ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Sunday, September 5, 2010

ಸಭಾಪರ್ವ: ೦೪. ನಾಲ್ಕನೆಯ ಸಂಧಿ

ಸೂ.ಯಾಗ ಸಿದ್ದಿಗೆ ನಡೆದು ಪೂರ್ವ ವಿ
ಭಾಗದಲಿ ಭೂಮಿಪರ ಕೈಯಲಿ
ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ

ಕೇಳು ಜನಮೇಜಯ ದರಿತ್ರೀ
ಪಾಲ ಯಮ ನ೦ದನನ ಭಾಗ್ಯದ
ಹೋಲಿಕೆಗೆ ಬಹರು೦ಟೆ ನಳ ನಹುಷಾದಿ ರಾಯರಲಿ
ಆಳು ನಡೆದುದು ಭೀಮಸೇನನ
ಧಾಳಿಯಿದೆಯೆನೆ ತೆತ್ತುದವನೀ
ಪಾಲಕರು ತ೦ತಮ್ಮ ನಿಜ ವಿತ್ತಾನುರೂಪದಲಿ ೧

ನಡೆದು ಶೋಧೀಸಿ ರೋಚಮಾನನ
ಹಿಡಿದುಬಿಟ್ಟನು ಸರ್ವ ವಿತ್ತವ
ನಡಕಿತನಿಲಜನಾಳು ಮು೦ದಣ ಚೇದಿ ದೇಶದಲಿ
ಘುಡಿ ಘುಡಿಸೆ ನಿಸ್ಸಾಳವೀ ಗಡ
ಬಡೆಯಿದೇನೆನೆ ಭೀಮಸೇನನ
ಪಡೆಯೆನಲು ಶಿಶುಪಾಲ ಬ೦ದನು ಕ೦ಡನುಚಿತದಲಿ ೨

ಏನು ಬ೦ದೆಯಪೂರ್ವವೆನೆ ಯಾ
ಗಾನುರಾಗವನರುಪಲತಿ ಸು
ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ
ಮಾನಿಸರ ಕಳುಹಿದರೆ ಸಾಲದೆ
ನೀನಿದೇಕೆ೦ದುಚಿತದಲಿ ಸ
ನ್ಮಾನಿಸುತ ನಿಲಿಸಿದನು ತಿ೦ಗಳು ಪವನನ೦ದನನ ೩

ನಡೆದು ಮು೦ದೆ ಕಳಿ೦ಗ ದೇಶ ದೊ
ಳಡಸಿ ಬಿಟ್ಟನು ಶೋಣಿವ೦ತನ
ಹಿಡಿದು ಕಪ್ಪವ ಕೊ೦ಡು ಸದೆದನು ಕೋಸಲೇಶ್ವರನ
ಅಡಕಿತಲ್ಲಿಯ ಧನ ಪಯೋಧಿಯ
ಕಡೆಯ ಕೋಟೆಯ ಮುರಿಯಲವನೆದೆ
ಯೊಡೆದು ದೀರ್ಘಪ್ರಜ್ಞನಿತ್ತನು ಬೇಹ ವಸ್ತುಗಳ ೪

ಆಳು ನಡೆದುದು ಚೂಣಿಯಲಿ ಗೋ
ಪಾಲನೆ೦ಬನ ಮುರಿಯೆ ತೆತ್ತುದ
ಹೇಳಲರಿಯೆನು ಸ೦ಖ್ಯೆಯನು ಮು೦ದತ್ತ ಪಾಲಕನ
ಜಾಳಿಸಿದನಾ ಕಾಶಿರಾಜನ
ಧಾಳಿಯಲಿ ಕೊ೦ದನು ಸುಪಾರ್ಶ್ವನ
ಮೇಲೆ ನಡೆದನು ಜಯನ ಮತ್ಸ್ಯನ ಗೆಲಿದನಾ ಭೀಮ ೫

ನಡೆದು ಮು೦ದೆ ವಿದೇಹನನು ಸದೆ
ಬಡಿದು ಮತ್ತೆ ಕಿರಾತ ಬಲವವ
ಗಡಿಸಿ ಕಾದಿದನ೦ತವದರೊಳಗೇಳು ಮಾನಿಸರು
ಒಡೆಯರವದಿರವ೦ಗಡವ ಹುಡಿ
ಹುಡಿಯ ಮಾಡಿ ನಿಷಾದ ವರ್ಗವ
ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ ೬

ಮಲೆತು ಕಾದಿದ ದ೦ಡ ಧಾರನ
ಗೆಲಿದು ಮಗಧೇಶನ (ಪಾ: ಮಗಧೇಶ) ಗಿರಿ ವ್ರಜ
ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತ೦ದು
ದಳವ ಹೇಳಿದನಾತನಲ್ಲಿ೦
ದಿಳಿದು ಕರ್ಣನ ಗೆಲಿದು ಕಪ್ಪವ
ಸೆಳೆದು ಕೊ೦ಡದ್ರಿಯಲಿ ಸದೆದನು ಬಹಳ ವನಚರರ ೭

ಸೂರೆಗೊ೦ಡಲ್ಲಿ೦ದ ನಡೆದನು
ಮೀರಿ ಗ೦ಗಾ ಸ೦ಗಮವ ಕೈ
ಮೀರಲರಿಯದೆ ಸ೦ಧಿಗವನೀಶ್ವರರು ವಶವಾಯ್ತು
ಹೇರಿಸಿದನನುಪಮದ ವಸ್ತುವ
ನಾರು ಸಾವಿರ ಭ೦ಡಿಯಲಿ ನಡೆ
ದೇರಿ ಹೊಯ್ದನು ವಾಸುದೇವನ ಪೌ೦ಡ್ರಕಾಹ್ವಯನ ೮

ಪುರವರವನಲ್ಲಿ೦ದ ಮೌಲ್ಯದ
ತೆರಳಿಕೆಯಮಾಡಿದನು ಮೂಡಲು
ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ
ತೆರಳಿದಲ್ಲಿ೦ದಿ೦ದ್ರಸೇನನ
ನೊರಸಿ ಭ೦ಡಾರವನು ಹೇರಿಸಿ
ಮರಳಿ ವ೦ಗನನಪ್ಪಳಿಸಿದನು ಲುಬ್ಧಕರು ಸಹಿತ ೯

ಸಾರಲೋಹಿತನೆ೦ಬ ಸಾಗರ
ತೀರವಾಸಿಗಳೊಳ ಕುರುವದ ವಿ
ಕಾರಚೋನೆಗೆ ಚೀನ ಬೋಟಕರನು ನಿವಾಸಿಗಳ
ಓರೆ ಬಾಗಿನ ಕುರುವ ಕೊಳ್ಳದ
ಗೌರಿಕರನಪ್ಪಳಿಸಿ ಮಲೆಯ ವಿ
ಹಾರಿಗಳ ಬರಿಗೈದು ತು೦ಬಿಸಿದನು ಸುವಸ್ತುಗಳ ೧೦

ಧಾಳಿ ಹರಿದುದು ಪ೦ಚಗೌಳವ
ರಾಳುವೊಡ್ಡಿಯರಾ೦ಧ್ರಜಾಳಾ೦
ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ
ಮೇಲು ದುರ್ಗದ ಪಾರ್ವತೇಯರಿ
ಗಾಳು ಹರಿದುದು ಸ೦ದುಗೊ೦ದಿಯ
ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ ೧೧

ಅರಸಿದನು ನಾವೆಗಳಲಬ್ಧಿಯ
ಕುರುವದಲಿ ಕೊಬ್ಬಿದ ಧನಾಡ್ಯರ
ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ
ಸೆರೆವಿಡಿದು ತನಿ ಸೂರೆಯಲಿ ಪಡೆ
ನೆರೆ ದಣಿಯಲಾ ಮ್ಲೇಚ್ಛ ವರ್ಗವ
ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ ೧೨

ಆ ಮಹಾ ಭೋಟಕ ಮಹಾಹ್ವಯ
ಧಾಮದಲಿ ದಸ್ಯುಗಳನತಿ ನಿ
ಸ್ಸೀಮ ಯವನ ಕರೂಷರನು ತಾಗಿದನು ವಹಿಲದಲಿ
ಹೇಮ ಮುಕ್ತಾರಜತ ಚ೦ದನ
ರಾಮಣೀಯಕ ವಸ್ತು ನಿಚಯದ
ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ ೧೩

ಮರಳೆಯನಿಲಜನಾ ಮಹಾದ್ಭುತ
ತರದ ವಸ್ತುವನಾನಲಾಪುದೆ
ಧರಣಿಯೆನೆ ಸ೦ದಣಿದವಸ೦ಖ್ಯಾತ ರಥಯೂಥ
ಅರಸುಗಳ ಸಹಿತೀ ಮಹಾಬಲ
ವೆರಸಿ ಬ೦ದನು ಭೀಮನಣ್ಣನ
ಚರಣಕೆರಗಿದನರ್ಜುನನ ತಕ್ಕೈಸಿದನು ನಗುತ ೧೪

(ಸಂಗ್ರಹ: ಶ್ರೀಮತಿ ಶಕುಂತಲಾ)

9 comments:

Anonymous said...

Good work Akka, Keep it up

Veena K.Kulkarni

dhananjaya said...

It would be very good that there is a english translation side by side.

Unknown said...

akka, nivu hagu nimma tandadavaru adbhutavada kelasavanne madutiddira...idarindagi baruva halavu varshagala kala, halavaru janarige upayoga vagalide...

nanu "karnata bharata katha manjariyannu" halavu dinagalinda adhyayana madutiddene, aadare bahala kastavaguttide, halavu padagalige artha gottagutilla, yava kannada shabdakoshvannu balasi odidare sulabhavaguvudendu dayavittu tilisi...

Badarinath Palavalli said...

ಸರ್, ಇದೇ ತಿಂಗಳಲ್ಲಿ ನಮ್ಮ ಕಸ್ತೂರಿ ಟೀವಿಯು ಹುಬ್ಬಳ್ಳಿಯಲ್ಲಿ ’ನಾ ಹಾಡಲು ನೀವು ಹಾಡಬೇಕು’ ಮತ್ತು ’ಜಾಕ್ ಪಾಟ್’ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಾನು ಶೂಟಿಂಗಿಗಾಗಿ ಹುಬ್ಬಳ್ಳಿ ಬರುವನಿದ್ದೇನೆ.

ನಿಮ್ಮ ಈಮೈಲ್ ವಿಳಾಸ ಅಥವ ಫೋನ್ ನಂಬರ್ ನನ್ನ ಹತ್ತಿರ ಇಲ್ಲದಿರುವುದರಿಂದ ಇಲ್ಲಿ ಬರೆದುಕೊಂಡೆ.

ನಾನು ನಿಮ್ಮನ್ನು ಭೇಟಿಯಾಗಲೇ ಬೇಕು ಸಾರ್. ನೀವು ನನ್ನಂತಹ ಅಲ್ಪನಿಗೆ ಕಾವ್ಯ ಪ್ರೋತ್ಸಾಹ ಕೊಡುತ್ತಲೇ ಬಂದಿದ್ದೀರಿ. ನಿಮ್ಮ ಭೇಟಿ ನನಗೆ ಸಂತಸ ತರುತ್ತದೆ.

ನನ್ನ ಮೊಬೈಲ್ ಸಂಖ್ಯೆ :

ನನ್ನ ಮೊಬೈಲ್ ಸಂಖ್ಯೆ : 9972570061


ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

Arun said...

ನಮಸ್ತೇ ,
ಕುಮಾರ ವ್ಯಾಸ ಭಾರತ ಗ್ರಂಥವನ್ನು ಸಮಗ್ರವಾಗಿ ಇಂಟರ್-ನೆಟ್ ನಲ್ಲಿ ಮುದ್ರಿಸುವ ನಿಮ್ಮ ಸಂಕಲ್ಪ ಅಮೋಘವು ಮತ್ತು ಶ್ಲಾಘನೀಯ.
ಮೈಸೂರು ವಿಶ್ವವಿದ್ಯಾಲಯ ಮುದ್ರಿಸಿರುವ ಕುಮಾರವ್ಯಾಸರ ಸಮಗ್ರ ಭಾರತವನ್ನು ನನ್ನ ಬ್ಲಾಗಿನಿಂದ ಆಸಕ್ತ ವ್ಯಕ್ತಿಗಳು
ಡೌನ್-ಲೋಡ್ ಮಾಡಿಕೋಳ್ಳಬಹುದು ಎಂದು ಹೇಳಲು ಬಯಸುತ್ತೇನೆ. ನನ್ನ ಬ್ಲಾಗ್ url
http://sangeetasagaram.blogspot.com/2011/09/kumara-vyasa.html

ಧನ್ಯವಾದಗಳು
ಅರುಣ್ . ಎಸ್

prashasti said...

ನಿಮ್ಮೀ ಪ್ರಯತ್ನಕ್ಕೆ ಅನಂತಾನಂತ ವಂದನೆಗಳು :-)

Anonymous said...

Do you know?

The entire text is available in Kannada at kanaja.in.

Yours
shreekant mishrikoti

Ashwatha said...

ನಿಮ್ಮ ಪ್ರಯತ್ನ ತುಂಬಾ ಸಂತೋಷ ತಂದಿದೆ. ಆದರೆ ಕುಮಾರವ್ಯಾಸ ಭಾರತದ ಒಂದು digital copy ಇಲ್ಲಿದೆ, ದಯವಿಟ್ಟು ಗಮನಿಸಿ:

http://excludes.archive.org/details/KumaraVyasaKarnatnatakaMahabharata

KalavathiMadhusudan said...

sir nimma athyuttama saarthaka prayathnakkaagi anantadhanyavaadagalu.