುಕ ತಿರುಹುತ ಸಮ್ಮುಖದ ಬಲ&lt;br /&gt;ದಳವಿಯಲಿ ಗಿರಿಯಂತೆ ಸೈಂಧವ&lt;br /&gt;ಬಿಲುದುಡಕೆ ಮೋಹರಿಸಿದನು ಭೂರಿಶ್ರವಾದಿಗಳು&lt;br /&gt;ದಳದ ಕೆಲಬಲದೊಳಗೆ ನೃಪ ಸಂ&lt;br /&gt;ಕುಲವ ನಿಲಿಸಿದನಮಮ ಕಾಲನ&lt;br /&gt;ಬಳಗಕೌತಣವೆನಲು ಪದ್ಮವ್ಯೂಹ ರಂಜಿಸಿತು ೧೯&lt;br /&gt;&lt;br /&gt;ಏನ ಹೇಳುವೆನದನು ನೃಪ ತವ&lt;br /&gt;ಸೂನುವಿನ ಮೋಹರದೊಳಳ್ಳಿರಿ&lt;br /&gt;ವಾನೆಗಳನುಪ್ಪರಿಸಿ ಗಗನವ ಮೊಗೆವ ಕುದುರೆಗಳ&lt;br /&gt;ಆ ನೃಪರ ವಾಜಿಗಳ ಗಿರಿ&lt;br /&gt;ಸಾನು ಸಡಿಲಲು ಜಡಿವ ಭೇರಿ&lt;br /&gt;ಧ್ವಾನವನು ಪಯದಳದ ಸುಭಟರ ಸಿಂಹಗರ್ಜನೆಯ ೨೦&lt;br /&gt;&lt;br /&gt;ಮೇಳವದಲೆನ್ನಾನೆಗಳ ಬರ&lt;br /&gt;ಹೇಳು ಸುಭರೊಳಗ್ಗಳರ ಬರ&lt;br /&gt;ಹೇಳು ಬಿಂಕಕೆ ಮೆರೆವ ಭೀಮಾರ್ಜುನರ ಬರಹೇಳು&lt;br /&gt;ಲೋಲುಪತೆಯವನಿಯಲಿಹರೆ ಬರ&lt;br /&gt;ಹೇಳು ಯಮನಂದನನನಿಂದಿನ&lt;br /&gt;ಕಾಳೆಗಕ್ಕೆಂದಿತ್ತ ಭಟ್ಟರನಟ್ಟಿದನು ದ್ರೋಣ ೨೧&lt;br /&gt;&lt;br /&gt;ತುರಗ ಹಲ್ಲಣಿಸಿದವು ಸಮರ&lt;br /&gt;ದ್ವಿರದ ಸಜ್ಜಂಬಡೆದವೊಗ್ಗಿನ&lt;br /&gt;ತುರಗದಲಿ ಹೂಡಿದವು ರಥ ಕಾಲಾಳು ಮುಂಕೊಳಿಸಿ&lt;br /&gt;ಅರಸನನುಜರು ಸಹಿತ ಕೃಷ್ಣನ&lt;br /&gt;ಬೆರಳ ಸನ್ನೆಯೊಳೈದೆ ಬಿಡೆ ಮೋ&lt;br /&gt;ಹರಿಸಿ ನಿಂದುದು ಮುರಿದ ಮಕರವ್ಯೂಹ ರಚನೆಯಲಿ ೨೨&lt;br /&gt;&lt;br /&gt;ಬಂದು ಸಮಸಪ್ತಕರ ದೂತರು&lt;br /&gt;ನಿಂದರರ್ಜುನನಿದಿರಲೇಳೈ&lt;br /&gt;ನಂದಗೋಪನ ಮಗನ ಬಿಡು ನೆರವಿಂಗೆ ಕರೆ ಹರನ&lt;br /&gt;ಇಂದು ರಣದಲಿ ಬದುಕಿದರೆ ನೀ&lt;br /&gt;ನೆಂದಿಗೆಯು ಬದುಕಿದನೆ ನಿಂದಿರು&lt;br /&gt;ನಿಂದಿರೆಂದವಗಡಿಸಿ ಹಿಡಿದರು ಫಲುಗುಣನ ಸೆರಗ ೨೩&lt;br /&gt;&lt;br /&gt;ಖರೆಯರಹಿರುಂಟುಂಟು ನೆರೆವನೆ &lt;br /&gt;ಕರಸಿಕೊಂಡೇ ಬಹೆನೆನುತ ರಿಪು&lt;br /&gt;ಚರರ ಕಳುಹಲು ದ್ರೋಣನಟ್ಟಿದ ದೂತರೈತಂದು&lt;br /&gt;ಕರೆದರರ್ಜುನನನು ವೃಕೋದರ&lt;br /&gt;ಧರಣಿಪತಿ ಮಾದ್ರೇಯ ಹೈಡಿಂ&lt;br /&gt;ಬರಿಗೆ ನೂಕದು ಪಾರ್ಥ ಪದ್ಮವ್ಯೂಹವಿಂದಿನಲಿ ೨೪&lt;br /&gt;&lt;br /&gt;ಶಿವನ ಬೇಡಿದ ಶರವ ತೆಗೆ ಗಾಂ&lt;br /&gt;ಡಿವವ ಬಿಗಿ ನಿನ್ನಿಷ್ಟದೈವವ&lt;br /&gt;ತವಕದಲಿ ನೀ ಬೇಡಿಕೊಂಬುದು ಪರಮಸದ್ಗತಿಯ&lt;br /&gt;ಅವರಿವರ ಹವಣಲ್ಲ ಗುರು ಮುನಿ&lt;br /&gt;ದವಗಡಿಸಿದರೆ ನಿಲುವನಾವನು&lt;br /&gt;ಬವರಕೇಳೇಳೆಂದು ಜರಿದರು ದೂತರರ್ಜುನನ ೨೫&lt;br /&gt;&lt;br /&gt;ಚರರ ಕಳುಹಿದನಸುರವೈರಿಗೆ&lt;br /&gt;ಕರವ ಮುಗಿದನು ಪಾರ್ಥನೀ ಸಂ&lt;br /&gt;ಗರದೊಳಗೆ ನಿಮ್ಮಡಿಯ ಚಿತ್ತದೊಳಾವ ಥಟ್ಟಿನಲಿ&lt;br /&gt;ಬೆರಸುವೆವು ನಾವಿಂದಿನೀ ಮೋ&lt;br /&gt;ಹರದ ಮುರಿವಸದಳ ನಿಧಾನಿಸ&lt;br /&gt;ಲರಿದೆನಲು ಮನದೊಳಗೆ ನಿಶ್ಚೈಸಿದನು ಮುರವೈರಿ ೨೬&lt;br /&gt;&lt;br /&gt;ಅಳಿಯನೀ ಮೋಹರದೊಳಲ್ಲದೆ&lt;br /&gt;ಫಲುಗುಣನ ಮಗನಿವನು ಬಲುಗೈ&lt;br /&gt;ಯುಳುಹ ಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ&lt;br /&gt;ಫಲುಗುಣನ ನಾವಿತ್ತಲೊಯ್ದರೆ&lt;br /&gt;ಬಳಿಕ ನಿರ್ಣಯವೆಂದು ಮನದಲೆ&lt;br /&gt;ತಿಳಿದು ಪಾರ್ಥಂಗೆಂಡವಸುರಾರಾತಿ ನಸುನಗುತ ೨೭&lt;br /&gt;&lt;br /&gt;ಗುಣಕೆ ಹುರುಡೇ ನಿನ್ನ ಮಗನೀ&lt;br /&gt;ರಣವ ಬಗೆವನೆ ಸೂರ್ಯನಾರೋ&lt;br /&gt;ಗಣಕೆ ಸೊಡರೇ ಸಾಕಿದೇತಕೆ ಬಯಲ ಭಂಡತನ&lt;br /&gt;ಕೆಣಕು ನಡೆ ಸಮಸಪ್ತಕರನೀ&lt;br /&gt;ಬಣಗುಗಳ ಕೊಂಬನೆ ಕುಮಾರಕ&lt;br /&gt;ನಣಕವಲ್ಲೆಂದಸುರರಿಪು ತಿರುಹಿದನು ನಿಜರಥವ ೨೮&lt;br /&gt;&lt;br /&gt;ಹರಿ ಸಹಿತ ಕಲಿ ಪಾರ್ಥನತ್ತಲು&lt;br /&gt;ತಿರುಗಿದನು ಬಳಿಕಿತ್ತಲೀ ಮೋ&lt;br /&gt;ಹರ ಮಹಾಂಭೋನಿದಿಗೆ ಮೊಗಸಿತು ಸರ್ವತೋಮುಖರು&lt;br /&gt;ಮೊರೆವ ಪಟಹ ಮೃದಂಗ ಘನ ಜ&lt;br /&gt;ರ್ಜರಿತವಹ ನಿಸ್ಸಾಳ ಚಯದ&lt;br /&gt;ಬ್ಬರಣೆ ಗಬ್ಬರಿಸಿದುದು ಕಮಲಭವಾಂಡ ಖರ್ಪರವ ೨೯&lt;br /&gt;&lt;br /&gt;ಉರವಣಿಸಿದರು ನಕುಲ ಸಾತ್ಯಕಿ&lt;br /&gt;ವರ ವಿರಾಟ ದ್ರುಪದ ಕೈಕಯ&lt;br /&gt;ಬಿರುದ ಧೃಷ್ಟದ್ಯುಮ್ನ ಕುಂತೀಭೋಜ ಮೊದಲಾಗಿ&lt;br /&gt;ಧರಣಿಪರು ಥಟ್ಟೈಸಿ ರಿಪು ಮೋ&lt;br /&gt;ಹರಕೆ ಕವಿದುದು ಕಾದಿ ದುರ್ಗವ&lt;br /&gt;ಮುರಿಯಲರಿಯದೆ ಮುರಿವುತಿದ್ದುದು ಬಸಿವ ರಕ್ತದಲಿ ೩೦&lt;br /&gt;&lt;br /&gt;ಸುಳಿದು ಹರಿ ಮೇಖಲೆಯ ಮೋಹರ&lt;br /&gt;ದೊಳಗೆ ಮುಗ್ಗಿದಿರೈ ಮಹಾ ಮಂ&lt;br /&gt;ಡಳಿಕರಿರ ಫಡ ಹೋಗಿರೈ ನೀವೆನುತ ಖಾತಿಯಲಿ&lt;br /&gt;ಬಿಲುದುಡುಕಿ ಪವಮಾನ ನಂದನ&lt;br /&gt;ನಳವಿಗೊಟ್ಟನು ಹೂಣೆ ಹೊಕ್ಕರಿ&lt;br /&gt;ಬಲವನಿರಿದನು ಘಾಯವಡೆದನು ಘೋರ ಸಮರದಲಿ ೩೧&lt;br /&gt;&lt;br /&gt;ಕಾದಲೆನ್ನಳವಲ್ಲ ಬಲ ದು&lt;br /&gt;ರ್ಭೇದವಿದು ಶಿವಶಿವಯೆನುತ್ತ ವೃ&lt;br /&gt;ಕೋದರನು ಮರಳಿದನು ದುಗುಡಕೆ ತೆತ್ತು ನಿಜಮುಖವ&lt;br /&gt;ಕೈದೆಗೆಯೆ ರಿಪುಬಲದ ಸುಭಟರು&lt;br /&gt;ಕಾದಿದನು ಕಲಿ ಭೀಮ ಗೆಲಿದನು&lt;br /&gt;ಪೋದನೆಂದರು ಕೂಡೆ ಕೈಗಳ ಹೊಯ್ದು ತಮತಮಗೆ ೩೨&lt;br /&gt;&lt;br /&gt;ಆ ಮಹಾ ಮೋಹರವನೊಡೆಯಲು&lt;br /&gt;ಸೋಮನುಕುಲಜರು ಭೀತರಾದರು&lt;br /&gt;ಹಾ ಮಹಾದೇವೆನುತ ಧರ್ಮಜ ನೋಡಿ ತಲೆದೂಗಿ&lt;br /&gt;ರಾಮನರಿವನು ಕೃಷ್ಣನರಿವನು&lt;br /&gt;ಸೀಮೆಯಲಿ ಕಲಿ ಪಾರ್ಥನರಿವನು&lt;br /&gt;ಭೂಮಿಪತಿಗಳೊಳುಳಿದ ಸುಭಟರಿಗರಿವುದಿಲ್ಲೆಂದ ೩೩&lt;br /&gt;&lt;br /&gt;ಹೊಗಲು ಬಲ್ಲನು ಹೊಕ್ಕವೊಲು ಹೆರ&lt;br /&gt;ದೆಗೆಯಲರಿಯನು ವೀರ ಪಾರ್ಥನ&lt;br /&gt;ಮಗನು ಮತ್ತಯ್ದನೆಯ ಸುಭಟರ ಕಾಣೆ ನಾನೆನುತ&lt;br /&gt;ಆಗಿವ ಚಿಂತೆಯೊಳರಸ ಕದನದ&lt;br /&gt;ದುಗುಡ ಭಾರದಲಿರಲು ಮುಂಗೈ&lt;br /&gt;ನಿಗಳವನು ತಿರುಹುತ್ತ ನಸು ನಗುತೆದ್ದನಭಿಮನ್ಯು ೩೪&lt;br /&gt;&lt;br /&gt;ಜನಪನಂಘ್ರಿಗೆ ಮಣಿದು ಕೈಮುಗಿ&lt;br /&gt;ದೆನಗೆ ಬೆಸಸೈ ಬೊಪ್ಪ ತಾ ಬ&lt;br /&gt;ಲ್ಲೆನು ಮಹಾಹವದೊಳಗೆ ಪದ್ಮವ್ಯೂಹ ಭೇದನವ&lt;br /&gt;ಅನುವರವ ಗೆಲುವೆನು ಕೃತಾಂತನ&lt;br /&gt;ಮನೆಗೆ ಕಳುವೆನಹಿತರನು ನೀ&lt;br /&gt;ನಿನಿತು ಚಿಂತಿಸಲೇಕೆ ಕಾಳೆಗಕೆನ್ನ ಕಳುಹೆಂದ ೩೫&lt;br /&gt;&lt;br /&gt;ಹಸುಳೆಯದಟಿನ ನುಡಿಯ ಕೇಳಿದು&lt;br /&gt;ನಸು ನಗುತ ಧರ್ಮಜನು ಘನ ಪೌ&lt;br /&gt;ರುಷವು ನಿನಗಂಟೆಂದು ಕಂದನ ತೆಗೆದು ಬಿಗಿಯಪ್ಪಿ&lt;br /&gt;ಶಿಶುವು ನೀನೆಲೆ ಮಗನೆ ಕಾದುವ&lt;br /&gt;ರಸಮ ಬಲರು ಕಣಾ ಮಹಾ ರಥ&lt;br /&gt;ರೆಸುಗೆಯನು ನೀನೆಂತು ಸೈರಿಸಲಾಪೆ ಹೇಳೆಂದ ೩೬&lt;br /&gt;&lt;br /&gt;ಸುಳಿಯಬಹುದಂಬುಧಿಯ ನಡುವಣ&lt;br /&gt;ಸುಳಿಯೊಳಗೆ ಸಂವರ್ತಕನ ಕೊರ&lt;br /&gt;ಳೊಳಗೆ ಕುಣಿಯಲುಬಹುದು ಮೃತ್ಯುವಿನಣಲ ಹೊಳಲೊಳಗೆ&lt;br /&gt;ಹೊಳಕಬಹುದಹಿಪನ ಫಣಾ ಮಂ&lt;br /&gt;ಡಳದೊಳಾಡಲುಬಹುದು ಕಾಣೆನು&lt;br /&gt;ಗೆಲುವ ಹದನನು ಮಗನೆ ಪದ್ಮವ್ಯೂಹದೊಡ್ಡಣೆಯ ೩೭&lt;br /&gt;&lt;br /&gt;ಬಿಡು ಮರೀಚಿಯ ತೊರೆಗೆ ಹರುಗೋ&lt;br /&gt;ಲಿಡುವರುಂಟೇ ಲೆಪ್ಪದುರಗನ&lt;br /&gt;ಹಿಡಿವಡೇತಕೆ ಗರುಡಮಂತ್ರವು ಚಪಲನೆನ್ನದಿರು&lt;br /&gt;ಕೊಡನ ಮಗನ ಕುಮಂತ್ರದೊಡ್ದಿನ&lt;br /&gt;ಕಡಿತಕಾನಂಜುವೆನೆ ವೆಗ್ಗಳ&lt;br /&gt;ನುಡಿಯಲಮ್ಮೆನು ತನ್ನನೀಗಳೆ ಬಿಟ್ಟು ನೋಡೆಂದ ೩೮&lt;br /&gt;&lt;br /&gt;ಅವರೊಳಗಲಕೆ ನಿಂದ ರಿಪುಗಳ&lt;br /&gt;ಜವನ ಬೋನವ ಮಾಡದಿದ್ದರೆ&lt;br /&gt;ಅವನಿಯನು ಗೆಲದೇ ಮಹಾರಥರೆನಿಪ ನಾಯಕರ&lt;br /&gt;ಅವನಿಯೊಳಗೊರಗಿಸದೆ ಮಾರಾಂ&lt;br /&gt;ತವರ ನುಂಗದೆ ಮಾಣ್ಣೆನಾದರೆ&lt;br /&gt;ದಿವಿಜಪತಿತನಯಂಗೆ ತಾ ಜನಿಸಿದವನಲ್ಲೆಂದ ೩೯&lt;br /&gt;&lt;br /&gt;ಕಂದ ವೈರಿ ವ್ಯೂಹವಸದಳ&lt;br /&gt;ವೆಂದೆನಿಪುದದರೊಳಗೆ ಕೃಪ ಗುರು&lt;br /&gt;ನಂದನರು ರಾಧೇಯ ಭೂರಿಶ್ರವ ಜಯದ್ರಥರು&lt;br /&gt;ಇಂದುಧರನಡಹಾಯ್ದರೊಮ್ಮಿಗೆ&lt;br /&gt;ಹಿಂದು ಮುಂದೆನಿಸುವರು ನೀ ಗೆಲು&lt;br /&gt;ವಂದವೆಂತೈ ಸಮರವಿದು ಸಾಮಾನ್ಯವಲ್ಲೆಂದ ೪೦&lt;br /&gt;&lt;br /&gt;ಗಾಳಿ ಬೆಮರುವುದುಂಟೆ ವಹ್ನಿ&lt;br /&gt;ಜ್ವಾಲೆ ಹಿಮಕಂಜುವುದೆ ಮಂಜಿನ&lt;br /&gt;ಮೇಲುಗಾಳೆಗವುಂಟೆ ಬಲುಬೇಸಗೆಯ ಬಿಸಿಲೊಳಗೆ&lt;br /&gt;ಬಾಲನಿವನೆನ್ನದಿರು ದುಗುಡವ&lt;br /&gt;ತಾಳಲಾಗದು ಬೊಪ್ಪ ನಿಮ್ಮಡಿ&lt;br /&gt;ಯಾಲಿಗಳಿಗೌತಣವನಿಕ್ಕುವೆನೊರಸಿ ರಿಪುಬಲವ ೪೧&lt;br /&gt;&lt;br /&gt;ಅಹುದು ಮಗನೆ ಸಮಗ್ರಬಲ ನೀ&lt;br /&gt;ನಹೆ ನಿಧಾನಿಸಲಿಂದು ಪವನಜ&lt;br /&gt;ನಹವ ಮುರಿದರು ಕಾಯ್ದು ಬಿಟ್ಟರು ನಕುಲ ಸಾತ್ಯಕಿಯ&lt;br /&gt;ಸಹಸ ದ್ರುಪದ ವಿರಾಟರುಗಳು&lt;br /&gt;ಮ್ಮಹವ ಸೆಳೆದರು ವಿಜಯ ಗರ್ವದ&lt;br /&gt;ಲಿಹ ಬಲವ ನೀನೊಬ್ಬನೇ ಸಾಧಿಸುವುದರಿದೆಂದ ೪೨&lt;br /&gt;&lt;br /&gt;ಧರಣಿಪತಿ ಕೇಳುಳಿದ ಪುಷ್ಪದ&lt;br /&gt;ಪರಿಮಳವು ಪಥಿಸಿದರೆ ಸಂಪಗೆ&lt;br /&gt;ಯರಳ ಪರಿಮಲ ಪಥ್ಯವೇ ತುಂಬಿಗಳ ತಿಂತಿಣಿಗೆ&lt;br /&gt;ಅರಿಭಟರು ಭೀಮಾದಿಗಳ ಗೆಲಿ&lt;br /&gt;ದಿರಲಿ ಹೊಲ್ಲಹವೇನು ಘನ ಸಂ&lt;br /&gt;ಗರದೊಳಗೆ ನನ್ನೊಡನೆ ತುಡುಕಿದಡರಿಯಬಹುದೆಂದ ೪೩&lt;br /&gt;&lt;br /&gt;ಕೈದುಕಾರರ ಬಿಗುಹು ಘನ ನೀ&lt;br /&gt;ಹೊಯ್ದು ಮೊದಲಲಿ ಬಿಡಿಸು ಬಳಿಕಾ&lt;br /&gt;ವೈದಿ ನಿನ್ನನು ಕೂಡಿಕೊಂಬೆವು ಹೊಕ್ಕು ಬಳಿಸಲಿಸಿ&lt;br /&gt;ಎಯ್ದೆ ಹಗೆಯಲಿ ಹೂಣಿ ಹೊಗದಿರು &lt;br /&gt;ಮೈದೆಗೆದು ಕಾದುವುದು ಜಯಸಿರಿ&lt;br /&gt;ಯೈದೆತನ ನಿನ್ನಿಂದ ಮೆರೆವುದು ಕಂದ ಕೇಳೆಂದ ೪೪&lt;br /&gt;&lt;br /&gt;ಕೆತ್ತುಕೊಂಡಿರೆ ಬಿಡಿಸುವೆನು ರಥ&lt;br /&gt;ವೆತ್ತಲುರುಬಿದರತ್ತ ಕಣನೊಳು&lt;br /&gt;ಮತ್ತಗಜ ಮುರಿದಂತೆ ಕದಡುವೆನಹಿತ ಮೋಹರವ&lt;br /&gt;ಹೊತ್ತಿ ಹೊಗೆವ ಪರಾಕ್ರಮಾಗ್ನಿಯ&lt;br /&gt;ತುತ್ತು ಪದ್ಮವ್ಯೂಹ ದೇವರು&lt;br /&gt;ಚಿತ್ತಯಿಸುವುದು ಹೊತ್ತುಗಳೆಯದೆ ಎನ್ನ ಕಳುಹೆಂದ ೪೫&lt;br /&gt;&lt;br /&gt;ಶರನಿಧಿಯ ವಡಬಾನಳನ ದ&lt;br /&gt;ಳ್ಳುರಿಯ ವರ್ಮವ ತಿವಿವ ತುಂಬಿಗೆ&lt;br /&gt;ಮರಳುತಲೆಯುಂಟಾದಡದು ಭವಭವದ ಪುಣ್ಯಫಲ&lt;br /&gt;ಅರಿಬಲವ ನೀ ಖಂಡಿಗಳೆ ಮೋ&lt;br /&gt;ಹರ ಸಹಿತ ನಾ ಬಹೆನು ನಡೆಯೆಂ&lt;br /&gt;ದರಸನಭಿಮನ್ಯುವಿಗೆ ನೇಮವ ಕೊಟ್ಟನಾಹವಕೆ ೪೬&lt;br /&gt;&lt;br /&gt;ಶಿವಶಿವಾ ಶಿಶುವಿವನು ರಿಪುಗಳು&lt;br /&gt;ಜವನ ಜೂಜೆನಿಸುವ ಮಹಾರಥ&lt;br /&
